ETV Bharat / bharat

ಕರಾವಳಿಯಲ್ಲಿ ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ಲಂಕನ್ನರ ಬಂಧನ: ಪಾಕ್ ಉಗ್ರರಿಗೂ ನಂಟು!

author img

By

Published : Mar 31, 2021, 5:23 PM IST

ಭಾರತೀಯ ಕರಾವಳಿಯಲ್ಲಿ ಮಾದಕ ವಸ್ತು ಮತ್ತು ಶಸ್ತ್ರಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಭಾರತೀಯ ಕೋಸ್ಟ್​ ಗಾರ್ಡ್​ಗಳು ಮತ್ತು ಕೇಂದ್ರ ಮಾದಕವಸ್ತು ನಿಗ್ರಹದಳಕ್ಕೆ ಬಂದಿದ್ದು, ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

Ak-47 weapons and drug smuggling in indian coast - Six srilankans along with pakistani militants arrested
ಕರಾವಳಿಯಲ್ಲಿ ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ಶ್ರೀಲಂಕಾ ಪ್ರಜೆಗಳ ಬಂಧನ

ಚೆನ್ನೈ, ತಮಿಳುನಾಡು: ಕೇಂದ್ರ ಮಾದಕ ವಸ್ತು ನಿಗ್ರಹ ದಳ ವಿಭಾಗದ ಅಧಿಕಾರಿಗಳು ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಮತ್ತು ಎಕೆ-47 ಹೊಂದಿದ್ದ ಶ್ರೀಲಂಕಾ ಪ್ರಜೆಗಳನ್ನು ಆರು ಮಂದಿಯನ್ನು ಬಂಧಿಸಿದ್ದು, ಅವರು ಪಾಕಿಸ್ತಾನದ ಭಯೋತ್ಪಾದಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

ಭಾರತೀಯ ಕರಾವಳಿಯಲ್ಲಿ ಮಾದಕ ವಸ್ತು ಮತ್ತು ಶಸ್ತ್ರಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ, ಭಾರತೀಯ ಕೋಸ್ಟ್​ ಗಾರ್ಡ್​ಗಳು ಮತ್ತು ಕೇಂದ್ರ ಮಾದಕವಸ್ತು ನಿಗ್ರಹದಳಕ್ಕೆ ಬಂದಿತ್ತು. ಈ ವೇಳೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.

ಇದನ್ನೂ ಓದಿ: ಕೊರೊನಾಘಾತಕ್ಕೆ ಸಿಲುಕಿದ್ದ ಭಾರತದ ಜಿಡಿಪಿ ಅದ್ಭುತವಾಗಿ ಮೇಲೆದ್ದು ಬಂದಿದೆ: ವಿಶ್ವ ಬ್ಯಾಂಕ್

ಕೇರಳದ ವಿಝಿನ್ಜಂ ಪ್ರದೇಶದಲ್ಲಿ ಶ್ರೀಲಂಕಾಗೆ ಸೇರಿದ ಬೋಟ್​ನಲ್ಲಿ ಶೋಧ ಕಾರ್ಯಾಚರಣೆ ನಡೆದಿದ್ದು, 300 ಕೆಜಿ ಹೆರಾಯಿನ್ ಅನ್ನು ಜಪ್ತಿ ಮಾಡಲಾಗಿದೆ. ಹೆರಾಯಿನ್ ಅನ್ನು ವಾಟರ್ ಟ್ಯಾಂಕ್​​ನಲ್ಲಿ ಬಚ್ಚಿಟ್ಟು ಸಾಗಿಸಲಾಗುತ್ತಿತ್ತು.

ಇದರ ಜೊತೆಗೆ 5 ಎಕೆ-47 ರೈಫಲ್​ಗಳು ಮತ್ತು 9ಎಂಎಂ ಬುಲೆಟ್​​​ಗಳನ್ನು ಬೋಟ್​​ನಲ್ಲಿದ್ದವರಿಂದ ಜಪ್ತಿ ಮಾಡಲಾಗಿದೆ. ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದ್ದು, ದಾಖಲೆಗಳು ಭಯೋತ್ಪಾದನೆಗೆ ಸಂಬಂಧಿಸಿವೆ ಎಂದು ತಿಳಿದುಬಂದಿದೆ.

ನಂದನ, ದಶಪ್ರಿಯ, ಗುನಶೇಖರ, ರಾಣಾ ಸಿಂಗ, ನಿಶಾಂಕ್ ಎಂಬುವವರನ್ನ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ನಂತರವೇ ಆರೋಪಿಗಳು ಪಾಕಿಸ್ತಾನದ ಮಾದಕವಸ್ತು ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದವರೆಂದು ತಿಳಿದುಬಂದಿದೆ.

ಚೆನ್ನೈ, ತಮಿಳುನಾಡು: ಕೇಂದ್ರ ಮಾದಕ ವಸ್ತು ನಿಗ್ರಹ ದಳ ವಿಭಾಗದ ಅಧಿಕಾರಿಗಳು ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಮತ್ತು ಎಕೆ-47 ಹೊಂದಿದ್ದ ಶ್ರೀಲಂಕಾ ಪ್ರಜೆಗಳನ್ನು ಆರು ಮಂದಿಯನ್ನು ಬಂಧಿಸಿದ್ದು, ಅವರು ಪಾಕಿಸ್ತಾನದ ಭಯೋತ್ಪಾದಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

ಭಾರತೀಯ ಕರಾವಳಿಯಲ್ಲಿ ಮಾದಕ ವಸ್ತು ಮತ್ತು ಶಸ್ತ್ರಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ, ಭಾರತೀಯ ಕೋಸ್ಟ್​ ಗಾರ್ಡ್​ಗಳು ಮತ್ತು ಕೇಂದ್ರ ಮಾದಕವಸ್ತು ನಿಗ್ರಹದಳಕ್ಕೆ ಬಂದಿತ್ತು. ಈ ವೇಳೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.

ಇದನ್ನೂ ಓದಿ: ಕೊರೊನಾಘಾತಕ್ಕೆ ಸಿಲುಕಿದ್ದ ಭಾರತದ ಜಿಡಿಪಿ ಅದ್ಭುತವಾಗಿ ಮೇಲೆದ್ದು ಬಂದಿದೆ: ವಿಶ್ವ ಬ್ಯಾಂಕ್

ಕೇರಳದ ವಿಝಿನ್ಜಂ ಪ್ರದೇಶದಲ್ಲಿ ಶ್ರೀಲಂಕಾಗೆ ಸೇರಿದ ಬೋಟ್​ನಲ್ಲಿ ಶೋಧ ಕಾರ್ಯಾಚರಣೆ ನಡೆದಿದ್ದು, 300 ಕೆಜಿ ಹೆರಾಯಿನ್ ಅನ್ನು ಜಪ್ತಿ ಮಾಡಲಾಗಿದೆ. ಹೆರಾಯಿನ್ ಅನ್ನು ವಾಟರ್ ಟ್ಯಾಂಕ್​​ನಲ್ಲಿ ಬಚ್ಚಿಟ್ಟು ಸಾಗಿಸಲಾಗುತ್ತಿತ್ತು.

ಇದರ ಜೊತೆಗೆ 5 ಎಕೆ-47 ರೈಫಲ್​ಗಳು ಮತ್ತು 9ಎಂಎಂ ಬುಲೆಟ್​​​ಗಳನ್ನು ಬೋಟ್​​ನಲ್ಲಿದ್ದವರಿಂದ ಜಪ್ತಿ ಮಾಡಲಾಗಿದೆ. ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದ್ದು, ದಾಖಲೆಗಳು ಭಯೋತ್ಪಾದನೆಗೆ ಸಂಬಂಧಿಸಿವೆ ಎಂದು ತಿಳಿದುಬಂದಿದೆ.

ನಂದನ, ದಶಪ್ರಿಯ, ಗುನಶೇಖರ, ರಾಣಾ ಸಿಂಗ, ನಿಶಾಂಕ್ ಎಂಬುವವರನ್ನ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ನಂತರವೇ ಆರೋಪಿಗಳು ಪಾಕಿಸ್ತಾನದ ಮಾದಕವಸ್ತು ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದವರೆಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.