ETV Bharat / bharat

ಫಣಿ ಸೈಕ್ಲೋನ್​ ಅಬ್ಬರ: ಕರಾವಳಿ ತೀರದಲ್ಲಿ ತೀವ್ರ ಕಟ್ಟೆಚ್ಚರ, ಮುನ್ನೆಚ್ಚರಿಕೆ ರವಾನೆ

author img

By

Published : May 1, 2019, 10:37 AM IST

ಚಂಡಮಾರುತ ವಾಯವ್ಯ ದಿಕ್ಕಿನತ್ತ ಸಾಗುತ್ತಿದ್ದು, ಸುಮಾರು 175- 185 ಕಿ.ಮೀ. ವೇಗದಲ್ಲಿ ಸಾಗುತ್ತಿದೆ. ಇದು ಮೇ 3ರ ವೇಳೆಗೆ 205 ಕಿ.ಮಿ. ವೇಗವನ್ನು ಪಡೆದುಕೊಳ್ಳಲಿದೆ: ಇಂಡಿಯನ್​ ಮೆಟ್ರೋಲಾಜಿಕಲ್​ ಡಿಪಾರ್ಟ್​​ಮೆಂಟ್​​

ಸಾಂದರ್ಭಿಕ ಚಿತ್ರ

ಭುವನೇಶ್ವರ್: ಒಡಿಶಾದ ಬೋಧ್, ಕಾಲಹಂದಿ, ಸಂಬಲ್​​ಪುರ್​, ದಿಯೋಗಢ ಮತ್ತು ಸುಂದರ್​ಗಢಗಳಲ್ಲಿ ಭಾರಿ ಅಂದರೆ ಭಾರಿ ಪ್ರಮಾಣದಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಂಡಮಾರುತ ವಾಯವ್ಯ ದಿಕ್ಕಿನತ್ತ ಸಾಗುತ್ತಿದ್ದು, ಸುಮಾರು 175- 185 ಕಿ.ಮೀ. ವೇಗದಲ್ಲಿ ಸಾಗುತ್ತಿದೆ. ಇದು ಮೇ 3ರ ವೇಳೆಗೆ 205 ಕಿ.ಮಿ. ವೇಗವನ್ನು ಪಡೆದುಕೊಳ್ಳಲಿದೆ ಎಂದು ಇಂಡಿಯನ್​ ಮೆಟ್ರೋಲಾಜಿಕಲ್​ ಡಿಪಾರ್ಟ್​​ಮೆಂಟ್​​ ಹೇಳಿದೆ.

ಪ್ರಸ್ತುತ ಗಂಜಾಮ್​, ಪುರಿ, ಜಗತ್ಸಿಂಗ್​​ಪುರ್​, ಕೇಂದ್ರಪಾರಾಗಳಲ್ಲೂ ಚಂಡಮಾರುತ 110-120 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಜನ ಮನೆ ಬಿಟ್ಟು ಹೊರ ಬಾರದಂತೆ ಹಾಗೂ ಇನ್ನಿತರ ಚಟುವಟಿಕೆಗಳನ್ನ ನಿಲ್ಲಿಸುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಈ ಪರಿಣಾಮ ರಾಜ್ಯದಲ್ಲೂ ಅಲ್ಲಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಇನ್ನು ಬಂಗಾಳ ಕೊಲ್ಲಿ ಹಾಗೂ ಹಿಂದೂ ಮಹಾಸಾಗರದ ತೀರ ಪ್ರದೇಶಗಳ ಜನ ಹಾಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಮುನ್ನೆಚ್ಚರಿಕೆ ರವಾನಿಸಿದೆ.

ಭುವನೇಶ್ವರ್: ಒಡಿಶಾದ ಬೋಧ್, ಕಾಲಹಂದಿ, ಸಂಬಲ್​​ಪುರ್​, ದಿಯೋಗಢ ಮತ್ತು ಸುಂದರ್​ಗಢಗಳಲ್ಲಿ ಭಾರಿ ಅಂದರೆ ಭಾರಿ ಪ್ರಮಾಣದಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಂಡಮಾರುತ ವಾಯವ್ಯ ದಿಕ್ಕಿನತ್ತ ಸಾಗುತ್ತಿದ್ದು, ಸುಮಾರು 175- 185 ಕಿ.ಮೀ. ವೇಗದಲ್ಲಿ ಸಾಗುತ್ತಿದೆ. ಇದು ಮೇ 3ರ ವೇಳೆಗೆ 205 ಕಿ.ಮಿ. ವೇಗವನ್ನು ಪಡೆದುಕೊಳ್ಳಲಿದೆ ಎಂದು ಇಂಡಿಯನ್​ ಮೆಟ್ರೋಲಾಜಿಕಲ್​ ಡಿಪಾರ್ಟ್​​ಮೆಂಟ್​​ ಹೇಳಿದೆ.

ಪ್ರಸ್ತುತ ಗಂಜಾಮ್​, ಪುರಿ, ಜಗತ್ಸಿಂಗ್​​ಪುರ್​, ಕೇಂದ್ರಪಾರಾಗಳಲ್ಲೂ ಚಂಡಮಾರುತ 110-120 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಜನ ಮನೆ ಬಿಟ್ಟು ಹೊರ ಬಾರದಂತೆ ಹಾಗೂ ಇನ್ನಿತರ ಚಟುವಟಿಕೆಗಳನ್ನ ನಿಲ್ಲಿಸುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಈ ಪರಿಣಾಮ ರಾಜ್ಯದಲ್ಲೂ ಅಲ್ಲಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಇನ್ನು ಬಂಗಾಳ ಕೊಲ್ಲಿ ಹಾಗೂ ಹಿಂದೂ ಮಹಾಸಾಗರದ ತೀರ ಪ್ರದೇಶಗಳ ಜನ ಹಾಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಮುನ್ನೆಚ್ಚರಿಕೆ ರವಾನಿಸಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.