ETV Bharat / bharat

ರಾಜಕೀಯ ಅಖಾಡದಲ್ಲಿ ಅಂಬಟಿ ರಾಯುಡು ಹಿಟ್​ ವಿಕೆಟ್​: ಹತ್ತೇ ದಿನದಲ್ಲಿ ವೈಎಸ್​ಆರ್​ಸಿಪಿಗೆ ಗುಡ್​ ಬೈ

author img

By ETV Bharat Karnataka Team

Published : Jan 6, 2024, 12:35 PM IST

Updated : Jan 6, 2024, 12:43 PM IST

ಅಚ್ಚರಿಯ ಬೆಳವಣಿಗೆಯಲ್ಲಿ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಆಂಧ್ರಪ್ರದೇಶದ ವೈಎಸ್​ಆರ್​ಸಿಪಿ ಪಕ್ಷದಿಂದ ಹೊರಬಂದಿದ್ದಾರೆ.

ಅಂಬಟಿ ರಾಯುಡು
ಅಂಬಟಿ ರಾಯುಡು

ಅಮರಾವತಿ (ಆಂಧ್ರಪ್ರದೇಶ) : ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು, ಆಂಧ್ರಪ್ರದೇಶ ಸಿಎಂ ವೈ.ಎಸ್​. ಜಗನ್​ಮೋಹನ್​​ರೆಡ್ಡಿ ಅವರ ನೇತೃತ್ವದ ವೈಎಸ್​ಆರ್​ಸಿಪಿಗೆ ಸೇರಿದ ಹತ್ತು ದಿನದಲ್ಲಿಯೇ ಪಕ್ಷದಿಂದ ಹೊರಬಂದಿದ್ದಾರೆ. ಸದ್ಯಕ್ಕೆ ರಾಜಕೀಯದಿಂದ ವಿರಾಮ ತೆಗೆದುಕೊಂಡಿದ್ದೇನೆ, ಮುಂದಿನ ಬೆಳವಣಿಗೆಯ ಬಗ್ಗೆ ತಿಳಿಸಲಾಗುವುದು ಎಂದು ರಾಯುಡು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಬಳಿಕ ಅಂಬಟಿ ರಾಯುಡು ರಾಜಕೀಯದಲ್ಲಿ ಸಕ್ರಿಯರಾಗುವುದಾಗಿ ಹೇಳಿದ್ದರು. ಅದರಂತೆ 2023ರ ಡಿಸೆಂಬರ್​ 29 ರಂದು ಸಿಎಂ ಜಗನ್​ಮೋಹನ್​ ರೆಡ್ಡಿ ನೇತೃತ್ವದಲ್ಲಿ ವೈಎಸ್​ಆರ್​ಸಿಪಿ ಸೇರಿದ್ದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದರು. ಆದರೆ, ದಿಢೀರ್​​ ರಾಜಕೀಯದಿಂದ ದೂರವುಳಿಯುವುದಾಗಿ, ಪಕ್ಷದಿಂದ ಹೊರನಡೆದಿದ್ದಾರೆ.

ಸದ್ಯಕ್ಕೆ ರಾಜಕೀಯದಿಂದ ದೂರ: ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, 'ಸದ್ಯಕ್ಕೆ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ. ಮುಂದಿನ ನಡೆಯನ್ನು ಸದ್ಯದಲ್ಲೇ ಪ್ರಕಟಿಸುತ್ತೇನೆ' ಎಂದು ಪೋಸ್ಟ್​ ಮಾಡಿದ್ದಾರೆ. ಇದು ಆಂಧ್ರಪ್ರದೇಶ ವಿಧಾನಸಭೆ ಮತ್ತು ಲೋಕಸಭೆ ತಯಾರಿಯಲ್ಲಿರುವ ಜಗನ್​ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿದೆ. ಜೊತೆಗೆ ರಾಯುಡು ದಿಢೀರ್​ ನಿರ್ಧಾರ ಅಚ್ಚರಿಯನ್ನೂ ತಂದಿದೆ.

  • This is to inform everyone that I have decided to quit the YSRCP Party and stay out of politics for a little while. Further action will be conveyed in due course of time.

    Thank You.

    — ATR (@RayuduAmbati) January 6, 2024 " class="align-text-top noRightClick twitterSection" data=" ">

This is to inform everyone that I have decided to quit the YSRCP Party and stay out of politics for a little while. Further action will be conveyed in due course of time.

Thank You.

— ATR (@RayuduAmbati) January 6, 2024

ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿರುವ ಮಾಜಿ ಕ್ರಿಕೆಟಿಗ, ಹಲವು ಕೂಟಗಳಲ್ಲಿ ಪಾಲ್ಗೊಂಡಿದ್ದಾರೆ. ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ನಲ್ಲಿ ಆಡಿದ್ದ ರಾಯುಡು, ಸಿಎಸ್​ಕೆಯ ಸೋದರ ಫ್ರಾಂಚೈಸಿಯಾದ ಅಮೆರಿಕದ ಮೇಜರ್​ ಕ್ರಿಕೆಟ್​ ಲೀಗ್​ನ (ಎಂಎಲ್​ಸಿ) ಟೆಕ್ಸಾ ಸೂಪರ್​ ಕಿಂಗ್ಸ್​ ಪರವಾಗಿ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ (ಸಿಪಿಎಲ್​) ಸೇಂಟ್​ ಕಿಟ್ಸ್​ ಮತ್ತು ನೇವಿಸ್​ ಪೈರೆಟ್ಸ್​ ತಂಡವನ್ನು ಪ್ರತಿನಿಧಿಸಿದ್ದರು.

ವಿವಾದಗಳಲ್ಲೂ 'ರಾಯುಡು': ಅಂಬಟಿ ರಾಯುಡು ಈ ಹಿಂದೆ ಮೈದಾನದಲ್ಲೂ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದರು. 2019 ರ ವಿಶ್ವಕಪ್​ ತಂಡದಲ್ಲಿ ಆಯ್ಕೆಯಾಗದ ಕಾರಣ ಸಿಟ್ಟಾಗಿದ್ದರು. 'ಈಗಿನ ತಂಡ ಹೇಗೆ ಆಡುತ್ತದೆ ಎಂದು ನಾನು ವಿಶೇಷ ಕನ್ನಡಕ ಖರೀದಿಸಿ ನೋಡುವೆ' ಎಂದು ಬಹಿರಂಗವಾಗಿ ದೂಷಿಸಿದ್ದರು. ಬಳಿಕ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾಗ ಸಹ ಆಟಗಾರ ಹರ್ಭಜನ್ ಸಿಂಗ್ ಅವರೊಂದಿಗೆ ಮೈದಾನದಲ್ಲಿ ಫೀಲ್ಡಿಂಗ್ ವಿಚಾರವಾಗಿ ಕಿತ್ತಾಡಿಕೊಂಡಿದ್ದರು.

ಭಾರತದ ಪರವಾಗಿ ರಾಯುಡು 55 ಏಕದಿನ ಮತ್ತು 6 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಫಾರ್ಮ್​ ಸಮಸ್ಯೆ ಮತ್ತು ಸ್ಪರ್ಧೆಯಿಂದಾಗಿ ಅವರು ಹಲವು ವರ್ಷಗಳಿಂದ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದೇ 2023 ರ ಮೇ 29 ರಂದು ಎಲ್ಲ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದರು.

ಇದನ್ನೂ ಓದಿ: ಪಾಕ್ ವಿರುದ್ಧ ಆಸೀಸ್​ 3-0 ಕ್ಲೀನ್​ಸ್ವೀಪ್: ಗೆಲುವಿನೊಂದಿಗೆ ಟೆಸ್ಟ್​ಗೆ ವಾರ್ನರ್​ ವಿದಾಯ

ಅಮರಾವತಿ (ಆಂಧ್ರಪ್ರದೇಶ) : ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು, ಆಂಧ್ರಪ್ರದೇಶ ಸಿಎಂ ವೈ.ಎಸ್​. ಜಗನ್​ಮೋಹನ್​​ರೆಡ್ಡಿ ಅವರ ನೇತೃತ್ವದ ವೈಎಸ್​ಆರ್​ಸಿಪಿಗೆ ಸೇರಿದ ಹತ್ತು ದಿನದಲ್ಲಿಯೇ ಪಕ್ಷದಿಂದ ಹೊರಬಂದಿದ್ದಾರೆ. ಸದ್ಯಕ್ಕೆ ರಾಜಕೀಯದಿಂದ ವಿರಾಮ ತೆಗೆದುಕೊಂಡಿದ್ದೇನೆ, ಮುಂದಿನ ಬೆಳವಣಿಗೆಯ ಬಗ್ಗೆ ತಿಳಿಸಲಾಗುವುದು ಎಂದು ರಾಯುಡು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಬಳಿಕ ಅಂಬಟಿ ರಾಯುಡು ರಾಜಕೀಯದಲ್ಲಿ ಸಕ್ರಿಯರಾಗುವುದಾಗಿ ಹೇಳಿದ್ದರು. ಅದರಂತೆ 2023ರ ಡಿಸೆಂಬರ್​ 29 ರಂದು ಸಿಎಂ ಜಗನ್​ಮೋಹನ್​ ರೆಡ್ಡಿ ನೇತೃತ್ವದಲ್ಲಿ ವೈಎಸ್​ಆರ್​ಸಿಪಿ ಸೇರಿದ್ದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದರು. ಆದರೆ, ದಿಢೀರ್​​ ರಾಜಕೀಯದಿಂದ ದೂರವುಳಿಯುವುದಾಗಿ, ಪಕ್ಷದಿಂದ ಹೊರನಡೆದಿದ್ದಾರೆ.

ಸದ್ಯಕ್ಕೆ ರಾಜಕೀಯದಿಂದ ದೂರ: ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, 'ಸದ್ಯಕ್ಕೆ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ. ಮುಂದಿನ ನಡೆಯನ್ನು ಸದ್ಯದಲ್ಲೇ ಪ್ರಕಟಿಸುತ್ತೇನೆ' ಎಂದು ಪೋಸ್ಟ್​ ಮಾಡಿದ್ದಾರೆ. ಇದು ಆಂಧ್ರಪ್ರದೇಶ ವಿಧಾನಸಭೆ ಮತ್ತು ಲೋಕಸಭೆ ತಯಾರಿಯಲ್ಲಿರುವ ಜಗನ್​ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿದೆ. ಜೊತೆಗೆ ರಾಯುಡು ದಿಢೀರ್​ ನಿರ್ಧಾರ ಅಚ್ಚರಿಯನ್ನೂ ತಂದಿದೆ.

  • This is to inform everyone that I have decided to quit the YSRCP Party and stay out of politics for a little while. Further action will be conveyed in due course of time.

    Thank You.

    — ATR (@RayuduAmbati) January 6, 2024 " class="align-text-top noRightClick twitterSection" data=" ">

ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿರುವ ಮಾಜಿ ಕ್ರಿಕೆಟಿಗ, ಹಲವು ಕೂಟಗಳಲ್ಲಿ ಪಾಲ್ಗೊಂಡಿದ್ದಾರೆ. ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ನಲ್ಲಿ ಆಡಿದ್ದ ರಾಯುಡು, ಸಿಎಸ್​ಕೆಯ ಸೋದರ ಫ್ರಾಂಚೈಸಿಯಾದ ಅಮೆರಿಕದ ಮೇಜರ್​ ಕ್ರಿಕೆಟ್​ ಲೀಗ್​ನ (ಎಂಎಲ್​ಸಿ) ಟೆಕ್ಸಾ ಸೂಪರ್​ ಕಿಂಗ್ಸ್​ ಪರವಾಗಿ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ (ಸಿಪಿಎಲ್​) ಸೇಂಟ್​ ಕಿಟ್ಸ್​ ಮತ್ತು ನೇವಿಸ್​ ಪೈರೆಟ್ಸ್​ ತಂಡವನ್ನು ಪ್ರತಿನಿಧಿಸಿದ್ದರು.

ವಿವಾದಗಳಲ್ಲೂ 'ರಾಯುಡು': ಅಂಬಟಿ ರಾಯುಡು ಈ ಹಿಂದೆ ಮೈದಾನದಲ್ಲೂ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದರು. 2019 ರ ವಿಶ್ವಕಪ್​ ತಂಡದಲ್ಲಿ ಆಯ್ಕೆಯಾಗದ ಕಾರಣ ಸಿಟ್ಟಾಗಿದ್ದರು. 'ಈಗಿನ ತಂಡ ಹೇಗೆ ಆಡುತ್ತದೆ ಎಂದು ನಾನು ವಿಶೇಷ ಕನ್ನಡಕ ಖರೀದಿಸಿ ನೋಡುವೆ' ಎಂದು ಬಹಿರಂಗವಾಗಿ ದೂಷಿಸಿದ್ದರು. ಬಳಿಕ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾಗ ಸಹ ಆಟಗಾರ ಹರ್ಭಜನ್ ಸಿಂಗ್ ಅವರೊಂದಿಗೆ ಮೈದಾನದಲ್ಲಿ ಫೀಲ್ಡಿಂಗ್ ವಿಚಾರವಾಗಿ ಕಿತ್ತಾಡಿಕೊಂಡಿದ್ದರು.

ಭಾರತದ ಪರವಾಗಿ ರಾಯುಡು 55 ಏಕದಿನ ಮತ್ತು 6 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಫಾರ್ಮ್​ ಸಮಸ್ಯೆ ಮತ್ತು ಸ್ಪರ್ಧೆಯಿಂದಾಗಿ ಅವರು ಹಲವು ವರ್ಷಗಳಿಂದ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದೇ 2023 ರ ಮೇ 29 ರಂದು ಎಲ್ಲ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದರು.

ಇದನ್ನೂ ಓದಿ: ಪಾಕ್ ವಿರುದ್ಧ ಆಸೀಸ್​ 3-0 ಕ್ಲೀನ್​ಸ್ವೀಪ್: ಗೆಲುವಿನೊಂದಿಗೆ ಟೆಸ್ಟ್​ಗೆ ವಾರ್ನರ್​ ವಿದಾಯ

Last Updated : Jan 6, 2024, 12:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.