ETV Bharat / bharat

ತಾಲೀಮು ವೇಳೆ ಹೆಲಿಕಾಪ್ಟರ್​ನಿಂದ ಸರೋವರಕ್ಕೆ ಜಿಗಿದು ಪ್ಯಾರಾ ಕಮಾಂಡೋ ಮೃತ

author img

By

Published : Jan 7, 2021, 10:14 PM IST

ವಿಶೇಷ ಕಾರ್ಯಾಚರಣೆಯ ಅಭ್ಯಾಸದ ವೇಳೆ ಸರೋವರದೊಳಗೆ ಮುಳುಗಿ ಓರ್ವ ಪ್ಯಾರಾ ಕಮಾಂಡೋ ಸಿಬ್ಬಂದಿ ಮೃತಪಟ್ಟಿದ್ದಾನೆ.

army-offical-dies-practising-specialist-operations-in-kalyana-lake
ತಾಲೀಮು ವೇಳೆ ಹೆಲಿಕಾಪ್ಟರ್​ನಿಂದ ಸರೋವರಕ್ಕೆ ಜಿಗಿದು ಪ್ಯಾರಾ ಕಮಾಂಡೋ ಮೃತ

ಜೋಧ್‌ಪುರ (ರಾಜಸ್ಥಾನ): ಭಾರತೀಯ ಸೇನೆಯ ವಿಶೇಷ ಪಡೆಗಳ ಅಧಿಕಾರಿಯೊಬ್ಬರು ವಿಶೇಷ ಕಾರ್ಯಾಚರಣೆಗಳ ಅಭ್ಯಾಸ ನಡೆಸುವ ವೇಳೆ ಜೋಧಪುರ ಬಳಿಯ ಕಲ್ಯಾಣ ಸರೋವರದೊಳಗೆ ಬಿದ್ದು, ಪ್ರಾಣ ಕಳೆದುಕೊಂಡಿದ್ದಾರೆ.

ಹೆಲಿಕಾಪ್ಟರ್​ನಿಂದ ಕಲ್ಯಾಣ ಸರೋವರದ ಬಳಿ ಕಾರ್ಯಾಚರಣೆ ನಡೆಯುತ್ತಿದ್ದು, ಒಟ್ಟು ನಾಲ್ಕು ಮಂದಿ ಪ್ಯಾರಾ ಕಮಾಂಡೋಗಳು ಸರೋವರಕ್ಕೆ ಹಾರಿದ್ದರು. ಮೂವರು ಪ್ಯಾರಾ ಕಮಾಂಡೋಗಳು ಸರೋವರದಿಂದ ಹೊರಗೆ ಬಂದು, ಓರ್ವ ಸಿಬ್ಬಂದಿ ಹೊರಗೆ ಬರದಿದ್ದಾಗ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಭೂ ವಿವಾದ; ಖಾರದಪುಡಿ ಎರಚಿ ಕಾದಾಟ.. ಮಹಿಳೆ ಸಾವು!

ಈ ವೇಳೆ ಭಾರತೀಯ ವಾಯುಪಡೆ ಹಾಗೂ ಈಜು ನಿಪುಣರು ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಮೃತದೇಹ ಎಲ್ಲಿಯೂ ಪತ್ತೆಯಾಗಿಲ್ಲ. ಸ್ಥಳೀಯ ಪೊಲೀಸರು ನಡೆಸಿದ ಕಾರ್ಯಾಚರಣೆಯೂ ವಿಫಲವಾಗಿದ್ದು, ನೀರಿನಲ್ಲಿ ಮುಳುಗಿ ಪ್ಯಾರಾ ಕಮಾಂಡೋ ಮೃತಪಟ್ಟಿದ್ದಾನೆ.

ಜೋಧ್‌ಪುರ (ರಾಜಸ್ಥಾನ): ಭಾರತೀಯ ಸೇನೆಯ ವಿಶೇಷ ಪಡೆಗಳ ಅಧಿಕಾರಿಯೊಬ್ಬರು ವಿಶೇಷ ಕಾರ್ಯಾಚರಣೆಗಳ ಅಭ್ಯಾಸ ನಡೆಸುವ ವೇಳೆ ಜೋಧಪುರ ಬಳಿಯ ಕಲ್ಯಾಣ ಸರೋವರದೊಳಗೆ ಬಿದ್ದು, ಪ್ರಾಣ ಕಳೆದುಕೊಂಡಿದ್ದಾರೆ.

ಹೆಲಿಕಾಪ್ಟರ್​ನಿಂದ ಕಲ್ಯಾಣ ಸರೋವರದ ಬಳಿ ಕಾರ್ಯಾಚರಣೆ ನಡೆಯುತ್ತಿದ್ದು, ಒಟ್ಟು ನಾಲ್ಕು ಮಂದಿ ಪ್ಯಾರಾ ಕಮಾಂಡೋಗಳು ಸರೋವರಕ್ಕೆ ಹಾರಿದ್ದರು. ಮೂವರು ಪ್ಯಾರಾ ಕಮಾಂಡೋಗಳು ಸರೋವರದಿಂದ ಹೊರಗೆ ಬಂದು, ಓರ್ವ ಸಿಬ್ಬಂದಿ ಹೊರಗೆ ಬರದಿದ್ದಾಗ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಭೂ ವಿವಾದ; ಖಾರದಪುಡಿ ಎರಚಿ ಕಾದಾಟ.. ಮಹಿಳೆ ಸಾವು!

ಈ ವೇಳೆ ಭಾರತೀಯ ವಾಯುಪಡೆ ಹಾಗೂ ಈಜು ನಿಪುಣರು ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಮೃತದೇಹ ಎಲ್ಲಿಯೂ ಪತ್ತೆಯಾಗಿಲ್ಲ. ಸ್ಥಳೀಯ ಪೊಲೀಸರು ನಡೆಸಿದ ಕಾರ್ಯಾಚರಣೆಯೂ ವಿಫಲವಾಗಿದ್ದು, ನೀರಿನಲ್ಲಿ ಮುಳುಗಿ ಪ್ಯಾರಾ ಕಮಾಂಡೋ ಮೃತಪಟ್ಟಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.