ETV Bharat / bharat

Watch - 'ಈಗೆಲ್ಲಾ ಬರೀ ಶೂನ್ಯ'.. ಭಾರತಕ್ಕೆ ಬಂದಿಳಿದ ಅಫ್ಘಾನಿಸ್ತಾನ ಸಂಸದನ ಕಣ್ಣೀರು

ಕಾಬೂಲ್​ನಿಂದ ಗಾಜಿಯಾಬಾದ್​ಗೆ ಭಾರತೀಯ ವಾಯುಪಡೆಯ ವಿಮಾನದಲ್ಲಿ ಬಂದಿಳಿದ ಅಫ್ಘಾನಿಸ್ತಾನದ ಸಂಸದ ನರೇಂದರ್ ಸಿಂಗ್ ಖಾಲ್ಸಾ ಕಣ್ಣೀರಿಟ್ಟಿದ್ದಾರೆ.

author img

By

Published : Aug 22, 2021, 12:21 PM IST

Afghanistan's MP Narender Singh Khalsa breaks down as he reaches India from Kabul
ಭಾರತಕ್ಕೆ ಬಂದಿಳಿದ ಅಫ್ಘಾನಿಸ್ತಾನ ಸಂಸದನ ಕಣ್ಣೀರು

ಗಾಜಿಯಾಬಾದ್​​: ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿಳಿದ ಅಲ್ಲಿನ ಸಂಸದರೊಬ್ಬರು ಆಫ್ಘನ್​ನಲ್ಲಿನ ಪರಿಸ್ಥಿತಿ ನೆನೆದು ಕಣ್ಣೀರಿಟ್ಟಿದ್ದಾರೆ. ಕಳೆದ 20 ವರ್ಷಗಳಲ್ಲಿನ ಎಲ್ಲ ಅಭಿವೃದ್ಧಿ ಕಾರ್ಯಗಳು ಈಗ ನಾಮಾವಶೇಷವಾಗಿವೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

ಭಾರತಕ್ಕೆ ಬಂದಿಳಿದ ಅಫ್ಘಾನಿಸ್ತಾನ ಸಂಸದನ ಕಣ್ಣೀರು

ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡಿರುವ ತಾಲಿಬಾನ್​​ ಉಗ್ರರಿಂದ ಪಾರು ಮಾಡಲು ಭಾರತ ಸರ್ಕಾರ ಅಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಕರೆತರುವ ಕಾರ್ಯ ಮಾಡುತ್ತಿದೆ. ಇಂದು ಕೂಡ ಕಾಬೂಲ್​ನಿಂದ ಭಾರತೀಯ ವಾಯುಪಡೆಯ (ಐಎಎಫ್) ಸಿ -17 ವಿಮಾನದಲ್ಲಿ 107 ಭಾರತೀಯ ಪ್ರಜೆಗಳು ಸೇರಿದಂತೆ 168 ಮಂದಿ ಗಾಜಿಯಾಬಾದ್​ ಏರ್​ಪೋರ್ಟ್​ಗೆ ಬಂದಿಳಿದಿದ್ದಾರೆ.

ಇದನ್ನೂ ಓದಿ: ಕಾಬೂಲ್​​​ನಿಂದ 168 ಪ್ರಯಾಣಿಕರನ್ನು ಹೊತ್ತು ಗಾಜಿಯಾಬಾದ್​​ಗೆ ಬಂತು C-17 ವಿಮಾನ

ನವದೆಹಲಿ ಹಾಗೂ ಉತ್ತರ ಪ್ರದೇಶದ ಗಡಿಭಾಗವಾದ ಗಾಜಿಯಾಬಾದ್​ನ ಹಿಂಡನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರಲ್ಲಿ ಅಫ್ಘಾನಿಸ್ತಾನದ ಸಂಸದ ನರೇಂದರ್ ಸಿಂಗ್ ಖಾಲ್ಸಾ ಕೂಡ ಒಬ್ಬರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ನನಗೆ ಅಳಬೇಕೆನಿಸುತ್ತಿದೆ. ಇಂತಹ ಪರಿಸ್ಥಿತಿಯನ್ನು ಕಂಡಿರಲಿಲ್ಲ ನಾವು. 20 ವರ್ಷಗಳಲ್ಲಿ ಸರ್ಕಾರ ನಿರ್ಮಿಸಿದ್ದ ಎಲ್ಲವೂ ಈಗ ನಾಶವಾಗಿದೆ. ಈಗೆಲ್ಲಾ ಬರೀ ಶೂನ್ಯ" ಎಂದು ಕಣ್ಣೀರಿಟ್ಟಿದ್ದಾರೆ.

ಗಾಜಿಯಾಬಾದ್​​: ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿಳಿದ ಅಲ್ಲಿನ ಸಂಸದರೊಬ್ಬರು ಆಫ್ಘನ್​ನಲ್ಲಿನ ಪರಿಸ್ಥಿತಿ ನೆನೆದು ಕಣ್ಣೀರಿಟ್ಟಿದ್ದಾರೆ. ಕಳೆದ 20 ವರ್ಷಗಳಲ್ಲಿನ ಎಲ್ಲ ಅಭಿವೃದ್ಧಿ ಕಾರ್ಯಗಳು ಈಗ ನಾಮಾವಶೇಷವಾಗಿವೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

ಭಾರತಕ್ಕೆ ಬಂದಿಳಿದ ಅಫ್ಘಾನಿಸ್ತಾನ ಸಂಸದನ ಕಣ್ಣೀರು

ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡಿರುವ ತಾಲಿಬಾನ್​​ ಉಗ್ರರಿಂದ ಪಾರು ಮಾಡಲು ಭಾರತ ಸರ್ಕಾರ ಅಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಕರೆತರುವ ಕಾರ್ಯ ಮಾಡುತ್ತಿದೆ. ಇಂದು ಕೂಡ ಕಾಬೂಲ್​ನಿಂದ ಭಾರತೀಯ ವಾಯುಪಡೆಯ (ಐಎಎಫ್) ಸಿ -17 ವಿಮಾನದಲ್ಲಿ 107 ಭಾರತೀಯ ಪ್ರಜೆಗಳು ಸೇರಿದಂತೆ 168 ಮಂದಿ ಗಾಜಿಯಾಬಾದ್​ ಏರ್​ಪೋರ್ಟ್​ಗೆ ಬಂದಿಳಿದಿದ್ದಾರೆ.

ಇದನ್ನೂ ಓದಿ: ಕಾಬೂಲ್​​​ನಿಂದ 168 ಪ್ರಯಾಣಿಕರನ್ನು ಹೊತ್ತು ಗಾಜಿಯಾಬಾದ್​​ಗೆ ಬಂತು C-17 ವಿಮಾನ

ನವದೆಹಲಿ ಹಾಗೂ ಉತ್ತರ ಪ್ರದೇಶದ ಗಡಿಭಾಗವಾದ ಗಾಜಿಯಾಬಾದ್​ನ ಹಿಂಡನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರಲ್ಲಿ ಅಫ್ಘಾನಿಸ್ತಾನದ ಸಂಸದ ನರೇಂದರ್ ಸಿಂಗ್ ಖಾಲ್ಸಾ ಕೂಡ ಒಬ್ಬರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ನನಗೆ ಅಳಬೇಕೆನಿಸುತ್ತಿದೆ. ಇಂತಹ ಪರಿಸ್ಥಿತಿಯನ್ನು ಕಂಡಿರಲಿಲ್ಲ ನಾವು. 20 ವರ್ಷಗಳಲ್ಲಿ ಸರ್ಕಾರ ನಿರ್ಮಿಸಿದ್ದ ಎಲ್ಲವೂ ಈಗ ನಾಶವಾಗಿದೆ. ಈಗೆಲ್ಲಾ ಬರೀ ಶೂನ್ಯ" ಎಂದು ಕಣ್ಣೀರಿಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.