ETV Bharat / bharat

ಶಿವಸೇನೆಯ ಕ್ಯಾಲೆಂಡರ್‌ನಲ್ಲಿ ಇಸ್ಲಾಮಿಕ್ ಪದ ಬಳಕೆ: ವಾಗ್ದಾಳಿ ನಡೆಸಿದ ಬಿಜೆಪಿ - ಶಿವಸೇನೆಯ ಮುಖ್ಯಸ್ಥ ಭಾಳಾ ಸಾಹೇಬ್ ಠಾಕ್ರೆ

ಶಿವಸೇನೆ ಕ್ಯಾಲೆಂಡರ್‌ನಲ್ಲಿ ಇಸ್ಲಾಮಿಕ್ ಪದಗಳನ್ನು ಬಳಸಿದ್ದಕ್ಕಾಗಿ ಮತ್ತು ಪಕ್ಷದ ಮುಖ್ಯಸ್ಥ ಬಾಳಾ ಸಾಹೇಬ್ ಠಾಕ್ರೆ ಅವರ ಮುಂದೆ 'ಜನಾಬ್' ಪದ ಬಳಸಿದ್ದಕ್ಕಾಗಿ ಬಿಜೆಪಿ ಮುಖಂಡ ಅತುಲ್ ಭಟ್ಖಾಲ್ಕರ್ ಶಿವಸೇನೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

shivasene
shivasene
author img

By

Published : Dec 31, 2020, 10:39 PM IST

ಮುಂಬೈ: ಶಿವಸೇನೆ ತನ್ನ ಸಂಸ್ಥಾಪಕ ಭಾಳಾ ಸಾಹೇಬ್ ಠಾಕ್ರೆ ಅವರ ಹೆಸರಿನ ಪಕ್ಕದಲ್ಲಿ 'ಜನಾಬ್' ಎಂದು ಬರೆದು ಬಹುಭಾಷಾ ಕ್ಯಾಲೆಂಡರ್ ಬಿಡುಗಡೆ ಮಾಡಿದ ಹಿನ್ನೆಲೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಶಿವಸೇನೆ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದೆ.

ಶಿವಸೇನೆಯ ಹೊಸ ಕ್ಯಾಲೆಂಡರ್‌ನಲ್ಲಿ ಉರ್ದು ಮತ್ತು ಇಂಗ್ಲಿಷ್ ಭಾಷೆಗಳ ಬಹುಪಾಲು ಪದಗಳಿದ್ದು, ಮರಾಠಿ ಅಲ್ಲ ಎಂದು ಕಂಡಿವಳಿ ಪೂರ್ವ ಪ್ರದೇಶದ ಬಿಜೆಪಿ ಶಾಸಕ ಅತುಲ್ ಭಟ್ಖಾಲ್ಕರ್ ಹೇಳಿದ್ದಾರೆ.

ಅದರಲ್ಲಿ ಬರೆದ ಕೆಲವು ದಿನಾಂಕಗಳು ಮತ್ತು ಪಠ್ಯಗಳು ಹಿಂದುತ್ವಕ್ಕೆ ವಿರುದ್ಧವಾಗಿವೆ ಎಂದು ಅವರು ಆರೋಪಿಸಿದರು. ಹಿಂದೂ ಹೃದಯ ಸಾಮ್ರಾಟ್ ಎಂಬ ಶೀರ್ಷಿಕೆಯನ್ನು ಬಾಳಾ ಸಾಹೇಬ್ ಠಾಕ್ರೆ ಅವರ ಹೆಸರಿನಿಂದ ಕೈಬಿಡಲಾಗಿದೆ ಎಂದು ಆರೋಪಿಸಿ ಅತುಲ್ ಭಟ್ಖಾಲ್ಕರ್ ಶಿವಸೇನೆಯ ಕ್ಯಾಲೆಂಡರ್‌ನ ಚಿತ್ರಗಳನ್ನು ಮತ್ತು ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

  • शिवसेनेने हिंदुहृदयसम्राट शिवसेनाप्रमुखांना जनाब बाळासाहेब म्हणून वैचारिक सुंता करून घ्यावी तो त्याचा अंतर्गत प्रश्न आहे, परंतु अवघ्या देशाचे आराध्य असलेल्या शिवरायांची छत्रपती ही बिरुदावली काढणारे तुम्ही कोण? महाराष्ट्राची जनता तुमची खेटराने पूजा केल्याशिवाय राहणार नाही. pic.twitter.com/9tXVkq3I8i

    — Atul Bhatkhalkar (@BhatkhalkarA) December 31, 2020 " class="align-text-top noRightClick twitterSection" data=" ">

"ಕ್ಯಾಲೆಂಡರ್‌ನಲ್ಲಿ ಬಳಸಲಾದ ಹೆಚ್ಚಿನ ಪದಗಳನ್ನು ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಇಸ್ಲಾಮಿಕ್ ಪದಗಳನ್ನು ಅದರಲ್ಲಿ ಉಲ್ಲೇಖಿಸಲಾಗಿದೆ ಅದು ಹಿಂದುತ್ವದ ಕಾರ್ಯಸೂಚಿಗೆ ವಿರುದ್ಧವಾಗಿದೆ. 'ಜನಾಬ್' ಪದವನ್ನು ಶಿವಸೇನೆಯ ಮುಖ್ಯಸ್ಥ ಬಾಳಾ ಸಾಹೇಬ್ ಠಾಕ್ರೆ ಅವರ ಹೆಸರಿನ ಮುಂದೆ ಬರೆಯಲಾಗಿದೆ" ಎಂದು ಭಟ್ಖಾಲ್ಕರ್ ಆರೋಪಿಸಿದರು.

"ಕ್ಯಾಲೆಂಡರ್​ನಲ್ಲಿ ಭಾಳಾ ಸಾಹೇಬ್ ಠಾಕ್ರೆ ಅವರ ಹೆಸರಿನ ಮುಂದೆ 'ಹಿಂದೂ ಹೃದಯ ಚಕ್ರವರ್ತಿ' ಎಂಬ ಶೀರ್ಷಿಕೆಯನ್ನು ಉಲ್ಲೇಖಿಸಿಲ್ಲ. ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನದಂದು 'ಶಿವಾಜಿ ಜಯಂತಿ' ಮಾತ್ರ ಉಲ್ಲೇಖಿಸಲಾಗಿದೆ. ಇದನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ" ಎಂದು ಅವರು ಹೇಳಿದರು.

ಮುಂಬೈ: ಶಿವಸೇನೆ ತನ್ನ ಸಂಸ್ಥಾಪಕ ಭಾಳಾ ಸಾಹೇಬ್ ಠಾಕ್ರೆ ಅವರ ಹೆಸರಿನ ಪಕ್ಕದಲ್ಲಿ 'ಜನಾಬ್' ಎಂದು ಬರೆದು ಬಹುಭಾಷಾ ಕ್ಯಾಲೆಂಡರ್ ಬಿಡುಗಡೆ ಮಾಡಿದ ಹಿನ್ನೆಲೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಶಿವಸೇನೆ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದೆ.

ಶಿವಸೇನೆಯ ಹೊಸ ಕ್ಯಾಲೆಂಡರ್‌ನಲ್ಲಿ ಉರ್ದು ಮತ್ತು ಇಂಗ್ಲಿಷ್ ಭಾಷೆಗಳ ಬಹುಪಾಲು ಪದಗಳಿದ್ದು, ಮರಾಠಿ ಅಲ್ಲ ಎಂದು ಕಂಡಿವಳಿ ಪೂರ್ವ ಪ್ರದೇಶದ ಬಿಜೆಪಿ ಶಾಸಕ ಅತುಲ್ ಭಟ್ಖಾಲ್ಕರ್ ಹೇಳಿದ್ದಾರೆ.

ಅದರಲ್ಲಿ ಬರೆದ ಕೆಲವು ದಿನಾಂಕಗಳು ಮತ್ತು ಪಠ್ಯಗಳು ಹಿಂದುತ್ವಕ್ಕೆ ವಿರುದ್ಧವಾಗಿವೆ ಎಂದು ಅವರು ಆರೋಪಿಸಿದರು. ಹಿಂದೂ ಹೃದಯ ಸಾಮ್ರಾಟ್ ಎಂಬ ಶೀರ್ಷಿಕೆಯನ್ನು ಬಾಳಾ ಸಾಹೇಬ್ ಠಾಕ್ರೆ ಅವರ ಹೆಸರಿನಿಂದ ಕೈಬಿಡಲಾಗಿದೆ ಎಂದು ಆರೋಪಿಸಿ ಅತುಲ್ ಭಟ್ಖಾಲ್ಕರ್ ಶಿವಸೇನೆಯ ಕ್ಯಾಲೆಂಡರ್‌ನ ಚಿತ್ರಗಳನ್ನು ಮತ್ತು ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

  • शिवसेनेने हिंदुहृदयसम्राट शिवसेनाप्रमुखांना जनाब बाळासाहेब म्हणून वैचारिक सुंता करून घ्यावी तो त्याचा अंतर्गत प्रश्न आहे, परंतु अवघ्या देशाचे आराध्य असलेल्या शिवरायांची छत्रपती ही बिरुदावली काढणारे तुम्ही कोण? महाराष्ट्राची जनता तुमची खेटराने पूजा केल्याशिवाय राहणार नाही. pic.twitter.com/9tXVkq3I8i

    — Atul Bhatkhalkar (@BhatkhalkarA) December 31, 2020 " class="align-text-top noRightClick twitterSection" data=" ">

"ಕ್ಯಾಲೆಂಡರ್‌ನಲ್ಲಿ ಬಳಸಲಾದ ಹೆಚ್ಚಿನ ಪದಗಳನ್ನು ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಇಸ್ಲಾಮಿಕ್ ಪದಗಳನ್ನು ಅದರಲ್ಲಿ ಉಲ್ಲೇಖಿಸಲಾಗಿದೆ ಅದು ಹಿಂದುತ್ವದ ಕಾರ್ಯಸೂಚಿಗೆ ವಿರುದ್ಧವಾಗಿದೆ. 'ಜನಾಬ್' ಪದವನ್ನು ಶಿವಸೇನೆಯ ಮುಖ್ಯಸ್ಥ ಬಾಳಾ ಸಾಹೇಬ್ ಠಾಕ್ರೆ ಅವರ ಹೆಸರಿನ ಮುಂದೆ ಬರೆಯಲಾಗಿದೆ" ಎಂದು ಭಟ್ಖಾಲ್ಕರ್ ಆರೋಪಿಸಿದರು.

"ಕ್ಯಾಲೆಂಡರ್​ನಲ್ಲಿ ಭಾಳಾ ಸಾಹೇಬ್ ಠಾಕ್ರೆ ಅವರ ಹೆಸರಿನ ಮುಂದೆ 'ಹಿಂದೂ ಹೃದಯ ಚಕ್ರವರ್ತಿ' ಎಂಬ ಶೀರ್ಷಿಕೆಯನ್ನು ಉಲ್ಲೇಖಿಸಿಲ್ಲ. ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನದಂದು 'ಶಿವಾಜಿ ಜಯಂತಿ' ಮಾತ್ರ ಉಲ್ಲೇಖಿಸಲಾಗಿದೆ. ಇದನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ" ಎಂದು ಅವರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.