ETV Bharat / bharat

'ಸಂಸತ್ತು ಅಂಗೀಕರಿಸಿರುವ ಪೌರತ್ವ ಕಾಯ್ದೆಯನ್ನು ಪ.ಬಂಗಾಳ ಜಾರಿಗೆ ತರಬೇಕಾಗುತ್ತದೆ' - CAA was passed by parliament

ಕರಕುಶಲ ಪ್ರದರ್ಶನ ಹುನಾರ್ ಹಾಟ್ ಉದ್ಘಾಟಿಸಲು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಭೇಟಿ ಆಗಮಿಸಿದ್ದರು.

Mukhtar Abbas Naqvi
ಬಿಜೆಪಿ ಮುಖಂಡ ಮುಖ್ತಾರ್ ಅಬ್ಬಾಸ್ ನಖ್ವಿ
author img

By

Published : Jan 12, 2020, 9:27 PM IST

ಹೈದರಾಬಾದ್: ಪಶ್ಚಿಮ ಬಂಗಾಳವು ಭಾರತದ ಭಾಗವಾಗಿದೆ. ಆದ್ದರಿಂದ ದೇಶದ ಸಂಸತ್ತು​ ಅಂಗೀಕರಿಸಿದ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ಜಾರಿಗೆ ತರಬೇಕಾಗುತ್ತದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಭಾನುವಾರ ಹೇಳಿದ್ದಾರೆ.

ಸಂಸತ್ತು ಅಂಗೀಕರಿಸಿರುವ ಸಿಎಎ ಕಾಯ್ದೆಯನ್ನು ಪಶ್ಚಿಮ ಬಂಗಾಳವು ಕಾರ್ಯಗತಗೊಳಿಸಬೇಕಾಗುತ್ತದೆ: ಕೇಂದ್ರ ಸಚಿವ ನಖ್ವಿ

ಸಂಸತ್ತು ಅಂಗೀಕರಿಸುವ ಯಾವುದೇ ಕಾನೂನನ್ನು ರಾಷ್ಟ್ರದ ಪ್ರತಿಯೊಂದು ರಾಜ್ಯವೂ ಅಂಗೀಕರಿಸಬೇಕು. ಪಶ್ಚಿಮ ಬಂಗಾಳ ರಾಷ್ಟ್ರದ ಭಾಗವಾಗಿದೆ ಮತ್ತು ಮಮತಾ ಬ್ಯಾನರ್ಜಿ ಇತಿಹಾಸವನ್ನು ಓದಬೇಕು. ಭಾರತೀಯ ಸಂವಿಧಾನದ ಬಗ್ಗೆ ಸ್ವಲ್ಪ ಜ್ಞಾನವನ್ನು ಅವರು ಪಡೆಯಬೇಕು. ಸಂಸತ್ತು ಅಂಗೀಕರಿಸಿದ ಕಾನೂನನ್ನು ರಾಜ್ಯವು ಮೀರುತ್ತದೆ ಎಂಬುದು ಸಂಪೂರ್ಣವಾಗಿ ಅಸಾಂವಿಧಾನಿಕ ಮತ್ತು ಅಸಾಧ್ಯ. ರಾಷ್ಟ್ರವನ್ನು ದಾರಿ ತಪ್ಪಿಸುವ ಜನರು ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆ ಮೇಲುಗೈ ಸಾಧಿಸಲು ಬಯಸುವುದಿಲ್ಲ ಎಂದು ನಖ್ವಿ ಸುದ್ದಿಗಾರರಿಗೆ ತಿಳಿಸಿದರು.

ಪೌರತ್ವ ಕಾಯ್ದೆ ಧಾರ್ಮಿಕವಾಗಿ ಕಿರುಕುಳಕ್ಕೊಳಗಾದ ಜನರಿಗೆ ಮಾತ್ರ ಅನ್ವಯಿಸುತ್ತದೆ. ಭಾರತವು ಎಲ್ಲಾ ಭಾರತೀಯ ಮುಸ್ಲಿಮರಿಗೆ ಭದ್ರತೆ, ಸಮೃದ್ಧಿಯನ್ನು ನೀಡುತ್ತದೆ. ಜನಸಮೂಹವನ್ನು ಪ್ರಚೋದಿಸುವ ಜನರು ಈ ರಾಷ್ಟ್ರವು ನಿಂತಿರುವ ಅಡಿಪಾಯಕ್ಕೆ ವಿರುದ್ಧವಾಗಿರುತ್ತಾರೆ. ಅಂತಹ ಜನರ ನೈಜ ಉದ್ದೇಶಗಳನ್ನು ನಾಗರಿಕರು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಸಿಎಎ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಸಹ ಹರಿದು ಹಾಕಿದ್ದೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ.

ಹುನಾರ್ ಹಾಟ್ ಎಂಬ ಕರಕುಶಲ ಪ್ರದರ್ಶನವನ್ನು ಉದ್ಘಾಟಿಸಲು ನಖ್ವಿ ಹೈದರಾಬಾದ್‌ಗೆ ಆಗಮಿಸಿದ್ದರು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹೈದರಾಬಾದ್: ಪಶ್ಚಿಮ ಬಂಗಾಳವು ಭಾರತದ ಭಾಗವಾಗಿದೆ. ಆದ್ದರಿಂದ ದೇಶದ ಸಂಸತ್ತು​ ಅಂಗೀಕರಿಸಿದ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ಜಾರಿಗೆ ತರಬೇಕಾಗುತ್ತದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಭಾನುವಾರ ಹೇಳಿದ್ದಾರೆ.

ಸಂಸತ್ತು ಅಂಗೀಕರಿಸಿರುವ ಸಿಎಎ ಕಾಯ್ದೆಯನ್ನು ಪಶ್ಚಿಮ ಬಂಗಾಳವು ಕಾರ್ಯಗತಗೊಳಿಸಬೇಕಾಗುತ್ತದೆ: ಕೇಂದ್ರ ಸಚಿವ ನಖ್ವಿ

ಸಂಸತ್ತು ಅಂಗೀಕರಿಸುವ ಯಾವುದೇ ಕಾನೂನನ್ನು ರಾಷ್ಟ್ರದ ಪ್ರತಿಯೊಂದು ರಾಜ್ಯವೂ ಅಂಗೀಕರಿಸಬೇಕು. ಪಶ್ಚಿಮ ಬಂಗಾಳ ರಾಷ್ಟ್ರದ ಭಾಗವಾಗಿದೆ ಮತ್ತು ಮಮತಾ ಬ್ಯಾನರ್ಜಿ ಇತಿಹಾಸವನ್ನು ಓದಬೇಕು. ಭಾರತೀಯ ಸಂವಿಧಾನದ ಬಗ್ಗೆ ಸ್ವಲ್ಪ ಜ್ಞಾನವನ್ನು ಅವರು ಪಡೆಯಬೇಕು. ಸಂಸತ್ತು ಅಂಗೀಕರಿಸಿದ ಕಾನೂನನ್ನು ರಾಜ್ಯವು ಮೀರುತ್ತದೆ ಎಂಬುದು ಸಂಪೂರ್ಣವಾಗಿ ಅಸಾಂವಿಧಾನಿಕ ಮತ್ತು ಅಸಾಧ್ಯ. ರಾಷ್ಟ್ರವನ್ನು ದಾರಿ ತಪ್ಪಿಸುವ ಜನರು ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆ ಮೇಲುಗೈ ಸಾಧಿಸಲು ಬಯಸುವುದಿಲ್ಲ ಎಂದು ನಖ್ವಿ ಸುದ್ದಿಗಾರರಿಗೆ ತಿಳಿಸಿದರು.

ಪೌರತ್ವ ಕಾಯ್ದೆ ಧಾರ್ಮಿಕವಾಗಿ ಕಿರುಕುಳಕ್ಕೊಳಗಾದ ಜನರಿಗೆ ಮಾತ್ರ ಅನ್ವಯಿಸುತ್ತದೆ. ಭಾರತವು ಎಲ್ಲಾ ಭಾರತೀಯ ಮುಸ್ಲಿಮರಿಗೆ ಭದ್ರತೆ, ಸಮೃದ್ಧಿಯನ್ನು ನೀಡುತ್ತದೆ. ಜನಸಮೂಹವನ್ನು ಪ್ರಚೋದಿಸುವ ಜನರು ಈ ರಾಷ್ಟ್ರವು ನಿಂತಿರುವ ಅಡಿಪಾಯಕ್ಕೆ ವಿರುದ್ಧವಾಗಿರುತ್ತಾರೆ. ಅಂತಹ ಜನರ ನೈಜ ಉದ್ದೇಶಗಳನ್ನು ನಾಗರಿಕರು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಸಿಎಎ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಸಹ ಹರಿದು ಹಾಕಿದ್ದೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ.

ಹುನಾರ್ ಹಾಟ್ ಎಂಬ ಕರಕುಶಲ ಪ್ರದರ್ಶನವನ್ನು ಉದ್ಘಾಟಿಸಲು ನಖ್ವಿ ಹೈದರಾಬಾದ್‌ಗೆ ಆಗಮಿಸಿದ್ದರು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Intro:Body:

Central Union Minister Mukthar Abbas Naqvib visited Hyderabad. And he is inagurated the Handicrafts of exhibition at People's Plaza on Necklace road. it was unter the agies of the Ministry of Minority Affairs. Later, he visited the stalls along with State Home Minister Mahmood ali.    
Amid ongoing protests over the Citizenship Amendment Act (CAA), senior BJP leader and Union Minister Mukhtar Abbas Naqvi on Sunday said there was no going back on the amended law and thegovernment was firm on it.
      "We are not going to make any changes in the present CAA which has been passed by the Parliament.  Those who are opposing it through a 'horror show' need to understand it very clearly that there is no rethinking on this,"the Minority Affairs Minister told reportersat the sidelines of an event here.
    The Acts passed by Parliament have to be implemented by all states. There cannot be any ifs or buts. All parts of the country, including Jammu and Kashmir, have to implement them, he said.
  "I also want to assure the Indian Muslims that their socio, economic, religious, constitutional, rights and of every Indian are absolutely safe and secure, he said adding India is the safest country for minorities.
   Naqvi further saidIndian Muslims are living in the country with commitment and not by compulsion. "Indian Muslims are staying in the country with 'majbooti' (strength) and not 'majboori' (helplessness)," he said.  
 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.