ವಿಜಯವಾಡ( ಆಂಧ್ರ ಪ್ರದೇಶ): ಇತ್ತೀಚೆಗಷ್ಟೇ ವೈಎಸ್ಆರ್ಸಿಪಿ ಪಕ್ಷದಿಂದ ಹೊರಬರುವ ಮೂಲಕ ಅಚ್ಚರಿಯ ಬೆಳವಣಿಗೆಗೆ ಕಾರಣರಾಗಿದ್ದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು, ಬುಧವಾರ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ್ದಾರೆ. ಅವರ ಭೇಟಿ ಬಗ್ಗೆ ಸ್ವತಃ ರಾಯುಡು ಜಾಲತಾಣದಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
- — ATR (@RayuduAmbati) January 10, 2024 " class="align-text-top noRightClick twitterSection" data="
— ATR (@RayuduAmbati) January 10, 2024
">— ATR (@RayuduAmbati) January 10, 2024
''ಆಂಧ್ರಪ್ರದೇಶದ ಜನರ ಸೇವೆ ಮಾಡಲು ಒಳ್ಳೆಯ ಉದ್ದೇಶದಿಂದ ನಾನು ರಾಜಕೀಯಕ್ಕೆ ಬಂದಿರುವೆ. ಈ ಆಸೆಗಳು ಈಡೇರಬಹುದು ಎಂಬ ಕಾರಣದಿಂದ ವೈಎಸ್ಆರ್ಪಿ ಪಕ್ಷವನ್ನು ಸೇರಿಸಿಕೊಂಡಿದ್ದೆ. ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ವೈಯಕ್ತಿಕವಾಗಿ ಪರಿಹರಿಸಲು ನನ್ನ ಕೈಲಾದಷ್ಟು ಪ್ರಯತ್ನ ಕೂಡ ಮಾಡುತ್ತಿದ್ದೇನೆ. ಆದರೆ, ವೈಎಸ್ಆರ್ಪಿ ಪಕ್ಷದಿಂದ ನಾನು ಕಂಡ ಕನಸು ಈಡೇರದು ಎಂಬ ಕಾರಣದಿಂದ ಪಕ್ಷವನ್ನು ತೊರೆಯಬೇಕಾಯಿತು. ನನ್ನ ಸಿದ್ಧಾಂತ ಮತ್ತು ವೈಎಸ್ಆರ್ಪಿ ಪಕ್ಷದ ಸಿದ್ಧಾಂತ ಹೊಂದಾಣಿಕೆಯಾಗಲಿಲ್ಲ. ರಾಜಕೀಯದಿಂದ ಹಿಂದೆ ಸರಿಯಲೂ ನಿರ್ಧರಿಸಿದ್ದೆ. ಈ ನಡುವೆ ನನ್ನ ಹಿತೈಷಿಗಳು, ಆತ್ಮೀಯ ಸ್ನೇಹಿತರು ಮತ್ತು ಕುಟುಂಬದವರು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗುವಂತೆ ಸಲಹೆ ನೀಡಿದ್ದರು. ಅದರಂತೆ ನಾನು ಅವರನ್ನು ಭೇಟಿಯಾಗಿರುವೆ. ರಾಜಕೀಯ ಸೇರಿ ಅವರೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದೇನೆ. ಅವರ ವಿಚಾರಧಾರೆ ಮತ್ತು ದೃಷ್ಟಿ ನನ್ನಂತೆಯೇ ಇದೆ ಎಂದು ಹೇಳಲು ನನಗೆ ತುಂಬಾ ಸಂತೋಷ ಅನ್ನಿಸುತ್ತಿದೆ. ನನ್ನ ಕ್ರಿಕೆಟ್ ಬದ್ಧತೆಗಳಿಗಾಗಿ ನಾನು ದುಬೈಗೆ ತೆರಳಲಿದ್ದೇನೆ. ಆಂಧ್ರಪ್ರದೇಶದ ಜನರ ಪರ ನಾನು ಸದಾ ಇರುತ್ತೇನೆ'' ಎಂದು ರಾಯುಡು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.