ಜೋಧ್ಪುರ (ರಾಜಸ್ಥಾನ): ಭಾರತೀಯ ಸೇನೆಯ ವಿಶೇಷ ಪಡೆಗಳ ಅಧಿಕಾರಿಯೊಬ್ಬರು ವಿಶೇಷ ಕಾರ್ಯಾಚರಣೆಗಳ ಅಭ್ಯಾಸ ನಡೆಸುವ ವೇಳೆ ಜೋಧಪುರ ಬಳಿಯ ಕಲ್ಯಾಣ ಸರೋವರದೊಳಗೆ ಬಿದ್ದು, ಪ್ರಾಣ ಕಳೆದುಕೊಂಡಿದ್ದಾರೆ.
ಹೆಲಿಕಾಪ್ಟರ್ನಿಂದ ಕಲ್ಯಾಣ ಸರೋವರದ ಬಳಿ ಕಾರ್ಯಾಚರಣೆ ನಡೆಯುತ್ತಿದ್ದು, ಒಟ್ಟು ನಾಲ್ಕು ಮಂದಿ ಪ್ಯಾರಾ ಕಮಾಂಡೋಗಳು ಸರೋವರಕ್ಕೆ ಹಾರಿದ್ದರು. ಮೂವರು ಪ್ಯಾರಾ ಕಮಾಂಡೋಗಳು ಸರೋವರದಿಂದ ಹೊರಗೆ ಬಂದು, ಓರ್ವ ಸಿಬ್ಬಂದಿ ಹೊರಗೆ ಬರದಿದ್ದಾಗ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: ಭೂ ವಿವಾದ; ಖಾರದಪುಡಿ ಎರಚಿ ಕಾದಾಟ.. ಮಹಿಳೆ ಸಾವು!
ಈ ವೇಳೆ ಭಾರತೀಯ ವಾಯುಪಡೆ ಹಾಗೂ ಈಜು ನಿಪುಣರು ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಮೃತದೇಹ ಎಲ್ಲಿಯೂ ಪತ್ತೆಯಾಗಿಲ್ಲ. ಸ್ಥಳೀಯ ಪೊಲೀಸರು ನಡೆಸಿದ ಕಾರ್ಯಾಚರಣೆಯೂ ವಿಫಲವಾಗಿದ್ದು, ನೀರಿನಲ್ಲಿ ಮುಳುಗಿ ಪ್ಯಾರಾ ಕಮಾಂಡೋ ಮೃತಪಟ್ಟಿದ್ದಾನೆ.