ETV Bharat / bharat

ನಾಳೆ ದೇಶಾದ್ಯಂತ BSNL ನೌಕರರ ಉಪವಾಸ ಸತ್ಯಾಗ್ರಹ

ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಬಿಎಸ್​ಎನ್​​ಎಲ್​​ ನೌಕರರು ನಾಳೆ ದೇಶಾದ್ಯಂತ ಉಪವಾಸ ಪ್ರತಿಭಟನೆ ನಡೆಸಲಿದ್ದಾರೆ.

author img

By

Published : Feb 23, 2020, 12:44 PM IST

BSNL employees plan hunger strike on Monday
BSNL employees plan hunger strike on Monday

ನವದೆಹಲಿ: ಭಾರತ್ ಸಂಚಾರ್ ನಿಗಮ (BSNL)ದ ಕುರಿತಾದ ಕ್ಯಾಬಿನೆಟ್ ನಿರ್ಧಾರಗಳ ಆರಂಭಿಕ ಅನುಷ್ಠಾನಕ್ಕಾಗಿ ಫೆಬ್ರವರಿ 24 ರಂದು ಉಪವಾಸ ಸತ್ಯಾಗ್ರಹ ನಡೆಸಲು ಬಿಎಸ್ಎನ್ಎಲ್ (ಎಯುಎಬಿ) ಯ ಎಲ್ಲಾ ಸಂಘಗಳು ನಿರ್ಧರಿಸಿದೆ.

BSNL ನೌಕರರ ಸಮಸ್ಯೆಗಳು ಹಾಗೂ ಕುಂದುಕೊರತೆಗಳನ್ನು ಶೀಘ್ರ ಬಗೆಹರಿಸಲು ಒತ್ತಡ ಹೇರುವ ಉದ್ದೇಶದಿಂದ ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್​​ಎನ್​​ಎಲ್​​ ನೌಕರ ವರ್ಗ ತಿಳಿಸಿದೆ. ದೀರ್ಘಕಾಲೀನ ಬಾಂಡ್‌ಗಳ ಮೂಲಕ ಹಣ, ಸ್ವತ್ತುಗಳಿಂದ ಹಣಗಳಿಕೆ ಮತ್ತು ಸ್ವಯಂಪ್ರೇರಿತ ನಿವೃತ್ತಿ ಯೋಜನೆಯ ಅನುಷ್ಠಾನಗಳ ಪೈಕಿ ವಿಆರ್‌ಎಸ್ ಮಾತ್ರ ಜಾರಿಗೆ ಬಂದಿದ್ದು, ಒಟ್ಟು 78,569 ಬಿಎಸ್‌ಎನ್‌ಎಲ್ ನೌಕರರನ್ನು ಕೆಲಸದಿಂದ ತೆಗೆದು ಹಾಕಿ ಮನೆಗೆ ಕಳುಹಿಸಲಾಗಿದೆ.

ಬಿಎಸ್ಎನ್ಎಲ್​​​ ನ ಆಸ್ತಿಗಳ ಹಣಗಳಿಸುವ ಪ್ರಕ್ರಿಯೆಯು ಸಹ ನಿಧಾನವಾಗಿ ಚಲಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಎಜಿಆರ್ ಲೆಕ್ಕಾಚಾರದ ಬಗ್ಗೆ ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪು ಟೆಲಿಕಾಂ ಕ್ಷೇತ್ರದಲ್ಲಿ ಅನಿಶ್ಚಿತತೆಗಳನ್ನು ಸೃಷ್ಟಿಸಿದೆ.

ಯಾವ ಕಾರಣದಿಂದ ಬ್ಯಾಂಕುಗಳು ಬಿಎಸ್‌ಎನ್‌ಎಲ್‌ಗೆ ಸಾಲವನ್ನು ವಿಸ್ತರಿಸಲು ಮುಂದಾಗಿಲ್ಲ ಎಂದು ಎಯುಎಬಿ ಹೇಳಿದೆ. 4 ಜಿ ಸ್ಪೆಕ್ಟ್ರಮ್ ಹಂಚಿಕೆ ವಿಳಂಬ ಮತ್ತು ಹಣ ಲಭ್ಯವಿಲ್ಲದ ಕಾರಣ, ಬಿಎಸ್‌ಎನ್‌ಎಲ್ 2020 ರ ಅಂತ್ಯದ ವೇಳೆಗೆ ತನ್ನ 4 ಜಿ ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆಯಿಲ್ಲ ಎಂದು ಬಿಎಸ್​​ಎನ್​​ಎಲ್​​ ಹೇಳಿದೆ.

ನವದೆಹಲಿ: ಭಾರತ್ ಸಂಚಾರ್ ನಿಗಮ (BSNL)ದ ಕುರಿತಾದ ಕ್ಯಾಬಿನೆಟ್ ನಿರ್ಧಾರಗಳ ಆರಂಭಿಕ ಅನುಷ್ಠಾನಕ್ಕಾಗಿ ಫೆಬ್ರವರಿ 24 ರಂದು ಉಪವಾಸ ಸತ್ಯಾಗ್ರಹ ನಡೆಸಲು ಬಿಎಸ್ಎನ್ಎಲ್ (ಎಯುಎಬಿ) ಯ ಎಲ್ಲಾ ಸಂಘಗಳು ನಿರ್ಧರಿಸಿದೆ.

BSNL ನೌಕರರ ಸಮಸ್ಯೆಗಳು ಹಾಗೂ ಕುಂದುಕೊರತೆಗಳನ್ನು ಶೀಘ್ರ ಬಗೆಹರಿಸಲು ಒತ್ತಡ ಹೇರುವ ಉದ್ದೇಶದಿಂದ ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್​​ಎನ್​​ಎಲ್​​ ನೌಕರ ವರ್ಗ ತಿಳಿಸಿದೆ. ದೀರ್ಘಕಾಲೀನ ಬಾಂಡ್‌ಗಳ ಮೂಲಕ ಹಣ, ಸ್ವತ್ತುಗಳಿಂದ ಹಣಗಳಿಕೆ ಮತ್ತು ಸ್ವಯಂಪ್ರೇರಿತ ನಿವೃತ್ತಿ ಯೋಜನೆಯ ಅನುಷ್ಠಾನಗಳ ಪೈಕಿ ವಿಆರ್‌ಎಸ್ ಮಾತ್ರ ಜಾರಿಗೆ ಬಂದಿದ್ದು, ಒಟ್ಟು 78,569 ಬಿಎಸ್‌ಎನ್‌ಎಲ್ ನೌಕರರನ್ನು ಕೆಲಸದಿಂದ ತೆಗೆದು ಹಾಕಿ ಮನೆಗೆ ಕಳುಹಿಸಲಾಗಿದೆ.

ಬಿಎಸ್ಎನ್ಎಲ್​​​ ನ ಆಸ್ತಿಗಳ ಹಣಗಳಿಸುವ ಪ್ರಕ್ರಿಯೆಯು ಸಹ ನಿಧಾನವಾಗಿ ಚಲಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಎಜಿಆರ್ ಲೆಕ್ಕಾಚಾರದ ಬಗ್ಗೆ ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪು ಟೆಲಿಕಾಂ ಕ್ಷೇತ್ರದಲ್ಲಿ ಅನಿಶ್ಚಿತತೆಗಳನ್ನು ಸೃಷ್ಟಿಸಿದೆ.

ಯಾವ ಕಾರಣದಿಂದ ಬ್ಯಾಂಕುಗಳು ಬಿಎಸ್‌ಎನ್‌ಎಲ್‌ಗೆ ಸಾಲವನ್ನು ವಿಸ್ತರಿಸಲು ಮುಂದಾಗಿಲ್ಲ ಎಂದು ಎಯುಎಬಿ ಹೇಳಿದೆ. 4 ಜಿ ಸ್ಪೆಕ್ಟ್ರಮ್ ಹಂಚಿಕೆ ವಿಳಂಬ ಮತ್ತು ಹಣ ಲಭ್ಯವಿಲ್ಲದ ಕಾರಣ, ಬಿಎಸ್‌ಎನ್‌ಎಲ್ 2020 ರ ಅಂತ್ಯದ ವೇಳೆಗೆ ತನ್ನ 4 ಜಿ ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆಯಿಲ್ಲ ಎಂದು ಬಿಎಸ್​​ಎನ್​​ಎಲ್​​ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.