ETV Bharat / bharat

ಅರುಣಾಚಲ ಪ್ರದೇಶದಲ್ಲಿ ಹಿಮ ಕುಸಿತದಿಂದ ನಾಪತ್ತೆಯಾಗಿದ್ದ 7 ಸೈನಿಕರ ವೀರ ಮರಣ

author img

By

Published : Feb 8, 2022, 5:46 PM IST

Updated : Feb 9, 2022, 12:56 PM IST

ಭಾರತ-ಚೀನಾ ಗಡಿಭಾಗದ ಹಿಮಚ್ಛಾದಿತ ಪ್ರದೇಶದಲ್ಲಿ ಶೋಧ, ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಳಿಸಲಾಗಿದ್ದು, ಎಲ್ಲ 7 ಸೈನಿಕರ ಮೃತದೇಹಗಳು ಪತ್ತೆಯಾಗಿವೆ. ಸರ್ವ ಪ್ರಯತ್ನಗಳ ಹೊರತಾಗಿಯೂ ಅವರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

indian-army
ಸೈನಿಕರು ದುರ್ಮರಣ

ತೇಜ್‌ಪುರ(ಅರುಣಾಚಲಪ್ರದೇಶ): ಚೀನಾದ ಗಡಿಭಾಗಕ್ಕೆ ಹೊಂದಿಕೊಂಡಿರುವ ಕಮೆಂಗ್​ ಸೆಕ್ಟರ್​ನ ಹಿಮಚ್ಛಾದಿತ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಭಾರೀ ಹಿಮ ಕುಸಿತಕ್ಕೆ ಒಳಗಾಗಿ ನಾಪತ್ತೆಯಾಗಿದ್ದ 7 ಮಂದಿ ಭಾರತೀಯ ಸೈನಿಕರ ಮೃತದೇಹಗಳು ಇಂದು ಪತ್ತೆಯಾಗಿವೆ.

ಫೆಬ್ರವರಿ 6 ನೇ ತಾರೀಖು ಕಮೆಂಗ್​ ವಲಯದಲ್ಲಿ ಹಿಮದ ಮಧ್ಯೆಯೇ ಗಡಿ ಪಹರೆ ನಡೆಸುತ್ತಿದ್ದಾಗ 7 ಸೈನಿಕರು ಹಿಮ ಕುಸಿತಕ್ಕೆ ಒಳಗಾಗಿ ನಾಪತ್ತೆಯಾಗಿದ್ದರು. ಇವರ ಪತ್ತೆಗೆ ವಿಶೇಷ ತಂಡವನ್ನು ಏರ್​ಲಿಫ್ಟ್​ ಮಾಡಿ ಶೋಧ, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿತ್ತು.

ಇಂದು ದುರಾದೃಷ್ಟವಶಾತ್​ ಎಲ್ಲ ಸೈನಿಕರ ಮೃತದೇಹಗಳು ಪತ್ತೆಯಾಗಿವೆ. ಶೋಧ, ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಳಿಸಲಾಗಿದ್ದು, ಎಲ್ಲ 7 ಸೈನಿಕರ ಮೃತದೇಹಗಳು ಪತ್ತೆಯಾಗಿವೆ. ಸರ್ವ ಪ್ರಯತ್ನಗಳ ಹೊರತಾಗಿಯೂ ಅವರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಚೀನಾದ ಗಡಿಗೆ ಹೊಂದಿಕೊಂಡಿರುವ 14,500 ಅಡಿ ಎತ್ತರದಲ್ಲಿರುವ ಕಮೆಂಗ್​ ವಲಯದಲ್ಲಿ ಕೆಲ ದಿನಗಳಿಂದ ಭಾರಿ ಹಿಮಪಾತ, ಪ್ರತಿಕೂಲ ಹವಾಮಾನ ಉಂಟಾಗಿತ್ತು. ಈ ಮಧ್ಯೆಯೂ ಸೈನಿಕರು ಗಡಿ ಪಹರೆ ಕಾರ್ಯ ನಡೆಸುತ್ತಿದ್ದಾಗ ಹಿಮ ಕುಸಿತಕ್ಕೆ ಒಳಗಾಗಿ ಪ್ರಾಣ ತೆತ್ತಿದ್ದಾರೆ.

ಓದಿ: ಬೆಂಗಳೂರು : ಬಹುಮಹಡಿ ಕಟ್ಟಡದಿಂದ ಬಿದ್ದು ಮೃತಪಟ್ಟ ವೈದ್ಯರ ಮಗ..

ತೇಜ್‌ಪುರ(ಅರುಣಾಚಲಪ್ರದೇಶ): ಚೀನಾದ ಗಡಿಭಾಗಕ್ಕೆ ಹೊಂದಿಕೊಂಡಿರುವ ಕಮೆಂಗ್​ ಸೆಕ್ಟರ್​ನ ಹಿಮಚ್ಛಾದಿತ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಭಾರೀ ಹಿಮ ಕುಸಿತಕ್ಕೆ ಒಳಗಾಗಿ ನಾಪತ್ತೆಯಾಗಿದ್ದ 7 ಮಂದಿ ಭಾರತೀಯ ಸೈನಿಕರ ಮೃತದೇಹಗಳು ಇಂದು ಪತ್ತೆಯಾಗಿವೆ.

ಫೆಬ್ರವರಿ 6 ನೇ ತಾರೀಖು ಕಮೆಂಗ್​ ವಲಯದಲ್ಲಿ ಹಿಮದ ಮಧ್ಯೆಯೇ ಗಡಿ ಪಹರೆ ನಡೆಸುತ್ತಿದ್ದಾಗ 7 ಸೈನಿಕರು ಹಿಮ ಕುಸಿತಕ್ಕೆ ಒಳಗಾಗಿ ನಾಪತ್ತೆಯಾಗಿದ್ದರು. ಇವರ ಪತ್ತೆಗೆ ವಿಶೇಷ ತಂಡವನ್ನು ಏರ್​ಲಿಫ್ಟ್​ ಮಾಡಿ ಶೋಧ, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿತ್ತು.

ಇಂದು ದುರಾದೃಷ್ಟವಶಾತ್​ ಎಲ್ಲ ಸೈನಿಕರ ಮೃತದೇಹಗಳು ಪತ್ತೆಯಾಗಿವೆ. ಶೋಧ, ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಳಿಸಲಾಗಿದ್ದು, ಎಲ್ಲ 7 ಸೈನಿಕರ ಮೃತದೇಹಗಳು ಪತ್ತೆಯಾಗಿವೆ. ಸರ್ವ ಪ್ರಯತ್ನಗಳ ಹೊರತಾಗಿಯೂ ಅವರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಚೀನಾದ ಗಡಿಗೆ ಹೊಂದಿಕೊಂಡಿರುವ 14,500 ಅಡಿ ಎತ್ತರದಲ್ಲಿರುವ ಕಮೆಂಗ್​ ವಲಯದಲ್ಲಿ ಕೆಲ ದಿನಗಳಿಂದ ಭಾರಿ ಹಿಮಪಾತ, ಪ್ರತಿಕೂಲ ಹವಾಮಾನ ಉಂಟಾಗಿತ್ತು. ಈ ಮಧ್ಯೆಯೂ ಸೈನಿಕರು ಗಡಿ ಪಹರೆ ಕಾರ್ಯ ನಡೆಸುತ್ತಿದ್ದಾಗ ಹಿಮ ಕುಸಿತಕ್ಕೆ ಒಳಗಾಗಿ ಪ್ರಾಣ ತೆತ್ತಿದ್ದಾರೆ.

ಓದಿ: ಬೆಂಗಳೂರು : ಬಹುಮಹಡಿ ಕಟ್ಟಡದಿಂದ ಬಿದ್ದು ಮೃತಪಟ್ಟ ವೈದ್ಯರ ಮಗ..

Last Updated : Feb 9, 2022, 12:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.