ಮುಂಬೈ(ಮಹಾರಾಷ್ಟ್ರ): 29 ಮಂದಿ ತಬ್ಲಿಘಿಗಳನ್ನು ಮಹಾರಾಷ್ಟ್ರದ ಅಹಮದ್ನಗರ ಜಿಲ್ಲೆಯಲ್ಲಿ ಬಂಧಿಸಲಾಗಿದ್ದು, ಅವರನ್ನು ಜಿಲ್ಲಾ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ.
29ರ ಪೈಕಿ ಘಾನಾ, ಇಂಡೋನೇಷ್ಯಾ, ಬ್ರೂನಿ ಮತ್ತು ಐವೇರಿಯಾ ದೇಶದಿಂದ ಬಂದಿದ್ದ 24 ಮಂದಿ ವಿದೇಶಿಗರು ಹಾಗೂ ಐದು ಮಂದಿ ಭಾರತೀಯರಿದ್ದಾರೆ.
ದೆಹಲಿಯ ಮರ್ಕಜ್ನಿಂದ ಹಿಂದಿರುಗಿ ಬಂದಿದ್ದ ಈ ತಬ್ಲಿಘಿಗಳು ಅಹಮದ್ನಗರದಲ್ಲಿ ಗುಪ್ತವಾಗಿ ವಾಸಿಸುತ್ತಿದ್ದರು. ಅಲ್ಲದೇ ಇವರಲ್ಲಿ ಐದು ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಚಿಕಿತ್ಸೆ ಬಳಿಕ ಗುಣಮುಖರಾಗುತ್ತಿದ್ದಂತೆಯೇ ಈ ಐವರು ಸೇರಿದಂತೆ 29 ತಬ್ಲಿಘಿಗಳನ್ನು ಬಂಧಿಸಲಾಗಿದೆ.