ETV Bharat / bharat

ಈದ್​ ಸಂಭ್ರಮ: ಶುಭ ಕೋರಿದ ಪ್ರಧಾನಿ... ಹೀಗಿದೆ ಈ ಆಚರಣೆಯ ಪ್ರಾಮುಖ್ಯತೆ - ಈದ್​ ಹಬ್ಬದ ಹಿನ್ನೆಲೆ

ಇಂದು ಎಲ್ಲೆಡೆ ಈದ್​ ಸಂಭ್ರಮ ಮನೆ ಮಾಡಿದ್ದು, ಕೋವಿಡ್​ ಮಾರ್ಗಸೂಚಿಗಳೊಂದಿಗೆ ಎಲ್ಲರೂ ಮನೆಯಲ್ಲಿಯೇ ಹಬ್ಬ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ.

Eid Ul Adha
ಈದ್​ ಸಂಭ್ರಮ
author img

By

Published : Jul 21, 2021, 8:59 AM IST

Updated : Jul 21, 2021, 10:24 AM IST

ಹೈದರಾಬಾದ್: ಇಂದು ಎಲ್ಲೆಡೆ ಈದ್​ ಸಂಭ್ರಮ ಮನೆ ಮಾಡಿದೆ. ಈದ್-ಉಲ್-ಅಧಾ ದಿನದಂದು ಆಡನ್ನು ಬಲಿ ನೀಡಲಾಗುತ್ತದೆ. ಅದಕ್ಕಾಗಿಯೇ ಇದನ್ನು ದೇಶದಲ್ಲಿ ಬಕ್ರಿದ್​​ ಎಂದೂ ಕರೆಯುತ್ತಾರೆ. ಈ ದಿನ ಆಡುಗಳನ್ನು ಬಲಿ ನೀಡುವ ಈ ಧಾರ್ಮಿಕ ಪ್ರಕ್ರಿಯೆಯನ್ನು ಫರ್ಜ್-ಎ-ಕುರ್ಬನ್ ಎಂದು ಕರೆಯಲಾಗುತ್ತದೆ.

ಪ್ರಾಮುಖ್ಯತೆ:

ಬಕ್ರಿದ್ ಅನ್ನು ಈದ್-ಅಲ್-ಅಧಾ ಅಥವಾ ಈದ್-ಉಲ್-ಜುಹಾ ಎಂದೂ ಕರೆಯುತ್ತಾರೆ. ರಂಜಾನ್ ಹಬ್ಬದ 70 ದಿನಗಳ ನಂತರ ಇದನ್ನು ಆಚರಿಸಲಾಗುತ್ತದೆ. ಇಂದು ನಮಾಜ್ ಅರ್ಪಿಸಿದ ನಂತರ ಆಡುಗಳನ್ನು ಬಲಿ ನೀಡಲಾಗುತ್ತದೆ.

ಈ ತ್ಯಾಗದ ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಅದರಲ್ಲಿ ಒಂದು ಭಾಗವನ್ನು ಬಡವರಿಗೆ ನೀಡಲಾಗುತ್ತದೆ, ಇನ್ನೊಂದು ಭಾಗವನ್ನು ಸ್ನೇಹಿತರು ಮತ್ತು ಸಂಬಂಧಿಕರಿಗೆ ವಿತರಿಸಲಾಗುತ್ತದೆ. ಅದೇ ಸಮಯದಲ್ಲಿ, ಮೂರನೇ ಭಾಗವನ್ನು ತನಗಾಗಿ ಇರಿಸಿಕೊಳ್ಳಲಾಗುತ್ತದೆ. ಇದು ಸಾಮಾಜಿಕ ಸಾಮರಸ್ಯದ ಸೂಚಕವೂ ಆಗಿದೆ.

ಹಿನ್ನೆಲೆ:

ಬಕ್ರಿದ್ ಆಚರನಣೆ ಹಿಂದೆ ಕಾರಣವೂ ಇದೆ. ಪ್ರವಾದಿ ಇಬ್ರಾಹಿಂ ಕಠಿಣ ಪರೀಕ್ಷೆಗೆ ಒಳಗಾಗಿದ್ದರು ಎಂದು ಮುಸ್ಲಿಮರು ನಂಬುತ್ತಾರೆ. ಇದಕ್ಕಾಗಿ ಅಲ್ಲಾಹನು ಇಬ್ರಾಹಿಂನ ಮಗ ಪ್ರವಾದಿ ಇಸ್ಮಾಯಿಲ್​ನನ್ನು ಬಲಿ ಕೊಡುವಂತೆ ಕೇಳಿಕೊಂಡಿದ್ದನು. ಇಬ್ರಾಹಿಂ ಆದೇಶವನ್ನು ಅನುಸರಿಸಲು ಒಪ್ಪಿದ್ದರು.

ಆದರೆ ಅಲ್ಹಾಹನು ಅದನ್ನು ತಡೆದ ನಂತರ ಕುರಿ ಅಥವಾ ಯಾವುದಾದರೂ ಪ್ರಾಣಿಗಳನ್ನು ಬಲಿ ಕೊಡಲು ಕೇಳಿದ್ದರಂತೆ. ಹೀಗೆ ಆ ದಿನದಿಂದ ಜನರು ಬಕ್ರಿದ್ ಆಚರಿಸುತ್ತಿದ್ದಾರೆ. ಈ ದಿನದಂದು ಆಡು ಬಲಿ ನೀಡುವ ಪದ್ಧತಿ ಇದೆ. ಕೋವಿಡ್​ ಹಿನ್ನೆಲೆ, ಈ ವರ್ಷವೂ ಜನರು ಮನೆಯಲ್ಲಿಯೇ ಬಕ್ರಿದ್​ ಅಚರಿಸುತ್ತಿದ್ದಾರೆ. ನಮಾಜ್ ಅನ್ನು ಮನೆಯಲ್ಲಿಯೇ ಮಾಡಲಾಗುತ್ತಿದೆ.

ಪ್ರಧಾನಿಯಿಂದ ಶುಭಾಶಯ:

ಸರ್ವರಿಗೂ ಈದ್​ ಮುಬಾರಕ್​​ ಎಂದು ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

ದೇಶದ ಒಳಿತಿಗಾಗಿ ಸಹಾನುಭೂತಿ, ಸೌಹಾರ್ದ ಮನೋಭಾವವನ್ನು ಆ ಅಲ್ಲಾಹನು ಕರುಣಿಸಲಿ ಎಂದು ಹಾರೈಸಿದ್ದಾರೆ.

ಹೈದರಾಬಾದ್: ಇಂದು ಎಲ್ಲೆಡೆ ಈದ್​ ಸಂಭ್ರಮ ಮನೆ ಮಾಡಿದೆ. ಈದ್-ಉಲ್-ಅಧಾ ದಿನದಂದು ಆಡನ್ನು ಬಲಿ ನೀಡಲಾಗುತ್ತದೆ. ಅದಕ್ಕಾಗಿಯೇ ಇದನ್ನು ದೇಶದಲ್ಲಿ ಬಕ್ರಿದ್​​ ಎಂದೂ ಕರೆಯುತ್ತಾರೆ. ಈ ದಿನ ಆಡುಗಳನ್ನು ಬಲಿ ನೀಡುವ ಈ ಧಾರ್ಮಿಕ ಪ್ರಕ್ರಿಯೆಯನ್ನು ಫರ್ಜ್-ಎ-ಕುರ್ಬನ್ ಎಂದು ಕರೆಯಲಾಗುತ್ತದೆ.

ಪ್ರಾಮುಖ್ಯತೆ:

ಬಕ್ರಿದ್ ಅನ್ನು ಈದ್-ಅಲ್-ಅಧಾ ಅಥವಾ ಈದ್-ಉಲ್-ಜುಹಾ ಎಂದೂ ಕರೆಯುತ್ತಾರೆ. ರಂಜಾನ್ ಹಬ್ಬದ 70 ದಿನಗಳ ನಂತರ ಇದನ್ನು ಆಚರಿಸಲಾಗುತ್ತದೆ. ಇಂದು ನಮಾಜ್ ಅರ್ಪಿಸಿದ ನಂತರ ಆಡುಗಳನ್ನು ಬಲಿ ನೀಡಲಾಗುತ್ತದೆ.

ಈ ತ್ಯಾಗದ ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಅದರಲ್ಲಿ ಒಂದು ಭಾಗವನ್ನು ಬಡವರಿಗೆ ನೀಡಲಾಗುತ್ತದೆ, ಇನ್ನೊಂದು ಭಾಗವನ್ನು ಸ್ನೇಹಿತರು ಮತ್ತು ಸಂಬಂಧಿಕರಿಗೆ ವಿತರಿಸಲಾಗುತ್ತದೆ. ಅದೇ ಸಮಯದಲ್ಲಿ, ಮೂರನೇ ಭಾಗವನ್ನು ತನಗಾಗಿ ಇರಿಸಿಕೊಳ್ಳಲಾಗುತ್ತದೆ. ಇದು ಸಾಮಾಜಿಕ ಸಾಮರಸ್ಯದ ಸೂಚಕವೂ ಆಗಿದೆ.

ಹಿನ್ನೆಲೆ:

ಬಕ್ರಿದ್ ಆಚರನಣೆ ಹಿಂದೆ ಕಾರಣವೂ ಇದೆ. ಪ್ರವಾದಿ ಇಬ್ರಾಹಿಂ ಕಠಿಣ ಪರೀಕ್ಷೆಗೆ ಒಳಗಾಗಿದ್ದರು ಎಂದು ಮುಸ್ಲಿಮರು ನಂಬುತ್ತಾರೆ. ಇದಕ್ಕಾಗಿ ಅಲ್ಲಾಹನು ಇಬ್ರಾಹಿಂನ ಮಗ ಪ್ರವಾದಿ ಇಸ್ಮಾಯಿಲ್​ನನ್ನು ಬಲಿ ಕೊಡುವಂತೆ ಕೇಳಿಕೊಂಡಿದ್ದನು. ಇಬ್ರಾಹಿಂ ಆದೇಶವನ್ನು ಅನುಸರಿಸಲು ಒಪ್ಪಿದ್ದರು.

ಆದರೆ ಅಲ್ಹಾಹನು ಅದನ್ನು ತಡೆದ ನಂತರ ಕುರಿ ಅಥವಾ ಯಾವುದಾದರೂ ಪ್ರಾಣಿಗಳನ್ನು ಬಲಿ ಕೊಡಲು ಕೇಳಿದ್ದರಂತೆ. ಹೀಗೆ ಆ ದಿನದಿಂದ ಜನರು ಬಕ್ರಿದ್ ಆಚರಿಸುತ್ತಿದ್ದಾರೆ. ಈ ದಿನದಂದು ಆಡು ಬಲಿ ನೀಡುವ ಪದ್ಧತಿ ಇದೆ. ಕೋವಿಡ್​ ಹಿನ್ನೆಲೆ, ಈ ವರ್ಷವೂ ಜನರು ಮನೆಯಲ್ಲಿಯೇ ಬಕ್ರಿದ್​ ಅಚರಿಸುತ್ತಿದ್ದಾರೆ. ನಮಾಜ್ ಅನ್ನು ಮನೆಯಲ್ಲಿಯೇ ಮಾಡಲಾಗುತ್ತಿದೆ.

ಪ್ರಧಾನಿಯಿಂದ ಶುಭಾಶಯ:

ಸರ್ವರಿಗೂ ಈದ್​ ಮುಬಾರಕ್​​ ಎಂದು ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

ದೇಶದ ಒಳಿತಿಗಾಗಿ ಸಹಾನುಭೂತಿ, ಸೌಹಾರ್ದ ಮನೋಭಾವವನ್ನು ಆ ಅಲ್ಲಾಹನು ಕರುಣಿಸಲಿ ಎಂದು ಹಾರೈಸಿದ್ದಾರೆ.

Last Updated : Jul 21, 2021, 10:24 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.