ETV Bharat / bharat

Maharashtra political crisis.. ಶಿವಸೇನೆಗೆ ಮತ್ತೊಂದು ಶಾಕ್​, ಶಿಂದೆ ಗುಂಪು ಸೇರಿದ ಶಿಕ್ಷಣ ಸಚಿವ

author img

By

Published : Jun 26, 2022, 4:07 PM IST

ಏಕನಾಥ್ ಶಿಂದೆ ಬಣ ಗುವಾಹಟಿಯಲ್ಲೇ ಇದ್ದುಕೊಂಡು ಶಿವಸೇನೆಗೆ ಶಾಕ್​ ಮೇಲೆ ಶಾಕ್​ ಕೊಡುತ್ತಲೇ ಇದೆ. ಇದೀಗ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್​ ಸಮಂತ್​ ಕೂಡ ಬಂಡಾಯದ ಗುಂಪು ಸೇರಿದ್ದಾರೆ.

another-one-shivasena-minister-uday-samant-joins-eknath-shinde-group
'ಮಹಾ' ಹೈಡ್ರಾಮ: ಶಿವಸೇನೆಗೆ ಮತ್ತೊಂದು ಶಾಕ್​, ಶಿಂದೆ ಬಂಡಾಯದ ಗುಂಪಿಗೆ ಸೇರಿದ ಶಿಕ್ಷಣ ಸಚಿವ

ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮ ಮುಂದುವರೆದಿದೆ. ಮತ್ತೊಬ್ಬ ಸಚಿವ ಬಂಡಾಯ ನಾಯಕ ಏಕನಾಥ ಶಿಂದೆ ಬಣದ ತೆಕ್ಕೆಗೆ ಬಂದಿದ್ದಾರೆ. ಈ ಮೂಲಕ ಎಂಟನೇ ಸಚಿವ ಬಂಡಾಯದ ಬಾವುಟ ಹಾರಿಸಿದ್ದಾರೆ.

ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನೇತೃತ್ವದ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾವಿಕಾಸ್​ ಆಘಾಡಿ ಸರ್ಕಾರದ ವಿರುದ್ಧ ಶಿವಸೇನೆಯ ಪ್ರಬಲ ಬಂಡಾಯ ಏಕನಾಥ ಶಿಂದೆ ಬಂಡಾಯ ಸಾರಿದ್ದಾರೆ. ಶಿವಸೇನೆ ಮತ್ತು ಇತರ ಸಣ್ಣ ಪಕ್ಷಗಳು, ಪಕ್ಷೇಕರರು ಸೇರಿ ಸುಮಾರು 40 ಶಾಸಕರನ್ನು ಕಟ್ಟಿಕೊಂಡು ಬಿಜೆಪಿ ಆಡಳಿತದ ಅಸ್ಸೋಂನ ಗುವಾಹಟಿಯಲ್ಲಿ ಶಿಂದೆ ಬೀಡು ಬಿಟ್ಟಿದ್ದಾರೆ.

'ಮಹಾ' ಹೈಡ್ರಾಮ: ಶಿವಸೇನೆಗೆ ಮತ್ತೊಂದು ಶಾಕ್​, ಶಿಂದೆ ಬಂಡಾಯದ ಗುಂಪಿಗೆ ಸೇರಿದ ಶಿಕ್ಷಣ ಸಚಿವ
'ಮಹಾ' ಹೈಡ್ರಾಮ: ಶಿವಸೇನೆಗೆ ಮತ್ತೊಂದು ಶಾಕ್​, ಶಿಂದೆ ಬಂಡಾಯದ ಗುಂಪಿಗೆ ಸೇರಿದ ಶಿಕ್ಷಣ ಸಚಿವ

ಶಿವಸೇನೆಗೆ ಮತ್ತೊಂದು ಶಾಕ್​: ಈ ನಡುವೆ ಶಿಂದೆ ಗುವಾಹಟಿಯಲ್ಲೇ ಇದ್ದುಕೊಂಡು ಶಿವಸೇನೆಗೆ ಶಾಕ್​ ಮೇಲೆ ಶಾಕ್​ ಕೊಡುತ್ತಲೇ ಇದೆ. ಒಬ್ಬೊಬ್ಬರು ಬಂಡಾಯದ ಗುಂಪು ಸೇರಿಕೊಳ್ಳುತ್ತಲೇ ಇದ್ದಾರೆ. ಇದೀಗ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್​ ಸಮಂತ್​ ಶಿವಸೇನೆಗೆ ಶಾಕ್​ ನೀಡಿದ್ದಾರೆ.

ಸಚಿವ ಸಮಂತ್​ ಗುವಾಹಟಿಯಲ್ಲಿರುವ ಶಿಂದೆ ನೇತೃತ್ವದ ಬಂಡಾಯದ ಬಣಕ್ಕೆ ಹೋಗಿ ಸೇರಿಕೊಂಡಿದ್ದಾರೆ. ಗುಜರಾತ್​ನ ಸೂರತ್​ ಮೂಲಕ ವಿಮಾನದಲ್ಲಿ ಗುವಾಹಟಿಗೆ ಸಮಂತ್​ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಒಟ್ಟಾರೆ ಎಂಟು ಜನ ಸಚಿವರು ಬಂಡಾಯದ ಗುಂಪಿಗೆ ಸೇರಿದಂತೆ ಆಗಿದೆ.

ಇದನ್ನೂ ಓದಿ: ಪಾಲಿ'ಟ್ರಿಕ್ಸ್'! ಬಂಡಾಯ ಶಾಸಕರ ಪತ್ನಿಯರ ಸಂಪರ್ಕದಲ್ಲಿ ಉದ್ಧವ್‌ ಠಾಕ್ರೆ ಪತ್ನಿ

ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮ ಮುಂದುವರೆದಿದೆ. ಮತ್ತೊಬ್ಬ ಸಚಿವ ಬಂಡಾಯ ನಾಯಕ ಏಕನಾಥ ಶಿಂದೆ ಬಣದ ತೆಕ್ಕೆಗೆ ಬಂದಿದ್ದಾರೆ. ಈ ಮೂಲಕ ಎಂಟನೇ ಸಚಿವ ಬಂಡಾಯದ ಬಾವುಟ ಹಾರಿಸಿದ್ದಾರೆ.

ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನೇತೃತ್ವದ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾವಿಕಾಸ್​ ಆಘಾಡಿ ಸರ್ಕಾರದ ವಿರುದ್ಧ ಶಿವಸೇನೆಯ ಪ್ರಬಲ ಬಂಡಾಯ ಏಕನಾಥ ಶಿಂದೆ ಬಂಡಾಯ ಸಾರಿದ್ದಾರೆ. ಶಿವಸೇನೆ ಮತ್ತು ಇತರ ಸಣ್ಣ ಪಕ್ಷಗಳು, ಪಕ್ಷೇಕರರು ಸೇರಿ ಸುಮಾರು 40 ಶಾಸಕರನ್ನು ಕಟ್ಟಿಕೊಂಡು ಬಿಜೆಪಿ ಆಡಳಿತದ ಅಸ್ಸೋಂನ ಗುವಾಹಟಿಯಲ್ಲಿ ಶಿಂದೆ ಬೀಡು ಬಿಟ್ಟಿದ್ದಾರೆ.

'ಮಹಾ' ಹೈಡ್ರಾಮ: ಶಿವಸೇನೆಗೆ ಮತ್ತೊಂದು ಶಾಕ್​, ಶಿಂದೆ ಬಂಡಾಯದ ಗುಂಪಿಗೆ ಸೇರಿದ ಶಿಕ್ಷಣ ಸಚಿವ
'ಮಹಾ' ಹೈಡ್ರಾಮ: ಶಿವಸೇನೆಗೆ ಮತ್ತೊಂದು ಶಾಕ್​, ಶಿಂದೆ ಬಂಡಾಯದ ಗುಂಪಿಗೆ ಸೇರಿದ ಶಿಕ್ಷಣ ಸಚಿವ

ಶಿವಸೇನೆಗೆ ಮತ್ತೊಂದು ಶಾಕ್​: ಈ ನಡುವೆ ಶಿಂದೆ ಗುವಾಹಟಿಯಲ್ಲೇ ಇದ್ದುಕೊಂಡು ಶಿವಸೇನೆಗೆ ಶಾಕ್​ ಮೇಲೆ ಶಾಕ್​ ಕೊಡುತ್ತಲೇ ಇದೆ. ಒಬ್ಬೊಬ್ಬರು ಬಂಡಾಯದ ಗುಂಪು ಸೇರಿಕೊಳ್ಳುತ್ತಲೇ ಇದ್ದಾರೆ. ಇದೀಗ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್​ ಸಮಂತ್​ ಶಿವಸೇನೆಗೆ ಶಾಕ್​ ನೀಡಿದ್ದಾರೆ.

ಸಚಿವ ಸಮಂತ್​ ಗುವಾಹಟಿಯಲ್ಲಿರುವ ಶಿಂದೆ ನೇತೃತ್ವದ ಬಂಡಾಯದ ಬಣಕ್ಕೆ ಹೋಗಿ ಸೇರಿಕೊಂಡಿದ್ದಾರೆ. ಗುಜರಾತ್​ನ ಸೂರತ್​ ಮೂಲಕ ವಿಮಾನದಲ್ಲಿ ಗುವಾಹಟಿಗೆ ಸಮಂತ್​ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಒಟ್ಟಾರೆ ಎಂಟು ಜನ ಸಚಿವರು ಬಂಡಾಯದ ಗುಂಪಿಗೆ ಸೇರಿದಂತೆ ಆಗಿದೆ.

ಇದನ್ನೂ ಓದಿ: ಪಾಲಿ'ಟ್ರಿಕ್ಸ್'! ಬಂಡಾಯ ಶಾಸಕರ ಪತ್ನಿಯರ ಸಂಪರ್ಕದಲ್ಲಿ ಉದ್ಧವ್‌ ಠಾಕ್ರೆ ಪತ್ನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.