ತೆಲಂಗಾಣ: ಮಲ್ಕಾಜಿಗಿರಿ ಜಿಲ್ಲೆಯ ಜೀಡಿಮೆಟ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ವಿಮಾನಪುರಿ ಕಾಲೋನಿಯಲ್ಲಿ ಸ್ನೇಹಿತನ ಸಹೋದರಿಯನ್ನು ನಿಂದಿಸಿದ್ದಕ್ಕಾಗಿ ಪ್ರಶ್ನಿಸಲು ಹೋದ ಯುವಕನನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ.
ವಿಮನಾಪುರಿ ಕಾಲೋನಿಯಲ್ಲಿ ವಾಸಿಸುವ ಯುವತಿಯೊಬ್ಬಳು ತನ್ನ ಕರ್ತವ್ಯ ಮುಗಿಸಿ ತನ್ನ ಸಹೋದರನೊಂದಿಗೆ ಬೈಕ್ನಲ್ಲಿ ಮನೆಗೆ ಬರುತ್ತಿದ್ದಳು. ಈ ವೇಳೆ, ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಇಬ್ಬರು ಯುವಕರು ಯುವತಿಯನ್ನು ನಿಂದಿಸಿದ್ದಾರೆ.
ಆಕೆಯ ಸಹೋದರ ತನ್ನ ಸ್ನೇಹಿತ ಸುರೇಶ್ ಗೌಡ ಬಳಿ ವಿಷಯವನ್ನು ತಿಳಿಸಿದ್ದಾನೆ. ಈ ಕುರಿತು ಸುರೇಶ್ ಯುವಕನ ಮನೆಗೆ ತೆರಳಿ ಪ್ರಶ್ನಿಸಿದಾಗ, ಯುವಕನ ತಂದೆ ಚಾಕುವಿನಿಂದ ಇರಿದು ಸುರೇಶ್ ಮೇಲೆ ಹಲ್ಲೆ ಮಾಡಿದ್ದಾರೆ.
ಸುರೇಶ್ನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಸುರೇಶ್ ಸಾವನ್ನಪ್ಪಿದ್ದಾರೆ. ಇದರಿಂದ ಕೋಪಗೊಂಡ ಯುವತಿಯ ಕುಟುಂಬ ಸದಸ್ಯರು ಯುವಕನ ಮನೆಯ ಮುಂದೆ ಆಕ್ರೋಶ ಹೊರಹಾಕಿದ್ದಾರೆ.