ETV Bharat / bharat

ಆರ್ಟಿಕಲ್​ 370 ರದ್ದತಿ ಬಳಿಕ ಕಾಶ್ಮೀರದಲ್ಲಿನ ಸೈಬರ್​ ಕ್ರೈಮ್​ಗಳಿಗೆ ಬೆಚ್ಚಿದ ಸಂಸತ್​..! - Crimes in Kashmir

ಕಲ್ಲು ತೂರಾಟ ಮತ್ತು ಕಾನೂನು ಉಲ್ಲಂಘನೆಯ ಆಪಾದನೆಯಲ್ಲಿ 190 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಜನವರಿ 1ರಿಂದ ಅಗಸ್ಟ್​ 4ರ ನಡುವಿನ ಅವಧಿಯಲ್ಲಿ 361 ಪ್ರಕರಣಗಳು ದಾಖಲಾಗಿವೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂಸತ್
author img

By

Published : Nov 19, 2019, 4:27 PM IST

ನವದೆಹಲಿ: ಕಾಶ್ಮೀರದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡ ಬಳಿಕ ಕಲ್ಲು ತೂರಾಟ ಪ್ರಕರಣಗಳು ಹೆಚ್ಚಳವಾಗಿವೆ. ಇದಕ್ಕೆ ಸಂಬಂಧಿಸಿದಂತೆ ಅಗಸ್ಟ್​ 5ರಿಂದ ನವೆಂಬರ್​ 15ರ ಮಧ್ಯೆ 765 ಜನರನ್ನು ಬಂಧಿಸಲಾಗಿದೆ.

ಕಲ್ಲು ತೂರಾಟ ಮತ್ತು ಕಾನೂನು ಉಲ್ಲಂಘನೆಯ ಆಪಾದನೆಯಲ್ಲಿ 190 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಜನವರಿ 1ರಿಂದ ಅಗಸ್ಟ್​ 4ರ ನಡುವಿನ ಅವಧಿಯಲ್ಲಿ 361 ಪ್ರಕರಣಗಳು ದಾಖಲಾಗಿವೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ತಿಳಿಸಿದ್ದಾರೆ.

ಸಂಸತ್​ನಲ್ಲಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮಾಹಿತಿ..

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಅವರು, ಪಕೂರ್, ದಿಯೋಘರ್, ಗೊಡ್ಡಾ, ಸಾಹೇಬಗಂಜ್, ಡುಮ್ಕಾ ಮತ್ತು ಜಮ್ತಾಡಾ ಪ್ರದೇಶಗಳು ಸೈಬರ್ ಅಪರಾಧದ ಕೇಂದ್ರವಾಗಿ ಮಾರ್ಪಟ್ಟಿವೆ. ಇದು ಇಡೀ ದೇಶಕ್ಕೆ ಕಳವಳಕಾರಿಯಾಗಲಿದೆ. ಈ ವ್ಯಾಪ್ತಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ತನ್ನ ಒಂದು ಕಚೇರಿ ತೆರೆಯುವ ಅಗತ್ಯವಿದೆ ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಟಿಎಂಸಿ ಈ ರಾಜ್ಯದಲ್ಲಿ ನಕ್ಸಲಿಸಂನ ಬೆಂಬಲಿಸುತ್ತಿವೆ ಎಂದು ಆಪಾದಿಸಿದ ದುಬೆ, ಭಾರತವು ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ ಜೊತೆ ಗಡಿ ಹಂಚಿಕೊಂಡಿದ್ದರಿಂದ ಅವರ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಲು ಆಗುತ್ತಿಲ್ಲ ಎಂದರು.

ನವದೆಹಲಿ: ಕಾಶ್ಮೀರದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡ ಬಳಿಕ ಕಲ್ಲು ತೂರಾಟ ಪ್ರಕರಣಗಳು ಹೆಚ್ಚಳವಾಗಿವೆ. ಇದಕ್ಕೆ ಸಂಬಂಧಿಸಿದಂತೆ ಅಗಸ್ಟ್​ 5ರಿಂದ ನವೆಂಬರ್​ 15ರ ಮಧ್ಯೆ 765 ಜನರನ್ನು ಬಂಧಿಸಲಾಗಿದೆ.

ಕಲ್ಲು ತೂರಾಟ ಮತ್ತು ಕಾನೂನು ಉಲ್ಲಂಘನೆಯ ಆಪಾದನೆಯಲ್ಲಿ 190 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಜನವರಿ 1ರಿಂದ ಅಗಸ್ಟ್​ 4ರ ನಡುವಿನ ಅವಧಿಯಲ್ಲಿ 361 ಪ್ರಕರಣಗಳು ದಾಖಲಾಗಿವೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ತಿಳಿಸಿದ್ದಾರೆ.

ಸಂಸತ್​ನಲ್ಲಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮಾಹಿತಿ..

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಅವರು, ಪಕೂರ್, ದಿಯೋಘರ್, ಗೊಡ್ಡಾ, ಸಾಹೇಬಗಂಜ್, ಡುಮ್ಕಾ ಮತ್ತು ಜಮ್ತಾಡಾ ಪ್ರದೇಶಗಳು ಸೈಬರ್ ಅಪರಾಧದ ಕೇಂದ್ರವಾಗಿ ಮಾರ್ಪಟ್ಟಿವೆ. ಇದು ಇಡೀ ದೇಶಕ್ಕೆ ಕಳವಳಕಾರಿಯಾಗಲಿದೆ. ಈ ವ್ಯಾಪ್ತಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ತನ್ನ ಒಂದು ಕಚೇರಿ ತೆರೆಯುವ ಅಗತ್ಯವಿದೆ ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಟಿಎಂಸಿ ಈ ರಾಜ್ಯದಲ್ಲಿ ನಕ್ಸಲಿಸಂನ ಬೆಂಬಲಿಸುತ್ತಿವೆ ಎಂದು ಆಪಾದಿಸಿದ ದುಬೆ, ಭಾರತವು ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ ಜೊತೆ ಗಡಿ ಹಂಚಿಕೊಂಡಿದ್ದರಿಂದ ಅವರ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಲು ಆಗುತ್ತಿಲ್ಲ ಎಂದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.