ETV Bharat / bharat

ಒಬ್ಬರಲ್ಲ,ಇಬ್ಬರಲ್ಲ, ಬರೋಬ್ಬರಿ ಸಾವಿರ ಮಹಿಳೆಯರಿಗೆ ಮೋಸ..'ಕಿಂಗ್​ ಆಫ್​ ಚೀಟಿಂಗ್'​ ಬಲೆಗೆ ಬಿದ್ದಿದ್ದು ಹೇಗೆ!?

author img

By

Published : May 11, 2022, 11:00 PM IST

ಸಾವಿರಾರು ಮಹಿಳೆಯರಿಗೆ ವಂಚನೆ ಮಾಡಿರುವ ವ್ಯಕ್ತಿಯೋರ್ವನ ಬಂಧನ ಮಾಡುವಲ್ಲಿ ತೆಲಂಗಾಣ ಪೊಲೀಸರು ಯಶಸ್ವಿಯಾಗಿದ್ದಾರೆ.

student Cheated womens
student Cheated womens

ಹೈದರಾಬಾದ್​: ಸಾವಿರಾರು ಮಹಿಳೆಯರಿಗೆ ಮೋಸ ಮಾಡಿ, ಕಳೆದ 10 ವರ್ಷಗಳಲ್ಲಿ 10 ಕೋಟಿ ರೂಪಾಯಿ ವಂಚನೆ ಮಾಡಿರುವ ವ್ಯಕ್ತಿಯೋರ್ವನ ಬಂಧನ ಮಾಡುಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇದಕ್ಕಾಗಿ ಸೈಬರಾಬಾದ್​​ ಪೊಲೀಸ್​ ಎರಡು ತಿಂಗಳ ಕಾರ್ಯಾಚರಣೆ ನಡೆಸಿದೆ.

ತೆಲಂಗಾಣದ ರಾಜಧಾನಿ ಹೈದರಾಬಾದ್​ನಲ್ಲಿ ಈ ಘಟನೆ ನಡೆದಿದ್ದು, ಯುವತಿಯರು, ವಿಧವೆಯರು ಸೇರಿದಂತೆ ಸಾವಿರಾರು ಮಹಿಳೆಯರಿಗೆ ವ್ಯಕ್ತಿ ವಂಚನೆ ಮಾಡಿದ್ದಾನೆ.

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಮಚಂದ್ರರಾವ್​​ ಪೇಟಾ ಮೂಲದ ವಂಶಿಕೃಷ್ಣ 2014ರಲ್ಲಿ ಬಿಟೆಕ್​ ಮುಗಿಸಿ ಹೈದರಾಬಾದ್​ಗೆ ಬಂದಿದ್ದನು. ಇಲ್ಲಿ ಕೆಲಸ ಪಡೆದುಕೊಂಡ ಬಳಿಕ ಕುದರೆ ರೇಸಿಂಗ್, ಕ್ರಿಕೆಟ್​ ಬೆಟ್ಟಿಂಗ್​​​ನಲ್ಲಿ ಭಾಗಿಯಾಗಿ ಹಣ ಸೋತು, ಸಾಲ ಮಾಡಿಕೊಂಡಿದ್ದಾನೆ.

ಇದರಿಂದ ಹೊರ ಬರಲು ವಂಚನೆ ಮಾಡಲು ಕೆಲಸದಲ್ಲಿ ಭಾಗಿಯಾಗಿದ್ದು, ಯುವತಿಯರು, ವಿಧವೆಯರಿಗೆ ವಂಚನೆ ಮಾಡಿ, 10 ಕೋಟಿ ರೂಪಾಯಿ ಲೂಟಿ ಮಾಡಿದ್ದಾನೆ. ಕುಕಟ್​ಪಲ್ಲಿ ವೈಬ್ಸ್ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುದುರೆ ರೇಸಿಂಗ್​, ಕ್ರಿಕೆಟ್​ ಬೆಟ್ಟಿಂಗ್​​ನಲ್ಲಿ ಭಾಗಿಯಾಗಿದ್ದಾನೆ. ಇದಕ್ಕೂ ಮೊದಲು ಟ್ರಾವೆಲ್​ ಕನ್ಸಲ್ಟೆನ್ಸಿ ಕಚೇರಿಯಲ್ಲಿ ಉದ್ಯೋಗಿಯಾಗಿ ಸೇರಿಕೊಂಡಿದ್ದು, ಕೆಲಸ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ, ಹಣ ಪಡೆದುಕೊಂಡಿದ್ದಾನೆ. ಈ ವೇಳೆ ಬಂಧನಕ್ಕೊಳಗಾಗಿದ್ದ ಆತ, ಜಾಮೀನು ಮೇಲೆ ಹೊರಬಂದಿದ್ದನು.

ಜೈಲಿನಿಂದ ಹೊರಬಂದ ಬಳಿಕ ಗಾಯತ್ರಿ, ಮಾಧುರಿ, ಸ್ವಾತಿಕಾ, ಶ್ವೇತಾ ಮುಂತಾದ ಯುವತಿಯರ ಹೆಸರಿನಲ್ಲಿ ಇನ್​​​​ಸ್ಟಾಗ್ರಾಂ ಖಾತೆ ತೆರೆದು, ಉದ್ಯೋಗದ ನೆಪದಲ್ಲಿ ಮಹಿಳೆಯರಿಗೆ ವಂಚಿಸಲು ಶುರು ಮಾಡಿದ್ದಾನೆ. ಇದರ ಜೊತೆಗೆ ಶಾಸಕ ಶ್ರೀನಿವಾಸ್ ಅಶೋಕ್​ ಅವರ ಫೋಟೋಗಳೊಂದಿಗೆ ನಕಲಿ ಇನ್​​ಸ್ಟಾಗ್ರಾಂ ಖಾತೆ ತೆರೆದಿದ್ದಾನೆ. ಇದರ ಮಧ್ಯೆ ಅನೇಕ ಯುವತಿಯರ ವಿಶ್ವಾಸಗಳಿಸಿ, ಅವರ ಅಕೌಂಟ್​​ನಿಂದ ಲಕ್ಷ ಲಕ್ಷ ಹಣ ವರ್ಗಾವಣೆ ಮಾಡಿಕೊಂಡು ಕುದುರೆ ಬೆಟ್ಟಿಂಗ್​​ಗೋಸ್ಕರ ಬಳಕೆ ಮಾಡಿಕೊಂಡಿದ್ದಾನೆ.

ಆನ್​ಲೈನ್​ ಮದುವೆ ಸೈಟ್​​ಗಳ ಮೂಲಕ ವಿಧವೆಯರು, ವಿಚ್ಛೇದಿತ ಮಹಿಳೆಯರಿಂದ ದೊಡ್ಡ ದೊಡ್ಡ ಮೊತ್ತದ ಹಣ ವಸೂಲಿ ಮಾಡಿದ್ದಾನೆ. 2016ರಿಂದ ಇಲ್ಲಿಯವರೆಗೆ ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಪಂಗನಾಮ ಹಾಕಿದ್ದಾನೆ. ಮೋಸಕ್ಕೊಳಗಾದ ಕೇವಲ 50-60 ಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಮತ್ತೆ 30 ಮಹಿಳೆಯರನ್ನ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೈದರಾಬಾದ್​: ಸಾವಿರಾರು ಮಹಿಳೆಯರಿಗೆ ಮೋಸ ಮಾಡಿ, ಕಳೆದ 10 ವರ್ಷಗಳಲ್ಲಿ 10 ಕೋಟಿ ರೂಪಾಯಿ ವಂಚನೆ ಮಾಡಿರುವ ವ್ಯಕ್ತಿಯೋರ್ವನ ಬಂಧನ ಮಾಡುಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇದಕ್ಕಾಗಿ ಸೈಬರಾಬಾದ್​​ ಪೊಲೀಸ್​ ಎರಡು ತಿಂಗಳ ಕಾರ್ಯಾಚರಣೆ ನಡೆಸಿದೆ.

ತೆಲಂಗಾಣದ ರಾಜಧಾನಿ ಹೈದರಾಬಾದ್​ನಲ್ಲಿ ಈ ಘಟನೆ ನಡೆದಿದ್ದು, ಯುವತಿಯರು, ವಿಧವೆಯರು ಸೇರಿದಂತೆ ಸಾವಿರಾರು ಮಹಿಳೆಯರಿಗೆ ವ್ಯಕ್ತಿ ವಂಚನೆ ಮಾಡಿದ್ದಾನೆ.

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಮಚಂದ್ರರಾವ್​​ ಪೇಟಾ ಮೂಲದ ವಂಶಿಕೃಷ್ಣ 2014ರಲ್ಲಿ ಬಿಟೆಕ್​ ಮುಗಿಸಿ ಹೈದರಾಬಾದ್​ಗೆ ಬಂದಿದ್ದನು. ಇಲ್ಲಿ ಕೆಲಸ ಪಡೆದುಕೊಂಡ ಬಳಿಕ ಕುದರೆ ರೇಸಿಂಗ್, ಕ್ರಿಕೆಟ್​ ಬೆಟ್ಟಿಂಗ್​​​ನಲ್ಲಿ ಭಾಗಿಯಾಗಿ ಹಣ ಸೋತು, ಸಾಲ ಮಾಡಿಕೊಂಡಿದ್ದಾನೆ.

ಇದರಿಂದ ಹೊರ ಬರಲು ವಂಚನೆ ಮಾಡಲು ಕೆಲಸದಲ್ಲಿ ಭಾಗಿಯಾಗಿದ್ದು, ಯುವತಿಯರು, ವಿಧವೆಯರಿಗೆ ವಂಚನೆ ಮಾಡಿ, 10 ಕೋಟಿ ರೂಪಾಯಿ ಲೂಟಿ ಮಾಡಿದ್ದಾನೆ. ಕುಕಟ್​ಪಲ್ಲಿ ವೈಬ್ಸ್ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುದುರೆ ರೇಸಿಂಗ್​, ಕ್ರಿಕೆಟ್​ ಬೆಟ್ಟಿಂಗ್​​ನಲ್ಲಿ ಭಾಗಿಯಾಗಿದ್ದಾನೆ. ಇದಕ್ಕೂ ಮೊದಲು ಟ್ರಾವೆಲ್​ ಕನ್ಸಲ್ಟೆನ್ಸಿ ಕಚೇರಿಯಲ್ಲಿ ಉದ್ಯೋಗಿಯಾಗಿ ಸೇರಿಕೊಂಡಿದ್ದು, ಕೆಲಸ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ, ಹಣ ಪಡೆದುಕೊಂಡಿದ್ದಾನೆ. ಈ ವೇಳೆ ಬಂಧನಕ್ಕೊಳಗಾಗಿದ್ದ ಆತ, ಜಾಮೀನು ಮೇಲೆ ಹೊರಬಂದಿದ್ದನು.

ಜೈಲಿನಿಂದ ಹೊರಬಂದ ಬಳಿಕ ಗಾಯತ್ರಿ, ಮಾಧುರಿ, ಸ್ವಾತಿಕಾ, ಶ್ವೇತಾ ಮುಂತಾದ ಯುವತಿಯರ ಹೆಸರಿನಲ್ಲಿ ಇನ್​​​​ಸ್ಟಾಗ್ರಾಂ ಖಾತೆ ತೆರೆದು, ಉದ್ಯೋಗದ ನೆಪದಲ್ಲಿ ಮಹಿಳೆಯರಿಗೆ ವಂಚಿಸಲು ಶುರು ಮಾಡಿದ್ದಾನೆ. ಇದರ ಜೊತೆಗೆ ಶಾಸಕ ಶ್ರೀನಿವಾಸ್ ಅಶೋಕ್​ ಅವರ ಫೋಟೋಗಳೊಂದಿಗೆ ನಕಲಿ ಇನ್​​ಸ್ಟಾಗ್ರಾಂ ಖಾತೆ ತೆರೆದಿದ್ದಾನೆ. ಇದರ ಮಧ್ಯೆ ಅನೇಕ ಯುವತಿಯರ ವಿಶ್ವಾಸಗಳಿಸಿ, ಅವರ ಅಕೌಂಟ್​​ನಿಂದ ಲಕ್ಷ ಲಕ್ಷ ಹಣ ವರ್ಗಾವಣೆ ಮಾಡಿಕೊಂಡು ಕುದುರೆ ಬೆಟ್ಟಿಂಗ್​​ಗೋಸ್ಕರ ಬಳಕೆ ಮಾಡಿಕೊಂಡಿದ್ದಾನೆ.

ಆನ್​ಲೈನ್​ ಮದುವೆ ಸೈಟ್​​ಗಳ ಮೂಲಕ ವಿಧವೆಯರು, ವಿಚ್ಛೇದಿತ ಮಹಿಳೆಯರಿಂದ ದೊಡ್ಡ ದೊಡ್ಡ ಮೊತ್ತದ ಹಣ ವಸೂಲಿ ಮಾಡಿದ್ದಾನೆ. 2016ರಿಂದ ಇಲ್ಲಿಯವರೆಗೆ ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಪಂಗನಾಮ ಹಾಕಿದ್ದಾನೆ. ಮೋಸಕ್ಕೊಳಗಾದ ಕೇವಲ 50-60 ಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಮತ್ತೆ 30 ಮಹಿಳೆಯರನ್ನ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.