ETV Bharat / bharat

ವಿಶೇಷ ವಿಮಾನದಲ್ಲಿ ದೆಹಲಿಗೆ ಆಗಮಿಸಿದ 160 ಭಾರತೀಯರು.. ಇಂದು ಉಕ್ರೇನ್​​ನಿಂದ ಬರಲಿದ್ದಾರೆ ಇನ್ನೂ1200 ಜನ

ಉಕ್ರೇನ್​ನಲ್ಲಿ ಯುದ್ಧ ದಿನದಿನಕ್ಕೂ ತಾರಕಕ್ಕೇರುತ್ತಿದೆ. ರಷ್ಯಾ ಉಕ್ರೇನ್​ ಬಹುತೇಕ ನಗರಗಳನ್ನು ಟಾರ್ಗೆಟ್ ಮಾಡಿ ಮಿಸೈಲ್​ ದಾಳಿ ನಡೆಸುತ್ತಿದೆ. ಈ ನಡುವೆ ಉಕ್ರೇನ್​​ನಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಭಾರತ ಸರ್ಕಾರದ ಆಪರೇಷನ್​ ಗಂಗಾ ಮುಂದುವರೆದಿದೆ.

author img

By

Published : Mar 7, 2022, 6:58 AM IST

A special flight, carrying 160 Indian evacuees from Ukraine
A special flight, carrying 160 Indian evacuees from Ukraine

ನವದೆಹಲಿ: ಉಕ್ರೇನ್​​ ಯುದ್ಧದಲ್ಲಿ ಸಿಲುಕಿ ನಲಗುತ್ತಿರುವ ಭಾರತೀಯರ ಸ್ಥಳಾಂತರ ಮುಂದುವರೆದಿದೆ. ಈಗಾಗಲೇ 16 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ಸರ್ಕಾರ ಉಕ್ರೇನ್​​ನಿಂದ ಸ್ಥಳಾಂತರ ಮಾಡಿದೆ. ಇನ್ನೂ ಸಾವಿರಾರು ಜನ ಯುದ್ಧಪೀಡಿತ ಉಕ್ರೇನ್​​ನಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಅವರ ಸ್ಥಳಾಂತರಕ್ಕೆ ಭಾರತೀಯ ವಿದೇಶಾಂಗ ಇಲಾಖೆ ಹಾಗೂ ಉಕ್ರೇನ್​​​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹರಸಾಹಸ ಮುಂದುವರೆಸಿದೆ.

ವಿಶೇಷ ವಿಮಾನದಲ್ಲಿ ದೆಹಲಿಗೆ ಆಗಮಿಸಿದ 160 ಭಾರತೀಯರು.. ಇಂದು ಉಕ್ರೇನ್​​ನಿಂದ ಬರಲಿದ್ದಾರೆ 1200 ಜನ
ವಿಶೇಷ ವಿಮಾನದಲ್ಲಿ ನವದೆಹಲಿ ತಲುಪಿದ 150 ಭಾರತೀಯ ನಾಗರಿಕರ

ಈ ನಡುವೆ ಹಂಗೇರಿಯ ಬುಡಾಪೇಸ್ಟ್​ನಿಂದ ಭಾರತೀಯರನ್ನು ಹೊತ್ತ ವಿಶೇಷ ವಿಮಾನ ಇಂದು ನಸುಕಿನ ಜಾವ ನವದೆಹಲಿ ತಲುಪಿದೆ. ನವದೆಹಲಿಗೆ ಬಂದಿಳಿದ ಭಾರತೀಯ ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ಬರಮಾಡಿಕೊಳ್ಳಲಾಗಿದೆ.

ಉಕ್ರೇನ್​​ನಿಂದ ಭಾರತೀಯರ ಸ್ಥಳಾಂತರದ ಸಂಬಂಧ ವಿದೇಶಾಂಗ ಸಚಿವ ಡಾ. ಎಸ್​​ ಜೈಶಂಕರ್​​ ಇಂದು ಉಕ್ರೇನ್​​​ನಿಂದ ಸುಮಾರು 1200 ಭಾರತೀಯ ನಾಗರಿಕರನ್ನು ಕರೆತರಲಾಗುವುದು ಎಂದು ಟ್ವೀಟ್​​ ಮೂಲಕ ಮಾಹಿತಿ ನೀಡಿದ್ದಾರೆ. ಸುಮಾರು 7 ವಿಮಾನಗಳು ಇಂದು ಭಾರತಕ್ಕೆ ಪ್ರಯಾಣ ಬೆಳಸಲಿವೆ ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ: ರಷ್ಯಾ-ಉಕ್ರೇನ್​ ಯುದ್ಧ: ಸಂಧಾನಕ್ಕೆ ಇಸ್ರೇಲ್​ ಪ್ರಯತ್ನ

ನವದೆಹಲಿ: ಉಕ್ರೇನ್​​ ಯುದ್ಧದಲ್ಲಿ ಸಿಲುಕಿ ನಲಗುತ್ತಿರುವ ಭಾರತೀಯರ ಸ್ಥಳಾಂತರ ಮುಂದುವರೆದಿದೆ. ಈಗಾಗಲೇ 16 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ಸರ್ಕಾರ ಉಕ್ರೇನ್​​ನಿಂದ ಸ್ಥಳಾಂತರ ಮಾಡಿದೆ. ಇನ್ನೂ ಸಾವಿರಾರು ಜನ ಯುದ್ಧಪೀಡಿತ ಉಕ್ರೇನ್​​ನಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಅವರ ಸ್ಥಳಾಂತರಕ್ಕೆ ಭಾರತೀಯ ವಿದೇಶಾಂಗ ಇಲಾಖೆ ಹಾಗೂ ಉಕ್ರೇನ್​​​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹರಸಾಹಸ ಮುಂದುವರೆಸಿದೆ.

ವಿಶೇಷ ವಿಮಾನದಲ್ಲಿ ದೆಹಲಿಗೆ ಆಗಮಿಸಿದ 160 ಭಾರತೀಯರು.. ಇಂದು ಉಕ್ರೇನ್​​ನಿಂದ ಬರಲಿದ್ದಾರೆ 1200 ಜನ
ವಿಶೇಷ ವಿಮಾನದಲ್ಲಿ ನವದೆಹಲಿ ತಲುಪಿದ 150 ಭಾರತೀಯ ನಾಗರಿಕರ

ಈ ನಡುವೆ ಹಂಗೇರಿಯ ಬುಡಾಪೇಸ್ಟ್​ನಿಂದ ಭಾರತೀಯರನ್ನು ಹೊತ್ತ ವಿಶೇಷ ವಿಮಾನ ಇಂದು ನಸುಕಿನ ಜಾವ ನವದೆಹಲಿ ತಲುಪಿದೆ. ನವದೆಹಲಿಗೆ ಬಂದಿಳಿದ ಭಾರತೀಯ ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ಬರಮಾಡಿಕೊಳ್ಳಲಾಗಿದೆ.

ಉಕ್ರೇನ್​​ನಿಂದ ಭಾರತೀಯರ ಸ್ಥಳಾಂತರದ ಸಂಬಂಧ ವಿದೇಶಾಂಗ ಸಚಿವ ಡಾ. ಎಸ್​​ ಜೈಶಂಕರ್​​ ಇಂದು ಉಕ್ರೇನ್​​​ನಿಂದ ಸುಮಾರು 1200 ಭಾರತೀಯ ನಾಗರಿಕರನ್ನು ಕರೆತರಲಾಗುವುದು ಎಂದು ಟ್ವೀಟ್​​ ಮೂಲಕ ಮಾಹಿತಿ ನೀಡಿದ್ದಾರೆ. ಸುಮಾರು 7 ವಿಮಾನಗಳು ಇಂದು ಭಾರತಕ್ಕೆ ಪ್ರಯಾಣ ಬೆಳಸಲಿವೆ ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ: ರಷ್ಯಾ-ಉಕ್ರೇನ್​ ಯುದ್ಧ: ಸಂಧಾನಕ್ಕೆ ಇಸ್ರೇಲ್​ ಪ್ರಯತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.