ETV Bharat / bharat

ಸಿಗದ ಅಲ್ಕೊಹಾಲ್, ಮಾದಕ ಔಷಧಿ ಕುಡಿದು 9 ಸಾವು

author img

By

Published : May 6, 2021, 4:19 PM IST

Updated : May 6, 2021, 7:53 PM IST

ಮತ್ತು ಬರುವ ಔಷಧಿ ಸೇವನೆ ಮಾಡಿ ಒಂದೇ ಗ್ರಾಮದ 9 ಮಂದಿ ಸಾವನ್ನಪ್ಪಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ.

8 people death
8 people death

ಬಿಲಾಸ್ಪುರ(ಛತ್ತೀಸ್​​ಗಢ): ಅಮಲೇರಿಸುವ (ಮಾದಕ) ಸಿರಪ್​ ಕುಡಿದು ಒಂದೇ ಗ್ರಾಮದ 9 ಮಂದಿ ಸಾವನ್ನಪ್ಪಿರುವ ಘಟನೆ ಛತ್ತೀಸ್​ಗಢದ ಬಿಲಾಸ್ಪುರದಲ್ಲಿ ನಡೆದಿದ್ದು, ಕೆಲವು ವ್ಯಕ್ತಿಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಛತ್ತೀಸ್​ಗಢದಲ್ಲಿ ಲಾಕ್​ಡೌನ್ ಜಾರಿಗೊಳಿಸಿರುವ ಕಾರಣ ಅಲ್ಕೊಹಾಲ್​ ಸಿಗುತ್ತಿಲ್ಲ. ಹೀಗಾಗಿ ಮಾದಕ ಸಿರಪ್​ ಸೇವನೆ ಮಾಡಿದ್ದು, ಈ ದುರ್ಘಟನೆ ಸಂಭವಿಸಿದೆ. ಬಿಲಾಸ್ಪುರದ ಸಿರ್ಗಿಟ್ಟಿ ಗ್ರಾಮದಲ್ಲಿ ನಿನ್ನೆ ನಾಲ್ವರು ಸಾವನ್ನಪ್ಪಿದ್ದು, ಇಂದು ಕೂಡ ಮತ್ತೆ ಐವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಿರಪ್ ಎಲ್ಲಿಂದ ತೆಗೆದುಕೊಂಡು ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಛತ್ತೀಸ್​​ಗಢದಲ್ಲಿ 9 ಮಂದಿ ಸಾವು

ಇದನ್ನೂ ಓದಿ: ಪೊಲೀಸ್​ ಅಧಿಕಾರಿ ದರ್ಪ: ಬೂಟುಕಾಲಿನಿಂದ ತರಕಾರಿ ಬುಟ್ಟಿ ಒದ್ದ ಎಸ್​ಹೆಚ್​ಒ

ಘಟನಾ ಸ್ಥಳಕ್ಕೆ ಪೊಲೀಸರು ತಲುಪಿ ಮಾಹಿತಿ ಪಡೆದುಕೊಂಡಿದ್ದು, ಈಗಾಗಲೇ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ. ಲಾಕ್​ಡೌನ್ ಘೋಷಣೆ ಮಾಡಿರುವ ಕಾರಣ ಮದ್ಯದಂಗಡಿ ಮುಚ್ಚಲಾಗಿದೆ. ಹೀಗಾಗಿ ಜನರು ಬೇರೆ ಬೇರೆ ಔಷಧಿಗಳ ಮೊರೆ ಹೋಗುತ್ತಿದ್ದಾರೆ.

ಬಿಲಾಸ್ಪುರ(ಛತ್ತೀಸ್​​ಗಢ): ಅಮಲೇರಿಸುವ (ಮಾದಕ) ಸಿರಪ್​ ಕುಡಿದು ಒಂದೇ ಗ್ರಾಮದ 9 ಮಂದಿ ಸಾವನ್ನಪ್ಪಿರುವ ಘಟನೆ ಛತ್ತೀಸ್​ಗಢದ ಬಿಲಾಸ್ಪುರದಲ್ಲಿ ನಡೆದಿದ್ದು, ಕೆಲವು ವ್ಯಕ್ತಿಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಛತ್ತೀಸ್​ಗಢದಲ್ಲಿ ಲಾಕ್​ಡೌನ್ ಜಾರಿಗೊಳಿಸಿರುವ ಕಾರಣ ಅಲ್ಕೊಹಾಲ್​ ಸಿಗುತ್ತಿಲ್ಲ. ಹೀಗಾಗಿ ಮಾದಕ ಸಿರಪ್​ ಸೇವನೆ ಮಾಡಿದ್ದು, ಈ ದುರ್ಘಟನೆ ಸಂಭವಿಸಿದೆ. ಬಿಲಾಸ್ಪುರದ ಸಿರ್ಗಿಟ್ಟಿ ಗ್ರಾಮದಲ್ಲಿ ನಿನ್ನೆ ನಾಲ್ವರು ಸಾವನ್ನಪ್ಪಿದ್ದು, ಇಂದು ಕೂಡ ಮತ್ತೆ ಐವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಿರಪ್ ಎಲ್ಲಿಂದ ತೆಗೆದುಕೊಂಡು ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಛತ್ತೀಸ್​​ಗಢದಲ್ಲಿ 9 ಮಂದಿ ಸಾವು

ಇದನ್ನೂ ಓದಿ: ಪೊಲೀಸ್​ ಅಧಿಕಾರಿ ದರ್ಪ: ಬೂಟುಕಾಲಿನಿಂದ ತರಕಾರಿ ಬುಟ್ಟಿ ಒದ್ದ ಎಸ್​ಹೆಚ್​ಒ

ಘಟನಾ ಸ್ಥಳಕ್ಕೆ ಪೊಲೀಸರು ತಲುಪಿ ಮಾಹಿತಿ ಪಡೆದುಕೊಂಡಿದ್ದು, ಈಗಾಗಲೇ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ. ಲಾಕ್​ಡೌನ್ ಘೋಷಣೆ ಮಾಡಿರುವ ಕಾರಣ ಮದ್ಯದಂಗಡಿ ಮುಚ್ಚಲಾಗಿದೆ. ಹೀಗಾಗಿ ಜನರು ಬೇರೆ ಬೇರೆ ಔಷಧಿಗಳ ಮೊರೆ ಹೋಗುತ್ತಿದ್ದಾರೆ.

Last Updated : May 6, 2021, 7:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.