ಕೋಲ್ಕತ್ತಾ: ಪಶ್ಚಿಮ ಬಂಗಾಳದ ಎರಡು ದಿನಗಳ ಭೇಟಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಕೋಲ್ಕತ್ತಾದ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ಆಧ್ಯಾತ್ಮಿಕ ಮತ್ತು ಧಾರ್ಮಿಕ ಜಾಗೃತಿಯ ಕೇಂದ್ರವಾದ ಪಶ್ಚಿಮ ಬಂಗಾಳ ರಾಜ್ಯದ ಕೀರ್ತಿ ಮರುಸ್ಥಾಪಿಸಬೇಕು ಎಂದು ಜನತೆಗೆ ಕರೆ ನೀಡಿದರು. ಬಳಿಕ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಅಜಯ್ ಚಕ್ರವರ್ತಿ ಸಹ ಗೃಹ ಸಚಿವರು ಭೇಟಿಯಾಗಿದರು.
![Amit Shah](https://etvbharatimages.akamaized.net/etvbharat/prod-images/9450789_dhsjfh.jpg)
ನಂತರ ಮತುವಾ ಸಮುದಾಯದ ಜನರನ್ನು ಭೇಟಿ ಮಾಡಿದ ಶಾ, ಗೌರಂಗ್ ನಗರಕ್ಕೆ ತೆರಳಿ ಅಲ್ಲಿ ಮತುವಾ ಸಮುದಾಯದ ಸದಸ್ಯರೊಬ್ಬರ ಮನೆಯಲ್ಲಿ ಭೋಜನ ಮಾಡಿದರು.