ETV Bharat / bharat

ದೆಹಲಿ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪಕ್ಷದ ನಾಯಕರ ಹೇಳಿಕೆಗಳೇ ಕಾರಣ: ಅಮಿತ್​ ಶಾ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪಕ್ಷದ ನಾಯಕರ ಹೇಳಿಕೆಗಳೇ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿದ್ದಾರೆ.

author img

By

Published : Feb 13, 2020, 7:25 PM IST

Updated : Feb 13, 2020, 8:20 PM IST

Union Home Minister Amit Shah
ಕೇಂದ್ರ ಗೃಹ ಸಚಿವ ಅಮಿತ್​ ಶಾ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಬಿಜೆಪಿ ಸೋಲಿಗೆ ಪಕ್ಷದ ನಾಯಕರು ನೀಡಿರುವ ಪ್ರಚೋದನಕಾರಿ ಹೇಳಿಕೆಗಳೇ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿದ್ದಾರೆ.

ಚುನಾವಣಾ ಫಲಿತಾಂಶದ ಬಳಿಕ ಇದೇ ಮೊದಲ ಬಾರಿಗೆ ಆ ಕುರಿತು ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಚೋದನಾಕಾರಿ ಹೇಳಿಕೆಗಳಿಂದ ಬಿಜೆಪಿ ದೂರ ಇರಬೇಕಿತ್ತು. ಮುಂದೆ ಇಂತಹ ತಪ್ಪುಗಳಾದಂತೆ ಎಚ್ಚರ ವಹಿಸುತ್ತೇವೆ ಎಂದರು.

ಸೋಲಿಗೆ ಕಾರಣಗಳು?

  • ಸಿಎಎ ವಿರೋಧಿಸಿ ಶಾಹೀನ್​ ಬಾಗ್​ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರನ್ನು ಕೇಂದ್ರ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಗೋಲಿಮಾರ್ ಎಂಬ ಹೇಳಿಕೆ ನೀಡಿದ್ದರು.
  • ಅಲ್ಲದೆ, ಕಪಿಲ್ ಮಿಶ್ರಾ ಅವರು ಶಾಹೀನ್​ಬಾಗ್​ ಪ್ರತಿಭಟನೆಯನ್ನು ಮಿನಿ-ಪಾಕಿಸ್ತಾನ ಎಂದು ಕರೆದಿದ್ದರು.
  • ಪ್ರತಿಭಟನಾಕಾರರು ನಿಮ್ಮ ಮನೆಯ ಹೆಣ್ಣುಮಕ್ಕಳನ್ನು ಅತ್ಯಾಚಾರ ಎಸಗಿ ಕೊಲ್ಲುತ್ತಾರೆ ಎಂದು ಪಶ್ಚಿಮ ದೆಹಲಿ ಸಂಸದ ಪರ್ವೇಶ್ ವರ್ಮಾ ಹೇಳಿದ್ದರು. ಬಳಿಕ ಚುನಾವಣಾ ಆಯೋಗ ಅವರ ಪ್ರಚಾರಗಳಿಗೆ ನಿಷೇಧ ಹೇರಿತ್ತು.

ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಒಪ್ಪಿಕೊಳ್ಳುತ್ತೇನೆ. ಚುನಾವಣಾ ರ್ಯಾಲಿಗಳಲ್ಲಿ 'ದೇಶ್​​ಕೆ ಗದ್ದಾರಂಕೋ' (ದೇಶದ್ರೋಹಿ) ಎಂಬ ಹೇಳಿಕೆಗಳನ್ನು ನೀಡಬಾರದಿತ್ತು. ಅಂತಹ ಹೇಳಿಕೆಗಳಿಂದಲೇ ಪಕ್ಷವು ಸೋಲಿನ ಸುಳಿಗೆ ಸಿಲುಕಿತು. ಎಂದು ವಿಷಾದ ವ್ಯಕ್ತಪಡಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಸಂದೇಹಗಳಿಗೆ ಸಂಬಂಧಿಸಿದಂತೆ ನನ್ನೊಂದಿಗೆ ಚರ್ಚಿಸಲು ಇಚ್ಛಿಸುವವರಿಗೆ ನಾನು 3 ದಿನಗಳ ಕಾಲ ಸಮಯಾವಕಾಶ ನೀಡುತ್ತೇನೆ. ಯಾರಾದರೂ ಚರ್ಚೆಗೆ ಬರಬಹುದು. ಆಗ ಅವರ ಎಲ್ಲಾ ಸಂದೇಹಗಳನ್ನು ಬಗೆಹರಿಸುತ್ತೇನೆ ಎಂದು ಸವಾಲು ಹಾಕಿದರು.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ 62 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಬಿಜೆಪಿ 8 ಕ್ಷೇತ್ರಗಳಲ್ಲಿ ಮಾತ್ರ ವಿಜಯಿಯಾಗಿದೆ. ಆದರೆ, ಕಾಂಗ್ರೆಸ್​ ಮಾತ್ರ ಸ್ಪರ್ಧಿಸಿದ್ದ ಎಲ್ಲಾ ಕ್ಷೇತ್ರಗಳಲ್ಲೂ ಸೋಲು ಕಂಡಿದೆ.

  • Union Home Minister Amit Shah at Times Now Summit: I will give time within 3 days to anyone who wants to discuss with me the issues related to the Citizenship Amendment Act https://t.co/n3fWCCYi7V

    — ANI (@ANI) February 13, 2020 " class="align-text-top noRightClick twitterSection" data=" ">

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಬಿಜೆಪಿ ಸೋಲಿಗೆ ಪಕ್ಷದ ನಾಯಕರು ನೀಡಿರುವ ಪ್ರಚೋದನಕಾರಿ ಹೇಳಿಕೆಗಳೇ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿದ್ದಾರೆ.

ಚುನಾವಣಾ ಫಲಿತಾಂಶದ ಬಳಿಕ ಇದೇ ಮೊದಲ ಬಾರಿಗೆ ಆ ಕುರಿತು ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಚೋದನಾಕಾರಿ ಹೇಳಿಕೆಗಳಿಂದ ಬಿಜೆಪಿ ದೂರ ಇರಬೇಕಿತ್ತು. ಮುಂದೆ ಇಂತಹ ತಪ್ಪುಗಳಾದಂತೆ ಎಚ್ಚರ ವಹಿಸುತ್ತೇವೆ ಎಂದರು.

ಸೋಲಿಗೆ ಕಾರಣಗಳು?

  • ಸಿಎಎ ವಿರೋಧಿಸಿ ಶಾಹೀನ್​ ಬಾಗ್​ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರನ್ನು ಕೇಂದ್ರ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಗೋಲಿಮಾರ್ ಎಂಬ ಹೇಳಿಕೆ ನೀಡಿದ್ದರು.
  • ಅಲ್ಲದೆ, ಕಪಿಲ್ ಮಿಶ್ರಾ ಅವರು ಶಾಹೀನ್​ಬಾಗ್​ ಪ್ರತಿಭಟನೆಯನ್ನು ಮಿನಿ-ಪಾಕಿಸ್ತಾನ ಎಂದು ಕರೆದಿದ್ದರು.
  • ಪ್ರತಿಭಟನಾಕಾರರು ನಿಮ್ಮ ಮನೆಯ ಹೆಣ್ಣುಮಕ್ಕಳನ್ನು ಅತ್ಯಾಚಾರ ಎಸಗಿ ಕೊಲ್ಲುತ್ತಾರೆ ಎಂದು ಪಶ್ಚಿಮ ದೆಹಲಿ ಸಂಸದ ಪರ್ವೇಶ್ ವರ್ಮಾ ಹೇಳಿದ್ದರು. ಬಳಿಕ ಚುನಾವಣಾ ಆಯೋಗ ಅವರ ಪ್ರಚಾರಗಳಿಗೆ ನಿಷೇಧ ಹೇರಿತ್ತು.

ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಒಪ್ಪಿಕೊಳ್ಳುತ್ತೇನೆ. ಚುನಾವಣಾ ರ್ಯಾಲಿಗಳಲ್ಲಿ 'ದೇಶ್​​ಕೆ ಗದ್ದಾರಂಕೋ' (ದೇಶದ್ರೋಹಿ) ಎಂಬ ಹೇಳಿಕೆಗಳನ್ನು ನೀಡಬಾರದಿತ್ತು. ಅಂತಹ ಹೇಳಿಕೆಗಳಿಂದಲೇ ಪಕ್ಷವು ಸೋಲಿನ ಸುಳಿಗೆ ಸಿಲುಕಿತು. ಎಂದು ವಿಷಾದ ವ್ಯಕ್ತಪಡಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಸಂದೇಹಗಳಿಗೆ ಸಂಬಂಧಿಸಿದಂತೆ ನನ್ನೊಂದಿಗೆ ಚರ್ಚಿಸಲು ಇಚ್ಛಿಸುವವರಿಗೆ ನಾನು 3 ದಿನಗಳ ಕಾಲ ಸಮಯಾವಕಾಶ ನೀಡುತ್ತೇನೆ. ಯಾರಾದರೂ ಚರ್ಚೆಗೆ ಬರಬಹುದು. ಆಗ ಅವರ ಎಲ್ಲಾ ಸಂದೇಹಗಳನ್ನು ಬಗೆಹರಿಸುತ್ತೇನೆ ಎಂದು ಸವಾಲು ಹಾಕಿದರು.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ 62 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಬಿಜೆಪಿ 8 ಕ್ಷೇತ್ರಗಳಲ್ಲಿ ಮಾತ್ರ ವಿಜಯಿಯಾಗಿದೆ. ಆದರೆ, ಕಾಂಗ್ರೆಸ್​ ಮಾತ್ರ ಸ್ಪರ್ಧಿಸಿದ್ದ ಎಲ್ಲಾ ಕ್ಷೇತ್ರಗಳಲ್ಲೂ ಸೋಲು ಕಂಡಿದೆ.

  • Union Home Minister Amit Shah at Times Now Summit: I will give time within 3 days to anyone who wants to discuss with me the issues related to the Citizenship Amendment Act https://t.co/n3fWCCYi7V

    — ANI (@ANI) February 13, 2020 " class="align-text-top noRightClick twitterSection" data=" ">
Last Updated : Feb 13, 2020, 8:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.