ETV Bharat / bharat

ಸೇನಾ ಹೆಲಿಕಾಪ್ಟರ್​ ಪತನ: ತನಿಖೆ ನೇತೃತ್ವ ವಹಿಸಿಕೊಂಡ ಏರ್​​​ ಮಾರ್ಷಲ್​​ ಮನ್ವಿಂದರ್​​ ಸಿಂಗ್​ ಬಗ್ಗೆ ನಿಮಗೆಷ್ಟು ಗೊತ್ತು!?

author img

By

Published : Dec 9, 2021, 8:19 PM IST

ಸೇನಾ ಹೆಲಿಕಾಪ್ಟರ್​ ಪತನಗೊಂಡಿರುವ ಪ್ರಕರಣವನ್ನ ಈಗಾಗಲೇ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದ್ದು, ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಕಮಾಂಡಿಂಗ್​​​​ ಆಫೀಸರ್​ ಮನ್ವಿಂದರ್​​​ ಸಿಂಗ್​​​​ ಅವರಿಗೆ ತನಿಖೆಯ ಜವಾಬ್ದಾರಿ ನೀಡಲಾಗಿದೆ.

Air Marshal Manvendra Singh
Air Marshal Manvendra Singh

ನವದೆಹಲಿ: ತಮಿಳುನಾಡಿನ ಕೂನೂರಿನಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಘಟನೆ ಬಗ್ಗೆ ಲೋಕಸಭೆಯಲ್ಲಿ ಮಾಹಿತಿ ನೀಡಿರುವ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​, ಪ್ರಕರಣವನ್ನ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಭಾರತೀಯ ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್‌ ಪತನದ ಬಗ್ಗೆ ತನಿಖೆಗೆ ಆದೇಶ ನೀಡುತ್ತಿದ್ದಂತೆ ಏರ್​ ಮಾರ್ಷಲ್​​ ಮನ್ವಿಂದರ್​ ಸಿಂಗ್​​ ತನಿಖಾ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ. ಮನ್ವಿಂದರ್​​​ ಸಿಂಗ್​ ಭಾರತೀಯ ವಾಯುಪಡೆಯ ತರಬೇತಿ ಕಮಾಂಡ್​ನ ಕಮಾಂಡಿಂಗ್​​ ಆಫೀಸರ್​​​​ ಆಗಿದ್ದು, ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷವೆಂದರೆ ಇವರು ಖುದ್ದಾಗಿ ಹೆಲಿಕಾಪ್ಟರ್​ ಪೈಲೆಟ್​​​ ಆಗಿರುವ ಅನುಭವ ಹೊಂದಿದ್ದಾರೆ.

MI-17V5 ಹೆಲಿಕಾಪ್ಟರ್‌ ಪತನದ ಬಗ್ಗೆ ತನಿಖೆ ಆರಂಭಿಸಿರುವ ತಂಡ ಈಗಾಗಲೇ ವೆಲ್ಲಿಂಗ್ಟನ್​​ನಲ್ಲಿ ಬ್ಲಾಕ್ ಬಾಕ್ಸ್ ಪತ್ತೆ ಹಚ್ಚಿದೆ. ಘಟನೆ ನಡೆದ ಸ್ಥಳದಿಂದ 300 ಮೀಟರ್‌ನಿಂದ 1 ಕಿ. ಮೀ. ತನಕ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. ಈ ವೇಳೆ ಬ್ಲಾಕ್​​ ಬಾಕ್ಸ್​​ ಪತ್ತೆಯಾಗಿದೆ.

ಇದನ್ನೂ ಓದಿರಿ: ಭಾರತದಲ್ಲಿ Omicron ಭೀತಿ: ಜ.31ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿರ್ಬಂಧ

ಏರ್​ ಮಾರ್ಷಲ್​​ ಮನ್ವಿಂದರ್​ ಸಿಂಗ್​​ ಯಾರು?

ಸೆಪ್ಟೆಂಬರ್​​ 25, 2021ರಂದು ಏರ್​ ಮಾರ್ಷಲ್​ ರಾಜೀವ್​ ದಯಾಳ್​​ ಮಾಥುರ್​ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಮನ್ವಿಂದರ್​ ಸಿಂಗ್​, ಅದಕ್ಕೂ ಮೊದಲು ತಿರುವನಂತಪುರದಲ್ಲಿ ಸದರ್ನ್​ ಏರ್​ ಕಮಾಂಡ್​​ನ ಏರ್​​ ಆಫೀಸರ್​ ಕಮಾಂಡಿಂಗ್​​​ ಇನ್​​ ಚೀಫ್​​ ಆಗಿದ್ದರು. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ವಿದ್ಯಾರ್ಥಿಯಾಗಿರುವ ಮನ್ವಿಂದರ್​​​ ಸಿಂಗ್​, ಡಿಸೆಂಬರ್​​​​ 29, 1982 ರಂದು ಹೆಲಿಕಾಪ್ಟರ್​ ಪೈಲಟ್​​​ ಆಗಿ ನಿಯೋಜನೆಗೊಂಡಿದ್ದರು. ವಾಯುಪಡೆಯಲ್ಲಿ ಅಪಾರ ಅನುಭವ ಹೊಂದಿರುವ ಇವರು, ತನಿಖೆಗೆ ಸೂಕ್ತ ವ್ಯಕ್ತಿಯಾಗಿದ್ದಾರೆಂದು ಕೇಂದ್ರ ಸರ್ಕಾರ ಜವಾಬ್ದಾರಿ ನೀಡಿದೆ.

ಭಾರತೀಯ ವಾಯುಪಡೆಯಲ್ಲಿ ಈಗಾಗಲೇ ಅನೇಕ ರೀತಿಯ ಹೆಲಿಕಾಪ್ಟರ್​, ತರಬೇತಿ ವಿಮಾನ ಹಾರಾಟ ನಡೆಸಿರುವ ಇವರು, 6,600 ಗಂಟೆಗಳ ಹಾರಾಟ ನಡೆಸಿರುವ ಅನುಭವ ಹೊಂದಿದ್ದಾರೆ. ಪ್ರಮುಖವಾಗಿ ಸಿಯಾಚಿನ್​, ಈಶಾನ್ಯ ರಾಜ್ಯಗಳು, ಉತ್ತರಾಖಂಡ ಸೇರಿದಂತೆ ಅನೇಕ ಕಡೆ ಸೇವೆ ಸಲ್ಲಿಸಿರುವ ಅನುಭವ ಇದೆ.

39 ವರ್ಷಗಳ ವೃತ್ತಿ ಜೀವನದಲ್ಲಿ ರಾಷ್ಟ್ರಪತಿ ಪ್ರಶಸ್ತಿ, ವಿಶಿಷ್ಟ ಸೇವಾ ಪದಕ, ವೀರ ಚಕ್ರ ಸೇರಿದಂತೆ ಅನೇಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈಗಾಗಲೇ 2 ಸಾವಿರಕ್ಕೂ ಹೆಚ್ಚು ಕಾರ್ಯಾಚರಣೆ ನಡೆಸಿರುವ ಅನುಭವ ಹೊಂದಿದ್ದಾರೆ.

ನವದೆಹಲಿ: ತಮಿಳುನಾಡಿನ ಕೂನೂರಿನಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಘಟನೆ ಬಗ್ಗೆ ಲೋಕಸಭೆಯಲ್ಲಿ ಮಾಹಿತಿ ನೀಡಿರುವ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​, ಪ್ರಕರಣವನ್ನ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಭಾರತೀಯ ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್‌ ಪತನದ ಬಗ್ಗೆ ತನಿಖೆಗೆ ಆದೇಶ ನೀಡುತ್ತಿದ್ದಂತೆ ಏರ್​ ಮಾರ್ಷಲ್​​ ಮನ್ವಿಂದರ್​ ಸಿಂಗ್​​ ತನಿಖಾ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ. ಮನ್ವಿಂದರ್​​​ ಸಿಂಗ್​ ಭಾರತೀಯ ವಾಯುಪಡೆಯ ತರಬೇತಿ ಕಮಾಂಡ್​ನ ಕಮಾಂಡಿಂಗ್​​ ಆಫೀಸರ್​​​​ ಆಗಿದ್ದು, ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷವೆಂದರೆ ಇವರು ಖುದ್ದಾಗಿ ಹೆಲಿಕಾಪ್ಟರ್​ ಪೈಲೆಟ್​​​ ಆಗಿರುವ ಅನುಭವ ಹೊಂದಿದ್ದಾರೆ.

MI-17V5 ಹೆಲಿಕಾಪ್ಟರ್‌ ಪತನದ ಬಗ್ಗೆ ತನಿಖೆ ಆರಂಭಿಸಿರುವ ತಂಡ ಈಗಾಗಲೇ ವೆಲ್ಲಿಂಗ್ಟನ್​​ನಲ್ಲಿ ಬ್ಲಾಕ್ ಬಾಕ್ಸ್ ಪತ್ತೆ ಹಚ್ಚಿದೆ. ಘಟನೆ ನಡೆದ ಸ್ಥಳದಿಂದ 300 ಮೀಟರ್‌ನಿಂದ 1 ಕಿ. ಮೀ. ತನಕ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. ಈ ವೇಳೆ ಬ್ಲಾಕ್​​ ಬಾಕ್ಸ್​​ ಪತ್ತೆಯಾಗಿದೆ.

ಇದನ್ನೂ ಓದಿರಿ: ಭಾರತದಲ್ಲಿ Omicron ಭೀತಿ: ಜ.31ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿರ್ಬಂಧ

ಏರ್​ ಮಾರ್ಷಲ್​​ ಮನ್ವಿಂದರ್​ ಸಿಂಗ್​​ ಯಾರು?

ಸೆಪ್ಟೆಂಬರ್​​ 25, 2021ರಂದು ಏರ್​ ಮಾರ್ಷಲ್​ ರಾಜೀವ್​ ದಯಾಳ್​​ ಮಾಥುರ್​ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಮನ್ವಿಂದರ್​ ಸಿಂಗ್​, ಅದಕ್ಕೂ ಮೊದಲು ತಿರುವನಂತಪುರದಲ್ಲಿ ಸದರ್ನ್​ ಏರ್​ ಕಮಾಂಡ್​​ನ ಏರ್​​ ಆಫೀಸರ್​ ಕಮಾಂಡಿಂಗ್​​​ ಇನ್​​ ಚೀಫ್​​ ಆಗಿದ್ದರು. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ವಿದ್ಯಾರ್ಥಿಯಾಗಿರುವ ಮನ್ವಿಂದರ್​​​ ಸಿಂಗ್​, ಡಿಸೆಂಬರ್​​​​ 29, 1982 ರಂದು ಹೆಲಿಕಾಪ್ಟರ್​ ಪೈಲಟ್​​​ ಆಗಿ ನಿಯೋಜನೆಗೊಂಡಿದ್ದರು. ವಾಯುಪಡೆಯಲ್ಲಿ ಅಪಾರ ಅನುಭವ ಹೊಂದಿರುವ ಇವರು, ತನಿಖೆಗೆ ಸೂಕ್ತ ವ್ಯಕ್ತಿಯಾಗಿದ್ದಾರೆಂದು ಕೇಂದ್ರ ಸರ್ಕಾರ ಜವಾಬ್ದಾರಿ ನೀಡಿದೆ.

ಭಾರತೀಯ ವಾಯುಪಡೆಯಲ್ಲಿ ಈಗಾಗಲೇ ಅನೇಕ ರೀತಿಯ ಹೆಲಿಕಾಪ್ಟರ್​, ತರಬೇತಿ ವಿಮಾನ ಹಾರಾಟ ನಡೆಸಿರುವ ಇವರು, 6,600 ಗಂಟೆಗಳ ಹಾರಾಟ ನಡೆಸಿರುವ ಅನುಭವ ಹೊಂದಿದ್ದಾರೆ. ಪ್ರಮುಖವಾಗಿ ಸಿಯಾಚಿನ್​, ಈಶಾನ್ಯ ರಾಜ್ಯಗಳು, ಉತ್ತರಾಖಂಡ ಸೇರಿದಂತೆ ಅನೇಕ ಕಡೆ ಸೇವೆ ಸಲ್ಲಿಸಿರುವ ಅನುಭವ ಇದೆ.

39 ವರ್ಷಗಳ ವೃತ್ತಿ ಜೀವನದಲ್ಲಿ ರಾಷ್ಟ್ರಪತಿ ಪ್ರಶಸ್ತಿ, ವಿಶಿಷ್ಟ ಸೇವಾ ಪದಕ, ವೀರ ಚಕ್ರ ಸೇರಿದಂತೆ ಅನೇಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈಗಾಗಲೇ 2 ಸಾವಿರಕ್ಕೂ ಹೆಚ್ಚು ಕಾರ್ಯಾಚರಣೆ ನಡೆಸಿರುವ ಅನುಭವ ಹೊಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.