ETV Bharat / bharat

ಅಸ್ಸೋಂನಲ್ಲಿ ನಾಳೆಯಿಂದ ಹೊಸ ಸರ್ಕಾರ... ಸಿಎಂ ಆಗಿ ಹಿಮಂತ ಬಿಸ್ವಾ ಶರ್ಮಾ ಪ್ರಮಾಣ

author img

By

Published : May 9, 2021, 8:04 PM IST

ಅಸ್ಸೋಂನಲ್ಲಿ ನಾಳೆಯಿಂದ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಮಧ್ಯಾಹ್ನ 12 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.

Himanta Sarma
Himanta Sarma

ಗುವಾಹಟಿ: ಅಸ್ಸೋಂನಲ್ಲಿ ನೂತನ ಸರ್ಕಾರ ರಚನೆಗೆ ಉಂಟಾಗಿದ್ದ ಬಿಕ್ಕಟ್ಟು ಇದೀಗ ಅಂತ್ಯಗೊಂಡಿದ್ದು, ನೂತನ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮಾ ನಾಳೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ನಾಳೆ ಮಧ್ಯಾಹ್ನ 12 ಗಂಟೆಗೆ ಈ ಸಮಾರಂಭ ನಡೆಯಲಿದ್ದು, ಈ ಮೂಲಕ ರಾಜ್ಯದ 21ನೇ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಇವರ ಜತೆ ಕೆಲ ಶಾಸಕರು ಸಚಿವ ಸಂಪುಟ ಸದಸ್ಯರಾಗಿ ಪ್ರಮಾಣ ಸ್ವೀಕಾರ ಮಾಡುವ ಸಾಧ್ಯತೆ ಇದೆ. 2015ರವರೆಗೂ ಕಾಂಗ್ರೆಸ್​​ನಲ್ಲಿದ್ದ ಹಿಮಂತ ಬಿಸ್ವಾ, ಅಸ್ಸೋಂನಲ್ಲಿ ಕಾಂಗ್ರೆಸ್​ನ ತರುಣ್ ಗೊಗೊಯ್​​ ಸರ್ಕಾರವಿದ್ದಾಗ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ: ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದ ಕೇಂದ್ರ ಸಚಿವರ ಕಾರು.. ಪ್ರಾಣಾಪಾಯದಿಂದ ಪ್ರತಾಪ್​ ಸಾರಂಗಿ ಪಾರು

ಕಾಂಗ್ರೆಸ್​ನಿಂದ ಬಿಜೆಪಿಗೆ ವಲಸೆ ಬಂದಿದ್ದ ಹಿಮಂತ ಬಿಸ್ವಾ ಶರ್ಮಾ ಹಾಗೂ ಸರ್ಬಾನಂದ ಸೋನೋವಾಲ್​ ನಡುವೆ ಸಿಎಂ ಹುದ್ದೆಗೆ ಪೈಪೋಟಿ ನಡೆದಿತ್ತು. ಅದೇ ಕಾರಣಕ್ಕೆ ಇಬ್ಬರೂ ದೆಹಲಿಗೆ ತೆರಳಿದ್ದರು. ಈ ವೇಳೆ ಬಿಜೆಪಿ 52 ವರ್ಷದ ಹಿಮಂತಗೆ ಮಣೆ ಹಾಕಿದೆ. ಜತೆಗೆ ಇಂದು ನಡೆದ ಶಾಸಕಾಂಗ ಸಭೆಯಲ್ಲೂ ಅವರ ಹೆಸರನ್ನ ಅಂತಿಮಗೊಳಿಸಲಾಗಿದೆ.

ಇಂದು ಬೆಳಗ್ಗೆ ರಾಜೀನಾಮೆ ನೀಡಿದ್ದ ಸರ್ಬಾನಂದ

ಅಸ್ಸೋಂ ನೂತನ ಸಿಎಂ ಆಗಿ ಹಿಮಂತ ಆಯ್ಕೆಯಾಗುತ್ತಿದ್ದಂತೆ ಸರ್ಬಾನಂದ ಸೋನೋವಾಲ್​ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದನ್ನ ಗವರ್ನರ್​ ಜಗದೀಶ್ ಮುಖಿ ಅಂಗೀಕಾರ ಮಾಡಿದ್ದಾರೆ.

2016ರಲ್ಲಿ ಸರ್ಬಾನಂದ್ ಸೋನೋವಾಲ್​ ಅವರನ್ನ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಆದರೆ ಇದೀಗ ಮತ್ತೋರ್ವ ಮುಖಂಡನಿಗೆ ಕೇಂದ್ರ ಬಿಜೆಪಿ ಮಣೆ ಹಾಕಿದೆ. ಅಸ್ಸೋಂನ 126 ಕ್ಷೇತ್ರಗಳ ಚುನಾವಣೆಯಲ್ಲಿ ಎನ್​ಡಿಎ 75 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಗುವಾಹಟಿ: ಅಸ್ಸೋಂನಲ್ಲಿ ನೂತನ ಸರ್ಕಾರ ರಚನೆಗೆ ಉಂಟಾಗಿದ್ದ ಬಿಕ್ಕಟ್ಟು ಇದೀಗ ಅಂತ್ಯಗೊಂಡಿದ್ದು, ನೂತನ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮಾ ನಾಳೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ನಾಳೆ ಮಧ್ಯಾಹ್ನ 12 ಗಂಟೆಗೆ ಈ ಸಮಾರಂಭ ನಡೆಯಲಿದ್ದು, ಈ ಮೂಲಕ ರಾಜ್ಯದ 21ನೇ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಇವರ ಜತೆ ಕೆಲ ಶಾಸಕರು ಸಚಿವ ಸಂಪುಟ ಸದಸ್ಯರಾಗಿ ಪ್ರಮಾಣ ಸ್ವೀಕಾರ ಮಾಡುವ ಸಾಧ್ಯತೆ ಇದೆ. 2015ರವರೆಗೂ ಕಾಂಗ್ರೆಸ್​​ನಲ್ಲಿದ್ದ ಹಿಮಂತ ಬಿಸ್ವಾ, ಅಸ್ಸೋಂನಲ್ಲಿ ಕಾಂಗ್ರೆಸ್​ನ ತರುಣ್ ಗೊಗೊಯ್​​ ಸರ್ಕಾರವಿದ್ದಾಗ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ: ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದ ಕೇಂದ್ರ ಸಚಿವರ ಕಾರು.. ಪ್ರಾಣಾಪಾಯದಿಂದ ಪ್ರತಾಪ್​ ಸಾರಂಗಿ ಪಾರು

ಕಾಂಗ್ರೆಸ್​ನಿಂದ ಬಿಜೆಪಿಗೆ ವಲಸೆ ಬಂದಿದ್ದ ಹಿಮಂತ ಬಿಸ್ವಾ ಶರ್ಮಾ ಹಾಗೂ ಸರ್ಬಾನಂದ ಸೋನೋವಾಲ್​ ನಡುವೆ ಸಿಎಂ ಹುದ್ದೆಗೆ ಪೈಪೋಟಿ ನಡೆದಿತ್ತು. ಅದೇ ಕಾರಣಕ್ಕೆ ಇಬ್ಬರೂ ದೆಹಲಿಗೆ ತೆರಳಿದ್ದರು. ಈ ವೇಳೆ ಬಿಜೆಪಿ 52 ವರ್ಷದ ಹಿಮಂತಗೆ ಮಣೆ ಹಾಕಿದೆ. ಜತೆಗೆ ಇಂದು ನಡೆದ ಶಾಸಕಾಂಗ ಸಭೆಯಲ್ಲೂ ಅವರ ಹೆಸರನ್ನ ಅಂತಿಮಗೊಳಿಸಲಾಗಿದೆ.

ಇಂದು ಬೆಳಗ್ಗೆ ರಾಜೀನಾಮೆ ನೀಡಿದ್ದ ಸರ್ಬಾನಂದ

ಅಸ್ಸೋಂ ನೂತನ ಸಿಎಂ ಆಗಿ ಹಿಮಂತ ಆಯ್ಕೆಯಾಗುತ್ತಿದ್ದಂತೆ ಸರ್ಬಾನಂದ ಸೋನೋವಾಲ್​ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದನ್ನ ಗವರ್ನರ್​ ಜಗದೀಶ್ ಮುಖಿ ಅಂಗೀಕಾರ ಮಾಡಿದ್ದಾರೆ.

2016ರಲ್ಲಿ ಸರ್ಬಾನಂದ್ ಸೋನೋವಾಲ್​ ಅವರನ್ನ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಆದರೆ ಇದೀಗ ಮತ್ತೋರ್ವ ಮುಖಂಡನಿಗೆ ಕೇಂದ್ರ ಬಿಜೆಪಿ ಮಣೆ ಹಾಕಿದೆ. ಅಸ್ಸೋಂನ 126 ಕ್ಷೇತ್ರಗಳ ಚುನಾವಣೆಯಲ್ಲಿ ಎನ್​ಡಿಎ 75 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.