ಉಜ್ಜೈನ್: ಸಾಮಾನ್ಯವಾಗಿ ನಾವು ದೇವಾನುದೇವತೆಗಳ, ತಂದೆ-ತಾಯಿ ಹಾಗೂ ಗಾಂಧೀಜಿಯವರ ದೇವಾಲಯಗಳನ್ನು ನೋಡಿದ್ದೇವೆ. ಆದ್ರೆ ಹುತಾತ್ಮ ಯೋಧರ ದೇವಸ್ಥಾನವೊಂದನ್ನು ಮಾಜಿ ಯೋಧರೊಬ್ಬರು ಕಟ್ಟಿಸಿದ್ದಾರೆ.
ಎಲ್ಲಿದೆ ಹುತಾತ್ಮ ಯೋಧರ ದೇವಸ್ಥಾನ?
ಮಧ್ಯಪ್ರದೇಶದ ಉಜ್ಜೈನ್ನಲ್ಲಿ ಬಾಬಾ ಮಹಾಕಾಲ್ ದೇವಾಲಯ ಹೇಗೆ ಪ್ರಸಿದ್ಧಿಯೋ ಹಾಗೆಯೇ ಬಿಸಿಲೂರಿನ ನೃಸಿಂಗ್ ಘಾಟ್ನಲ್ಲಿರುವ ಹುತಾತ್ಮ ಯೋಧರ ದೇವಾಲಯವೂ ಪ್ರಸಿದ್ಧಿಯಾಗಿದೆ.
ಈ ದೇವಾಲಯ ಕಟ್ಟಿಸಿದವರು ಯಾರು?
ದೇಶಕ್ಕಾಗಿ ಪ್ರಾಣ ತೆತ್ತ ವೀರ ಯೋಧರ ದೇವಾಲಯವನ್ನು ಕಟ್ಟಿಸಿದವರು ಮಾಜಿ ಯೋಧ ಜಜ ದಾನ್ಸಿಂಗ್ ಚೌಧರಿ. ಭಾರತ ಮಾತೆಗಾಗಿ ಪ್ರಾಣಬಿಟ್ಟ ವೀರ ಯೋಧರ ದೇವಾಲಯವನ್ನು 2009ರಲ್ಲಿ ಉಜ್ಜೈನ್ನ ನೃಸಿಂಗ್ ಘಾಟ್ನಲ್ಲಿ ಕಟ್ಟಿಸಿದರು. ಈ ದೇವಾಲಯ ದೇಶ್ಯಾದ್ಯಂತ ಪ್ರಸಿದ್ಧಿ ಪಡೆದಿದೆ.
ಇಲ್ಲಿದೆ ಕೊಡಗು ವೀರನ ಮೂರ್ತಿ...
ಇನ್ನು ಈ ದೇವಾಲಯದಲ್ಲಿ ಫೀಲ್ಡ್ ಮಾರ್ಷಲ್ ಜನರಲ್ ಕಾರಿಯಪ್ಪನವರ ಮೂರ್ತಿ ಸೇರಿದಂತೆ 50ಕ್ಕೂ ಹೆಚ್ಚು ಹುತಾತ್ಮ ಯೋಧರ ಮೂರ್ತಿಗಳನ್ನು ನಾವು ಇಲ್ಲಿ ಕಾಣಬಹುದು. ಪ್ರತಿಯೊಂದು ಮೂರ್ತಿಯ ಕೆಳಭಾಗದಲ್ಲಿ ಹುತಾತ್ಮ ಯೋಧರ ಸಾಹಸ ಮತ್ತು ಅವರ ಇತಿಹಾಸದ ಬಗ್ಗೆ ತಿಳಿಸಲಾಗಿದೆ.
ಗಣರಾಜ್ಯೋತ್ಸವಕ್ಕೆ ಸಾವಿರಾರು ಜನ ಭೇಟಿ...
ಗಣರಾಜ್ಯೋತ್ಸವದಂದು ಈ ಹುತಾತ್ಮ ಯೋಧರ ದೇವಾಲಯಕ್ಕೆ ಸಾವಿರಾರು ಜನ ಭೇಟಿ ನೀಡುತ್ತಾರೆ. ಈ ಬಾರಿ ನಡೆದ 71ನೇ ಗಣರಾಜ್ಯೋತ್ಸವಕ್ಕೆ ಅನೇಕರು ಈ ದೇವಾಲಯಕ್ಕೆ ಭೇಟಿ ನೀಡಿ ಪ್ರತಿ ಹುತಾತ್ಮ ಯೋಧರನ್ನು ನಮಸ್ಕರಿಸಿ ಅವರ ಬಗ್ಗೆ ತಿಳಿದುಕೊಂಡರು.
ಇನ್ನು ಈ ದೇವಾಲಯ ಕಟ್ಟಿದ ಮಾಜಿ ಯೋಧ ಜಜ ದಾನ್ಸಿಂಗ್ ಚೌಧರಿ ಇಹಲೋಕ ತ್ಯಜಿಸಿದ್ದಾರೆ. ಈ ದೇವಾಲಯವನ್ನು ರಾಮಸಿಂಗ್ ಎಂಬುವರು ನೋಡಿಕೊಳ್ಳುತ್ತಿದ್ದು, ಹುತಾತ್ಮ ಯೋಧರ ವೀರತ್ವ ಮತ್ತು ಇವರ ಆದರ್ಶಗಳನ್ನು ಎಲ್ಲರೂ ಪಾಲಿಸಲಿ ಎಂಬುದು ದಾನ್ಸಿಂಗ್ ಅವರ ಉದ್ದೇಶವಾಗಿತ್ತು ಎಂದು ರಾಮಸಿಂಗ್ ಹೇಳಿದ್ದಾರೆ.