ETV Bharat / bharat

ಭದ್ರತಾ ಪಡೆ-ಉಗ್ರರ ನಡುವೆ ಕ್ರಾಸ್​ ಫೈರಿಂಗ್​​: ಗಾಯಗೊಂಡಿದ್ದ ನಾಗರಿಕ ಸಾವು

author img

By

Published : May 15, 2022, 3:27 PM IST

ಭಯೋತ್ಪಾದಕರು ಮತ್ತು ಸಿಆರ್​ಪಿಎಫ್​-ಪೊಲೀಸರ ಜಂಟಿ ತಂಡದ ನಡುವಿನ ಗುಂಡಿನ ಚಕಮಕಿಯಲ್ಲಿ, ಶೋಯಬ್ ಅಹ್ಮದ್ ಗನಿ ಗಾಯಗೊಂಡಿದ್ರು. ಅವರನ್ನು ಚಿಕಿತ್ಸೆಗಾಗಿ ಪುಲ್ವಾಮಾ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಆದ್ರೆ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.

A civilian was killed in "crossfire" between security forces and militant in Turkwagam
A civilian was killed in "crossfire" between security forces and militant in Turkwagam

ಶ್ರೀನಗರ: ಕಾಶ್ಮೀರದ ಶೋಫಿಯಾನ್​ ಜಿಲ್ಲೆಯ ತುರ್ಕ್ವಾಂಗಮ್ ನಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಕ್ರಾಸ್ ಫೈರಿಂಗ್​​ನಲ್ಲಿ ಓರ್ವ ನಾಗರಿಕ ಬಲಿಯಾಗಿದ್ದಾನೆ. ಲಿಟ್ಟರ್ ಪುಲ್ವಾಮಾವನ್ನು ತುರ್ಕ್ವಾಂಗಮ್ ಹಾಗೂ ಶೋಪಿಯಾನ್‌ಗೆ ಸಂಪರ್ಕಿಸುವ ಸೇತುವೆ ಬಳಿ ಪುಲ್ವಾಮಾದ ಸಿಆರ್​ಪಿಎಫ್​-182Bn/ಎಸ್​ಓಜಿ ನ ಜಂಟಿ ಗಸ್ತು ತಂಡದ ಮೇಲೆ ಉಗ್ರನೊಬ್ಬ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಯೋತ್ಪಾದಕರು ಮತ್ತು ನಮ್ಮ ಜಂಟಿ ತಂಡದ ನಡುವಿನ ಗುಂಡಿನ ಚಕಮಕಿಯಲ್ಲಿ, ಶೋಯಬ್ ಅಹ್ಮದ್ ಗನಿ ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ಪುಲ್ವಾಮಾ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಆತ ಸಾವಿಗೀಡಾಗಿದ್ದಾರೆ ಎಂದು ವಿವರಿಸಿದರು.

ಮೃತರು ಶೋಪಿಯಾನ್‌ನಲ್ಲಿ ವಾಹನಗಳ ಬಿಡಿಭಾಗಗಳನ್ನು ಮಾರಾಟ ಮಾಡುವ ಅಂಗಡಿಯವರಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಆಕಸ್ಮಿಕ ಎನ್‌ಕೌಂಟರ್‌ ನಂತರ ಭಯೋತ್ಪಾದಕರು ಹತ್ತಿರದ ತೋಟಗಳಿಗೆ ನುಸುಳಿ ಅಡಗಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ : ಜಾತ್ರೆಯಲ್ಲಿ ರಥಕ್ಕೆ ಸಿಲುಕಿ ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

ಶ್ರೀನಗರ: ಕಾಶ್ಮೀರದ ಶೋಫಿಯಾನ್​ ಜಿಲ್ಲೆಯ ತುರ್ಕ್ವಾಂಗಮ್ ನಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಕ್ರಾಸ್ ಫೈರಿಂಗ್​​ನಲ್ಲಿ ಓರ್ವ ನಾಗರಿಕ ಬಲಿಯಾಗಿದ್ದಾನೆ. ಲಿಟ್ಟರ್ ಪುಲ್ವಾಮಾವನ್ನು ತುರ್ಕ್ವಾಂಗಮ್ ಹಾಗೂ ಶೋಪಿಯಾನ್‌ಗೆ ಸಂಪರ್ಕಿಸುವ ಸೇತುವೆ ಬಳಿ ಪುಲ್ವಾಮಾದ ಸಿಆರ್​ಪಿಎಫ್​-182Bn/ಎಸ್​ಓಜಿ ನ ಜಂಟಿ ಗಸ್ತು ತಂಡದ ಮೇಲೆ ಉಗ್ರನೊಬ್ಬ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಯೋತ್ಪಾದಕರು ಮತ್ತು ನಮ್ಮ ಜಂಟಿ ತಂಡದ ನಡುವಿನ ಗುಂಡಿನ ಚಕಮಕಿಯಲ್ಲಿ, ಶೋಯಬ್ ಅಹ್ಮದ್ ಗನಿ ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ಪುಲ್ವಾಮಾ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಆತ ಸಾವಿಗೀಡಾಗಿದ್ದಾರೆ ಎಂದು ವಿವರಿಸಿದರು.

ಮೃತರು ಶೋಪಿಯಾನ್‌ನಲ್ಲಿ ವಾಹನಗಳ ಬಿಡಿಭಾಗಗಳನ್ನು ಮಾರಾಟ ಮಾಡುವ ಅಂಗಡಿಯವರಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಆಕಸ್ಮಿಕ ಎನ್‌ಕೌಂಟರ್‌ ನಂತರ ಭಯೋತ್ಪಾದಕರು ಹತ್ತಿರದ ತೋಟಗಳಿಗೆ ನುಸುಳಿ ಅಡಗಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ : ಜಾತ್ರೆಯಲ್ಲಿ ರಥಕ್ಕೆ ಸಿಲುಕಿ ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.