ETV Bharat / bharat

'U' ಆಕಾರದಲ್ಲಿ ಭದ್ರತಾ ಸಿಬ್ಬಂದಿಯನ್ನು ಸುತ್ತುವರೆದಿದ್ದ 400 ನಕ್ಸಲರು!

author img

By

Published : Apr 5, 2021, 12:26 PM IST

ಸುಕ್ಮಾ - ಬಿಜಾಪುರದಲ್ಲಿ ನಿಯೋಜನೆಗೊಂಡಿದ್ದ ತುಕಡಿಯ ಒಂದು ಭಾಗದ ಭದ್ರತಾ ಸಿಬ್ಬಂದಿಯನ್ನು ಎನ್​ಕೌಂಟರ್​ ವೇಳೆ 'U' ಆಕಾರದಲ್ಲಿ ಅಂದರೆ ಮೂರು ದಿಕ್ಕಿನಿಂದ ಸುತ್ತುವರೆದಿದ್ದ ಸುಮಾರು 400 ಮಂದಿ ನಕ್ಸಲರು ಅವರ ಮೇಲೆ ಲಘು ಮೆಷಿನ್ ಗನ್‌ಗಳಿಂದ (ಎಲ್‌ಎಂಜಿ)ಗುಂಡು ಹಾರಿಸಿದ್ದರು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

chhattisgarh
ಛತ್ತೀಸ್‌ಗಢ ನಕ್ಸಲ್​ ದಾಳಿ

ಬಿಜಾಪುರ (ಛತ್ತೀಸ್‌ಗಢ): ಶನಿವಾರ - ಭಾನುವಾರ ಛತ್ತೀಸ್‌ಗಢದಲ್ಲಿ ನಡೆದ ಭೀಕರ ಎನ್​ಕೌಂಟರ್​ ವೇಳೆ ಸುಮಾರು 400 ಮಂದಿ ನಕ್ಸಲರು ಭದ್ರತಾ ಸಿಬ್ಬಂದಿಯನ್ನು ಸುತ್ತುವರೆದಿದ್ದರು ಎಂಬ ಆಘಾತಕಾರಿ ಮಾಹಿತಿ ದೊರೆತಿದೆ.

ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ)ಯ ಮಾವೋವಾದಿ ಕಮಾಂಡರ್ ಆಗಿರುವ ಹಿಡ್ಮಾ ಹಾಗೂ ಈತನ ಸಹಚರ ಸುಜಾತಾನನ್ನು ಸೆರೆಹಿಡಿಯಲು ಸಿಆರ್​ಪಿಎಫ್​ ಯೋಧರು ಸೇರಿದಂತೆ ಸುಮಾರು 1500 ಭದ್ರತಾ ಸಿಬ್ಬಂದಿಯನ್ನು ಸುಕ್ಮಾ - ಬಿಜಾಪುರ ಪ್ರದೇಶದಲ್ಲಿ ಆರು ಶಿಬಿರಗಳಲ್ಲಿ ನಿಯೋಜಿಸಲಾಗಿತ್ತು.

ಹಿಡ್ಮಾ, ಈತ ಮೋಸ್ಟ್ ವಾಂಟೆಡ್ ನಕ್ಸಲ್​ ಆಗಿದ್ದು, ಈತನ ಬಗ್ಗೆ ಸುಳಿವು ನೀಡಿದವರಿಗೆ 40 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಛತ್ತೀಸ್‌ಗಢ ಪೊಲೀಸರು ಘೋಷಿಸಿದ್ದರು. 2011ರಲ್ಲಿ ಸುಕ್ಮಾದಲ್ಲಿ ನಡೆದ ದಾಳಿಯಲ್ಲಿ 25 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. 2013ರಲ್ಲಿ ನಡೆದ ದಾಳಿಗಳಲ್ಲಿ ಕಾಂಗ್ರೆಸ್ ನಾಯಕರು, ಭದ್ರತಾ ಸಿಬ್ಬಂದಿ ಸೇರಿದಂತೆ 32 ಮಂದಿ ಪ್ರಾಣಕಳೆದುಕೊಂಡಿದ್ದರು. ಈ ದಾಳಿಗಳ ಹಿಂದೆ ಹಿಡ್ಮಾ ಕೈವಾಡವಿದೆ ಎಂದು ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ: ಹುತಾತ್ಮ ಭದ್ರತಾ ಸಿಬ್ಬಂದಿಯ ಪಾರ್ಥಿವ ಶರೀರಕ್ಕೆ ಅಮಿತ್ ಶಾ ನಮನ

ಸುಕ್ಮಾ - ಬಿಜಾಪುರದಲ್ಲಿ ನಿಯೋಜನೆಗೊಂಡಿದ್ದ ತುಕಡಿಯ ಒಂದು ಭಾಗದ ಭದ್ರತಾ ಸಿಬ್ಬಂದಿಯನ್ನು ಎನ್​ಕೌಂಟರ್​ ವೇಳೆ 'U' ಆಕಾರದಲ್ಲಿ ಅಂದರೆ ಮೂರು ಕಡೆಯಿಂದ ಸುತ್ತುವರೆದಿದ್ದ 400 ಮಂದಿ ನಕ್ಸಲರು ಅವರ ಮೇಲೆ ಲಘು ಮೆಷಿನ್ ಗನ್‌ಗಳಿಂದ (ಎಲ್‌ಎಂಜಿ)ಗುಂಡು ಹಾರಿಸಿದ್ದಾರೆ. ಅಲ್ಲದೇ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಬಳಸಿದ್ದಾರೆ,

ಈ ಕಾಳಗದಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. 31 ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ಇವರಲ್ಲಿ 16 ಮಂದಿ ಸಿಆರ್‌ಪಿಎಫ್ ಯೋಧರಾಗಿದ್ದಾರೆ. 12 ಮಂದಿ ನಕ್ಸಲರನ್ನು ಸದೆಬಡಿಯಲಾಗಿದ್ದು, 16 ಮಾವೋವಾದಿಗಳು ಗಾಯಗೊಂಡಿದ್ದಾರೆ. ಎನ್​​ಕೌಂಟರ್​ ವೇಳೆ ನಕ್ಸಲರು ನಮ್ಮ ಭದ್ರತಾ ಸಿಬ್ಬಂದಿ ಬಳಿಯಿದ್ದ ಎರಡು ಡಜನ್​ಗೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದಾರೆಂದು ಸಿಆರ್‌ಪಿಎಫ್ ಮೂಲಗಳು ತಿಳಿಸಿವೆ.

ಬಿಜಾಪುರ (ಛತ್ತೀಸ್‌ಗಢ): ಶನಿವಾರ - ಭಾನುವಾರ ಛತ್ತೀಸ್‌ಗಢದಲ್ಲಿ ನಡೆದ ಭೀಕರ ಎನ್​ಕೌಂಟರ್​ ವೇಳೆ ಸುಮಾರು 400 ಮಂದಿ ನಕ್ಸಲರು ಭದ್ರತಾ ಸಿಬ್ಬಂದಿಯನ್ನು ಸುತ್ತುವರೆದಿದ್ದರು ಎಂಬ ಆಘಾತಕಾರಿ ಮಾಹಿತಿ ದೊರೆತಿದೆ.

ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ)ಯ ಮಾವೋವಾದಿ ಕಮಾಂಡರ್ ಆಗಿರುವ ಹಿಡ್ಮಾ ಹಾಗೂ ಈತನ ಸಹಚರ ಸುಜಾತಾನನ್ನು ಸೆರೆಹಿಡಿಯಲು ಸಿಆರ್​ಪಿಎಫ್​ ಯೋಧರು ಸೇರಿದಂತೆ ಸುಮಾರು 1500 ಭದ್ರತಾ ಸಿಬ್ಬಂದಿಯನ್ನು ಸುಕ್ಮಾ - ಬಿಜಾಪುರ ಪ್ರದೇಶದಲ್ಲಿ ಆರು ಶಿಬಿರಗಳಲ್ಲಿ ನಿಯೋಜಿಸಲಾಗಿತ್ತು.

ಹಿಡ್ಮಾ, ಈತ ಮೋಸ್ಟ್ ವಾಂಟೆಡ್ ನಕ್ಸಲ್​ ಆಗಿದ್ದು, ಈತನ ಬಗ್ಗೆ ಸುಳಿವು ನೀಡಿದವರಿಗೆ 40 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಛತ್ತೀಸ್‌ಗಢ ಪೊಲೀಸರು ಘೋಷಿಸಿದ್ದರು. 2011ರಲ್ಲಿ ಸುಕ್ಮಾದಲ್ಲಿ ನಡೆದ ದಾಳಿಯಲ್ಲಿ 25 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. 2013ರಲ್ಲಿ ನಡೆದ ದಾಳಿಗಳಲ್ಲಿ ಕಾಂಗ್ರೆಸ್ ನಾಯಕರು, ಭದ್ರತಾ ಸಿಬ್ಬಂದಿ ಸೇರಿದಂತೆ 32 ಮಂದಿ ಪ್ರಾಣಕಳೆದುಕೊಂಡಿದ್ದರು. ಈ ದಾಳಿಗಳ ಹಿಂದೆ ಹಿಡ್ಮಾ ಕೈವಾಡವಿದೆ ಎಂದು ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ: ಹುತಾತ್ಮ ಭದ್ರತಾ ಸಿಬ್ಬಂದಿಯ ಪಾರ್ಥಿವ ಶರೀರಕ್ಕೆ ಅಮಿತ್ ಶಾ ನಮನ

ಸುಕ್ಮಾ - ಬಿಜಾಪುರದಲ್ಲಿ ನಿಯೋಜನೆಗೊಂಡಿದ್ದ ತುಕಡಿಯ ಒಂದು ಭಾಗದ ಭದ್ರತಾ ಸಿಬ್ಬಂದಿಯನ್ನು ಎನ್​ಕೌಂಟರ್​ ವೇಳೆ 'U' ಆಕಾರದಲ್ಲಿ ಅಂದರೆ ಮೂರು ಕಡೆಯಿಂದ ಸುತ್ತುವರೆದಿದ್ದ 400 ಮಂದಿ ನಕ್ಸಲರು ಅವರ ಮೇಲೆ ಲಘು ಮೆಷಿನ್ ಗನ್‌ಗಳಿಂದ (ಎಲ್‌ಎಂಜಿ)ಗುಂಡು ಹಾರಿಸಿದ್ದಾರೆ. ಅಲ್ಲದೇ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಬಳಸಿದ್ದಾರೆ,

ಈ ಕಾಳಗದಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. 31 ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ಇವರಲ್ಲಿ 16 ಮಂದಿ ಸಿಆರ್‌ಪಿಎಫ್ ಯೋಧರಾಗಿದ್ದಾರೆ. 12 ಮಂದಿ ನಕ್ಸಲರನ್ನು ಸದೆಬಡಿಯಲಾಗಿದ್ದು, 16 ಮಾವೋವಾದಿಗಳು ಗಾಯಗೊಂಡಿದ್ದಾರೆ. ಎನ್​​ಕೌಂಟರ್​ ವೇಳೆ ನಕ್ಸಲರು ನಮ್ಮ ಭದ್ರತಾ ಸಿಬ್ಬಂದಿ ಬಳಿಯಿದ್ದ ಎರಡು ಡಜನ್​ಗೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದಾರೆಂದು ಸಿಆರ್‌ಪಿಎಫ್ ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.