ETV Bharat / bharat

ಭಯೋತ್ಪಾದಕರ ಸಂಘಟನೆ ಜೊತೆ ಅತಿಕ್​ ಅಹ್ಮದ್​ ನೇರ ಸಂಪರ್ಕ.. ನಮಗೆ ಯೋಗಿ ಮೇಲೆ ನಂಬಿಕೆಯಿದೆ ಎಂದ ಮೃತ ವಕೀಲನ ಕುಟುಂಬ

author img

By

Published : Apr 14, 2023, 8:05 AM IST

ಪ್ರಯಾಗ್‌ರಾಜ್‌ನಲ್ಲಿ ದರೋಡೆಕೋರ ಅತೀಕ್ ಅಹ್ಮದ್‌ಗೆ ಗುರುವಾರ ಅತ್ಯಂತ ನೋವಿನ ದಿನವಾಗಿತ್ತು. ಮಧ್ಯಾಹ್ನ ನ್ಯಾಯಾಲಯದಲ್ಲಿ ವಕೀಲರ ನಡುವೆ ವಾದ - ಪ್ರತಿವಾದಗಳು ನಡೆದ ಬಳಿಕ ಆರೋಪಿಯನ್ನು ಕಸ್ಟಡಿಗೆ ನೀಡಲಾಯಿತು.

Mafia Atiq Ahmed  Umesh Pal Murder Case  Atiq Ahmed  Mafia Atiq Ahmed Pakistani Connection  Prayagraj Murder Case  Ahmed has direct connections with Pakistan ISI  ಭಯೋತ್ಪಾದಕರ ಸಂಘಟನೆ ಜೊತೆ ಅತಿಕ್​ ಅಹ್ಮದ್​ ನೇರ ಸಂಪರ್ಕ  ನಮಗೆ ಯೋಗಿ ಮೇಲೆ ನಂಬಿಕೆಯಿದೆ ಎಂದ ಮೃತ ವಕಿಲನ ಕುಟುಂಬ  ಪ್ರಯಾಗ್‌ರಾಜ್‌ನಲ್ಲಿ ದರೋಡೆಕೋರ ಅತೀಕ್ ಅಹ್ಮದ್‌  ಆರೋಪಿಯನ್ನು ಕಸ್ಟಡಿಗೆ ನೀಡಲಾಯಿತು  ಬಾಹುಬಲಿ ಅತೀಕ್ ಅಹ್ಮದ್  ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್  ವಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ  ಪೊಲೀಸ್ ಬೆಂಗಾವಲು ಪಡೆ ಮೇಲೆ ದಾಳಿ
ಭಯೋತ್ಪಾದಕರ ಸಂಘಟನೆ ಜೊತೆ ಅತಿಕ್​ ಅಹ್ಮದ್​ ನೇರ ಸಂಪರ್ಕ

ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ಅತೀಕ್ ಅಹ್ಮದ್ ಮತ್ತು ಆತನ ಕಿರಿಯ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಅನ್ನು ಪ್ರಯಾಗರಾಜ್ ಪೊಲೀಸರು ಗುರುವಾರ ಕೋರ್ಟ್​ಗೆ ಹಾಜರುಪಡಿಸಿ ಮತ್ತೆ ಪೊಲೀಸ್​ ಕಸ್ಟಡಿಗೆ ಪಡೆದಿದ್ದಾರೆ.

ಮಾಫಿಯಾ-ರಾಜಕಾರಣಿ ಅತಿಕ್ ಅಹ್ಮದ್, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಮತ್ತು ದೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸರಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅನ್ನು ಪ್ರಯಾಗರಾಜ್ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗುರುವಾರ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಈ ಇಬ್ಬರ ಪೊಲೀಸ್ ಕಸ್ಟಡಿಯು ಏಪ್ರಿಲ್ 17 ರಂದು ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ.

  • #WATCH | Umesh Pal murder case | Mafia-turned-politician Atiq Ahmed and his brother Ashraf brought to Dhoomanganj Police Station in Pryagraj, Uttar Pradesh. They will be kept here overnight.

    They were sent to four-day police custody by Prayagraj CJM court today. pic.twitter.com/mQi2cT4Yq0

    — ANI (@ANI) April 13, 2023 " class="align-text-top noRightClick twitterSection" data=" ">

ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅನ್ನು ಗುರುವಾರ ಬೆಳಗ್ಗೆ ಪ್ರಯಾಗರಾಜ್‌ನಲ್ಲಿರುವ ಸಿಜೆಎಂ ನ್ಯಾಯಾಲಯಕ್ಕೆ ಕರೆತರಲಾಯಿತು. ಉತ್ತರ ಪ್ರದೇಶ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಅತೀಕ್ ಅಹ್ಮದ್ ದಾಖಲಾದ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಪಾಕಿಸ್ತಾನದ ಐಎಸ್‌ಐ ಮತ್ತು ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದೊಂದಿಗೆ ನೇರ ಸಂಪರ್ಕ ಹೊಂದಿರುವ ಕಾರಣ ತನಗೆ ಶಸ್ತ್ರಾಸ್ತ್ರಗಳ ಕೊರತೆಯಿಲ್ಲ ಎಂದು ಅತಿಕ್ ಹೇಳಿಕೆಯನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಡ್ರೋನ್‌ಗಳ ಸಹಾಯದಿಂದ ಪಂಜಾಬ್ ಗಡಿಯಲ್ಲಿ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ತರಲಾಯಿತು. ಸ್ಥಳೀಯ ಸಂಪರ್ಕಗಳು ಅವುಗಳನ್ನು ಸಂಗ್ರಹಿಸಿ ನಮಗೆ ಒದಗಿಸುತ್ತವೆ. ಅಷ್ಟೇ ಅಲ್ಲ ಪಾಕಿಸ್ತಾನದಿಂದ ಬರುವ ಶಸ್ತ್ರಾಸ್ತ್ರಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಯೋತ್ಪಾದಕರು ಪಡೆಯುತ್ತಾರೆ ಎಂದು ಅವರು ಹೇಳಿದರು.

ಝಾನ್ಸಿಯಲ್ಲಿ ಗುರುವಾರ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ನಡೆಸಿದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಅತೀಕ್ ಅಹ್ಮದ್ ಅವರ ಪುತ್ರ ಅಸದ್ ಮತ್ತು ಅವರ ಸಹಾಯಕ ಗುಲಾಮ್ ಸಾವನ್ನಪ್ಪಿದ್ದಾರೆ. ಮೃತರಿಬ್ಬರೂ ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿಗಳಾಗಿದ್ದು, ತಲಾ 5 ಲಕ್ಷ ರೂಪಾಯಿ ಬಹುಮಾನ ಹೊಂದಿದ್ದರು. ಅಷ್ಟೇ ಅಲ್ಲ ಮೃತ ಆರೋಪಿಗಳಿಂದ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • #WATCH | Police barricading being done outside Dhoomanganj Police Station in Prayagraj, Uttar Pradesh where mafia-turned-politician Atiq Ahmed and his brother Ashraf have been brought.

    They were sent to four-day police custody by Prayagraj CJM court today in Umesh Pal murder… pic.twitter.com/3M2wD3Mtzn

    — ANI (@ANI) April 13, 2023 " class="align-text-top noRightClick twitterSection" data=" ">

ಯುಪಿಗೆ ಮರಳಿ ಕರೆತರುವ ಸಮಯದಲ್ಲಿ ಆರೋಪಿಗಳಾದ ಅತೀಕ್ ಮತ್ತು ಅಶ್ರಫ್ ಅನ್ನು ತಪ್ಪಿಸಿಕೊಳ್ಳುವುದಕ್ಕೆ ಸಹಾಯ ಮಾಡಲು ಪೊಲೀಸ್ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಬಹುದು ಎಂದು ನಮಗೆ ಮಾಹಿತಿ ಇತ್ತು. ಈ ಮಾಹಿತಿಯ ಮೇರೆಗೆ ಸಿವಿಲ್ ಪೊಲೀಸ್ ಮತ್ತು ವಿಶೇಷ ಪಡೆಗಳ ತಂಡಗಳನ್ನು ನಿಯೋಜಿಸಲಾಗಿತ್ತು ಎಂದು ರಾಜ್ಯ ವಿಶೇಷ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ಅಸದ್ ಮತ್ತು ಗುಲಾಂ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ನಂತರ 'ಕಾನೂನು ಮತ್ತು ಸುವ್ಯವಸ್ಥೆ' ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದರು. ಶೂಟೌಟ್‌ನಲ್ಲಿ ಭಾಗಿಯಾಗಿದ್ದ 12 ಸದಸ್ಯರ ಎಸ್‌ಟಿಎಫ್ ತಂಡವನ್ನು ಸಿಎಂ ಯೋಗಿ ಶ್ಲಾಘಿಸಿದ್ದಾರೆ.

ಎನ್​ಕೌಂಟರ್​ನಲ್ಲಿ ಅತಿಕ್​ ಅಹ್ಮದ್​ ಮಗ ಸಾವು: ಗುರುವಾರ ಝಾನ್ಸಿಯಲ್ಲಿ ಯುಪಿ ಎಸ್‌ಟಿಎಫ್‌ನಿಂದ ಪರಾರಿಯಾಗಿದ್ದ ಅಸದ್ ಅಹ್ಮದ್‌ನನ್ನು ಗುಂಡಿಕ್ಕಿ ಹೊಡೆದ ನಂತರ ಮೃತ ವಕೀಲ ಉಮೇಶ್ ಪಾಲ್ ಅವರ ಕುಟುಂಬ ಸದಸ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಹತ್ಯೆಗೀಡಾದ ವಕೀಲ ಉಮೇಶ್ ಪಾಲ್ ಅವರ ತಾಯಿ ಶಾಂತಿ ಪಾಲ್, ವಿಷಯಗಳು ನಮ್ಮ ನಿಯಂತ್ರಣಕ್ಕೆ ಮೀರಿದೆ. ಉತ್ತರ ಪ್ರದೇಶ ಪೊಲೀಸರು ಮತ್ತು ಆಡಳಿತವು ನನ್ನ ಮಗನ ಹಂತಕರನ್ನು ಬಂಧಿಸಲು ಶ್ರಮಿಸುತ್ತಿದೆ. ನಾವು ನ್ಯಾಯಕ್ಕಾಗಿ ಕಾಯುತ್ತಿದ್ದೆವೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇಲೆ ನಂಬಿಕೆ ಇದೆ ಎಂದರು.

ಹತ್ಯೆಗೀಡಾದ ವಕೀಲ ಉಮೇಶ್ ಪಾಲ್ ಅವರ ಪತ್ನಿ ಮಾತನಾಡಿ, ಮೊದಲು ನಾನು ಯುಪಿ ಪೊಲೀಸರಿಗೆ ನನ್ನ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇನೆ. ನಮಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಂದೆಯಂತಿದ್ದಾರೆ. ನಾನು ನ್ಯಾಯಕ್ಕಾಗಿ ಕಾಯುತ್ತಿದ್ದೆ. ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ. ನಮಗೆ, ಅಂತಿಮವಾಗಿ, ನನ್ನ ಗಂಡನ ಕೊಲೆಗಾರರನ್ನು ಹೊಡೆದು ಹಾಕಲಾಯಿತು ಎಂದರು.

ಓದಿ: ಕಳ್ಳತನ ಶಂಕೆ; ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ವಿದ್ಯುತ್ ಶಾಕ್ ನೀಡಿ, ಥಳಿಸಿ ಕೊಂದರು!

ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ಅತೀಕ್ ಅಹ್ಮದ್ ಮತ್ತು ಆತನ ಕಿರಿಯ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಅನ್ನು ಪ್ರಯಾಗರಾಜ್ ಪೊಲೀಸರು ಗುರುವಾರ ಕೋರ್ಟ್​ಗೆ ಹಾಜರುಪಡಿಸಿ ಮತ್ತೆ ಪೊಲೀಸ್​ ಕಸ್ಟಡಿಗೆ ಪಡೆದಿದ್ದಾರೆ.

ಮಾಫಿಯಾ-ರಾಜಕಾರಣಿ ಅತಿಕ್ ಅಹ್ಮದ್, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಮತ್ತು ದೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸರಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅನ್ನು ಪ್ರಯಾಗರಾಜ್ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗುರುವಾರ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಈ ಇಬ್ಬರ ಪೊಲೀಸ್ ಕಸ್ಟಡಿಯು ಏಪ್ರಿಲ್ 17 ರಂದು ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ.

  • #WATCH | Umesh Pal murder case | Mafia-turned-politician Atiq Ahmed and his brother Ashraf brought to Dhoomanganj Police Station in Pryagraj, Uttar Pradesh. They will be kept here overnight.

    They were sent to four-day police custody by Prayagraj CJM court today. pic.twitter.com/mQi2cT4Yq0

    — ANI (@ANI) April 13, 2023 " class="align-text-top noRightClick twitterSection" data=" ">

ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅನ್ನು ಗುರುವಾರ ಬೆಳಗ್ಗೆ ಪ್ರಯಾಗರಾಜ್‌ನಲ್ಲಿರುವ ಸಿಜೆಎಂ ನ್ಯಾಯಾಲಯಕ್ಕೆ ಕರೆತರಲಾಯಿತು. ಉತ್ತರ ಪ್ರದೇಶ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಅತೀಕ್ ಅಹ್ಮದ್ ದಾಖಲಾದ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಪಾಕಿಸ್ತಾನದ ಐಎಸ್‌ಐ ಮತ್ತು ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದೊಂದಿಗೆ ನೇರ ಸಂಪರ್ಕ ಹೊಂದಿರುವ ಕಾರಣ ತನಗೆ ಶಸ್ತ್ರಾಸ್ತ್ರಗಳ ಕೊರತೆಯಿಲ್ಲ ಎಂದು ಅತಿಕ್ ಹೇಳಿಕೆಯನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಡ್ರೋನ್‌ಗಳ ಸಹಾಯದಿಂದ ಪಂಜಾಬ್ ಗಡಿಯಲ್ಲಿ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ತರಲಾಯಿತು. ಸ್ಥಳೀಯ ಸಂಪರ್ಕಗಳು ಅವುಗಳನ್ನು ಸಂಗ್ರಹಿಸಿ ನಮಗೆ ಒದಗಿಸುತ್ತವೆ. ಅಷ್ಟೇ ಅಲ್ಲ ಪಾಕಿಸ್ತಾನದಿಂದ ಬರುವ ಶಸ್ತ್ರಾಸ್ತ್ರಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಯೋತ್ಪಾದಕರು ಪಡೆಯುತ್ತಾರೆ ಎಂದು ಅವರು ಹೇಳಿದರು.

ಝಾನ್ಸಿಯಲ್ಲಿ ಗುರುವಾರ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ನಡೆಸಿದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಅತೀಕ್ ಅಹ್ಮದ್ ಅವರ ಪುತ್ರ ಅಸದ್ ಮತ್ತು ಅವರ ಸಹಾಯಕ ಗುಲಾಮ್ ಸಾವನ್ನಪ್ಪಿದ್ದಾರೆ. ಮೃತರಿಬ್ಬರೂ ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿಗಳಾಗಿದ್ದು, ತಲಾ 5 ಲಕ್ಷ ರೂಪಾಯಿ ಬಹುಮಾನ ಹೊಂದಿದ್ದರು. ಅಷ್ಟೇ ಅಲ್ಲ ಮೃತ ಆರೋಪಿಗಳಿಂದ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • #WATCH | Police barricading being done outside Dhoomanganj Police Station in Prayagraj, Uttar Pradesh where mafia-turned-politician Atiq Ahmed and his brother Ashraf have been brought.

    They were sent to four-day police custody by Prayagraj CJM court today in Umesh Pal murder… pic.twitter.com/3M2wD3Mtzn

    — ANI (@ANI) April 13, 2023 " class="align-text-top noRightClick twitterSection" data=" ">

ಯುಪಿಗೆ ಮರಳಿ ಕರೆತರುವ ಸಮಯದಲ್ಲಿ ಆರೋಪಿಗಳಾದ ಅತೀಕ್ ಮತ್ತು ಅಶ್ರಫ್ ಅನ್ನು ತಪ್ಪಿಸಿಕೊಳ್ಳುವುದಕ್ಕೆ ಸಹಾಯ ಮಾಡಲು ಪೊಲೀಸ್ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಬಹುದು ಎಂದು ನಮಗೆ ಮಾಹಿತಿ ಇತ್ತು. ಈ ಮಾಹಿತಿಯ ಮೇರೆಗೆ ಸಿವಿಲ್ ಪೊಲೀಸ್ ಮತ್ತು ವಿಶೇಷ ಪಡೆಗಳ ತಂಡಗಳನ್ನು ನಿಯೋಜಿಸಲಾಗಿತ್ತು ಎಂದು ರಾಜ್ಯ ವಿಶೇಷ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ಅಸದ್ ಮತ್ತು ಗುಲಾಂ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ನಂತರ 'ಕಾನೂನು ಮತ್ತು ಸುವ್ಯವಸ್ಥೆ' ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದರು. ಶೂಟೌಟ್‌ನಲ್ಲಿ ಭಾಗಿಯಾಗಿದ್ದ 12 ಸದಸ್ಯರ ಎಸ್‌ಟಿಎಫ್ ತಂಡವನ್ನು ಸಿಎಂ ಯೋಗಿ ಶ್ಲಾಘಿಸಿದ್ದಾರೆ.

ಎನ್​ಕೌಂಟರ್​ನಲ್ಲಿ ಅತಿಕ್​ ಅಹ್ಮದ್​ ಮಗ ಸಾವು: ಗುರುವಾರ ಝಾನ್ಸಿಯಲ್ಲಿ ಯುಪಿ ಎಸ್‌ಟಿಎಫ್‌ನಿಂದ ಪರಾರಿಯಾಗಿದ್ದ ಅಸದ್ ಅಹ್ಮದ್‌ನನ್ನು ಗುಂಡಿಕ್ಕಿ ಹೊಡೆದ ನಂತರ ಮೃತ ವಕೀಲ ಉಮೇಶ್ ಪಾಲ್ ಅವರ ಕುಟುಂಬ ಸದಸ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಹತ್ಯೆಗೀಡಾದ ವಕೀಲ ಉಮೇಶ್ ಪಾಲ್ ಅವರ ತಾಯಿ ಶಾಂತಿ ಪಾಲ್, ವಿಷಯಗಳು ನಮ್ಮ ನಿಯಂತ್ರಣಕ್ಕೆ ಮೀರಿದೆ. ಉತ್ತರ ಪ್ರದೇಶ ಪೊಲೀಸರು ಮತ್ತು ಆಡಳಿತವು ನನ್ನ ಮಗನ ಹಂತಕರನ್ನು ಬಂಧಿಸಲು ಶ್ರಮಿಸುತ್ತಿದೆ. ನಾವು ನ್ಯಾಯಕ್ಕಾಗಿ ಕಾಯುತ್ತಿದ್ದೆವೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇಲೆ ನಂಬಿಕೆ ಇದೆ ಎಂದರು.

ಹತ್ಯೆಗೀಡಾದ ವಕೀಲ ಉಮೇಶ್ ಪಾಲ್ ಅವರ ಪತ್ನಿ ಮಾತನಾಡಿ, ಮೊದಲು ನಾನು ಯುಪಿ ಪೊಲೀಸರಿಗೆ ನನ್ನ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇನೆ. ನಮಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಂದೆಯಂತಿದ್ದಾರೆ. ನಾನು ನ್ಯಾಯಕ್ಕಾಗಿ ಕಾಯುತ್ತಿದ್ದೆ. ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ. ನಮಗೆ, ಅಂತಿಮವಾಗಿ, ನನ್ನ ಗಂಡನ ಕೊಲೆಗಾರರನ್ನು ಹೊಡೆದು ಹಾಕಲಾಯಿತು ಎಂದರು.

ಓದಿ: ಕಳ್ಳತನ ಶಂಕೆ; ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ವಿದ್ಯುತ್ ಶಾಕ್ ನೀಡಿ, ಥಳಿಸಿ ಕೊಂದರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.