ಭುವನೇಶ್ವರ(ಒಡಿಶಾ): ರಾಜ್ಯದ ಮಯೂರ್ಭಂಜ್ ಜಿಲ್ಲೆಯ ರಾಯ್ರಂಗ್ಪುರದ ನಿವಾಸಿ ಎಸ್. ಮುತ್ತುಕುಮಾರನ್ ತಮಗೆ ಬಂದಿದ್ದ ಪಾರ್ಸೆಲ್ ತೆರೆದಾಗ ಅಚ್ಚರಿ ಕಾದಿತ್ತು. ಕುತೂಹಲದಿಂದ ಪಾರ್ಸೆಲ್ ತೆರೆದು ನೋಡಿದಾಗ ಶಾಕ್ಗೆ ಒಳಗಾಗಿದ್ದಾರೆ.
ಮುತ್ತುಕುಮಾರ್ ಮೂಲತಃ ಆಂಧ್ರ ಪ್ರದೇಶದ ವಿಜಯವಾಡ ನಿವಾಸಿಯಾಗಿದ್ದು, ಪಾರ್ಸೆಲ್ನಲ್ಲಿ ಹಾವು ನೋಡಿದ ಮರುಕ್ಷಣವೇ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಕರೆಸಿಕೊಂಡಿದ್ದ.
ಸುಮಾರು 15 ದಿನಗಳ ಹಿಂದೆ ಖಾಸಗಿ ಕಂಪನಿ ಮೂಲಕ ಪಾರ್ಸೆಲ್ ಆರ್ಡರ್ ಮಾಡಿದ್ದ. ಗುಂಟೂರಿನಿಂದ ಆಗಸ್ಟ್ 9ರಂದು ಪಾರ್ಸೆಲ್ ರವಾನೆಯಾಗಿತ್ತು.
ಮನೆಬಳಕೆಯ ವಸ್ತುಗಳಿವೆ ಎಂದು ಪಾರ್ಸೆಲ್ ತೆರೆದಾಗ ಹಾವನ್ನು ನೋಡಿ ಮುತ್ತುಕುಮಾರ್ ಬೆಚ್ಚಿಬಿದ್ದಿದ್ದ. ಸದ್ಯ ಹಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.