ಮುಂಬೈ: ಪ್ರಿಯಾಂಕಾ ಛೋಪ್ರಾ ಅವರನ್ನು ವಿಶ್ವಸಂಸ್ಥೆಯು ಶಾಂತಿ ರಾಯಭಾರಿಯಾಗಿ ಮುಂದುವರಿಸುವಂತೆ ಬಾಲಿವುಡ್ ಬಳಗ ಬೆಂಬಲಿಸಿದೆ.
ಆಯುಷ್ಮಾನ್ ಖುರಾನಾ, ಕಂಗನಾ ರಾಣಾವತ್ ಸೇರಿದಂತೆ ಬಾಲಿವುಡ್ ತಾರೆಯರು ಪ್ರಿಯಾಂಕಾ ಛೋಪ್ರಾ ಅವರ ಬೆನ್ನಿಗೆ ನಿಂತಿದೆ.
ಭಾರತೀಯ ವಾಯುಪಡೆಯು ಬಾಲಕೋಟ್ನಲ್ಲಿ ದಾಳಿ ನಡೆಸಿದ ಬೆನ್ನಿಗೇ ಟ್ವೀಟ್ ಮಾಡಿದ್ದ ಪ್ರಿಯಾಂಕಾ ಅವರು, ಸೇನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದರು.
ಪಾಕಿಸ್ತಾನದ ಮಹಿಳೆಯೊಬ್ಬರು ಪ್ರಿಯಾಂಕಾರ ಈ ಟ್ವೀಟ್ಗೆ ಆಕ್ಷೇಪ ವ್ಯಕ್ತಪಡಿಸಿ, ಎರಡು ದೇಶಗಳ ನಡುವೆ ಯುದ್ಧವನ್ನು ಪ್ರೋತ್ಸಾಹಿಸುತ್ತಿರುವ ನೀವು ವಿಶ್ವಸಂಸ್ಥೆಯ ಶಾಂತಿ ರಾಯಭಾರಿಯಾಗಲು ಅನರ್ಹರು ಎಂದು ಟೀಕಿಸಿದ್ದರು.
ಇದನ್ನೇ ಮುಂದಿಟ್ಟುಕೊಂಡು ಪಾಕಿಸ್ತಾನ ಸರ್ಕಾರವು ಪ್ರಿಯಾಂಕಾ ಅವರನ್ನು ವಿಶ್ವಸಂಸ್ಥೆ ಶಾಂತಿ ರಾಯಭಾರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಪತ್ರ ಬರೆದಿದೆ.
ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಪರ ಮಾತನಾಡಿರುವ ಆಯುಷ್ಮಾನ್ ಖುರಾನಾ ಅವರು ಪ್ರಿಯಾಂಕಾ ಅವರ ತಂದೆ ಸೈನ್ಯದಲ್ಲಿದ್ದ ಕಾರಣ ಬಾಲಕೋಟ್ ಘಟನೆಯು ಅವರಿಗೆ ಹೆಮ್ಮೆ ಅನಿಸಿದೆ. ಅದರಲ್ಲಿ ಇಲ್ಲದ ತಪ್ಪು ಹುಡುಕುವುದು ಬೇಡ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.