ETV Bharat / state

ಮನಮೋಹನ್‌ ಸಿಂಗ್ ಅವರಿಗೆ ಕೃಷ್ಣ ಕಲೆಯ ಮೂಲಕ ಕಲಾವಿದನ ಶ್ರದ್ದಾಂಜಲಿ - MANMOHAN SINGH CARVING

ಮೈಸೂರಿನ ಮೈಕ್ರೋ ಕಲಾವಿದರೊಬ್ಬರು ಪೆನ್ಸಿಲ್​​ನಲ್ಲಿ ಮಾಜಿ ಪ್ರಧಾನಿ ಮನಮೋಹನ್​​ ಸಿಂಗ್​ ಅವರ ಭಾವಚಿತ್ರ ರಚಿಸಿ ವಿಶೇಷ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Manmohan Singh's portrait carved in pencil
ಪೆನ್ಸಿಲ್‌ನಲ್ಲಿ ಮನಮೋಹನ್ ಸಿಂಗ್​ ಅವರ ಭಾವಚಿತ್ರ ಕೆತ್ತಿರುವುದು. (ETV Bharat)
author img

By ETV Bharat Karnataka Team

Published : Dec 27, 2024, 5:22 PM IST

ಮೈಸೂರು: ಮಾಜಿ ಪ್ರಧಾನಿ ಹಾಗೂ ದೇಶದ ಶ್ರೇಷ್ಠ ಆರ್ಥಿಕ ತಜ್ಞ ದಿವಂಗತ ಡಾ.ಮನಮೋಹನ್‌ ಸಿಂಗ್‌ ಅವರಿಗೆ ಮೈಸೂರಿನ ಕಲಾವಿದ ನಂಜುಂಡಸ್ವಾಮಿ ಅವರು ಕೃಷ್ಣಕಲೆಯ ಮೂಲಕ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ದೇಶದ ಅರ್ಥವ್ಯವಸ್ಥೆಯ ಪ್ರಗತಿಗೆ ಹಲವು ಕೊಡುಗೆಗಳನ್ನು ನೀಡಿರುವ ಡಾ.ಸಿಂಗ್ ವ್ಯಕ್ತಿತ್ವವನ್ನು ಪೆನ್ಸಿಲ್‌ನಲ್ಲಿ ಕೃಷ್ಣ ಕಲೆಯ ಮೂಲಕ ಆಕರ್ಷಕವಾಗಿ ಬಿಡಿಸಿದ್ದಾರೆ.

ಕಲಾವಿದ ನಂಜುಂಡಸ್ವಾಮಿ ಮಾತನಾಡಿ, "ನನ್ನ ಕಲೆಗೆ ಕೃಷ್ಣ ಕಲೆ ಎಂದು ಟೈಟಲ್​ ಕೊಟ್ಟಿದ್ದೇನೆ. ಸುಮಾರು 11 ವರ್ಷಗಳಿಂದ ಈ ಕಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿಯವರೆಗೆ 800-1000ಕ್ಕೂ ಹೆಚ್ಚು ಪ್ರಸಿದ್ದ ವ್ಯಕ್ತಿಗಳನ್ನು ಕೃಷ್ಣ ಕಲೆಯ ಮೂಲಕ ರಚಿಸಿದ್ದೇನೆ" ಎಂದರು.

ಮೈಕ್ರೋ ಕಲಾವಿದ ನಂಜುಂಡಸ್ವಾಮಿ ಹೇಳಿಕೆ (ETV Bharat)

"ಯಾವುದೇ ವ್ಯಕ್ತಿಯ ಭಾವಚಿತ್ರ ರಚಿಸಲು 2:30 ಗಂಟೆ ಬೇಕಾಗುತ್ತವೆ. ನಮ್ಮ ಪರಂಪರೆಯ ಮೈಸೂರು ರಾಜರು, ಚಲನಚಿತ್ರ ನಟರು, ಸ್ವಾಮೀಜಿಗಳು, ನರೇಂದ್ರ ಮೋದಿ, ವೀರೇಂದ್ರ ಹೆಗ್ಗಡೆ ಹಾಗು ಒಂದೇ ಪೆನ್ಸಿಲ್​​ನಲ್ಲಿ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳನ್ನು ರಚಿಸಿದ್ದೇನೆ" ಎಂದು ಹೇಳಿದರು.

ಇದೇ ವೇಳೆ, "ಮನಮೋಹನ್ ಸಿಂಗ್​ ಅವರು ನಿಧನರಾದ ನಂತರ ಅವರ ಭಾವಚಿತ್ರವನ್ನು ರಚಿಸಿದ್ದೇನೆ ಎಂದು ದುಃಖವಿದೆ" ಎಂದರು.

ಇದನ್ನೂ ಓದಿ: 'ದೆಹಲಿಗೆ ಹೋಗುವಾಗ ಧಾರವಾಡ ಪೇಡಾ ಕೊಂಡೊಯ್ಯುತ್ತಿದ್ದೆವು': ಹುಬ್ಬಳ್ಳಿಯಲ್ಲಿದ್ದಾರೆ ಮನಮೋಹನ್​ ಸಿಂಗ್ ಪತ್ನಿಯ ಸಂಬಂಧಿಕರು - MANMOHAN SINGH RELATIVES

ಮೈಸೂರು: ಮಾಜಿ ಪ್ರಧಾನಿ ಹಾಗೂ ದೇಶದ ಶ್ರೇಷ್ಠ ಆರ್ಥಿಕ ತಜ್ಞ ದಿವಂಗತ ಡಾ.ಮನಮೋಹನ್‌ ಸಿಂಗ್‌ ಅವರಿಗೆ ಮೈಸೂರಿನ ಕಲಾವಿದ ನಂಜುಂಡಸ್ವಾಮಿ ಅವರು ಕೃಷ್ಣಕಲೆಯ ಮೂಲಕ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ದೇಶದ ಅರ್ಥವ್ಯವಸ್ಥೆಯ ಪ್ರಗತಿಗೆ ಹಲವು ಕೊಡುಗೆಗಳನ್ನು ನೀಡಿರುವ ಡಾ.ಸಿಂಗ್ ವ್ಯಕ್ತಿತ್ವವನ್ನು ಪೆನ್ಸಿಲ್‌ನಲ್ಲಿ ಕೃಷ್ಣ ಕಲೆಯ ಮೂಲಕ ಆಕರ್ಷಕವಾಗಿ ಬಿಡಿಸಿದ್ದಾರೆ.

ಕಲಾವಿದ ನಂಜುಂಡಸ್ವಾಮಿ ಮಾತನಾಡಿ, "ನನ್ನ ಕಲೆಗೆ ಕೃಷ್ಣ ಕಲೆ ಎಂದು ಟೈಟಲ್​ ಕೊಟ್ಟಿದ್ದೇನೆ. ಸುಮಾರು 11 ವರ್ಷಗಳಿಂದ ಈ ಕಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿಯವರೆಗೆ 800-1000ಕ್ಕೂ ಹೆಚ್ಚು ಪ್ರಸಿದ್ದ ವ್ಯಕ್ತಿಗಳನ್ನು ಕೃಷ್ಣ ಕಲೆಯ ಮೂಲಕ ರಚಿಸಿದ್ದೇನೆ" ಎಂದರು.

ಮೈಕ್ರೋ ಕಲಾವಿದ ನಂಜುಂಡಸ್ವಾಮಿ ಹೇಳಿಕೆ (ETV Bharat)

"ಯಾವುದೇ ವ್ಯಕ್ತಿಯ ಭಾವಚಿತ್ರ ರಚಿಸಲು 2:30 ಗಂಟೆ ಬೇಕಾಗುತ್ತವೆ. ನಮ್ಮ ಪರಂಪರೆಯ ಮೈಸೂರು ರಾಜರು, ಚಲನಚಿತ್ರ ನಟರು, ಸ್ವಾಮೀಜಿಗಳು, ನರೇಂದ್ರ ಮೋದಿ, ವೀರೇಂದ್ರ ಹೆಗ್ಗಡೆ ಹಾಗು ಒಂದೇ ಪೆನ್ಸಿಲ್​​ನಲ್ಲಿ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳನ್ನು ರಚಿಸಿದ್ದೇನೆ" ಎಂದು ಹೇಳಿದರು.

ಇದೇ ವೇಳೆ, "ಮನಮೋಹನ್ ಸಿಂಗ್​ ಅವರು ನಿಧನರಾದ ನಂತರ ಅವರ ಭಾವಚಿತ್ರವನ್ನು ರಚಿಸಿದ್ದೇನೆ ಎಂದು ದುಃಖವಿದೆ" ಎಂದರು.

ಇದನ್ನೂ ಓದಿ: 'ದೆಹಲಿಗೆ ಹೋಗುವಾಗ ಧಾರವಾಡ ಪೇಡಾ ಕೊಂಡೊಯ್ಯುತ್ತಿದ್ದೆವು': ಹುಬ್ಬಳ್ಳಿಯಲ್ಲಿದ್ದಾರೆ ಮನಮೋಹನ್​ ಸಿಂಗ್ ಪತ್ನಿಯ ಸಂಬಂಧಿಕರು - MANMOHAN SINGH RELATIVES

ETV Bharat Logo

Copyright © 2025 Ushodaya Enterprises Pvt. Ltd., All Rights Reserved.