ತಿರುವನಂತಪುರಂ (ಕೇರಳ) : ಇತ್ತೀಚೆಗೆ ತಿರುವನಂತಪುರಂ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಆಯ್ಕೆಯಾಗಿದ್ದ 21 ವರ್ಷದ ಆರ್ಯ ರಾಜೇಂದ್ರನ್ ಇಂದು ಪ್ರಮಾಣ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು.
ತಿರುವನಂತಪುರಂ ಜಿಲ್ಲಾಧಿಕಾರಿ ನವಜ್ಯೋತಿ ಖೋಸಾ ಪ್ರಮಾಣವಚನ ಬೋಧಿಸಿದರು. ಈ ಮೂಲಕ ಭಾರತದ ಅತಿ ಕಿರಿಯ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆಗೆ ಅಧಿಕೃತವಾಗಿ ಆರ್ಯ ಪಾತ್ರರಾದರು.
ಓದಿ : ಕೇರಳದ ಕಿರಿಯ ಮೇಯರ್ಗೆ ಕರೆ ಮಾಡಿ ಶುಭ ಕೋರಿದ ನಟ ಮೋಹನ್ ಲಾಲ್
ಇತ್ತೀಚೆಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದ 100 ಮಂದಿ ಕೌನ್ಸಿಲರ್ಗಳ ಪೈಕಿ 54 ಮಂದಿ ಆರ್ಯ ರಾಜೇಂದ್ರನ್ ಅವರನ್ನು ಬೆಂಬಲಿಸಿದ್ದರು. ಈ ಮೂಲಕ ಸಣ್ಣ ವಯಸ್ಸಿನಲ್ಲೇ ಆರ್ಯ ಮೇಯರ್ ಎಂಬ ದೊಡ್ಡ ಸ್ಥಾನಕ್ಕೆ ಆಯ್ಕೆಯಾಗಿ, ಜಗತ್ತಿನ ಗಮನ ಸೆಳೆದಿದ್ದರು. ಈ ಹಿಂದೆ, ಆರ್ಯ ರಾಜೇಂದ್ರನ್, ಕೇರಳದ ಅತಿ ದೊಡ್ಡ ಮಕ್ಕಳ ಸಂಘಟನೆಗಳಲ್ಲಿ ಒಂದಾದ ಬಾಲಸಂಗಂನ ರಾಜ್ಯಾಧ್ಯಕ್ಷೆ ಮತ್ತು ಎಸ್ಎಫ್ಐ ರಾಜ್ಯ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.