ETV Bharat / bharat

ತಾಜ್​ ಮಹಲ್​ಗೂ ವಾಯು ಮಾಲಿನ್ಯ ಬಿಸಿ: ಐತಿಹಾಸಿಕ ಸ್ಮಾರಕ ರಕ್ಷಣೆಗೆ ಮುಂದಾದ ಯೋಗಿ ಸರ್ಕಾರ - ತಾಜ್​ ಮಹಲ್ ಗಾಳಿ ಶುದ್ದೀಕರಣ ವಾಹನ ನಿಯೋಜನೆ

ವಾಯು ಮಾಲಿನ್ಯನದಿಂದ ಐತಿಹಾಸಿಕ ಸ್ಮಾರಕ ತಾಜ್​ ಮಹಲ್​ ರಕ್ಷಣೆಗೆ ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.

ತಾಜ್​ ಮಹಲ್
author img

By

Published : Nov 3, 2019, 10:16 PM IST

ಆಗ್ರ: ವಾಯು ಮಾಲಿನ್ಯದಿಂದ ಉತ್ತರ ಭಾರತ ತತ್ತರಿಸಿದ್ದು, ವಿಷ ಗಾಳಿಗೆ ಜನ ನಲುಗಿಹೋಗಿದ್ದಾರೆ. ಈ ನಡುವೆ ಐತಿಹಾಸಿಕ ಸ್ಮಾರಕ ತಾಜ್ ​ಮಹಲ್​ಗೂ ವಾಯು ಮಾಲಿನ್ಯದ ಬಿಸಿ ತಟ್ಟಿದೆ.

ತೀವ್ರ ವಾಯುಮಾಲಿನ್ಯದಿಂದ ಐತಿಹಾಸಿಕ ಸ್ಮಾರಕಕ್ಕೆ ಧಕ್ಕೆ ಉಂಟಾಗಬಾರದೆಂದು ತಾಜ್​ ಮಹಲ್​ ಬಳಿ ಒಂದು ವಾಯು ಶುದ್ಧೀಕರಣ ವಾಹನವನ್ನ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಧ್ಯದ ಪರಿಸ್ಥಿತಿ ಮತ್ತು ಗಾಳಿಯ ಗುಣಮಟ್ಟದಲ್ಲಿನ ಕ್ಷೀಣತೆಯನ್ನು ಗಮನಿಸಿ ತಾಜ್ ಮಹಲ್​ನ ಪಶ್ಚಿಮ ದ್ವಾರದಲ್ಲಿ ಮೊಬೈಲ್ ಏರ್ ಪ್ಯೂರಿಫೈಯರ್ ವಾಹನವನ್ನ ನಿಯೋಜಿಸಲಾಗಿದೆ ಎಂದು ಯುಪಿಪಿಸಿಬಿ ಪ್ರಾದೇಶಿಕ ಅಧಿಕಾರಿ ಭುವನ್ ಯಾದವ್ ತಿಳಿಸಿದ್ದಾರೆ.

ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ತಾಜ್​ಮಹ್​ ಬಿಳಿ ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ವಾಯು ಮಾಲಿನ್ಯವು ಬಿಳಿ ಅಮೃತಶಿಲೆಯ ಹಾನಿಗೆ ಕಾರಣವಾಗಲಿದೆ ಹೀಗಾಗಿ ವಾಯು ಶುದ್ಧೀಕರಣ ವಾಹನವನ್ನ ನಿಯೋಜಿಸಲಾಗಿದೆ.

ಆಗ್ರ: ವಾಯು ಮಾಲಿನ್ಯದಿಂದ ಉತ್ತರ ಭಾರತ ತತ್ತರಿಸಿದ್ದು, ವಿಷ ಗಾಳಿಗೆ ಜನ ನಲುಗಿಹೋಗಿದ್ದಾರೆ. ಈ ನಡುವೆ ಐತಿಹಾಸಿಕ ಸ್ಮಾರಕ ತಾಜ್ ​ಮಹಲ್​ಗೂ ವಾಯು ಮಾಲಿನ್ಯದ ಬಿಸಿ ತಟ್ಟಿದೆ.

ತೀವ್ರ ವಾಯುಮಾಲಿನ್ಯದಿಂದ ಐತಿಹಾಸಿಕ ಸ್ಮಾರಕಕ್ಕೆ ಧಕ್ಕೆ ಉಂಟಾಗಬಾರದೆಂದು ತಾಜ್​ ಮಹಲ್​ ಬಳಿ ಒಂದು ವಾಯು ಶುದ್ಧೀಕರಣ ವಾಹನವನ್ನ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಧ್ಯದ ಪರಿಸ್ಥಿತಿ ಮತ್ತು ಗಾಳಿಯ ಗುಣಮಟ್ಟದಲ್ಲಿನ ಕ್ಷೀಣತೆಯನ್ನು ಗಮನಿಸಿ ತಾಜ್ ಮಹಲ್​ನ ಪಶ್ಚಿಮ ದ್ವಾರದಲ್ಲಿ ಮೊಬೈಲ್ ಏರ್ ಪ್ಯೂರಿಫೈಯರ್ ವಾಹನವನ್ನ ನಿಯೋಜಿಸಲಾಗಿದೆ ಎಂದು ಯುಪಿಪಿಸಿಬಿ ಪ್ರಾದೇಶಿಕ ಅಧಿಕಾರಿ ಭುವನ್ ಯಾದವ್ ತಿಳಿಸಿದ್ದಾರೆ.

ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ತಾಜ್​ಮಹ್​ ಬಿಳಿ ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ವಾಯು ಮಾಲಿನ್ಯವು ಬಿಳಿ ಅಮೃತಶಿಲೆಯ ಹಾನಿಗೆ ಕಾರಣವಾಗಲಿದೆ ಹೀಗಾಗಿ ವಾಯು ಶುದ್ಧೀಕರಣ ವಾಹನವನ್ನ ನಿಯೋಜಿಸಲಾಗಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.