ETV Bharat / bharat

ಚುನಾವಣೆಯಲ್ಲಿ ಸ್ಟಾಲಿನ್​ ಗೆಲುವು, ನಾಲಿಗೆ ಕತ್ತರಿಸಿ ಹರಿಕೆ ತೀರಿಸಿದ ಮಹಿಳೆ! - ತಮಿಳುನಾಡು ವಿಧಾನಸಭೆ ಫೈಟ್​

ತಮಿಳುನಾಡಿನಲ್ಲಿ 10 ವರ್ಷಗಳ ಬಳಿಕ ಡಿಎಂಕೆ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯಲಿದ್ದು, ಇದರ ಮಧ್ಯೆ ಮಹಿಳೆಯೊರ್ವಳು ನಾಲಿಗೆ ಕತ್ತರಿಸಿಕೊಂಡು ಹರಿಕೆ ತೀರಿಸಿದ್ದಾಳೆ.

lady cuts off her tongue
lady cuts off her tongue
author img

By

Published : May 3, 2021, 7:07 PM IST

Updated : May 3, 2021, 8:41 PM IST

ಪರಮಕುಡಿ(ತಮಿಳುನಾಡು): ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ ನೇತೃತ್ವದ ಸ್ಟಾಲಿನ್ ಪಕ್ಷ 150ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದೆ. ಇದರ ಮಧ್ಯೆ ಮಹಿಳೆಯೊಬ್ಬರು ನಾಲಿಗೆ ಕತ್ತರಿಸಿಕೊಂಡು ಹರಿಕೆ ತೀರಿಸಿದ್ದಾರೆ.

ನಾಲಿಗೆ ಕತ್ತರಿಸಿಕೊಂಡು ಹರಿಕೆ ತೀರಿಸಿದ ಮಹಿಳೆ

ತಮಿಳುನಾಡಿನ ಪರಮಕುಡಿಯಲ್ಲಿರುವ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಮಹಿಳೆ ಪತ್ತೆಯಾಗಿದ್ದಾಳೆ. ಚುನಾವಣೆಯಲ್ಲಿ ಡಿಎಂಕೆ ಸ್ಟಾಲಿನ್​ ಗೆಲುವು ಸಾಧಿಸಿದ ನಂತರ ಹರಿಕೆ ಈಡೇರಿಸಲು ಅವರು ನಾಲಿಗೆ ಕತ್ತರಿಸಿಕೊಂಡಿದ್ದಾಳೆ. 2021ರ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಗೆಲುವು ಸಾಧಿಸಿದರೆ ತಮ್ಮ ನಾಲಿಗೆ ದೇವರಿಗೆ ಹರಿಕೆ ರೂಪದಲ್ಲಿ ನೀಡುವುದಾಗಿ 32 ವರ್ಷದ ವನಿತಾ ಪ್ರತಿಜ್ಞೆ ಸ್ವೀಕರಿಸಿದ್ದರು.

ಇದನ್ನೂ ಓದಿ: ತಮಿಳುನಾಡು ಚುನಾವಣೆಯಲ್ಲಿ ಸೋತ 'ಬಂಗಾರದ ಮನುಷ್ಯ'... ಬಿದ್ದ ಮತಗಳೆಷ್ಟು?

ಇದೀಗ ಡಿಎಂಕೆ ಗೆಲುವು ಸಾಧಿಸುತ್ತಿದ್ದಂತೆ ವನಿತಾ ಇಲ್ಲಿನ ಮುತಾಲಮ್ಮನ ದೇವಸ್ಥಾನ್ಕಕೆ ಬಂದು ನಾಲಿಗೆ ಕತ್ತರಿಸಿಕೊಂಡು ದೇವರಿಗೆ ಅರ್ಪಿಸಿದ್ದಾಳೆ. ಕೋವಿಡ್​​ ಸಂಬಂಧಿತ ನಿರ್ಬಂಧಗಳಿಂದಾಗಿ ವನಿತಾ ದೇವಾಲಯದ ಬಾಗಿಲ ಹೊರಗೆ ತಮ್ಮ ನಾಲಿಗೆ ಇಟ್ಟಿದ್ದು, ಅಲ್ಲೇ ಕುಸಿದು ಬಿದ್ದಿದ್ದಾರೆ. ಇದೀಗ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಪರಮಕುಡಿ(ತಮಿಳುನಾಡು): ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ ನೇತೃತ್ವದ ಸ್ಟಾಲಿನ್ ಪಕ್ಷ 150ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದೆ. ಇದರ ಮಧ್ಯೆ ಮಹಿಳೆಯೊಬ್ಬರು ನಾಲಿಗೆ ಕತ್ತರಿಸಿಕೊಂಡು ಹರಿಕೆ ತೀರಿಸಿದ್ದಾರೆ.

ನಾಲಿಗೆ ಕತ್ತರಿಸಿಕೊಂಡು ಹರಿಕೆ ತೀರಿಸಿದ ಮಹಿಳೆ

ತಮಿಳುನಾಡಿನ ಪರಮಕುಡಿಯಲ್ಲಿರುವ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಮಹಿಳೆ ಪತ್ತೆಯಾಗಿದ್ದಾಳೆ. ಚುನಾವಣೆಯಲ್ಲಿ ಡಿಎಂಕೆ ಸ್ಟಾಲಿನ್​ ಗೆಲುವು ಸಾಧಿಸಿದ ನಂತರ ಹರಿಕೆ ಈಡೇರಿಸಲು ಅವರು ನಾಲಿಗೆ ಕತ್ತರಿಸಿಕೊಂಡಿದ್ದಾಳೆ. 2021ರ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಗೆಲುವು ಸಾಧಿಸಿದರೆ ತಮ್ಮ ನಾಲಿಗೆ ದೇವರಿಗೆ ಹರಿಕೆ ರೂಪದಲ್ಲಿ ನೀಡುವುದಾಗಿ 32 ವರ್ಷದ ವನಿತಾ ಪ್ರತಿಜ್ಞೆ ಸ್ವೀಕರಿಸಿದ್ದರು.

ಇದನ್ನೂ ಓದಿ: ತಮಿಳುನಾಡು ಚುನಾವಣೆಯಲ್ಲಿ ಸೋತ 'ಬಂಗಾರದ ಮನುಷ್ಯ'... ಬಿದ್ದ ಮತಗಳೆಷ್ಟು?

ಇದೀಗ ಡಿಎಂಕೆ ಗೆಲುವು ಸಾಧಿಸುತ್ತಿದ್ದಂತೆ ವನಿತಾ ಇಲ್ಲಿನ ಮುತಾಲಮ್ಮನ ದೇವಸ್ಥಾನ್ಕಕೆ ಬಂದು ನಾಲಿಗೆ ಕತ್ತರಿಸಿಕೊಂಡು ದೇವರಿಗೆ ಅರ್ಪಿಸಿದ್ದಾಳೆ. ಕೋವಿಡ್​​ ಸಂಬಂಧಿತ ನಿರ್ಬಂಧಗಳಿಂದಾಗಿ ವನಿತಾ ದೇವಾಲಯದ ಬಾಗಿಲ ಹೊರಗೆ ತಮ್ಮ ನಾಲಿಗೆ ಇಟ್ಟಿದ್ದು, ಅಲ್ಲೇ ಕುಸಿದು ಬಿದ್ದಿದ್ದಾರೆ. ಇದೀಗ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Last Updated : May 3, 2021, 8:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.