ETV Bharat / bharat

ಅಧಿಕಾರಕ್ಕೆ ಬರ್ತಿದ್ದಂಗೆ ಹಿರಿಯ ಪೊಲೀಸ್​ ಅಧಿಕಾರಿಗಳು ಎತ್ತಂಗಡಿ!

author img

By

Published : May 31, 2019, 7:07 PM IST

Updated : May 31, 2019, 10:53 PM IST

ಆಂಧ್ರದ ಡಿಜಿಪಿ ಆಗಿದ್ದ ಠಾಕೂರ್​ ಹಾಗೂ ರಾವ್ ಅವರು ವೈಎಸ್​ಆರ್​ ಕಾಂಗ್ರೆಸ್​ನ ಹಿಟ್​ ಲಿಸ್ಟ್​ನಲ್ಲಿದ್ದರು ಎನ್ನಲಾಗ್ತಿದೆ. ಈ ಮೊದಲು ಅಧಿಕಾರದಲ್ಲಿದ್ದ ತೆಲುಗು ದೇಶಂ ಪಕ್ಷಕ್ಕೆ ಹತ್ತಿರವಿದ್ದ ಕಾರಣ ಹಲವು ಬಾರಿ ಇವರ ವಿರುದ್ಧ ಇಸಿಐ ಹಾಗೂ ಇತರೆ ಪ್ರಾಧಿಕಾರಗಳಿಗೆ ದೂರು ನೀಡಲಾಗಿತ್ತು. ಇದೀಗ ಆಂಧ್ರಪ್ರದೇಶದ ನೂತನ ಸಿಎಂ ಜಗನ್​ಮೋಹನ್​ ರೆಡ್ಡಿ ವಿರುದ್ಧ ಸೇಡು ತೀರಿಸಿಕೊಳ್ತಿದ್ದಾರೆ ಎಂಬ ಆರೋಪ ಕೇಳಿಬರ್ತಿದೆ.

ವೈಎಸ್​ ಜಗನ್​ಮೋಹನ್ ರೆಡ್ಡಿ

ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ವೈ ಎಸ್​ ಜಗನ್​ಮೋಹನ್ ರೆಡ್ಡಿ ಅವರು, ತಮ್ಮ ಹಿಟ್ ​ಲಿಸ್ಟ್​ನಲ್ಲಿದ್ದ ಅಧಿಕಾರಿಗಳನ್ನು ವರ್ಗಾವಣೆಗೊಳಿಸುತ್ತಿದ್ದಾರೆ​ ಎಂಬ ಆರೋಪ ಕೇಳಿಬಂದಿದೆ.

ಗುರುವಾರ ರಾತ್ರಿ ರಾಜ್ಯದ ಪೊಲೀಸ್​ ಮಹಾನಿರ್ದೇಶಕ ಆರ್​​ಪಿ ಠಾಕೂರ್​ ಅವರನ್ನು ಸ್ಥಾನದಿಂದ ವರ್ಗಾವಣೆ ಮಾಡಿರುವುದು ಇಂತಹ ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ, ಭ್ರಷ್ಟಾಚಾರ ನಿಗ್ರಹ ಪಡೆಯ ಡಿಜಿ ಆಗಿದ್ದ ಎ.ಬಿ. ವೆಂಕಟೇಶ್ವರ ರಾವ್​ ಅವರನ್ನು ಸಹ ವರ್ಗಾವಣೆ ಮಾಡಲಾಗಿದೆ.

ಠಾಕೂರ್​ ಹಾಗೂ ರಾವ್ ಅವರು ವೈಎಸ್​ಆರ್​ ಕಾಂಗ್ರೆಸ್​ನ ಹಿಟ್​ ಲಿಸ್ಟ್​ನಲ್ಲಿದ್ದರು. ಈ ಮೊದಲು ಅಧಿಕಾರದಲ್ಲಿದ್ದ ತೆಲುಗು ದೇಶಂ ಪಕ್ಷಕ್ಕೆ ಹತ್ತಿರವಿದ್ದ ಕಾರಣ ಹಲವು ಬಾರಿ ಇವರ ವಿರುದ್ಧ ಇಸಿಐ ಹಾಗೂ ಇತರೆ ಪ್ರಾಧಿಕಾರಗಳಿಗೆ ವೈಎಸ್​ಆರ್​ ಕಾಂಗ್ರೆಸ್​​ನಿಂದ​ ದೂರು ನೀಡಲಾಗಿತ್ತು. ಇದೀಗ ಜಗನ್​ ಈ ಅಧಿಕಾರಿಗಳನ್ನು ಟಾರ್ಗೆಟ್​​ ಮಾಡಿ, ಸೇಡು ತೀರಿಸಿಕೊಳ್ತಿದ್ದಾರೆ ಎನ್ನಲಾಗ್ತಿದೆ.

ಠಾಕೂರ್​ ಬದಲು ದಾಮೋದರ್​ ಗೌತಮ್ ಸವಾಂಗ್ ಎಂಬುವರಿಗೆ ಹೆಚ್ಚುವರಿ ಡಿಜಿಪಿ ಹುದ್ದೆ ನೀಡಲಾಗಿದೆ. ಠಾಕೂರ್​​ ಅವರನ್ನು ಮುದ್ರಣ ಹಾಗೂ ಉಗ್ರಾಣ ವಿಭಾಗದ ಕಮಿಷನರ್​ ಆಗಿ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಸರ್ಕಾರದ ಕಾರ್ಯದರ್ಶಿ ಎಲ್​.ವಿ. ಸುಬ್ರಹ್ಮಣ್ಯ ಆದೇಶ ಹೊರಡಿಸಿದ್ದಾರೆ.

ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ವೈ ಎಸ್​ ಜಗನ್​ಮೋಹನ್ ರೆಡ್ಡಿ ಅವರು, ತಮ್ಮ ಹಿಟ್ ​ಲಿಸ್ಟ್​ನಲ್ಲಿದ್ದ ಅಧಿಕಾರಿಗಳನ್ನು ವರ್ಗಾವಣೆಗೊಳಿಸುತ್ತಿದ್ದಾರೆ​ ಎಂಬ ಆರೋಪ ಕೇಳಿಬಂದಿದೆ.

ಗುರುವಾರ ರಾತ್ರಿ ರಾಜ್ಯದ ಪೊಲೀಸ್​ ಮಹಾನಿರ್ದೇಶಕ ಆರ್​​ಪಿ ಠಾಕೂರ್​ ಅವರನ್ನು ಸ್ಥಾನದಿಂದ ವರ್ಗಾವಣೆ ಮಾಡಿರುವುದು ಇಂತಹ ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ, ಭ್ರಷ್ಟಾಚಾರ ನಿಗ್ರಹ ಪಡೆಯ ಡಿಜಿ ಆಗಿದ್ದ ಎ.ಬಿ. ವೆಂಕಟೇಶ್ವರ ರಾವ್​ ಅವರನ್ನು ಸಹ ವರ್ಗಾವಣೆ ಮಾಡಲಾಗಿದೆ.

ಠಾಕೂರ್​ ಹಾಗೂ ರಾವ್ ಅವರು ವೈಎಸ್​ಆರ್​ ಕಾಂಗ್ರೆಸ್​ನ ಹಿಟ್​ ಲಿಸ್ಟ್​ನಲ್ಲಿದ್ದರು. ಈ ಮೊದಲು ಅಧಿಕಾರದಲ್ಲಿದ್ದ ತೆಲುಗು ದೇಶಂ ಪಕ್ಷಕ್ಕೆ ಹತ್ತಿರವಿದ್ದ ಕಾರಣ ಹಲವು ಬಾರಿ ಇವರ ವಿರುದ್ಧ ಇಸಿಐ ಹಾಗೂ ಇತರೆ ಪ್ರಾಧಿಕಾರಗಳಿಗೆ ವೈಎಸ್​ಆರ್​ ಕಾಂಗ್ರೆಸ್​​ನಿಂದ​ ದೂರು ನೀಡಲಾಗಿತ್ತು. ಇದೀಗ ಜಗನ್​ ಈ ಅಧಿಕಾರಿಗಳನ್ನು ಟಾರ್ಗೆಟ್​​ ಮಾಡಿ, ಸೇಡು ತೀರಿಸಿಕೊಳ್ತಿದ್ದಾರೆ ಎನ್ನಲಾಗ್ತಿದೆ.

ಠಾಕೂರ್​ ಬದಲು ದಾಮೋದರ್​ ಗೌತಮ್ ಸವಾಂಗ್ ಎಂಬುವರಿಗೆ ಹೆಚ್ಚುವರಿ ಡಿಜಿಪಿ ಹುದ್ದೆ ನೀಡಲಾಗಿದೆ. ಠಾಕೂರ್​​ ಅವರನ್ನು ಮುದ್ರಣ ಹಾಗೂ ಉಗ್ರಾಣ ವಿಭಾಗದ ಕಮಿಷನರ್​ ಆಗಿ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಸರ್ಕಾರದ ಕಾರ್ಯದರ್ಶಿ ಎಲ್​.ವಿ. ಸುಬ್ರಹ್ಮಣ್ಯ ಆದೇಶ ಹೊರಡಿಸಿದ್ದಾರೆ.

Intro:Body:Conclusion:
Last Updated : May 31, 2019, 10:53 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.