ETV Bharat / bharat

ಸ್ಥಳೀಯ ಸಂಸ್ಥೆಗಳು ಮತ್ತು ಸಂವಿಧಾನ, ಕೋರ್ಟ್​​​ ತೀರ್ಪುಗಳ ಸುತ್ತ

ಭಾರತದ ಸಂವಿಧಾನವು ಖಾತರಿಪಡಿಸಿದ ಎಲ್ಲ ಹಕ್ಕುಗಳಲ್ಲಿ ಅತ್ಯಂತ ಮೂಲಭೂತ ಹಕ್ಕಾದ ಬದುಕುವ ಹಕ್ಕನ್ನು ರಾಷ್ಟ್ರದ ಮಹಾನಗರಗಳಲ್ಲಿ  ಉಲ್ಲಂಘಿಸಲಾಗುತ್ತಿದೆ. ನಾಗರಿಕತೆಯ ಕೇಂದ್ರಗಳೆಂದು ಕರೆಯಲ್ಪಡುವ ಈ ಪ್ರಮುಖ ನಗರಗಳು ಈಗ ಶೋಚನೀಯ ಹೆದ್ದಾರಿಗಳು ಮತ್ತು ಸಾಧಾರಣ ಸಾರ್ವಜನಿಕ ಸಾರಿಗೆಯೊಂದಿಗೆ ದುಃಸ್ವಪ್ನವಾಗುತ್ತಿವೆ.

author img

By

Published : Jan 16, 2020, 2:54 PM IST

Constitution of India news
ಭಾರತದ ಸಂವಿಧಾನ

ಗುಂಡಿ ತುಂಬಿದ ರಸ್ತೆಗಳು ಮತ್ತು ಕಾಲುದಾರಿಗಳಿಂದಾಗಿ ಸವಾರರು ಮತ್ತು ಪಾದಚಾರಿಗಳಿಗೆ ಆದ ಗಾಯಗಳು ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ನಿರ್ದೇಶನಗಳನ್ನು ನೀಡಿತ್ತು. ರಸ್ತೆ ಗುಂಡಿ ಅಪಘಾತದಿಂದ ಬಳಲುತ್ತಿರುವ ನಾಗರಿಕರು ಆಡಳಿತ ಮಂಡಳಿಯಿಂದ ಪರಿಹಾರವನ್ನು ಪಡೆಯುವ ಪ್ರತ್ಯೇಕ ಘಟಕವನ್ನು ಸ್ಥಾಪಿಸಲು ಅದು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಸೂಚಿಸಿತ್ತು. ಕರ್ನಾಟಕ ಹೈಕೋರ್ಟ್‌ನ ಆದೇಶದ ವಿರುದ್ಧ ಬಿಬಿಎಂಪಿ ಸುಪ್ರೀಂಕೋರ್ಟದ ಮೊರೆ ಹೋಯಿತು ಆದರೆ ಸುಪ್ರೀಂಕೋರ್ಟ್ ಅದರ ಮನವಿಯನ್ನು ವಜಾಗೊಳಿಸಿತು. ನ್ಯಾಯಮೂರ್ತಿಗಳ ನ್ಯಾಯಪೀಠವು ಹೈಕೋರ್ಟ್‌ನ ಆದೇಶಗಳನ್ನು ಅಂಗೀಕರಿಸಿತು ಮತ್ತು ನಗರದ ರಸ್ತೆಗಳಲ್ಲಿ ಯಾವುದೇ ಗುಂಡಿಗಳು ಅಥವಾ ಕುಳಿಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾಗರಿಕ ಸಂಸ್ಥೆಯನ್ನು ಕೇಳಿದೆ. ಬಿಬಿಎಂಪಿ ಅಧಿಕಾರಿಗಳು ಈ ಹಿಂದೆ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯಲ್ಲಿ ಪರಿಹಾರದ ಅವಕಾಶವಿಲ್ಲ ಎಂದು ಹೇಳಿಕೊಂಡಿದ್ದರೂ ಮತ್ತು ಅಂತಹ ಯೋಜನೆಯನ್ನು ಪ್ರಚಾರ ಮಾಡುವುದರಿಂದ ಅವು ನಾಗರಿಕ ಸಂಸ್ಥೆಯ ಜೇಬಿನಲ್ಲಿ ಆಳವಾದ ರಂಧ್ರಗಳನ್ನು ಉಂಟುಮಾಡುತ್ತವೆ; ಆದರೆ ನ್ಯಾಯಾಲಯವು ಅವರ ಮನವಿಯನ್ನು ತಿರಸ್ಕರಿಸಿ ರಸ್ತೆಗಳಲ್ಲಿ ಅಕ್ರಮ ನಿರ್ಮಾಣ ಮತ್ತು ಗುಂಡಿಗಳಿಗೆ ಕೆಎಂಸಿ ಕಾಯ್ದೆ ಅನುಮತಿ ನೀಡುತ್ತದೆಯೇ ಎಂದು ಹೈಕೋರ್ಟ್ ಬಿಬಿಎಂಪಿಯನ್ನು ಪ್ರಶ್ನಿಸಿದೆ. ಪುರಸಭೆಗಳ ಬಗ್ಗೆ ಕರ್ನಾಟಕ ಹೈಕೋರ್ಟ್ ನಿಲುವು ಎಲ್ಲಾ ನಗರ ಸಂಸ್ಥೆಗಳಿಗೆ ಕಣ್ಣು ತೆರೆಯುವಂತಿರಬೇಕು. ದೇಶದ ಉನ್ನತ ನ್ಯಾಯಾಲಯವು ಜೀವನದ ಹಕ್ಕನ್ನು ಎಲ್ಲ ಹಕ್ಕುಗಳಿಗಿಂತ ಮೇಲಿಟ್ಟ ನಂತರ ರಸ್ತೆ ಸುರಕ್ಷತೆಯ ಕುರಿತು ಭರವಸೆಗಳು ಹುಟ್ಟಿಕೊಂಡಿವೆ.

ಸರಿಯಾಗಿ ನಿರ್ವಹಿಸಿದ ರಸ್ತೆಗಳನ್ನು ಹೊಂದುವ ಹಕ್ಕನ್ನು ಭಾರತದ ಸಂವಿಧಾನದ 21 ನೇ ಪರಿಚ್ಛೇದ ಖಾತರಿಪಡಿಸುವ ಮೂಲಭೂತ ಹಕ್ಕು ಎಂದು ಬಾಂಬೆ ಹೈಕೋರ್ಟ್ 2015 ರಲ್ಲಿ ಅಭಿಪ್ರಾಯಪಟ್ಟಿದೆ. ಕರ್ನಾಟಕ ಹೈಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಅವರು ಈ ತೀರ್ಪನ್ನು ಉಚ್ಚರಿಸಿದ ನ್ಯಾಯಪೀಠದ ಸದಸ್ಯರಾಗಿದ್ದರು. ಅವರು ಬಿಬಿಎಂಪಿಗೆ ಇದೇ ರೀತಿಯ ಆದೇಶಗಳನ್ನು ನೀಡಿದಾಗ, ನಾಗರಿಕ ಸಂಸ್ಥೆಯ ಅಧಿಕಾರಿಗಳು ಅವರಿಗೆ ಸಾರ್ವಭೌಮ ವಿನಾಯಿತಿ ಇದೆ ಎಂದು ವಾದಿಸಿದರು. ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದಾಗ ಪರಿಹಾರವನ್ನು ಕೋರುವ ಹಕ್ಕಿನ ಬಗ್ಗೆ ಸಂವಿಧಾನದ 226 ನೇ ವಿಧಿಗೆ ಅನುಗುಣವಾಗಿ ಹೈಕೋರ್ಟ್‌ನ ಆದೇಶಗಳನ್ನು ಇಲ್ಲಿ ಉಲ್ಲೇಖಿಸಬೇಕಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಪ್ರಕಾರ, ಪ್ರತಿವರ್ಷ 1.5 ಲಕ್ಷಕ್ಕೂ ಹೆಚ್ಚು ಜನರು ರಸ್ತೆ ಅಪಘಾತದಿಂದ ಸಾಯುತ್ತಿದ್ದಾರೆ. ರಸ್ತೆ ಸುರಕ್ಷತೆ ಕುರಿತ ಸುಪ್ರೀಂ ಕೋರ್ಟ್ ಸಮಿತಿಯೊಂದು 2013 ರಿಂದ 2017 ರವರೆಗೆ ರಸ್ತೆ ಗುಂಡಿಗಳಿಂದಾಗಿ ರಸ್ತೆ ಅಪಘಾತಗಳಲ್ಲಿ 15,000 ಜನರು ಸಾವನ್ನಪ್ಪಿದ್ದಾರೆ ಎಂದು ಬಹಿರಂಗಪಡಿಸಿದೆ. ಈ ಸಂಖ್ಯೆಯು ಗಡಿಯಲ್ಲಿ ಅಥವಾ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟವರಿಗಿಂತ ಹೆಚ್ಚಾಗಿದೆ ಎಂದು ಸುಪ್ರೀಮ್ ಕೋರ್ಟ್ ಹೇಳಿದೆ. ಈ ಸಾವುಗಳಿಗೆ ಕಾರಣವಾದ ಪುರಸಭೆ ನಿಗಮಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ರಾಜ್ಯ ರಸ್ತೆ ಇಲಾಖೆಗಳು ಈ ಸಾವಿಗೆ ಜವಾಬ್ಧಾರರು ಎಂದು ನ್ಯಾಯಾಲಯವು ಹೇಳಿತ್ತು. ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ರಸ್ತೆ ಗುಂಡಿಗಳಿಗೆ ಸಂಬಂಧಿಸಿದ ಅಪಘಾತಗಳು ಸಂಭವಿಸಿವೆ.

ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ರಚಿಸುವುದು ಮತ್ತು ನಿರ್ವಹಿಸುವುದು ಮತ್ತು ಅವುಗಳನ್ನು ಎಲ್ಲಾ ನಾಗರಿಕರಿಗೆ ಒದಗಿಸುವುದು ಪ್ರತಿ ಪುರಸಭೆಯ ಮೂಲ ಕರ್ತವ್ಯವಾಗಿದೆ. ಗ್ರಾಮೀಣ ಪ್ರದೇಶದಿಂದ ನಗರ ವಲಸೆ ಅತ್ಯುನ್ನತ ಮಟ್ಟದಲ್ಲಿರುವ ಈ ಸಮಯದಲ್ಲಿ, ನಗರೀಕರಣವು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ನಗರ ನಿಗಮಗಳಿಗೆ ಯಾವುದೇ ಕಾರ್ಯಸೂಚಿಯಿಲ್ಲ ಎಂದು ತೋರುತ್ತದೆ. ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಪರಿಶೀಲಿಸಲು ನೇಮಕಗೊಂಡ ಜೆ.ಎಸ್.ವರ್ಮಾ ಸಮಿತಿ; ಎಲ್ಲಾ ರಸ್ತೆಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಮತ್ತು ಅವು ಕಾರ್ಯನಿರ್ವಹಿಸುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಲು ರಾಜ್ಯ ಇಲಾಖೆಗಳಿಗೆ ನಿರ್ದೇಶನ ಮಾಡಿದೆ. ರಾಷ್ಟ್ರೀಯ ಹೆದ್ದಾರಿಗಳ ಕಳಪೆ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರವು ಇತ್ತೀಚೆಗೆ ಎನ್‌ಎಚ್‌ಎಐಗೆ ಚಾವಟಿ ಬೀಸಿತ್ತು. ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸವಾರಿ ಮಾಡುತ್ತಿದ್ದ ಮಹಿಳಾ ಬೈಕರ್ ತನ್ನ ಬೈಕ್‌ನ ಮೇಲೆ ನಿಯಂತ್ರಣ ಕಳೆದುಕೊಂಡು ಬಿದ್ದಾಗ ವೇಗವಾಗಿ ಬಂದ ಟ್ರಕ್‌ನಿಂದ ಕೊಲ್ಲಲ್ಪಟ್ಟ ನಂತರ; ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದಕ್ಕಾಗಿ ಮುಂಬೈ ಪೊಲೀಸರು ಮಹಿಳೆಯ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ. ವ್ಯವಸ್ಥೆಯು ಎಷ್ಟು ಅಸ್ತವ್ಯಸ್ತವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ಅಂತಹ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವ ಎಲ್ಲರಿಗೂ ರಸ್ತೆ ಅಧಿಕಾರಿಗಳು ಮತ್ತು ಅವರ ಕಮಿಷನರಿಗಳಿಂದ ಪರಿಹಾರವನ್ನು ಸೂಚಿಸಿತು. ಉನ್ನತ ನ್ಯಾಯಾಲಯವು ಈ ಸಲಹೆಯನ್ನು ಬೆಂಬಲಿಸುತ್ತಿರುವುದರಿಂದ, ರಾಜ್ಯ ಸರ್ಕಾರಗಳು ಆಯಾ ನಗರ ಸ್ಥಳೀಯ ಸಂಸ್ಥೆಗಳನ್ನು ಉತ್ತಮಗೊಳಿಸಲು ಬದ್ಧವಾಗಿರಬೇಕು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದರಿಂದ ಹಿಡಿದು ಅಭಿವೃದ್ಧಿಗೆ ಹಣ ಹಂಚಿಕೆ ಮಾಡುವವರೆಗಿನ ಸುಧಾರಣೆಗಳ ಬಹು-ಹಂತದ ವಿಧಾನವು ಸಾಯುತ್ತಿರುವ ಬದುಕುವ ಹಕ್ಕನ್ನು ಪುನರುಜ್ಜೀವನಗೊಳಿಸುತ್ತದೆ.

ಗುಂಡಿ ತುಂಬಿದ ರಸ್ತೆಗಳು ಮತ್ತು ಕಾಲುದಾರಿಗಳಿಂದಾಗಿ ಸವಾರರು ಮತ್ತು ಪಾದಚಾರಿಗಳಿಗೆ ಆದ ಗಾಯಗಳು ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ನಿರ್ದೇಶನಗಳನ್ನು ನೀಡಿತ್ತು. ರಸ್ತೆ ಗುಂಡಿ ಅಪಘಾತದಿಂದ ಬಳಲುತ್ತಿರುವ ನಾಗರಿಕರು ಆಡಳಿತ ಮಂಡಳಿಯಿಂದ ಪರಿಹಾರವನ್ನು ಪಡೆಯುವ ಪ್ರತ್ಯೇಕ ಘಟಕವನ್ನು ಸ್ಥಾಪಿಸಲು ಅದು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಸೂಚಿಸಿತ್ತು. ಕರ್ನಾಟಕ ಹೈಕೋರ್ಟ್‌ನ ಆದೇಶದ ವಿರುದ್ಧ ಬಿಬಿಎಂಪಿ ಸುಪ್ರೀಂಕೋರ್ಟದ ಮೊರೆ ಹೋಯಿತು ಆದರೆ ಸುಪ್ರೀಂಕೋರ್ಟ್ ಅದರ ಮನವಿಯನ್ನು ವಜಾಗೊಳಿಸಿತು. ನ್ಯಾಯಮೂರ್ತಿಗಳ ನ್ಯಾಯಪೀಠವು ಹೈಕೋರ್ಟ್‌ನ ಆದೇಶಗಳನ್ನು ಅಂಗೀಕರಿಸಿತು ಮತ್ತು ನಗರದ ರಸ್ತೆಗಳಲ್ಲಿ ಯಾವುದೇ ಗುಂಡಿಗಳು ಅಥವಾ ಕುಳಿಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾಗರಿಕ ಸಂಸ್ಥೆಯನ್ನು ಕೇಳಿದೆ. ಬಿಬಿಎಂಪಿ ಅಧಿಕಾರಿಗಳು ಈ ಹಿಂದೆ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯಲ್ಲಿ ಪರಿಹಾರದ ಅವಕಾಶವಿಲ್ಲ ಎಂದು ಹೇಳಿಕೊಂಡಿದ್ದರೂ ಮತ್ತು ಅಂತಹ ಯೋಜನೆಯನ್ನು ಪ್ರಚಾರ ಮಾಡುವುದರಿಂದ ಅವು ನಾಗರಿಕ ಸಂಸ್ಥೆಯ ಜೇಬಿನಲ್ಲಿ ಆಳವಾದ ರಂಧ್ರಗಳನ್ನು ಉಂಟುಮಾಡುತ್ತವೆ; ಆದರೆ ನ್ಯಾಯಾಲಯವು ಅವರ ಮನವಿಯನ್ನು ತಿರಸ್ಕರಿಸಿ ರಸ್ತೆಗಳಲ್ಲಿ ಅಕ್ರಮ ನಿರ್ಮಾಣ ಮತ್ತು ಗುಂಡಿಗಳಿಗೆ ಕೆಎಂಸಿ ಕಾಯ್ದೆ ಅನುಮತಿ ನೀಡುತ್ತದೆಯೇ ಎಂದು ಹೈಕೋರ್ಟ್ ಬಿಬಿಎಂಪಿಯನ್ನು ಪ್ರಶ್ನಿಸಿದೆ. ಪುರಸಭೆಗಳ ಬಗ್ಗೆ ಕರ್ನಾಟಕ ಹೈಕೋರ್ಟ್ ನಿಲುವು ಎಲ್ಲಾ ನಗರ ಸಂಸ್ಥೆಗಳಿಗೆ ಕಣ್ಣು ತೆರೆಯುವಂತಿರಬೇಕು. ದೇಶದ ಉನ್ನತ ನ್ಯಾಯಾಲಯವು ಜೀವನದ ಹಕ್ಕನ್ನು ಎಲ್ಲ ಹಕ್ಕುಗಳಿಗಿಂತ ಮೇಲಿಟ್ಟ ನಂತರ ರಸ್ತೆ ಸುರಕ್ಷತೆಯ ಕುರಿತು ಭರವಸೆಗಳು ಹುಟ್ಟಿಕೊಂಡಿವೆ.

ಸರಿಯಾಗಿ ನಿರ್ವಹಿಸಿದ ರಸ್ತೆಗಳನ್ನು ಹೊಂದುವ ಹಕ್ಕನ್ನು ಭಾರತದ ಸಂವಿಧಾನದ 21 ನೇ ಪರಿಚ್ಛೇದ ಖಾತರಿಪಡಿಸುವ ಮೂಲಭೂತ ಹಕ್ಕು ಎಂದು ಬಾಂಬೆ ಹೈಕೋರ್ಟ್ 2015 ರಲ್ಲಿ ಅಭಿಪ್ರಾಯಪಟ್ಟಿದೆ. ಕರ್ನಾಟಕ ಹೈಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಅವರು ಈ ತೀರ್ಪನ್ನು ಉಚ್ಚರಿಸಿದ ನ್ಯಾಯಪೀಠದ ಸದಸ್ಯರಾಗಿದ್ದರು. ಅವರು ಬಿಬಿಎಂಪಿಗೆ ಇದೇ ರೀತಿಯ ಆದೇಶಗಳನ್ನು ನೀಡಿದಾಗ, ನಾಗರಿಕ ಸಂಸ್ಥೆಯ ಅಧಿಕಾರಿಗಳು ಅವರಿಗೆ ಸಾರ್ವಭೌಮ ವಿನಾಯಿತಿ ಇದೆ ಎಂದು ವಾದಿಸಿದರು. ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದಾಗ ಪರಿಹಾರವನ್ನು ಕೋರುವ ಹಕ್ಕಿನ ಬಗ್ಗೆ ಸಂವಿಧಾನದ 226 ನೇ ವಿಧಿಗೆ ಅನುಗುಣವಾಗಿ ಹೈಕೋರ್ಟ್‌ನ ಆದೇಶಗಳನ್ನು ಇಲ್ಲಿ ಉಲ್ಲೇಖಿಸಬೇಕಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಪ್ರಕಾರ, ಪ್ರತಿವರ್ಷ 1.5 ಲಕ್ಷಕ್ಕೂ ಹೆಚ್ಚು ಜನರು ರಸ್ತೆ ಅಪಘಾತದಿಂದ ಸಾಯುತ್ತಿದ್ದಾರೆ. ರಸ್ತೆ ಸುರಕ್ಷತೆ ಕುರಿತ ಸುಪ್ರೀಂ ಕೋರ್ಟ್ ಸಮಿತಿಯೊಂದು 2013 ರಿಂದ 2017 ರವರೆಗೆ ರಸ್ತೆ ಗುಂಡಿಗಳಿಂದಾಗಿ ರಸ್ತೆ ಅಪಘಾತಗಳಲ್ಲಿ 15,000 ಜನರು ಸಾವನ್ನಪ್ಪಿದ್ದಾರೆ ಎಂದು ಬಹಿರಂಗಪಡಿಸಿದೆ. ಈ ಸಂಖ್ಯೆಯು ಗಡಿಯಲ್ಲಿ ಅಥವಾ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟವರಿಗಿಂತ ಹೆಚ್ಚಾಗಿದೆ ಎಂದು ಸುಪ್ರೀಮ್ ಕೋರ್ಟ್ ಹೇಳಿದೆ. ಈ ಸಾವುಗಳಿಗೆ ಕಾರಣವಾದ ಪುರಸಭೆ ನಿಗಮಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ರಾಜ್ಯ ರಸ್ತೆ ಇಲಾಖೆಗಳು ಈ ಸಾವಿಗೆ ಜವಾಬ್ಧಾರರು ಎಂದು ನ್ಯಾಯಾಲಯವು ಹೇಳಿತ್ತು. ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ರಸ್ತೆ ಗುಂಡಿಗಳಿಗೆ ಸಂಬಂಧಿಸಿದ ಅಪಘಾತಗಳು ಸಂಭವಿಸಿವೆ.

ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ರಚಿಸುವುದು ಮತ್ತು ನಿರ್ವಹಿಸುವುದು ಮತ್ತು ಅವುಗಳನ್ನು ಎಲ್ಲಾ ನಾಗರಿಕರಿಗೆ ಒದಗಿಸುವುದು ಪ್ರತಿ ಪುರಸಭೆಯ ಮೂಲ ಕರ್ತವ್ಯವಾಗಿದೆ. ಗ್ರಾಮೀಣ ಪ್ರದೇಶದಿಂದ ನಗರ ವಲಸೆ ಅತ್ಯುನ್ನತ ಮಟ್ಟದಲ್ಲಿರುವ ಈ ಸಮಯದಲ್ಲಿ, ನಗರೀಕರಣವು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ನಗರ ನಿಗಮಗಳಿಗೆ ಯಾವುದೇ ಕಾರ್ಯಸೂಚಿಯಿಲ್ಲ ಎಂದು ತೋರುತ್ತದೆ. ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಪರಿಶೀಲಿಸಲು ನೇಮಕಗೊಂಡ ಜೆ.ಎಸ್.ವರ್ಮಾ ಸಮಿತಿ; ಎಲ್ಲಾ ರಸ್ತೆಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಮತ್ತು ಅವು ಕಾರ್ಯನಿರ್ವಹಿಸುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಲು ರಾಜ್ಯ ಇಲಾಖೆಗಳಿಗೆ ನಿರ್ದೇಶನ ಮಾಡಿದೆ. ರಾಷ್ಟ್ರೀಯ ಹೆದ್ದಾರಿಗಳ ಕಳಪೆ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರವು ಇತ್ತೀಚೆಗೆ ಎನ್‌ಎಚ್‌ಎಐಗೆ ಚಾವಟಿ ಬೀಸಿತ್ತು. ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸವಾರಿ ಮಾಡುತ್ತಿದ್ದ ಮಹಿಳಾ ಬೈಕರ್ ತನ್ನ ಬೈಕ್‌ನ ಮೇಲೆ ನಿಯಂತ್ರಣ ಕಳೆದುಕೊಂಡು ಬಿದ್ದಾಗ ವೇಗವಾಗಿ ಬಂದ ಟ್ರಕ್‌ನಿಂದ ಕೊಲ್ಲಲ್ಪಟ್ಟ ನಂತರ; ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದಕ್ಕಾಗಿ ಮುಂಬೈ ಪೊಲೀಸರು ಮಹಿಳೆಯ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ. ವ್ಯವಸ್ಥೆಯು ಎಷ್ಟು ಅಸ್ತವ್ಯಸ್ತವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ಅಂತಹ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವ ಎಲ್ಲರಿಗೂ ರಸ್ತೆ ಅಧಿಕಾರಿಗಳು ಮತ್ತು ಅವರ ಕಮಿಷನರಿಗಳಿಂದ ಪರಿಹಾರವನ್ನು ಸೂಚಿಸಿತು. ಉನ್ನತ ನ್ಯಾಯಾಲಯವು ಈ ಸಲಹೆಯನ್ನು ಬೆಂಬಲಿಸುತ್ತಿರುವುದರಿಂದ, ರಾಜ್ಯ ಸರ್ಕಾರಗಳು ಆಯಾ ನಗರ ಸ್ಥಳೀಯ ಸಂಸ್ಥೆಗಳನ್ನು ಉತ್ತಮಗೊಳಿಸಲು ಬದ್ಧವಾಗಿರಬೇಕು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದರಿಂದ ಹಿಡಿದು ಅಭಿವೃದ್ಧಿಗೆ ಹಣ ಹಂಚಿಕೆ ಮಾಡುವವರೆಗಿನ ಸುಧಾರಣೆಗಳ ಬಹು-ಹಂತದ ವಿಧಾನವು ಸಾಯುತ್ತಿರುವ ಬದುಕುವ ಹಕ್ಕನ್ನು ಪುನರುಜ್ಜೀವನಗೊಳಿಸುತ್ತದೆ.

Intro:Body:

For upload 3


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.