ETV Bharat / bharat

300 ಮೀ. ಆಳದ ಕಂದಕಕ್ಕೆ ಬಿದ್ದ ಪ್ರವಾಸಿಗರ ಕಾರು: ಮೂವರ ಸಾವು - ದೆಹಲಿ ಪ್ರವಾಸಿಗರ ಕಾರು ಅಪಘಾತ

ದೆಹಲಿಯಿಂದ ಶಿಮ್ಲಾದ ನರ್ಕಂಡಾಕ್ಕೆ ಪ್ರವಾಸಕ್ಕೆ ಎಂದು ಬಂದಿದ್ದ ಪ್ರವಾಸಿಗರ ಕಾರು 300 ಮೀಟರ್ ಆಳದ ಕಂದಕಕ್ಕೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

car-fell-into-gorge-in-narkanda
ಕಂದಕಕ್ಕೆ ಬಿದ್ದ ಪ್ರವಾಸಿಗರ ಕಾರು
author img

By

Published : Jan 25, 2021, 7:37 AM IST

ರಾಂಪುರ್ (ಹಿಮಾಚಲಪ್ರದೇಶ): ದೆಹಲಿಯಿಂದ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರ ಕಾರು ಶಿಮ್ಲಾದ ನರ್ಕಂಡಾದ ಬಳಿ ಕಂದಕಕ್ಕೆ ಬಿದ್ದ ಪರಿಣಾಮ, ಮೂವರು ಸಾವನ್ನಪ್ಪಿದ್ದಾರೆ. ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಶಿಮ್ಲಾದ ಐಜಿಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ಎಂದು ದಾಖಲಿಸಲಾಗಿದೆ.

ಇವರೆಲ್ಲರು ದೆಹಲಿಯಿಂದ ನರ್ಕಂಡಾವನ್ನು ನೋಡಲು ಬಂದಿದ್ದರು. ನರ್ಕಂಡಾದ ಡೋಗ್ರಾ ಬಳಿ ಕಾರು ಆಯತಪ್ಪಿ 300 ಮೀಟರ್ ಆಳದ ಕಂದಕಕ್ಕೆ ಬಿದ್ದಿದೆ. ಅಪಘಾತದಲ್ಲಿ 3 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಕಂದಕದಿಂದ ಮೇಲೆತ್ತಲಾಗಿದೆ.

ಓದಿ:2ನೇ ಮದುವೆಗೆ ವಿರೋಧ: ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ

ಅಪಘಾತಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗಾಯಾಳುಗಳ ಹೇಳಿಕೆಯ ನಂತರ ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ. ಇನ್ಶಾಕ್ ಶರ್ಮಾ, ಗೌರವ್ ಮತ್ತು ರಹಮತ್ ಮೃತರು. ಯಮೀನ್ ಖಾನ್ ಮತ್ತು ರಿತಿಕಾ ಗಾಯಗೊಂಡವರು.

ರಾಂಪುರ್ (ಹಿಮಾಚಲಪ್ರದೇಶ): ದೆಹಲಿಯಿಂದ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರ ಕಾರು ಶಿಮ್ಲಾದ ನರ್ಕಂಡಾದ ಬಳಿ ಕಂದಕಕ್ಕೆ ಬಿದ್ದ ಪರಿಣಾಮ, ಮೂವರು ಸಾವನ್ನಪ್ಪಿದ್ದಾರೆ. ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಶಿಮ್ಲಾದ ಐಜಿಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ಎಂದು ದಾಖಲಿಸಲಾಗಿದೆ.

ಇವರೆಲ್ಲರು ದೆಹಲಿಯಿಂದ ನರ್ಕಂಡಾವನ್ನು ನೋಡಲು ಬಂದಿದ್ದರು. ನರ್ಕಂಡಾದ ಡೋಗ್ರಾ ಬಳಿ ಕಾರು ಆಯತಪ್ಪಿ 300 ಮೀಟರ್ ಆಳದ ಕಂದಕಕ್ಕೆ ಬಿದ್ದಿದೆ. ಅಪಘಾತದಲ್ಲಿ 3 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಕಂದಕದಿಂದ ಮೇಲೆತ್ತಲಾಗಿದೆ.

ಓದಿ:2ನೇ ಮದುವೆಗೆ ವಿರೋಧ: ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ

ಅಪಘಾತಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗಾಯಾಳುಗಳ ಹೇಳಿಕೆಯ ನಂತರ ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ. ಇನ್ಶಾಕ್ ಶರ್ಮಾ, ಗೌರವ್ ಮತ್ತು ರಹಮತ್ ಮೃತರು. ಯಮೀನ್ ಖಾನ್ ಮತ್ತು ರಿತಿಕಾ ಗಾಯಗೊಂಡವರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.