ETV Bharat / bharat

ಬ್ಯಾಂಕ್​​ಗಳಿಗೆ 414 ಕೋಟಿ ಉಂಡೆನಾಮ ಇಕ್ಕಿ ಮತ್ತೊಬ್ಬ ಉದ್ಯಮಿ ಪರಾರಿ: ಎಸ್​ಬಿಐನಿಂದ ದೂರು ದಾಖಲು! - ಸ್​ಬಿಐನಿಂದ ದೂರು ದಾಖಲು

ಭಾರತೀಯ ವಿವಿಧ ಬ್ಯಾಂಕ್​ಗಳಲ್ಲಿ ಬರೋಬ್ಬರಿ 414 ಕೋಟಿ ರೂ ಸಾಲ ಮಾಡಿ ಬಾಸ್ಮತಿ ರೈಸ್​ ರಫ್ತುದಾರ ಪರಾರಿಯಾಗಿರುವ ಪ್ರಕರಣ ನಾಲ್ಕು ವರ್ಷಗಳ ಬಳಿಕ ಬೆಳಕಿಗೆ ಬಂದಿದೆ.

SBI Complains To CBI After 4 Years
SBI Complains To CBI After 4 Years
author img

By

Published : May 9, 2020, 12:38 PM IST

Updated : May 9, 2020, 6:59 PM IST

ನವದೆಹಲಿ: ದೇಶದ ಪ್ರತಿಷ್ಠತ ಬ್ಯಾಂಕ್​ ಎಸ್​ಬಿಐ ಸೇರಿದಂತೆ ವಿವಿಧ ಬ್ಯಾಂಕ್​ಗಳಲ್ಲಿ ನಡೆದ ಮತ್ತೊಂದು ವಂಚನೆ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ತನಿಖೆ ನಡೆಸುವಂತೆ ಸಿಬಿಐಗೆ ಎಸ್​ಬಿಐ ಬ್ಯಾಂಕ್​​ ದೂರು ಸಲ್ಲಿಸಿದೆ.

ವಿವಿಧ ಬ್ಯಾಂಕ್​ಗಳಲ್ಲಿ ಬರೋಬ್ಬರಿ 414 ಕೋಟಿ ರೂ. ಸಾಲ ಮಾಡಿ 2016ರಿಂದಲೂ ಬಾಸ್ಮತಿ ರೈಸ್​​ ರಫ್ತುದಾರ ರಾಮ್​ದೇವ್​ ನಾಪತ್ತೆಯಾಗಿದ್ದಾಗಿ ಬ್ಯಾಂಕ್​ ತಿಳಿಸಿದೆ. ಪಶ್ಚಿಮ ಏಷ್ಯಾ ಮತ್ತು ಯುರೋಪಿಯನ್ ದೇಶಗಳಿಗೆ ಬಾಸ್ಮತಿ ಅಕ್ಕಿ ರಫ್ತು ಮಾಡುವ ಕಂಪನಿಯ ನಿರ್ದೇಶಕರಾದ ನರೇಶ್ ಕುಮಾರ್, ಸುರೇಶ್ ಕುಮಾರ್ ಮತ್ತು ಸಂಗಿತಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು.

ಇವರು ವಿವಿಧ ಬ್ಯಾಂಕ್​ಗಳಲ್ಲಿ ಒಟ್ಟು 414 ಕೋಟಿ ರೂ ಸಾಲ ಮಾಡಿದ್ದು, ಇದರಲ್ಲಿ 173 ಕೋಟಿ ರೂ ಎಸ್​ಬಿಐ, 76 ಕೋಟಿ ರೂ ಕೆನರಾ ಬ್ಯಾಂಕ್​, 64 ಕೋಟಿ ಯೂನಿಯನ್​ ಬ್ಯಾಂಕ್​ ಆಫ್​ ಇಂಡಿಯಾ, 51 ಕೋಟಿ ರೂ ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾ, ಕಾರ್ಪೊರೇಷನ್​ ಬ್ಯಾಂಕ್​​ನಲ್ಲಿ 36 ಕೋಟಿ ರೂ ಹಾಗೂ ಐಡಿಬಿಐ ಬ್ಯಾಂಕ್​​ನಲ್ಲಿ 12 ಕೋಟಿ ರೂ ಸಾಲ ಪಡೆದುಕೊಂಡಿದ್ದರು.

2016ರಲ್ಲಿ ಕಂಪನಿ ರಿಜಿಸ್ಟರ್​ ಮಾಡಿದ್ದ ಇವರು ತದನಂತರ ಕಾಣೆಯಾಗಿದ್ದು, ಇಲ್ಲಿಯವರೆಗೆ ಕಾಣಿಸಿಕೊಂಡಿಲ್ಲ ಎಂದು ತಿಳಿಸಿದೆ. ಇನ್ನು ಎಸ್​ಬಿಐ ನೀಡಿರುವ ದೂರಿನ ಆಧಾರದ ಮೇಲೆ ಸಿಬಿಐ ಪ್ರಕರಣ ದಾಖಲು ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ.

ನವದೆಹಲಿ: ದೇಶದ ಪ್ರತಿಷ್ಠತ ಬ್ಯಾಂಕ್​ ಎಸ್​ಬಿಐ ಸೇರಿದಂತೆ ವಿವಿಧ ಬ್ಯಾಂಕ್​ಗಳಲ್ಲಿ ನಡೆದ ಮತ್ತೊಂದು ವಂಚನೆ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ತನಿಖೆ ನಡೆಸುವಂತೆ ಸಿಬಿಐಗೆ ಎಸ್​ಬಿಐ ಬ್ಯಾಂಕ್​​ ದೂರು ಸಲ್ಲಿಸಿದೆ.

ವಿವಿಧ ಬ್ಯಾಂಕ್​ಗಳಲ್ಲಿ ಬರೋಬ್ಬರಿ 414 ಕೋಟಿ ರೂ. ಸಾಲ ಮಾಡಿ 2016ರಿಂದಲೂ ಬಾಸ್ಮತಿ ರೈಸ್​​ ರಫ್ತುದಾರ ರಾಮ್​ದೇವ್​ ನಾಪತ್ತೆಯಾಗಿದ್ದಾಗಿ ಬ್ಯಾಂಕ್​ ತಿಳಿಸಿದೆ. ಪಶ್ಚಿಮ ಏಷ್ಯಾ ಮತ್ತು ಯುರೋಪಿಯನ್ ದೇಶಗಳಿಗೆ ಬಾಸ್ಮತಿ ಅಕ್ಕಿ ರಫ್ತು ಮಾಡುವ ಕಂಪನಿಯ ನಿರ್ದೇಶಕರಾದ ನರೇಶ್ ಕುಮಾರ್, ಸುರೇಶ್ ಕುಮಾರ್ ಮತ್ತು ಸಂಗಿತಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು.

ಇವರು ವಿವಿಧ ಬ್ಯಾಂಕ್​ಗಳಲ್ಲಿ ಒಟ್ಟು 414 ಕೋಟಿ ರೂ ಸಾಲ ಮಾಡಿದ್ದು, ಇದರಲ್ಲಿ 173 ಕೋಟಿ ರೂ ಎಸ್​ಬಿಐ, 76 ಕೋಟಿ ರೂ ಕೆನರಾ ಬ್ಯಾಂಕ್​, 64 ಕೋಟಿ ಯೂನಿಯನ್​ ಬ್ಯಾಂಕ್​ ಆಫ್​ ಇಂಡಿಯಾ, 51 ಕೋಟಿ ರೂ ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾ, ಕಾರ್ಪೊರೇಷನ್​ ಬ್ಯಾಂಕ್​​ನಲ್ಲಿ 36 ಕೋಟಿ ರೂ ಹಾಗೂ ಐಡಿಬಿಐ ಬ್ಯಾಂಕ್​​ನಲ್ಲಿ 12 ಕೋಟಿ ರೂ ಸಾಲ ಪಡೆದುಕೊಂಡಿದ್ದರು.

2016ರಲ್ಲಿ ಕಂಪನಿ ರಿಜಿಸ್ಟರ್​ ಮಾಡಿದ್ದ ಇವರು ತದನಂತರ ಕಾಣೆಯಾಗಿದ್ದು, ಇಲ್ಲಿಯವರೆಗೆ ಕಾಣಿಸಿಕೊಂಡಿಲ್ಲ ಎಂದು ತಿಳಿಸಿದೆ. ಇನ್ನು ಎಸ್​ಬಿಐ ನೀಡಿರುವ ದೂರಿನ ಆಧಾರದ ಮೇಲೆ ಸಿಬಿಐ ಪ್ರಕರಣ ದಾಖಲು ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ.

Last Updated : May 9, 2020, 6:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.