ಮುಂಬೈ: ಇಲ್ಲಿನ ದಾದರ್ನ ಪಶ್ಚಿಮ ಭವಾನಿ ಶಂಕರ ರಸ್ತೆಯಲ್ಲಿನ ಪೊಲೀಸ್ ಕ್ವಾರ್ಟ್ಸ್ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 10 ವರ್ಷದ ಬಾಲಕಿವೋರ್ವಳು ಮೃತಪಟ್ಟಿದ್ದಾಳೆ.
ಶ್ರಾವತಿ ಚವಾಣ್ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ. ಸಿಲಿಂಡರ್ ಸ್ಫೋಟವೇ ಬೆಂಕಿ ಅವಘಡಕ್ಕೆ ಕಾರಣ ಎನ್ನಲಾಗ್ತಿದೆ. ಸ್ಫೋಟದಿಂದ ಮೂರು ಮನೆಗಳು ಹಾನಿಗೊಳಗಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.