ETV Bharat / bharat

ಪಂಜಾಬ್​ನ ಪ್ರಾಚೀನ ದೇವಾಲಯದ ಗೋಡೆ ಮೇಲೆ 'ಖಲಿಸ್ತಾನ್​ ಜಿಂದಾಬಾದ್​' ಬರಹ

author img

By

Published : May 18, 2023, 7:49 PM IST

ಗೋಡೆ ಮೇಲಿನ ಬರಹದ ಹೊಣೆ ಹೊತ್ತಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್.

Ancient temple wall defaced with Khalistan Zindabad slogans in Punjab
ಪಂಜಾಬ್​ನ ಪ್ರಾಚೀನ ದೇವಾಲಯದ ಗೋಡೆ ಮೇಲೆ 'ಖಲಿಸ್ತಾನ್​ ಜಿಂದಾಬಾದ್​' ಬರಹ

ಬಟಿಂಡಾ (ಪಂಜಾಬ್): ಬಟಿಂಡಾದ ಮೌರ್ ಮಂಡಿ ಪಟ್ಟಣದ ಬಳಿಯ, ಆಪ್ ಶಾಸಕ ಸುಖಬೀರ್ ಸಿಂಗ್ ಮೈಸರ್ಖಾನ ಅವರ ಹುಟ್ಟೂರಾದ ಮೈಸರಖಾನಾ ಗ್ರಾಮದ ಪುರಾತನ ದೇವಾಲಯದ ಗೋಡೆಗಳ ಮೇಲೆ ಕರ್ನಾಟಕ ಪ್ರತ್ಯೇಕತಾವಾದಿ ಘೋಷಣೆಗಳನ್ನು ಬರೆದು ವಿರೂಪಗೊಳಿಸಿರುವ ಘಟನೆ ನಡೆದಿದೆ. ಖಲಿಸ್ತಾನಿ ಪ್ರತ್ಯೇಕತಾವಾದಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್, ಗೋಡೆಗಳನ್ನು ವಿರೂಪಗೊಳಿಸಿರುವ ವಿಡಿಯೋ ಚಿತ್ರೀಕರಣ ಮತ್ತು ಬಿಡುಗಡೆ ಮಾಡಿರುವ ಹೊಣೆ ಹೊತ್ತಿದೆ.

ಕಳೆದ ವರ್ಷ ಪಂಜಾಬ್ ಪೊಲೀಸರು ಸಂಗೂರಿನ ಕಾಳಿ ದೇವಿ ದೇವಸ್ಥಾನದ ಗೋಡೆಯ ಮೇಲೆ ಇದೇ ರೀತಿ ಖಲಿಸ್ತಾನ್ ಘೋಷಣೆಗಳನ್ನು ಬರೆದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿತ್ತು. ಆ ಘಟನೆ ಜೂನ್​ನಲ್ಲಿ ಸಂಗ್ರೂರ್‌ನಲ್ಲಿ ನಡೆಯಲಿದ್ದ ಸಂಸತ್ತಿನ ಉಪಚುನಾವಣೆಗೆ ಮುನ್ನ, ಅಂದರೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಸಂಸತ್ ಕ್ಷೇತ್ರಕ್ಕೆ ಭೇಟಿ ನೀಡುವ ಒಂದು ದಿನದ ಮೊದಲು ಜರುಗಿತ್ತು.

ಮಾರ್ಚ್‌ನಲ್ಲಿ ಬ್ರಿಸ್ಬೇನ್‌ನ ಪ್ರಮುಖ ಹಿಂದೂ ದೇವಾಲಯದ ಮೇಲೆ ಖಾಲಿಸ್ತಾನ್ ಪರ ಬೆಂಬಲಿಗರು ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಮೇಲೆ ದಾಳಿ ನಡೆಸಿದ್ದರು. ಕಳೆದ ಎರಡು ತಿಂಗಳಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆದ ದಾಳಿಯ ನಾಲ್ಕನೇ ಘಟನೆ ಇದಾಗಿತ್ತು. ಜನವರಿ 23 ರಂದು, ಮೆಲ್ಬೋರ್ನ್‌ನ ಆಲ್ಬರ್ಟ್ ಪಾರ್ಕ್‌ನಲ್ಲಿರುವ ಇಸ್ಕಾನ್ ದೇವಾಲಯದ ಗೋಡೆಗಳ ಮೇಲೆ ಹಿಂದೂಸ್ತಾನ್ ಮುರ್ದಾಬಾದ್‌ ಎಂದು ಗೀಚಿ ವಿರೂಪಗೊಳಿದ್ದರು. ಜನವರಿ 16 ರಂದು, ವಿಕ್ಟೋರಿಯಾದ ಕ್ಯಾರಮ್ ಡೌನ್ಸ್‌ನಲ್ಲಿರುವ ಶ್ರೀ ಶಿವ ವಿಷ್ಣು ದೇವಾಲಯದ ಮೇಲೂ ದಾಳಿ ನಡೆಸಲಾಗಿತ್ತು. ಜನವರಿ 12 ರಂದು, ಮೆಲ್ಬೋರ್ನ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನವನ್ನು ಭಾರತ ವಿರೋಧಿ ಬರಹದಿಂದ ವಿರೂಪಗೊಳಿಸಲಾಗಿತ್ತು.

ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳ ಮೇಲಿನ ಧ್ವಂಸವನ್ನು ಭಾರತ ಪದೇ ಪದೇ ಖಂಡಿಸುತ್ತ ಬಂದಿದ್ದು, ಮಾತ್ರವಲ್ಲದೆ ಆಸ್ಟ್ರೇಲಿಯಾ ಸರ್ಕಾರಕ್ಕೆ ಈ ವಿಷಯದ ಕುರಿತು ಪ್ರಸ್ತಾಪ ಕೂಡ ಮಾಡಿತ್ತು. ಕಳೆದ ತಿಂಗಳು ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಆಸ್ಟ್ರೇಲಿಯಾದ ಸಹವರ್ತಿ ಪೆನ್ನಿ ವಾಂಗ್ ಅವರನ್ನು ಭೇಟಿ ಮಾಡಿ, ಖಲಿಸ್ತಾನಿ ಬೆಂಬಲಿಗರು ದೇಶದಲ್ಲಿ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತೀಯ ಸಮುದಾಯವನ್ನು ಗುರಿಯಾಗಿಸಿಕೊಂಡು "ಅಮೂಲಾಗ್ರ ಚಟುವಟಿಕೆಗಳ" ವಿರುದ್ಧ ಜಾಗರೂಕತೆಯ ಅಗತ್ಯವನ್ನು ಒತ್ತಿ ಹೇಳಿದ್ದರು.

ಬಂಧನದಲ್ಲಿರುವ ಖಲಿಸ್ತಾನ್​ ಪ್ರತ್ಯೇಕತಾವಾದಿ ಅಮೃತ್ ಪಾಲ್​ ಸಿಂಗ್​.. ಹಲವು ದಿನಗಳಿಂದ ನಾಪತ್ತೆಯಾಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಖಲಿಸ್ತಾನ್​ ಪ್ರತ್ಯೇಕತಾವಾದಿ, ವಾರಿಸ್​ ಪಂಜಾಬ್​ ದಿ ಮುಖ್ಯಸ್ಥ ಅಮೃತ್​​ಪಾಲ್​ ಸಿಂಗ್​ ಅವರನ್ನು ಕಳೆದ ತಿಂಗಳು ಪಂಜಾಬ್​ನ ಮೋಗಾದಲ್ಲಿ ಬಂಧಿಸಲಾಗಿತ್ತು. ಈ ಬಗ್ಗೆ ಪಂಜಾಬ್ ಪೊಲೀಸರು ಟ್ವಿಟ್ ಮಾಡಿ, ಅಧಿಕೃತ ಮಾಹಿತಿ ನೀಡಿದ್ದರು. ಭೂಗತನಾಗಿದ್ದ ಅಮೃತ್​ ಪಾಲ್​ ಸಿಂಗ್ 36 ದಿನಗಳ ಕಾರ್ಯಾಚರಣೆ ಬಳಿಕ ಸಿಕ್ಕಿಬಿದ್ದಿದ್ದರು. ​

ಇದನ್ನೂ ಓದಿ: ಪಂಜಾಬ್ ನ್ಯಾಯಾಧೀಶರ ನಿವಾಸದೆದುರಿನ ಗೋಡೆ ಮೇಲೆ 'ಖಲಿಸ್ತಾನ್ ಜಿಂದಾಬಾದ್' ಬರಹ

ಬಟಿಂಡಾ (ಪಂಜಾಬ್): ಬಟಿಂಡಾದ ಮೌರ್ ಮಂಡಿ ಪಟ್ಟಣದ ಬಳಿಯ, ಆಪ್ ಶಾಸಕ ಸುಖಬೀರ್ ಸಿಂಗ್ ಮೈಸರ್ಖಾನ ಅವರ ಹುಟ್ಟೂರಾದ ಮೈಸರಖಾನಾ ಗ್ರಾಮದ ಪುರಾತನ ದೇವಾಲಯದ ಗೋಡೆಗಳ ಮೇಲೆ ಕರ್ನಾಟಕ ಪ್ರತ್ಯೇಕತಾವಾದಿ ಘೋಷಣೆಗಳನ್ನು ಬರೆದು ವಿರೂಪಗೊಳಿಸಿರುವ ಘಟನೆ ನಡೆದಿದೆ. ಖಲಿಸ್ತಾನಿ ಪ್ರತ್ಯೇಕತಾವಾದಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್, ಗೋಡೆಗಳನ್ನು ವಿರೂಪಗೊಳಿಸಿರುವ ವಿಡಿಯೋ ಚಿತ್ರೀಕರಣ ಮತ್ತು ಬಿಡುಗಡೆ ಮಾಡಿರುವ ಹೊಣೆ ಹೊತ್ತಿದೆ.

ಕಳೆದ ವರ್ಷ ಪಂಜಾಬ್ ಪೊಲೀಸರು ಸಂಗೂರಿನ ಕಾಳಿ ದೇವಿ ದೇವಸ್ಥಾನದ ಗೋಡೆಯ ಮೇಲೆ ಇದೇ ರೀತಿ ಖಲಿಸ್ತಾನ್ ಘೋಷಣೆಗಳನ್ನು ಬರೆದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿತ್ತು. ಆ ಘಟನೆ ಜೂನ್​ನಲ್ಲಿ ಸಂಗ್ರೂರ್‌ನಲ್ಲಿ ನಡೆಯಲಿದ್ದ ಸಂಸತ್ತಿನ ಉಪಚುನಾವಣೆಗೆ ಮುನ್ನ, ಅಂದರೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಸಂಸತ್ ಕ್ಷೇತ್ರಕ್ಕೆ ಭೇಟಿ ನೀಡುವ ಒಂದು ದಿನದ ಮೊದಲು ಜರುಗಿತ್ತು.

ಮಾರ್ಚ್‌ನಲ್ಲಿ ಬ್ರಿಸ್ಬೇನ್‌ನ ಪ್ರಮುಖ ಹಿಂದೂ ದೇವಾಲಯದ ಮೇಲೆ ಖಾಲಿಸ್ತಾನ್ ಪರ ಬೆಂಬಲಿಗರು ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಮೇಲೆ ದಾಳಿ ನಡೆಸಿದ್ದರು. ಕಳೆದ ಎರಡು ತಿಂಗಳಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆದ ದಾಳಿಯ ನಾಲ್ಕನೇ ಘಟನೆ ಇದಾಗಿತ್ತು. ಜನವರಿ 23 ರಂದು, ಮೆಲ್ಬೋರ್ನ್‌ನ ಆಲ್ಬರ್ಟ್ ಪಾರ್ಕ್‌ನಲ್ಲಿರುವ ಇಸ್ಕಾನ್ ದೇವಾಲಯದ ಗೋಡೆಗಳ ಮೇಲೆ ಹಿಂದೂಸ್ತಾನ್ ಮುರ್ದಾಬಾದ್‌ ಎಂದು ಗೀಚಿ ವಿರೂಪಗೊಳಿದ್ದರು. ಜನವರಿ 16 ರಂದು, ವಿಕ್ಟೋರಿಯಾದ ಕ್ಯಾರಮ್ ಡೌನ್ಸ್‌ನಲ್ಲಿರುವ ಶ್ರೀ ಶಿವ ವಿಷ್ಣು ದೇವಾಲಯದ ಮೇಲೂ ದಾಳಿ ನಡೆಸಲಾಗಿತ್ತು. ಜನವರಿ 12 ರಂದು, ಮೆಲ್ಬೋರ್ನ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನವನ್ನು ಭಾರತ ವಿರೋಧಿ ಬರಹದಿಂದ ವಿರೂಪಗೊಳಿಸಲಾಗಿತ್ತು.

ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳ ಮೇಲಿನ ಧ್ವಂಸವನ್ನು ಭಾರತ ಪದೇ ಪದೇ ಖಂಡಿಸುತ್ತ ಬಂದಿದ್ದು, ಮಾತ್ರವಲ್ಲದೆ ಆಸ್ಟ್ರೇಲಿಯಾ ಸರ್ಕಾರಕ್ಕೆ ಈ ವಿಷಯದ ಕುರಿತು ಪ್ರಸ್ತಾಪ ಕೂಡ ಮಾಡಿತ್ತು. ಕಳೆದ ತಿಂಗಳು ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಆಸ್ಟ್ರೇಲಿಯಾದ ಸಹವರ್ತಿ ಪೆನ್ನಿ ವಾಂಗ್ ಅವರನ್ನು ಭೇಟಿ ಮಾಡಿ, ಖಲಿಸ್ತಾನಿ ಬೆಂಬಲಿಗರು ದೇಶದಲ್ಲಿ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತೀಯ ಸಮುದಾಯವನ್ನು ಗುರಿಯಾಗಿಸಿಕೊಂಡು "ಅಮೂಲಾಗ್ರ ಚಟುವಟಿಕೆಗಳ" ವಿರುದ್ಧ ಜಾಗರೂಕತೆಯ ಅಗತ್ಯವನ್ನು ಒತ್ತಿ ಹೇಳಿದ್ದರು.

ಬಂಧನದಲ್ಲಿರುವ ಖಲಿಸ್ತಾನ್​ ಪ್ರತ್ಯೇಕತಾವಾದಿ ಅಮೃತ್ ಪಾಲ್​ ಸಿಂಗ್​.. ಹಲವು ದಿನಗಳಿಂದ ನಾಪತ್ತೆಯಾಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಖಲಿಸ್ತಾನ್​ ಪ್ರತ್ಯೇಕತಾವಾದಿ, ವಾರಿಸ್​ ಪಂಜಾಬ್​ ದಿ ಮುಖ್ಯಸ್ಥ ಅಮೃತ್​​ಪಾಲ್​ ಸಿಂಗ್​ ಅವರನ್ನು ಕಳೆದ ತಿಂಗಳು ಪಂಜಾಬ್​ನ ಮೋಗಾದಲ್ಲಿ ಬಂಧಿಸಲಾಗಿತ್ತು. ಈ ಬಗ್ಗೆ ಪಂಜಾಬ್ ಪೊಲೀಸರು ಟ್ವಿಟ್ ಮಾಡಿ, ಅಧಿಕೃತ ಮಾಹಿತಿ ನೀಡಿದ್ದರು. ಭೂಗತನಾಗಿದ್ದ ಅಮೃತ್​ ಪಾಲ್​ ಸಿಂಗ್ 36 ದಿನಗಳ ಕಾರ್ಯಾಚರಣೆ ಬಳಿಕ ಸಿಕ್ಕಿಬಿದ್ದಿದ್ದರು. ​

ಇದನ್ನೂ ಓದಿ: ಪಂಜಾಬ್ ನ್ಯಾಯಾಧೀಶರ ನಿವಾಸದೆದುರಿನ ಗೋಡೆ ಮೇಲೆ 'ಖಲಿಸ್ತಾನ್ ಜಿಂದಾಬಾದ್' ಬರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.