ETV Bharat / bharat

ಮೂತ್ರ ಕುಡಿಯುವಂತೆ ಒತ್ತಾಯಿಸಿ ವೃದ್ಧನಿಗೆ ಥಳಿತ: ಯುಪಿಯಲ್ಲಿ ಅಮಾನುಷ ಕೃತ್ಯ - ಉತ್ತರಪ್ರದೇಶದಲ್ಲಿ ವೃದ್ಧನಿಗೆ ಥಳಿತ

ಮೂತ್ರ ಕುಡಿಯುವಂತೆ ಒತ್ತಾಯಿಸಿ ವೃದ್ಧನಿಗೆ ಥಳಿಸಿರುವ ಅಮಾನುಷ ಕೃತ್ಯ ಉತ್ತರಪ್ರದೇಶದ ಲಲಿತ್ ಪುರದಲ್ಲಿ ನಡೆದಿದೆ. ಈ ಕುರಿತು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Dalit man thrashed
ವೃದ್ಧನಿಗೆ ಥಳಿತ
author img

By

Published : Oct 13, 2020, 3:54 PM IST

Updated : Oct 13, 2020, 4:31 PM IST

ಲಲಿತ್​ಪುರ (ಉತ್ತರಪ್ರದೇಶ): 65 ವರ್ಷದ ದಲಿತ ವ್ಯಕ್ತಿಗೆ ಥಳಿಸಿ, ಮೂತ್ರ ಕುಡಿಯುವಂತೆ ಒತ್ತಾಯಿಸಿರುವ ಅಮಾನವೀಯ ಘಟನೆ ಲಲಿತ್​​ಪುರದಲ್ಲಿ ನಡೆದಿದೆ.

ಸೋನು ಯಾದವ್ ಎಂಬಾತ ಅಮರ್ ಎಂಬ ವ್ಯಕ್ತಿಗೆ ಮೂತ್ರ ಕುಡಿಯುವಂತೆ ಒತ್ತಾಯಿಸಿದ್ದು, ನಿರಾಕರಿಸಿದಾಗ ದೊಣ್ಣೆಯಿಂದ ಥಳಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪ್ರಶ್ನಿಸಲು ಹೋದ ವೃದ್ಧನ ಮಗನಿಗೂ ಕೊಡಲಿಯಿಂದ ಹಲ್ಲೆ ನಡೆಸಿದ್ದು, ಈ ಸಂಬಂಧ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ.

ದೂರು ಹಿಂಪಡೆಯಲು ವೃದ್ಧ ಹಾಗೂ ಅವನ ಮಗನ ಮೇಲೆ ಸೋನು ಒತ್ತಡ ಹೇರುತ್ತಿದ್ದ ಎಂಬ ಆರೋಪವೂ ಕೇಳಿ ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಲಲಿತ್ ಪುರ ಎಸ್​ಪಿ ಮಿರ್ಜಾ ಮಂಜಾರ್ ಬೇಗ್, ವಿಷಯ ತಿಳಿಯುತ್ತಿದ್ದಂತೆಯೇ ಆರೋಪಿಗಳ ಮೇಲೆ ಎಫ್​ಐಆರ್ ದಾಖಲಿಸಿದ್ದು, ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಈ ಘಟನೆ ಹಿಂದಿರುವ ಇನ್ನಿತರರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದರು.

ಲಲಿತ್​ಪುರ (ಉತ್ತರಪ್ರದೇಶ): 65 ವರ್ಷದ ದಲಿತ ವ್ಯಕ್ತಿಗೆ ಥಳಿಸಿ, ಮೂತ್ರ ಕುಡಿಯುವಂತೆ ಒತ್ತಾಯಿಸಿರುವ ಅಮಾನವೀಯ ಘಟನೆ ಲಲಿತ್​​ಪುರದಲ್ಲಿ ನಡೆದಿದೆ.

ಸೋನು ಯಾದವ್ ಎಂಬಾತ ಅಮರ್ ಎಂಬ ವ್ಯಕ್ತಿಗೆ ಮೂತ್ರ ಕುಡಿಯುವಂತೆ ಒತ್ತಾಯಿಸಿದ್ದು, ನಿರಾಕರಿಸಿದಾಗ ದೊಣ್ಣೆಯಿಂದ ಥಳಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪ್ರಶ್ನಿಸಲು ಹೋದ ವೃದ್ಧನ ಮಗನಿಗೂ ಕೊಡಲಿಯಿಂದ ಹಲ್ಲೆ ನಡೆಸಿದ್ದು, ಈ ಸಂಬಂಧ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ.

ದೂರು ಹಿಂಪಡೆಯಲು ವೃದ್ಧ ಹಾಗೂ ಅವನ ಮಗನ ಮೇಲೆ ಸೋನು ಒತ್ತಡ ಹೇರುತ್ತಿದ್ದ ಎಂಬ ಆರೋಪವೂ ಕೇಳಿ ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಲಲಿತ್ ಪುರ ಎಸ್​ಪಿ ಮಿರ್ಜಾ ಮಂಜಾರ್ ಬೇಗ್, ವಿಷಯ ತಿಳಿಯುತ್ತಿದ್ದಂತೆಯೇ ಆರೋಪಿಗಳ ಮೇಲೆ ಎಫ್​ಐಆರ್ ದಾಖಲಿಸಿದ್ದು, ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಈ ಘಟನೆ ಹಿಂದಿರುವ ಇನ್ನಿತರರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದರು.

Last Updated : Oct 13, 2020, 4:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.