ETV Bharat / bharat

ನಕಲಿ ಪದವಿ ಪ್ರಮಾಣ ಪತ್ರ ಹೊಂದಿದ್ದ ನಾಲ್ವರು ವೈದ್ಯರ ಬಂಧನ

author img

By ETV Bharat Karnataka Team

Published : Nov 15, 2023, 7:34 PM IST

Fake doctors arrested in Delhi: ವೈದ್ಯರೊಬ್ಬರ ಬಳಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಮಹೇಂದ್ರ, ನಕಲಿ ಸರ್ಟಿಫಿಕೇಟ್​ ಸೃಷ್ಟಿಸಿ ವೈದ್ಯನಾಗಿ, ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾನೆ.

Four doctors arrested with fake degree certificates
ನಕಲಿ ಪದವಿ ಪ್ರಮಾಣ ಪತ್ರ ಹೊಂದಿದ್ದ ನಾಲ್ವರು ವೈದ್ಯರ ಬಂಧನ

ನವದೆಹಲಿ: ದಕ್ಷಿಣ ದೆಹಲಿಯ ಗ್ರೇಟರ್​ ಕೈಲಾಶ್​ನಲ್ಲಿರುವ ಕ್ಲಿನಿಕ್​ನಲ್ಲಿ 45 ವರ್ಷದ ವ್ಯಕ್ತಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ವೈದ್ಯರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮಾಜಿ ತಂತ್ರಜ್ಞನಾಗಿದ್ದ ಆರೋಪಿ ಡಾ. ಮಹೇಂದ್ರ ನಕಲಿ ಎಂಬಿಬಿಎಸ್​ ಪದವಿ ಪಡೆದು ಗ್ರೇಟರ್​ ಕೈಲಾಶ್​ - 1ರ ಕ್ಲಿನಿಕ್​ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಮಹೇಂದ್ರ ಜೊತೆಗೆ ಎಂಬಿಬಿಎಸ್​ ಪಡೆದಿರುವುದಾಗಿ ನಕಲಿ ಸರ್ಟಿಫಿಕೇಟ್​ ಹೊಂದಿದ್ದ ಕ್ಲಿನಿಕ್​ ಮಾಲೀಕ ಡಾ. ನೀರಜ್​ ಅಗರ್ವಾಲ್​ ಹಾಗೂ ಇತರ ಇಬ್ಬರು ಸಿಬ್ಬಂದಿಗಳಾದ ಡಾ. ಪೂಜಾ ಅಗರ್ವಾಲ್​ ಹಾಗೂ ಡಾ. ಜೈಪ್ರೀತ್​ ಅವರನ್ನು ಬಂಧಿಸಲಾಗಿದೆ. ಸದ್ಯ ಆರೋಪಿಗಳಿಂದ ಸರ್ಟಿಫಿಕೇಟ್​ಗಳನ್ನು ಪಡೆದಿದ್ದು, ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ವಾರದ ಹಿಂದೆ ಸಣ್ಣ ಆರೋಗ್ಯ ಸಮಸ್ಯೆ ಎಂದು ಈ ಆಸ್ಪತ್ರೆಗೆ ರೋಗಿಯೊಬ್ಬರು ದಾಖಲಾಗಿದ್ದು, ಶಸ್ತ್ರಚಿಕಿತ್ಸೆ ಬಳಿಕ ಆ ವ್ಯಕ್ತಿ ಸಾವನ್ನಪ್ಪಿದ್ದರು. ರೋಗಿಯ ಕುಟುಂಬಸ್ಥರು ಆಸ್ಪತ್ರೆ ವೈದ್ಯರ ವಿರುದ್ಧ ಪ್ರತಿಭಟಿಸಿದ್ದರು. ಈ ಘಟನೆ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಪ್ರತಿಭಟನೆ ವೇಳೆ, ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಮೃತನ ಕುಟುಂಬಸ್ಥರನ್ನು ಸಮಾಧಾನಗೊಳಿಸಿ, ಅವರಿಂದ ದೂರು ಪಡೆದು ತನಿಖೆ ಆರಂಭಿಸಿದ್ದಾರೆ. ಈ ನಾಲ್ವರು ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ರೋಗಿಯ ಮನೆಯವರು ಆರೋಪಿಸಿದ್ದರು. ಈ ವೈದ್ಯಕೀಯ ಕೇಂದ್ರದ ವಿರುದ್ಧ ಈಗಾಗಲೇ, ಈ ರೀತಿಯ ನಕಲಿ ವೈದ್ಯರು ನೀಡಿದ ಅಸಮರ್ಪಕ ಚಿಕಿತ್ಸೆಯಿಂದ ರೋಗಿಗಳು ಸಾವನ್ನಪ್ಪಿರುವ ಬಗ್ಗೆ ಅನೇಕ ದೂರುಗಳು ಬಂದಿವೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಪ್ರತಿ ದೂರಿನಲ್ಲಿಯೂ ಚಿಕಿತ್ಸೆ ಬಳಿಕ ರೋಗಿಗಳು ಸಾವನ್ನಪ್ಪಿರುವುದಾಗಿ ಆರೋಪಿಸಲಾಗಿತ್ತು. ಈ ಪ್ರಕರಣದ ಬಗ್ಗೆ ಅನುಮಾನಗೊಂಡ ಪೊಲೀಸರು ತಂಡ ರಚಿಸಿ, ತನಿಖೆ ಆರಂಭಿಸಿದ್ದಾರೆ. ತನಿಖೆ ವೇಳೆ ಶಸ್ತ್ರಚಿಕಿತ್ಸೆಯಲ್ಲಿ ಈ ನಾಲ್ವರು ಆರೋಪಿಗಳು ಭಾಗಿಯಾಗಿರುವುದು ಕಂಡು ಬಂದ ಕಾರಣ ಇವರನ್ನು ಬಂಧಿಸಲಾಗಿದೆ." ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿ ಮಹೇಂದ್ರ ದೆಹಲಿಯ ಹೆಸರಾಂತ ಆಸ್ಪತ್ರೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ಬಳಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದ. ಅಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಿರುವುದನ್ನು ನೋಡಿ, ಈತನೂ ಶಸ್ತ್ರಚಿಕಿತ್ಸೆ ಮಾಡಲು ಕಲಿತಿದ್ದನು. ನಂತರ ನಕಲಿ ಎಂಬಿಬಿಎಸ್​ ಪದವಿ ಪ್ರಮಾಣಪತ್ರ ಸಿದ್ಧಪಡಿಸಿ, ಮೆಡಿಕಲ್​ ಸೆಂಟರ್​ನಲ್ಲಿ ಕೆಲಸ ಆರಂಭಿಸಿದ್ದ. ಆಸ್ಪತ್ರೆಯಿಂದ ಕರೆದಾಗೆಲ್ಲಾ ಬಂದು ಮಹೇಂದ್ರ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ. ಮಹೇಂದ್ರ ನಕಲಿ ಪ್ರಮಾಣಪತ್ರ ಎಲ್ಲಿಂದ ಪಡೆದರು. ನಂತರ ಇದೇ ಸರ್ಟಿಫಿಕೇಟ್​ ಇಟ್ಟುಕೊಂಡು ಎಲ್ಲೆಲ್ಲಿ ಕೆಲಸ ಮಾಡಿದ್ದ ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ನಕಲಿ ವಿದೇಶಿ ಕರೆನ್ಸಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ವ್ಯಕ್ತಿ ಕಿಡ್ನಾಪ್​, ಮುಂದಾಗಿದ್ದೇನು?

ನವದೆಹಲಿ: ದಕ್ಷಿಣ ದೆಹಲಿಯ ಗ್ರೇಟರ್​ ಕೈಲಾಶ್​ನಲ್ಲಿರುವ ಕ್ಲಿನಿಕ್​ನಲ್ಲಿ 45 ವರ್ಷದ ವ್ಯಕ್ತಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ವೈದ್ಯರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮಾಜಿ ತಂತ್ರಜ್ಞನಾಗಿದ್ದ ಆರೋಪಿ ಡಾ. ಮಹೇಂದ್ರ ನಕಲಿ ಎಂಬಿಬಿಎಸ್​ ಪದವಿ ಪಡೆದು ಗ್ರೇಟರ್​ ಕೈಲಾಶ್​ - 1ರ ಕ್ಲಿನಿಕ್​ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಮಹೇಂದ್ರ ಜೊತೆಗೆ ಎಂಬಿಬಿಎಸ್​ ಪಡೆದಿರುವುದಾಗಿ ನಕಲಿ ಸರ್ಟಿಫಿಕೇಟ್​ ಹೊಂದಿದ್ದ ಕ್ಲಿನಿಕ್​ ಮಾಲೀಕ ಡಾ. ನೀರಜ್​ ಅಗರ್ವಾಲ್​ ಹಾಗೂ ಇತರ ಇಬ್ಬರು ಸಿಬ್ಬಂದಿಗಳಾದ ಡಾ. ಪೂಜಾ ಅಗರ್ವಾಲ್​ ಹಾಗೂ ಡಾ. ಜೈಪ್ರೀತ್​ ಅವರನ್ನು ಬಂಧಿಸಲಾಗಿದೆ. ಸದ್ಯ ಆರೋಪಿಗಳಿಂದ ಸರ್ಟಿಫಿಕೇಟ್​ಗಳನ್ನು ಪಡೆದಿದ್ದು, ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ವಾರದ ಹಿಂದೆ ಸಣ್ಣ ಆರೋಗ್ಯ ಸಮಸ್ಯೆ ಎಂದು ಈ ಆಸ್ಪತ್ರೆಗೆ ರೋಗಿಯೊಬ್ಬರು ದಾಖಲಾಗಿದ್ದು, ಶಸ್ತ್ರಚಿಕಿತ್ಸೆ ಬಳಿಕ ಆ ವ್ಯಕ್ತಿ ಸಾವನ್ನಪ್ಪಿದ್ದರು. ರೋಗಿಯ ಕುಟುಂಬಸ್ಥರು ಆಸ್ಪತ್ರೆ ವೈದ್ಯರ ವಿರುದ್ಧ ಪ್ರತಿಭಟಿಸಿದ್ದರು. ಈ ಘಟನೆ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಪ್ರತಿಭಟನೆ ವೇಳೆ, ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಮೃತನ ಕುಟುಂಬಸ್ಥರನ್ನು ಸಮಾಧಾನಗೊಳಿಸಿ, ಅವರಿಂದ ದೂರು ಪಡೆದು ತನಿಖೆ ಆರಂಭಿಸಿದ್ದಾರೆ. ಈ ನಾಲ್ವರು ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ರೋಗಿಯ ಮನೆಯವರು ಆರೋಪಿಸಿದ್ದರು. ಈ ವೈದ್ಯಕೀಯ ಕೇಂದ್ರದ ವಿರುದ್ಧ ಈಗಾಗಲೇ, ಈ ರೀತಿಯ ನಕಲಿ ವೈದ್ಯರು ನೀಡಿದ ಅಸಮರ್ಪಕ ಚಿಕಿತ್ಸೆಯಿಂದ ರೋಗಿಗಳು ಸಾವನ್ನಪ್ಪಿರುವ ಬಗ್ಗೆ ಅನೇಕ ದೂರುಗಳು ಬಂದಿವೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಪ್ರತಿ ದೂರಿನಲ್ಲಿಯೂ ಚಿಕಿತ್ಸೆ ಬಳಿಕ ರೋಗಿಗಳು ಸಾವನ್ನಪ್ಪಿರುವುದಾಗಿ ಆರೋಪಿಸಲಾಗಿತ್ತು. ಈ ಪ್ರಕರಣದ ಬಗ್ಗೆ ಅನುಮಾನಗೊಂಡ ಪೊಲೀಸರು ತಂಡ ರಚಿಸಿ, ತನಿಖೆ ಆರಂಭಿಸಿದ್ದಾರೆ. ತನಿಖೆ ವೇಳೆ ಶಸ್ತ್ರಚಿಕಿತ್ಸೆಯಲ್ಲಿ ಈ ನಾಲ್ವರು ಆರೋಪಿಗಳು ಭಾಗಿಯಾಗಿರುವುದು ಕಂಡು ಬಂದ ಕಾರಣ ಇವರನ್ನು ಬಂಧಿಸಲಾಗಿದೆ." ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿ ಮಹೇಂದ್ರ ದೆಹಲಿಯ ಹೆಸರಾಂತ ಆಸ್ಪತ್ರೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ಬಳಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದ. ಅಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಿರುವುದನ್ನು ನೋಡಿ, ಈತನೂ ಶಸ್ತ್ರಚಿಕಿತ್ಸೆ ಮಾಡಲು ಕಲಿತಿದ್ದನು. ನಂತರ ನಕಲಿ ಎಂಬಿಬಿಎಸ್​ ಪದವಿ ಪ್ರಮಾಣಪತ್ರ ಸಿದ್ಧಪಡಿಸಿ, ಮೆಡಿಕಲ್​ ಸೆಂಟರ್​ನಲ್ಲಿ ಕೆಲಸ ಆರಂಭಿಸಿದ್ದ. ಆಸ್ಪತ್ರೆಯಿಂದ ಕರೆದಾಗೆಲ್ಲಾ ಬಂದು ಮಹೇಂದ್ರ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ. ಮಹೇಂದ್ರ ನಕಲಿ ಪ್ರಮಾಣಪತ್ರ ಎಲ್ಲಿಂದ ಪಡೆದರು. ನಂತರ ಇದೇ ಸರ್ಟಿಫಿಕೇಟ್​ ಇಟ್ಟುಕೊಂಡು ಎಲ್ಲೆಲ್ಲಿ ಕೆಲಸ ಮಾಡಿದ್ದ ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ನಕಲಿ ವಿದೇಶಿ ಕರೆನ್ಸಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ವ್ಯಕ್ತಿ ಕಿಡ್ನಾಪ್​, ಮುಂದಾಗಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.