ETV Bharat / bharat

ಇಂಜಿನಿಯರ್​ ಮೇಲೆ ಕೆಸರೆರಚಿದ ಪ್ರಕರಣ: ಠಾಣೆಯಲ್ಲೂ ಕಿರಿಕ್​ ಮಾಡಿದ ರಾಣೆ

ಶಾಸಕ ನಿತೇಶ್​ ಹಾಗೂ ಅವರ ಸಹಚರರ ಈ ಕೃತ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡಿತ್ತು. ಇದು ರಾಜಕೀಯ ಬಣ್ಣ ಪಡೆದ ಕಾರಣ ಪೊಲೀಸರು ನಿತೇಶ್​ ಹಾಗೂ ಮತ್ತಿಬ್ಬರುನ್ನು ಬಂಧಿಸಿ, ವಿಚಾರಣೆ ನಡೆಸಿದರು.

author img

By

Published : Jul 5, 2019, 8:36 AM IST

ನಿತೇಶ್​ ರಾನೆ

ನವದೆಹಲಿ: ಮುಂಬೈ ಹೈವೇ ಬಳಿ ಇಂಜಿನಿಯರ್​ ಮೇಲೆ ಕೆಸರು ಸುರಿದು, ಕಂಬಕ್ಕೆ ಕಟ್ಟಿಹಾಕಿದ್ದ ಕಾಂಗ್ರೆಸ್​ ಶಾಸಕ ನಿತೇಶ್​ ರಾಣೆ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದರು.

ಶಾಸಕ ನಿತೇಶ್​ ಹಾಗೂ ಅವರ ಸಹಚರರ ಈ ಕೃತ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡಿತ್ತು. ಇದು ರಾಜಕೀಯ ಬಣ್ಣ ಪಡೆದ ಕಾರಣ ಪೊಲೀಸರು ನಿತೇಶ್​ ಹಾಗೂ ಮತ್ತಿಬ್ಬರುನ್ನು ಬಂಧಿಸಿ, ವಿಚಾರಣೆ ನಡೆಸಿದರು.

  • #WATCH Nitesh Rane at Kankavali police station earlier today after being arrested for throwing mud on an engineer: Whatever you want to do, do it tomorrow. If you arrest me today, they will win. And people of Kankavali will keep dying like this. #Maharashtra pic.twitter.com/nUwo9zc9Pg

    — ANI (@ANI) July 4, 2019 " class="align-text-top noRightClick twitterSection" data=" ">

ಪೊಲೀಸ್​ ವಿಚಾರಣೆ ವೇಳೆಯೂ ನಿತೇಶ್​ ಗರಂ ಆದ ವಿಡಿಯೋ ಹರಿದಾಡುತ್ತಿದೆ. ನೀವು ಏನೇ ಮಾಡಬೇಕೆಂದರೂ ನಾಳೆ ಮಾಡಿ. ಇಂದು ನೀವು ನನ್ನನ್ನು ಬಂಧಿಸಿದರೆ ಅವರೇ ಗೆದ್ದಂತೆ. ಇದರಿಂದ ಕಂಕಾವಲಿಯ ಜನ ಪ್ರತಿದಿನ ಸಾಯುವಂತಾಗುತ್ತೆ ಎಂದು ಏರುಧ್ವನಿಯಲ್ಲಿ ಮಾತನಾಡಿದ ದೃಶ್ಯಗಳು ಸೆರೆಯಾಗಿವೆ.

ನಿನ್ನೆ ಮುಂಬೈ-ಗೋವಾ ಹೈವೇಯ ಕಂಕಾವಲಿಯ ಬಳಿ ರಸ್ತೆ ಗುಂಡಿಗಳ ಪರಿಶೀಲನೆಗೆ ಬಂದಿದ್ದ ಇಂಜಿನಿಯರ್​ ಶೆಡೇಕರ್​ ಮೇಲೆ ನಿತೇಶ್​ ಹಾಗೂ ಸಹಚರರು ಕೆಸರು ಸುರಿದಿದ್ದಲ್ಲದೆ, ಅವರನ್ನು ಕಂಬಕ್ಕೆ ಕಟ್ಟಿ ಹಾಕಿದ್ದರು. ಕಳಪೆ ಕಾಮಗಾರಿಯಿಂದಾಗಿ ಇಲ್ಲಿನ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಈ ಏರಿಯಾವನ್ನು ಕೆಸರುಮಯ ಮಾಡಲು ನಿಮಗೆ ಅಧಿಕಾರ ಕೊಟ್ಟವರಾರು? ಜನರು ಅನುಭವಿಸುವ ನೋವನ್ನೂ ನೀವೂ ಅನುಭವಿಸಿ ಎಂದು ಆವಾಜ್​ ಹಾಕಿದ್ದರು.

  • #WATCH: Congress MLA Nitesh Narayan Rane and his supporters throw mud on engineer Prakash Shedekar at a bridge near Mumbai-Goa highway in Kankavali, when they were inspecting the potholes-ridden highway. They later tied him to the bridge over the river. pic.twitter.com/B1XJZ6Yu6z

    — ANI (@ANI) July 4, 2019 " class="align-text-top noRightClick twitterSection" data=" ">

ಕೈಯಲ್ಲಿ ಕೋಲು ಹಿಡಿದು ನಾನು ಇಲ್ಲಿನ ಹೈವೇಯನ್ನು ರಿಪೇರಿ ಮಾಡಿಸುತ್ತೇನೆ. ಬೆಳಗ್ಗೆ 7 ಗಂಟೆಗೇ ಇಲ್ಲಿಗೆ ಬರುತ್ತೇನೆ. ಆಗ ನೋಡಿ ವ್ಯವಸ್ಥೆ ಹೇಗಿರುತ್ತದೆ. ಅಧಿಕಾರಿಗಳ ಸೊಕ್ಕಿಗೆ ನಮ್ಮಲ್ಲಿ ಔಷಧವಿದೆ ಎಂದು ಹೇಳಿಕೆ ನೀಡಿದ್ದರು.

ನಿತೇಶ್​ ಮಾಜಿ ಸಿಎಂ ನಾರಾಯಣ್​ ರಾಣೆ ಅವರ ಪುತ್ರ. ಘಟನೆ ಬಗ್ಗೆ ನಾರಾಯಣ ರಾಣೆ, ಮಗನ ಬದಲು ಕ್ಷಮೆಯಾಚಿಸಿದ್ದಾರೆ. ಈ ಮೊದಲು, 2017ರಲ್ಲಿಯೂ ಸಭೆಯೊಂದರಲ್ಲಿ ಹಿರಿಯ ಅಧಿಕಾರಿ ಮೇಳೆ ಮೀನು ಎಸೆದು ಗಲಾಟೆ ಮಾಡಿದ್ದರು.

ನವದೆಹಲಿ: ಮುಂಬೈ ಹೈವೇ ಬಳಿ ಇಂಜಿನಿಯರ್​ ಮೇಲೆ ಕೆಸರು ಸುರಿದು, ಕಂಬಕ್ಕೆ ಕಟ್ಟಿಹಾಕಿದ್ದ ಕಾಂಗ್ರೆಸ್​ ಶಾಸಕ ನಿತೇಶ್​ ರಾಣೆ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದರು.

ಶಾಸಕ ನಿತೇಶ್​ ಹಾಗೂ ಅವರ ಸಹಚರರ ಈ ಕೃತ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡಿತ್ತು. ಇದು ರಾಜಕೀಯ ಬಣ್ಣ ಪಡೆದ ಕಾರಣ ಪೊಲೀಸರು ನಿತೇಶ್​ ಹಾಗೂ ಮತ್ತಿಬ್ಬರುನ್ನು ಬಂಧಿಸಿ, ವಿಚಾರಣೆ ನಡೆಸಿದರು.

  • #WATCH Nitesh Rane at Kankavali police station earlier today after being arrested for throwing mud on an engineer: Whatever you want to do, do it tomorrow. If you arrest me today, they will win. And people of Kankavali will keep dying like this. #Maharashtra pic.twitter.com/nUwo9zc9Pg

    — ANI (@ANI) July 4, 2019 " class="align-text-top noRightClick twitterSection" data=" ">

ಪೊಲೀಸ್​ ವಿಚಾರಣೆ ವೇಳೆಯೂ ನಿತೇಶ್​ ಗರಂ ಆದ ವಿಡಿಯೋ ಹರಿದಾಡುತ್ತಿದೆ. ನೀವು ಏನೇ ಮಾಡಬೇಕೆಂದರೂ ನಾಳೆ ಮಾಡಿ. ಇಂದು ನೀವು ನನ್ನನ್ನು ಬಂಧಿಸಿದರೆ ಅವರೇ ಗೆದ್ದಂತೆ. ಇದರಿಂದ ಕಂಕಾವಲಿಯ ಜನ ಪ್ರತಿದಿನ ಸಾಯುವಂತಾಗುತ್ತೆ ಎಂದು ಏರುಧ್ವನಿಯಲ್ಲಿ ಮಾತನಾಡಿದ ದೃಶ್ಯಗಳು ಸೆರೆಯಾಗಿವೆ.

ನಿನ್ನೆ ಮುಂಬೈ-ಗೋವಾ ಹೈವೇಯ ಕಂಕಾವಲಿಯ ಬಳಿ ರಸ್ತೆ ಗುಂಡಿಗಳ ಪರಿಶೀಲನೆಗೆ ಬಂದಿದ್ದ ಇಂಜಿನಿಯರ್​ ಶೆಡೇಕರ್​ ಮೇಲೆ ನಿತೇಶ್​ ಹಾಗೂ ಸಹಚರರು ಕೆಸರು ಸುರಿದಿದ್ದಲ್ಲದೆ, ಅವರನ್ನು ಕಂಬಕ್ಕೆ ಕಟ್ಟಿ ಹಾಕಿದ್ದರು. ಕಳಪೆ ಕಾಮಗಾರಿಯಿಂದಾಗಿ ಇಲ್ಲಿನ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಈ ಏರಿಯಾವನ್ನು ಕೆಸರುಮಯ ಮಾಡಲು ನಿಮಗೆ ಅಧಿಕಾರ ಕೊಟ್ಟವರಾರು? ಜನರು ಅನುಭವಿಸುವ ನೋವನ್ನೂ ನೀವೂ ಅನುಭವಿಸಿ ಎಂದು ಆವಾಜ್​ ಹಾಕಿದ್ದರು.

  • #WATCH: Congress MLA Nitesh Narayan Rane and his supporters throw mud on engineer Prakash Shedekar at a bridge near Mumbai-Goa highway in Kankavali, when they were inspecting the potholes-ridden highway. They later tied him to the bridge over the river. pic.twitter.com/B1XJZ6Yu6z

    — ANI (@ANI) July 4, 2019 " class="align-text-top noRightClick twitterSection" data=" ">

ಕೈಯಲ್ಲಿ ಕೋಲು ಹಿಡಿದು ನಾನು ಇಲ್ಲಿನ ಹೈವೇಯನ್ನು ರಿಪೇರಿ ಮಾಡಿಸುತ್ತೇನೆ. ಬೆಳಗ್ಗೆ 7 ಗಂಟೆಗೇ ಇಲ್ಲಿಗೆ ಬರುತ್ತೇನೆ. ಆಗ ನೋಡಿ ವ್ಯವಸ್ಥೆ ಹೇಗಿರುತ್ತದೆ. ಅಧಿಕಾರಿಗಳ ಸೊಕ್ಕಿಗೆ ನಮ್ಮಲ್ಲಿ ಔಷಧವಿದೆ ಎಂದು ಹೇಳಿಕೆ ನೀಡಿದ್ದರು.

ನಿತೇಶ್​ ಮಾಜಿ ಸಿಎಂ ನಾರಾಯಣ್​ ರಾಣೆ ಅವರ ಪುತ್ರ. ಘಟನೆ ಬಗ್ಗೆ ನಾರಾಯಣ ರಾಣೆ, ಮಗನ ಬದಲು ಕ್ಷಮೆಯಾಚಿಸಿದ್ದಾರೆ. ಈ ಮೊದಲು, 2017ರಲ್ಲಿಯೂ ಸಭೆಯೊಂದರಲ್ಲಿ ಹಿರಿಯ ಅಧಿಕಾರಿ ಮೇಳೆ ಮೀನು ಎಸೆದು ಗಲಾಟೆ ಮಾಡಿದ್ದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.