ETV Bharat / bharat

ಅಮಾನವೀಯ..  ಹಾವು ಕಡಿತದಿಂದ ಬಾಲಕ ಸಾವು: ದ್ವಿಚಕ್ರ ವಾಹನದಲ್ಲಿ ಹೆಣ ಸಾಗಿಸಿದ ತಂದೆ

author img

By

Published : Oct 11, 2022, 7:47 PM IST

Updated : Oct 11, 2022, 8:03 PM IST

ಆಂಧ್ರಪ್ರದೇಶದ ತಿರುಪತಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಹಾವು ಕಡಿತದಿಂದ ಮೃತಪಟ್ಟ ಬಾಲಕನ ಮೃತದೇಹವನ್ನು ತಂದೆ ಬೈಕ್​ನಲ್ಲಿ ಸಾಗಿಸಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಮೃತದೇಹ ಸಾಗಿಸಿದ ತಂದೆ
ದ್ವಿಚಕ್ರ ವಾಹನದಲ್ಲಿ ಮೃತದೇಹ ಸಾಗಿಸಿದ ತಂದೆ

ತಿರುಪತಿ: ಹಾವು ಕಡಿತದಿಂದ ಮೃತಪಟ್ಟ ಬಾಲಕನ ಶವವನ್ನು, ತಂದೆ ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋದ ಅಮಾನವೀಯ ಘಟನೆ ತಿರುಪತಿಯಲ್ಲಿ ನಡೆದಿದೆ. ತಿರುಪತಿ ಜಿಲ್ಲೆಯ ಸತ್ಯವೇಡು ಕ್ಷೇತ್ರದ ಕೆವಿಬಿಪುರಂ ಮಂಡಲದ ಕೆಳ ಪುತ್ತೂರು ಗ್ರಾಮದಲ್ಲಿ ಈ ಘಟನೆ ಜರುಗಿದೆ.

ದ್ವಿಚಕ್ರ ವಾಹನದಲ್ಲಿ ಹೆಣ ಸಾಗಿಸಿದ ತಂದೆ

ಮನೆಯಲ್ಲಿದ್ದ ಏಳು ವರ್ಷದ ಬಸವಯ್ಯ ಎಂಬ ಬಾಲಕನಿಗೆ ಹಾವು ಕಚ್ಚಿದೆ. ತಕ್ಷಣ ಬಾಲಕನನ್ನು ಕೆವಿಐಪುರಂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ಆದರೆ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವ ಮೊದಲೇ ಮಾರ್ಗ ಮಧ್ಯೆ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಬಳಿಕ ಖಾಸಗಿ ವಾಹನ ಮಾಲೀಕರು ಬಾಲಕನ ಶವವನ್ನು ಮನೆಗೆ ಕೊಂಡೊಯ್ಯಲು ನಿರಾಕರಿಸಿದ್ದಾರೆ. ಹೀಗಾಗಿ ತಂದೆ ಚಂಚಯ್ಯ ಮಗನ ಶವವನ್ನು ದ್ವಿಚಕ್ರ ವಾಹನದಲ್ಲಿ ಸ್ವಗ್ರಾಮಕ್ಕೆ ಕೊಂಡೊಯ್ದಿದ್ದಾರೆ. ಸರ್ಕಾರದಿಂದ ವಾಹನ ಇಲ್ಲದ ಕಾರಣ ಈ ಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗ್ತಿದೆ.

ಇದನ್ನೂ ಓದಿ: ಹೊಸಪೇಟೆ : ಆಟ ಆಡುವಾಗ ಹಾವು ಕಚ್ಚಿ ಬಾಲಕ ಸಾವು


ತಿರುಪತಿ: ಹಾವು ಕಡಿತದಿಂದ ಮೃತಪಟ್ಟ ಬಾಲಕನ ಶವವನ್ನು, ತಂದೆ ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋದ ಅಮಾನವೀಯ ಘಟನೆ ತಿರುಪತಿಯಲ್ಲಿ ನಡೆದಿದೆ. ತಿರುಪತಿ ಜಿಲ್ಲೆಯ ಸತ್ಯವೇಡು ಕ್ಷೇತ್ರದ ಕೆವಿಬಿಪುರಂ ಮಂಡಲದ ಕೆಳ ಪುತ್ತೂರು ಗ್ರಾಮದಲ್ಲಿ ಈ ಘಟನೆ ಜರುಗಿದೆ.

ದ್ವಿಚಕ್ರ ವಾಹನದಲ್ಲಿ ಹೆಣ ಸಾಗಿಸಿದ ತಂದೆ

ಮನೆಯಲ್ಲಿದ್ದ ಏಳು ವರ್ಷದ ಬಸವಯ್ಯ ಎಂಬ ಬಾಲಕನಿಗೆ ಹಾವು ಕಚ್ಚಿದೆ. ತಕ್ಷಣ ಬಾಲಕನನ್ನು ಕೆವಿಐಪುರಂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ಆದರೆ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವ ಮೊದಲೇ ಮಾರ್ಗ ಮಧ್ಯೆ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಬಳಿಕ ಖಾಸಗಿ ವಾಹನ ಮಾಲೀಕರು ಬಾಲಕನ ಶವವನ್ನು ಮನೆಗೆ ಕೊಂಡೊಯ್ಯಲು ನಿರಾಕರಿಸಿದ್ದಾರೆ. ಹೀಗಾಗಿ ತಂದೆ ಚಂಚಯ್ಯ ಮಗನ ಶವವನ್ನು ದ್ವಿಚಕ್ರ ವಾಹನದಲ್ಲಿ ಸ್ವಗ್ರಾಮಕ್ಕೆ ಕೊಂಡೊಯ್ದಿದ್ದಾರೆ. ಸರ್ಕಾರದಿಂದ ವಾಹನ ಇಲ್ಲದ ಕಾರಣ ಈ ಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗ್ತಿದೆ.

ಇದನ್ನೂ ಓದಿ: ಹೊಸಪೇಟೆ : ಆಟ ಆಡುವಾಗ ಹಾವು ಕಚ್ಚಿ ಬಾಲಕ ಸಾವು


Last Updated : Oct 11, 2022, 8:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.