ETV Bharat / bharat

ಪ್ಯಾರಾಗ್ಲೈಡಿಂಗ್ ವೇಳೆ ಮರಕ್ಕೆ ಸಿಲುಕಿಕೊಂಡ ಆಸ್ಟ್ರೀಯಾ ಪ್ರಜೆ.. ಪೊಲೀಸರಿಂದ ರಕ್ಷಣೆ

ಆಸ್ಟ್ರಿಯಾದ ಪ್ಯಾರಾಗ್ಲೈಡರ್ ರೋಷ್ಮನ್ ಜೆರಾಲ್ಡ್ ಎಂಬುವವರು ಹಿಮಾಚಲ ಪ್ರದೇಶದ ವಿಶ್ವಪ್ರಸಿದ್ಧ ಪ್ಯಾರಾಗ್ಲೈಡಿಂಗ್ ತಾಣವಾದ ಬಿರ್ ಬಿಲ್ಲಿಂಗ್‌ನಿಂದ ಟೇಕ್​ ಆಫ್ ಆದ ನಂತರ ಧರ್ಮಶಾಲಾ ಬಳಿಯ ತಥರ್ನಾ ಎಂಬ ಪ್ರದೇಶದಲ್ಲಿ ಮರದ ಮೇಲೆ ಸಿಕ್ಕಿಹಾಕಿಕೊಂಡಿದ್ದರು.

author img

By

Published : Mar 28, 2023, 6:12 PM IST

austrian-paraglider-stuck-on-tree-while-crash-landing-team-rescued-him-from-dharamshala
ಪ್ಯಾರಾಗ್ಲೈಡಿಂಗ್ ಮಾಡುವ ವೇಳೆ ಮರಕ್ಕೆ ಸಿಲುಕಿಕೊಂಡ ಆಸ್ಟ್ರೀಯಾ ಪ್ರಜೆ, ಪೊಲೀಸರಿಂದ ರಕ್ಷಣೆ

ಧರ್ಮಶಾಲ (ಹಿಮಾಚಲ ಪ್ರದೇಶ): ಆಸ್ಟ್ರೀಯಾದ ದೇಶದ ಪ್ಯಾರಾಗ್ಲೈಡರ್​ ಪೈಲಟ್​ ಪ್ಯಾರಾಗ್ಲೈಡಿಂಗ್​ ಮಾಡುವ ವೇಳೆ ನಿಯಂತ್ರಣ ತಪ್ಪಿ ಮರಕ್ಕೆ ಸಿಲುಕಿಕೊಂಡಿರುವ ಘಟನೆ ಹಿಮಾಚಲ ಪ್ರದೇಶದ ಧರ್ಮಶಾಲ ಸಮೀಪದ ತಥರ್ನಾದಲ್ಲಿ ನಡೆದಿದೆ. ಸುದ್ದಿ ತಿಳಿದ ತಕ್ಷಣ ಧರ್ಮಶಾಲ ಪೊಲೀಸರು ಮತ್ತು ಎಸ್​​ಡಿಆರ್​ಎಫ್​ (ರಾಜ್ಯ ವಿಪತ್ತು ನಿರ್ವಹಣಾ ಪಡೆ) ತಂಡ ಆಸ್ಟ್ರೀಯಾದ ಪ್ಯಾರಾಗ್ಲೈಡರ್​ ಪೈಲಟ್​ ರೋಷ್ಮನ್ ಜೆರಾಲ್ಡ್ ಅವರನ್ನು ಸೋಮವಾರ ರಕ್ಷಿಸಿದ್ದಾರೆ.

ವಿಶ್ವವಿಖ್ಯಾತ ಪ್ಯಾರಾಗ್ಲೈಡಿಂಗ್​​ ತಾಣವಾದ ಬಿರ್​ ಬಿಲ್ಲಿಂಗ್​ನಿಂದ ಟೇಕ್​ಆಫ್​ ಆದ ರೋಷ್ಮನ್ ಪ್ಯಾರಾಗ್ಲೈಡಿಂಗ್​​ ಮಾಡುವಾಗ ನಿಯಂತ್ರಣ ಕಳೆದುಕೊಂಡು ಧರ್ಮಶಾಲ ಸಮೀಪದ ತಥರ್ನಾ ಎಂಬ ಪ್ರದೇಶದಲ್ಲಿ ಕ್ರ್ಯಾಶ್​ ಲ್ಯಾಂಡಿಂಗ್​ ಮಾಡುವ ಸಂದರ್ಭದಲ್ಲಿ ಮರಕ್ಕೆ ಸಿಲುಕಿಕೊಂಡಿದ್ದರು. ಪ್ಯಾರಾಗ್ಲೈಡರ್​​ ತಥರ್ನಾದಲ್ಲಿ ಮರದಲ್ಲಿ ಸಿಲುಕಿರುವ ಮಾಹಿತಿ ತಿಳಿದ ತಕ್ಷಣ, ಎಸ್​ಎಚ್ಓ ​ಸುರೇಂದ್ರ ಠಾಕೂರ್​ ನೇತೃತ್ವದಲ್ಲಿ ಧರ್ಮಶಾಲಾ ಪೊಲೀಸ್​​ ತಂಡ ಸ್ಥಳಕ್ಕೆ ತೆರಳಿದೆ. ಈ ಬಗ್ಗೆ ಎಸ್‌ಡಿಆರ್‌ಎಫ್‌ಗೂ ಮಾಹಿತಿ ನೀಡಲಾಗಿದೆ.

ಸ್ಥಳಕ್ಕಾಗಮಿಸಿದ ಪೊಲೀಸ್​ ತಂಡ, ಎಸ್​​ಡಿಆರ್​ಎಫ್​ ಸಿಬ್ಬಂದಿ ಮತ್ತು ಸ್ಥಳೀಯರ ಜಂಟಿ ಪ್ರಯತ್ನ ನಡೆಸಿ ಆಸ್ಟ್ರೀಯಾದ ಪ್ಯಾರಾಗ್ಲೈಡರ್​​ನನ್ನು ರಕ್ಷಿಸಿದರು. ರಕ್ಷಣೆಯ ನಂತರ, ಆಸ್ಟ್ರೀಯಾ ಪ್ಯಾರಾಗ್ಲೈಡರ್​ ರೋಷ್ಮನ್​ ಜೆರಾಲ್ಡ್​​ ತನ್ನ ಜೀವವನ್ನು ಉಳಿಸಿದಕ್ಕಾಗಿ ಧರ್ಮಶಾಲ ಪೊಲೀಸರಿಗೆ ಮತ್ತು ಸ್ಥಳೀಯ ಜನರಿಗೆ ಧನ್ಯವಾದ ಅರ್ಪಿಸಿದರು. ನಂತರ ಮಾತನಾಡಿದ ಅವರು ನಾನು ಮರಕ್ಕೆ ಸಿಕ್ಕಿಕೊಂಡ ತಕ್ಷಣವೇ ಪೊಲೀಸರು ಮತ್ತು ಜನರು ನನ್ನನ್ನು ತ್ವರಿತವಾಗಿ ರಕ್ಷಿಸಿದರು. ಇದಕ್ಕಾಗಿ ನಾನು ಎಲ್ಲರಿಗೂ ಕೃತಜ್ಞರಾಗಿರುತ್ತೇನೆ. ಭಾರತದ ಜನ ತುಂಬಾ ಒಳ್ಳೆಯವರು ಮತ್ತು ಸಹಕಾರಿ ಎಂದು ರೋಷ್ಮನ್​ ಜೇರಾಲ್ಡ್​ ಹೇಳಿದರು.

ಮತ್ತೊಂದೆಡೆ, ಘಟನೆಯ ಬಗ್ಗೆ ಎಎಸ್​ಪಿ ಹಿತೇಶ್ ಲಖನ್ಪಾಲ್ ಮಾತನಾಡಿ, ತಥರ್ನಾದಲ್ಲಿ ಸಿಲುಕಿರುವ ಆಸ್ಟ್ರಿಯಾದ ಪ್ಯಾರಾಗ್ಲೈಡರ್ ಅನ್ನು ರಕ್ಷಿಸಲಾಗಿದೆ ಮತ್ತು ಯಾವುದೇ ರೀತಿಯ ಗಾಯಕ್ಕೆ ಒಳಗಾಗದೇ ಇರುವುದು ಸಮಾಧಾನದ ಸಂಗತಿ ಎಂದು ತಿಳಿಸಿದರು. ಆಸ್ಟ್ರಿಯಾದ ಪ್ಯಾರಾಗ್ಲೈಡರ್ ಪೈಲಟ್ ರೋಷ್​ಮನ್​ ಮಾನ್ಯವಾದ ಪರವಾನಗಿಯನ್ನು ಹೊಂದಿದ್ದರು. ಪ್ಯಾರಾಗ್ಲೈಡಿಂಗ್ ಮಾಡುವಾಗ ಅನೇಕ ಪೈಲಟ್‌ಗಳು ಅಪಘಾತಕ್ಕೆ ಬಲಿಯಾಗಿದ್ದಾರೆ. ಅದೃಷ್ಟವಶಾತ್ ರೋಷ್ಮನ್​ಗೆ, ರಕ್ಷಣಾ ತಂಡಗಳು ಮತ್ತು ಸ್ಥಳೀಯ ಸಾರ್ವಜನಿಕರು ಸಕಾಲಿಕ ಬೆಂಬಲವನ್ನು ನೀಡಿದರು ಎಂದು ಹೇಳಿದರು.

ವಿದೇಶಿ ಪ್ರಜೆಯಿಂದ ಸೈಕಲ್​ ಪರ್ಯಟನೆ: ಭಾರತ ದೇಶದ ಸಂಸ್ಕೃತಿ, ಧಾರ್ಮಿಕ ಆಚರಣೆ, ಐತಿಹಾಸಿಕ ಹಿನ್ನೆಲೆಯುಳ್ಳ ಸ್ಮಾರಕಗಳಿಗೆ ಮಾರು ಹೋಗದವರೇ ಇಲ್ಲ. ಅದರಲ್ಲಿಯೂ ವಿದೇಶಿಯರು ಭಾರತವನ್ನು ಹೆಚ್ಚು ಇಷ್ಟ ಪಡುತ್ತಾರೆ. ಅವರು ದೇಶಕ್ಕೆ ಬಂದರೆ ಕೇವಲ ಪ್ರವಾಸಿ ತಾಣಗಳನ್ನು ನೋಡಿ ಹೋಗದೇ ಇಲ್ಲಿನ ತಿಂಡಿಯಿಂದ ಹಿಡಿದು ಇತಿಹಾಸವನ್ನು ಸಹ ಅಧ್ಯಯನ ಮಾಡುತ್ತಾರೆ. ಹಲವು ವಿದೇಶಿಯರು ಇಲ್ಲಿನ ಸಂಸ್ಕೃತಿಗೆ ಮೆಚ್ಚಿ ಭಾರತದಲ್ಲಿ ನೆಲೆ ಕಂಡವರಿದ್ದಾರೆ. ಭಾರತದ ಪ್ರವಾಸಿ ತಾಣಗಳ ಸೌಂದರ್ಯ, ವಿವಿಧ ಹಬ್ಬ ಹರಿ ದಿನಗಳು, ಸಂಸ್ಕೃತಿ, ಧಾರ್ಮಿಕ ಆಚರಣೆಗಳನ್ನು ಹತ್ತಿರದಿಂದ ನೋಡಲು ವಿದೇಶಿ ಪ್ರವಾಸಿಗರೊಬ್ಬರು ಸೈಕಲ್ ಮೇಲೆ ದೇಶ ಪರ್ಯಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಿದೇಶಿ ಪ್ರಜೆಯಿಂದ ಭಾರತದ ಸಂಸ್ಕೃತಿ ಅಧ್ಯಯನಕ್ಕೆ ಸೈಕಲ್ ಪರ್ಯಟನೆ

ಧರ್ಮಶಾಲ (ಹಿಮಾಚಲ ಪ್ರದೇಶ): ಆಸ್ಟ್ರೀಯಾದ ದೇಶದ ಪ್ಯಾರಾಗ್ಲೈಡರ್​ ಪೈಲಟ್​ ಪ್ಯಾರಾಗ್ಲೈಡಿಂಗ್​ ಮಾಡುವ ವೇಳೆ ನಿಯಂತ್ರಣ ತಪ್ಪಿ ಮರಕ್ಕೆ ಸಿಲುಕಿಕೊಂಡಿರುವ ಘಟನೆ ಹಿಮಾಚಲ ಪ್ರದೇಶದ ಧರ್ಮಶಾಲ ಸಮೀಪದ ತಥರ್ನಾದಲ್ಲಿ ನಡೆದಿದೆ. ಸುದ್ದಿ ತಿಳಿದ ತಕ್ಷಣ ಧರ್ಮಶಾಲ ಪೊಲೀಸರು ಮತ್ತು ಎಸ್​​ಡಿಆರ್​ಎಫ್​ (ರಾಜ್ಯ ವಿಪತ್ತು ನಿರ್ವಹಣಾ ಪಡೆ) ತಂಡ ಆಸ್ಟ್ರೀಯಾದ ಪ್ಯಾರಾಗ್ಲೈಡರ್​ ಪೈಲಟ್​ ರೋಷ್ಮನ್ ಜೆರಾಲ್ಡ್ ಅವರನ್ನು ಸೋಮವಾರ ರಕ್ಷಿಸಿದ್ದಾರೆ.

ವಿಶ್ವವಿಖ್ಯಾತ ಪ್ಯಾರಾಗ್ಲೈಡಿಂಗ್​​ ತಾಣವಾದ ಬಿರ್​ ಬಿಲ್ಲಿಂಗ್​ನಿಂದ ಟೇಕ್​ಆಫ್​ ಆದ ರೋಷ್ಮನ್ ಪ್ಯಾರಾಗ್ಲೈಡಿಂಗ್​​ ಮಾಡುವಾಗ ನಿಯಂತ್ರಣ ಕಳೆದುಕೊಂಡು ಧರ್ಮಶಾಲ ಸಮೀಪದ ತಥರ್ನಾ ಎಂಬ ಪ್ರದೇಶದಲ್ಲಿ ಕ್ರ್ಯಾಶ್​ ಲ್ಯಾಂಡಿಂಗ್​ ಮಾಡುವ ಸಂದರ್ಭದಲ್ಲಿ ಮರಕ್ಕೆ ಸಿಲುಕಿಕೊಂಡಿದ್ದರು. ಪ್ಯಾರಾಗ್ಲೈಡರ್​​ ತಥರ್ನಾದಲ್ಲಿ ಮರದಲ್ಲಿ ಸಿಲುಕಿರುವ ಮಾಹಿತಿ ತಿಳಿದ ತಕ್ಷಣ, ಎಸ್​ಎಚ್ಓ ​ಸುರೇಂದ್ರ ಠಾಕೂರ್​ ನೇತೃತ್ವದಲ್ಲಿ ಧರ್ಮಶಾಲಾ ಪೊಲೀಸ್​​ ತಂಡ ಸ್ಥಳಕ್ಕೆ ತೆರಳಿದೆ. ಈ ಬಗ್ಗೆ ಎಸ್‌ಡಿಆರ್‌ಎಫ್‌ಗೂ ಮಾಹಿತಿ ನೀಡಲಾಗಿದೆ.

ಸ್ಥಳಕ್ಕಾಗಮಿಸಿದ ಪೊಲೀಸ್​ ತಂಡ, ಎಸ್​​ಡಿಆರ್​ಎಫ್​ ಸಿಬ್ಬಂದಿ ಮತ್ತು ಸ್ಥಳೀಯರ ಜಂಟಿ ಪ್ರಯತ್ನ ನಡೆಸಿ ಆಸ್ಟ್ರೀಯಾದ ಪ್ಯಾರಾಗ್ಲೈಡರ್​​ನನ್ನು ರಕ್ಷಿಸಿದರು. ರಕ್ಷಣೆಯ ನಂತರ, ಆಸ್ಟ್ರೀಯಾ ಪ್ಯಾರಾಗ್ಲೈಡರ್​ ರೋಷ್ಮನ್​ ಜೆರಾಲ್ಡ್​​ ತನ್ನ ಜೀವವನ್ನು ಉಳಿಸಿದಕ್ಕಾಗಿ ಧರ್ಮಶಾಲ ಪೊಲೀಸರಿಗೆ ಮತ್ತು ಸ್ಥಳೀಯ ಜನರಿಗೆ ಧನ್ಯವಾದ ಅರ್ಪಿಸಿದರು. ನಂತರ ಮಾತನಾಡಿದ ಅವರು ನಾನು ಮರಕ್ಕೆ ಸಿಕ್ಕಿಕೊಂಡ ತಕ್ಷಣವೇ ಪೊಲೀಸರು ಮತ್ತು ಜನರು ನನ್ನನ್ನು ತ್ವರಿತವಾಗಿ ರಕ್ಷಿಸಿದರು. ಇದಕ್ಕಾಗಿ ನಾನು ಎಲ್ಲರಿಗೂ ಕೃತಜ್ಞರಾಗಿರುತ್ತೇನೆ. ಭಾರತದ ಜನ ತುಂಬಾ ಒಳ್ಳೆಯವರು ಮತ್ತು ಸಹಕಾರಿ ಎಂದು ರೋಷ್ಮನ್​ ಜೇರಾಲ್ಡ್​ ಹೇಳಿದರು.

ಮತ್ತೊಂದೆಡೆ, ಘಟನೆಯ ಬಗ್ಗೆ ಎಎಸ್​ಪಿ ಹಿತೇಶ್ ಲಖನ್ಪಾಲ್ ಮಾತನಾಡಿ, ತಥರ್ನಾದಲ್ಲಿ ಸಿಲುಕಿರುವ ಆಸ್ಟ್ರಿಯಾದ ಪ್ಯಾರಾಗ್ಲೈಡರ್ ಅನ್ನು ರಕ್ಷಿಸಲಾಗಿದೆ ಮತ್ತು ಯಾವುದೇ ರೀತಿಯ ಗಾಯಕ್ಕೆ ಒಳಗಾಗದೇ ಇರುವುದು ಸಮಾಧಾನದ ಸಂಗತಿ ಎಂದು ತಿಳಿಸಿದರು. ಆಸ್ಟ್ರಿಯಾದ ಪ್ಯಾರಾಗ್ಲೈಡರ್ ಪೈಲಟ್ ರೋಷ್​ಮನ್​ ಮಾನ್ಯವಾದ ಪರವಾನಗಿಯನ್ನು ಹೊಂದಿದ್ದರು. ಪ್ಯಾರಾಗ್ಲೈಡಿಂಗ್ ಮಾಡುವಾಗ ಅನೇಕ ಪೈಲಟ್‌ಗಳು ಅಪಘಾತಕ್ಕೆ ಬಲಿಯಾಗಿದ್ದಾರೆ. ಅದೃಷ್ಟವಶಾತ್ ರೋಷ್ಮನ್​ಗೆ, ರಕ್ಷಣಾ ತಂಡಗಳು ಮತ್ತು ಸ್ಥಳೀಯ ಸಾರ್ವಜನಿಕರು ಸಕಾಲಿಕ ಬೆಂಬಲವನ್ನು ನೀಡಿದರು ಎಂದು ಹೇಳಿದರು.

ವಿದೇಶಿ ಪ್ರಜೆಯಿಂದ ಸೈಕಲ್​ ಪರ್ಯಟನೆ: ಭಾರತ ದೇಶದ ಸಂಸ್ಕೃತಿ, ಧಾರ್ಮಿಕ ಆಚರಣೆ, ಐತಿಹಾಸಿಕ ಹಿನ್ನೆಲೆಯುಳ್ಳ ಸ್ಮಾರಕಗಳಿಗೆ ಮಾರು ಹೋಗದವರೇ ಇಲ್ಲ. ಅದರಲ್ಲಿಯೂ ವಿದೇಶಿಯರು ಭಾರತವನ್ನು ಹೆಚ್ಚು ಇಷ್ಟ ಪಡುತ್ತಾರೆ. ಅವರು ದೇಶಕ್ಕೆ ಬಂದರೆ ಕೇವಲ ಪ್ರವಾಸಿ ತಾಣಗಳನ್ನು ನೋಡಿ ಹೋಗದೇ ಇಲ್ಲಿನ ತಿಂಡಿಯಿಂದ ಹಿಡಿದು ಇತಿಹಾಸವನ್ನು ಸಹ ಅಧ್ಯಯನ ಮಾಡುತ್ತಾರೆ. ಹಲವು ವಿದೇಶಿಯರು ಇಲ್ಲಿನ ಸಂಸ್ಕೃತಿಗೆ ಮೆಚ್ಚಿ ಭಾರತದಲ್ಲಿ ನೆಲೆ ಕಂಡವರಿದ್ದಾರೆ. ಭಾರತದ ಪ್ರವಾಸಿ ತಾಣಗಳ ಸೌಂದರ್ಯ, ವಿವಿಧ ಹಬ್ಬ ಹರಿ ದಿನಗಳು, ಸಂಸ್ಕೃತಿ, ಧಾರ್ಮಿಕ ಆಚರಣೆಗಳನ್ನು ಹತ್ತಿರದಿಂದ ನೋಡಲು ವಿದೇಶಿ ಪ್ರವಾಸಿಗರೊಬ್ಬರು ಸೈಕಲ್ ಮೇಲೆ ದೇಶ ಪರ್ಯಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಿದೇಶಿ ಪ್ರಜೆಯಿಂದ ಭಾರತದ ಸಂಸ್ಕೃತಿ ಅಧ್ಯಯನಕ್ಕೆ ಸೈಕಲ್ ಪರ್ಯಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.