ETV Bharat / bharat

ದೆಹಲಿ ಸರ್ಕಾರಿ ಶಾಲೆ ಕೊಠಡಿ ನಿರ್ಮಾಣದಲ್ಲಿ ₹1,300 ಕೋಟಿ ಹಗರಣ ಆರೋಪ; ತನಿಖೆಗೆ ಶಿಫಾರಸು

author img

By

Published : Nov 25, 2022, 1:01 PM IST

ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ಫೆಬ್ರವರಿ 17, 2020 ರ ವರದಿಯಲ್ಲಿ, ಲೋಕೋಪಯೋಗಿ ಇಲಾಖೆಯಿಂದ ದೆಹಲಿ ಸರ್ಕಾರಿ ಶಾಲೆಗಳ 2,400 ಕ್ಕೂ ಹೆಚ್ಚು ತರಗತಿ ಕೊಠಡಿಗಳ ನಿರ್ಮಾಣದಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಎತ್ತಿ ತೋರಿಸಿದೆ.

ದೆಹಲಿ ಸರ್ಕಾರಿ ಶಾಲೆ ಕೊಠಡಿ ನಿರ್ಮಾಣದಲ್ಲಿ 1300 ಕೋಟಿ ರೂಪಾಯಿ ಹಗರಣದ ತನಿಖೆಗೆ ಶಿಫಾರಸು
1300 crore scam in construction of Delhi government school rooms

ನವ ದೆಹಲಿ: ದಿಲ್ಲಿ ಸರಕಾರಿ ಶಾಲೆಗಳ ತರಗತಿ ಕೊಠಡಿಗಳ ನಿರ್ಮಾಣದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ವಿಶೇಷ ಸಂಸ್ಥೆಯಿಂದ ತನಿಖೆ ನಡೆಸುವಂತೆ ಕೇಂದ್ರೀಯ ಜಾಗೃತ ಆಯೋಗ ಶಿಫಾರಸು ಮಾಡಿದೆ. ಇದರಲ್ಲಿ 1,300 ಕೋಟಿ ರೂ.ಗಳ ಹಗರಣ ನಡೆದಿದೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.

ತನಿಖೆಗೆ ಶಿಫಾರಸು ಮಾಡಿದ ಜಾಗೃತ ನಿರ್ದೇಶನಾಲಯದ ವರದಿಯನ್ನು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ಫೆಬ್ರವರಿ 17, 2020 ರ ವರದಿಯಲ್ಲಿ, ಲೋಕೋಪಯೋಗಿ ಇಲಾಖೆಯಿಂದ ದೆಹಲಿ ಸರ್ಕಾರಿ ಶಾಲೆಗಳ 2,400 ಕ್ಕೂ ಹೆಚ್ಚು ತರಗತಿ ಕೊಠಡಿಗಳ ನಿರ್ಮಾಣದಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಎತ್ತಿ ತೋರಿಸಿದೆ.

ಸಿವಿಸಿ ಫೆಬ್ರವರಿ 2020 ರಲ್ಲಿ ಈ ವಿಷಯದ ಬಗ್ಗೆ ಅಭಿಪ್ರಾಯ ಕೋರಿ ದೆಹಲಿ ಸರ್ಕಾರದ ಜಾಗೃತ ನಿರ್ದೇಶನಾಲಯಕ್ಕೆ ವರದಿಯನ್ನು ಕಳುಹಿಸಿತ್ತು.

ಪ್ರಕರಣದ ವಿಚಾರಣೆಯಲ್ಲಿನ ವಿಳಂಬದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೆಫ್ಟಿನೆಂಟ್ ಗವರ್ನರ್ ಎಲ್​.ಜಿ. ಸಕ್ಸೇನಾ ಈ ವರ್ಷದ ಆಗಸ್ಟ್​ನಲ್ಲಿ ಮುಖ್ಯ ಕಾರ್ಯದರ್ಶಿಗೆ ಸೂಚಿಸುವವರೆಗೂ ದೆಹಲಿಯ ವಿಜಿಲೆನ್ಸ್​ ನಿರ್ದೇಶನಾಲಯ ಎರಡೂವರೆ ವರ್ಷದವರೆಗೂ ವರದಿಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.

ಸುಮಾರು 1,300 ಕೋಟಿ ರೂ.ಗಳ ಅವ್ಯವಹಾರದಲ್ಲಿ ತೊಡಗಿರುವ ಶಿಕ್ಷಣ ಇಲಾಖೆ ಮತ್ತು ಪಿಡಬ್ಲ್ಯೂಡಿಗೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಇದರ ಜವಾಬ್ದಾರಿಗಳನ್ನು ನಿಗದಿಪಡಿಸಲು ಜಾಗೃತ ನಿರ್ದೇಶನಾಲಯ ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪೋಕ್ಸೊ ಆರೋಪಿಯಿಂದ ದೆಹಲಿಯ ಆಪ್ ಸಚಿವರಿಗೆ ಮಸಾಜ್!​

ನವ ದೆಹಲಿ: ದಿಲ್ಲಿ ಸರಕಾರಿ ಶಾಲೆಗಳ ತರಗತಿ ಕೊಠಡಿಗಳ ನಿರ್ಮಾಣದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ವಿಶೇಷ ಸಂಸ್ಥೆಯಿಂದ ತನಿಖೆ ನಡೆಸುವಂತೆ ಕೇಂದ್ರೀಯ ಜಾಗೃತ ಆಯೋಗ ಶಿಫಾರಸು ಮಾಡಿದೆ. ಇದರಲ್ಲಿ 1,300 ಕೋಟಿ ರೂ.ಗಳ ಹಗರಣ ನಡೆದಿದೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.

ತನಿಖೆಗೆ ಶಿಫಾರಸು ಮಾಡಿದ ಜಾಗೃತ ನಿರ್ದೇಶನಾಲಯದ ವರದಿಯನ್ನು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ಫೆಬ್ರವರಿ 17, 2020 ರ ವರದಿಯಲ್ಲಿ, ಲೋಕೋಪಯೋಗಿ ಇಲಾಖೆಯಿಂದ ದೆಹಲಿ ಸರ್ಕಾರಿ ಶಾಲೆಗಳ 2,400 ಕ್ಕೂ ಹೆಚ್ಚು ತರಗತಿ ಕೊಠಡಿಗಳ ನಿರ್ಮಾಣದಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಎತ್ತಿ ತೋರಿಸಿದೆ.

ಸಿವಿಸಿ ಫೆಬ್ರವರಿ 2020 ರಲ್ಲಿ ಈ ವಿಷಯದ ಬಗ್ಗೆ ಅಭಿಪ್ರಾಯ ಕೋರಿ ದೆಹಲಿ ಸರ್ಕಾರದ ಜಾಗೃತ ನಿರ್ದೇಶನಾಲಯಕ್ಕೆ ವರದಿಯನ್ನು ಕಳುಹಿಸಿತ್ತು.

ಪ್ರಕರಣದ ವಿಚಾರಣೆಯಲ್ಲಿನ ವಿಳಂಬದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೆಫ್ಟಿನೆಂಟ್ ಗವರ್ನರ್ ಎಲ್​.ಜಿ. ಸಕ್ಸೇನಾ ಈ ವರ್ಷದ ಆಗಸ್ಟ್​ನಲ್ಲಿ ಮುಖ್ಯ ಕಾರ್ಯದರ್ಶಿಗೆ ಸೂಚಿಸುವವರೆಗೂ ದೆಹಲಿಯ ವಿಜಿಲೆನ್ಸ್​ ನಿರ್ದೇಶನಾಲಯ ಎರಡೂವರೆ ವರ್ಷದವರೆಗೂ ವರದಿಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.

ಸುಮಾರು 1,300 ಕೋಟಿ ರೂ.ಗಳ ಅವ್ಯವಹಾರದಲ್ಲಿ ತೊಡಗಿರುವ ಶಿಕ್ಷಣ ಇಲಾಖೆ ಮತ್ತು ಪಿಡಬ್ಲ್ಯೂಡಿಗೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಇದರ ಜವಾಬ್ದಾರಿಗಳನ್ನು ನಿಗದಿಪಡಿಸಲು ಜಾಗೃತ ನಿರ್ದೇಶನಾಲಯ ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪೋಕ್ಸೊ ಆರೋಪಿಯಿಂದ ದೆಹಲಿಯ ಆಪ್ ಸಚಿವರಿಗೆ ಮಸಾಜ್!​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.