ETV Bharat / bharat

ಮಕ್ಕಳಾಗದ ಪುತ್ರಿಯ ಆಸೆ ಪೂರೈಸಲು ಅಡ್ಡದಾರಿ.. ಮಹಿಳೆಯ ಕೊಂದು 10 ತಿಂಗಳ ಮಗು ಅಪಹರಿಸಿದ ದಂಪತಿ!

ಮಕ್ಕಳಾದ ತಮ್ಮ ಪುತ್ರಿಯ ಆಸೆ ಪೂರೈಸಲು ದಂಪತಿಯೊಬ್ಬರು ಮಹಿಳೆಯ ಕೊಂದು ಆಕೆಯ 10 ತಿಂಗಳ ಮಗು ಅಪಹರಿಸಿದ ಘಟನೆ ಅಸ್ಸೋಂನಲ್ಲಿ ಬೆಳಕಿಗೆ ಬಂದಿದೆ.

author img

By

Published : Dec 21, 2022, 10:49 PM IST

10-month-old-baby-was-kidnapped-by-killing-the-mother-of-baby-in-assam
ಮಕ್ಕಳಾಗದ ಪುತ್ರಿಯ ಆಸೆ ಪೂರೈಸಲು.. ಮಹಿಳೆಯ ಕೊಂದು 10 ತಿಂಗಳ ಮಗು ಅಪಹರಿಸಿದ ದಂಪತಿ!

ಶಿವಸಾಗರ (ಅಸ್ಸೋಂ): ದಂಪತಿಗಳಿಬ್ಬರು ಮಹಿಳೆಯ ಬಳಿಯಿದ್ದ 10 ತಿಂಗಳ ಗಂಡು ಮಗುವೊಂದು ಕಿತ್ತುಕೊಂಡು, ಆ ಮಗುವಿನ ತಾಯಿಯನ್ನು ಕೊಂದು ಹಾಕಿರುವ ಘಟನೆ ಅಸ್ಸೋಂನ ಶಿವಸಾಗರ್ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ದಂಪತಿಯಾದ ಬಸಂತ ಗೊಗೊಯ್ ಮತ್ತು ಹಿಯಾಮಾಯಿ ಗೊಗೊಯ್​ ಎಂಬುವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಕೆಂದುಗುರಿಯ ಬೈಲುಂಗ್ ಗಾಂವ್ ನಿವಾಸಿ ನಿತುಮೋನಿ ಲುಖುರಾಶನ್ ಕೊಲೆಯಾದ ಮಹಿಳೆಯಾಗಿದ್ದು, ಕಳೆದ ಸೋಮವಾರದಿಂದ ತನ್ನ 10 ತಿಂಗಳ ಗಂಡು ಮಗುವಿನೊಂದಿಗೆ ಈಕೆ ಕಾಣೆಯಾಗಿದ್ದರು. ಈ ನಡುವೆ ಇದೇ ಮಂಗಳವಾರ ನಿಟುಮೋನಿಯ ಮೃತ ದೇಹವು ಚರೈಡಿಯೊ ಜಿಲ್ಲೆಯ ಟೀ ಎಸ್ಟೇಟ್‌ವೊಂದರ ಚರಂಡಿಯಲ್ಲಿ ಪತ್ತೆಯಾಗಿದೆ. ಅಲ್ಲದೇ, ಆಕೆಯ ದೇಹದಲ್ಲಿ ಅನೇಕ ಗಾಯದ ಗುರುತುಗಳಾಗಿದ್ದರಿಂದ ಶಿವಸಾಗರ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದರು.

ವಿವಾಹಿತ ಮಗಳಿಗೆ ಮಕ್ಕಳಿಲ್ಲ: ಆರೋಪಿ ಗೊಗೊಯ್ ದಂಪತಿಗೆ ಹಿಮಾಚಲ ಪ್ರದೇಶದಲ್ಲಿ ವಿವಾಹಿತ ಮಗಳು ಇದ್ದು, ಆಕೆಗೆ ದೀರ್ಘ ಕಾಲದಿಂದಲೂ ಮಕ್ಕಳು ಆಗಿಲ್ಲ. ಆದ್ದರಿಂದ ಪುತ್ರಿಯ ಮಗುವಿನ ಕನಸು ಈಡೇರಿಸಲು ಈ ದಂಪತಿ ಈ ಘೋರ ಅಪರಾಧ ಎಸಗಿದ್ದಾರೆ ಎಂಬುದು ಪೊಲೀಸ್​ ತನಿಖೆಯಲ್ಲಿ ಬಯಲಾಗಿದೆ.

ಯಾವುದೋ ಕೆಲಸದ ಹೆಸರಿನಲ್ಲಿ ಮಹಿಳೆ ನಿತುಮೋನಿಯನ್ನು ಮಗುವಿನ ಸಮೇತ ಗೊಗೊಯ್ ದಂಪತಿ ಕರೆಸಿಕೊಂಡಿದ್ದರು. ಈ ವೇಳೆ ಆಕೆಯಿಂದ ಮಗುವನ್ನು ಕಸಿದುಕೊಳ್ಳಲು ದಂಪತಿ ಯತ್ನಿಸಿದ್ದಾರೆ. ಆದರೆ, ನಿತುಮೋನಿ ವಿರೋಧಿಸಿದಾಗ ಪತಿ ಮತ್ತು ಪತ್ನಿ ಸೇರಿಕೊಂಡು ಹೊಡೆದು ಕೊಲೆ ಮಾಡಿದ್ದಾರೆ ಎಂದು ಶಿವಸಾಗರ್ ಪೊಲೀಸ್ ವರಿಷ್ಠಾಧಿಕಾರಿ ಸುಭ್ರಜ್ಯೋತಿ ಬೋರಾ ಬುಧವಾರ ಬಹಿರಂಗಪಡಿಸಿದ್ದಾರೆ.

ಅಲ್ಲದೇ, ಇದೊಂದು ಪೂರ್ವ ಯೋಜಿತವಾಗಿತ್ತು. ಮಂಗಳವಾರ ಸಂಜೆ ಹಿಮಾಚಲ ಪ್ರದೇಶಕ್ಕೆ ಹೋಗಲು ಈ ದಂಪತಿ ಸಿಮಲುಗುರಿ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ದಂಪತಿಯನ್ನು ಬಂಧಿಸಲಾಗಿದೆ. ಆರೋಪಿ ದಂಪತಿಯ ಮಗ ಪ್ರಶಾಂತ್​ ಗೊಗೊಯ್ ಬಳಿಯಿದ್ದ 10 ತಿಂಗಳ ಗಂಡು ಮಗುವನ್ನು ರಕ್ಷಿಸಿ, ಆತನನ್ನೂ ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹೆಚ್ಚು ಅಂಕದ ಆಮಿಷವೊಡ್ಡಿ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಆರೋಪ: ಪ್ರಾಧ್ಯಾಪಕ, ವಿದ್ಯಾರ್ಥಿ ವಿರುದ್ಧ ಕೇಸ್

ಶಿವಸಾಗರ (ಅಸ್ಸೋಂ): ದಂಪತಿಗಳಿಬ್ಬರು ಮಹಿಳೆಯ ಬಳಿಯಿದ್ದ 10 ತಿಂಗಳ ಗಂಡು ಮಗುವೊಂದು ಕಿತ್ತುಕೊಂಡು, ಆ ಮಗುವಿನ ತಾಯಿಯನ್ನು ಕೊಂದು ಹಾಕಿರುವ ಘಟನೆ ಅಸ್ಸೋಂನ ಶಿವಸಾಗರ್ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ದಂಪತಿಯಾದ ಬಸಂತ ಗೊಗೊಯ್ ಮತ್ತು ಹಿಯಾಮಾಯಿ ಗೊಗೊಯ್​ ಎಂಬುವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಕೆಂದುಗುರಿಯ ಬೈಲುಂಗ್ ಗಾಂವ್ ನಿವಾಸಿ ನಿತುಮೋನಿ ಲುಖುರಾಶನ್ ಕೊಲೆಯಾದ ಮಹಿಳೆಯಾಗಿದ್ದು, ಕಳೆದ ಸೋಮವಾರದಿಂದ ತನ್ನ 10 ತಿಂಗಳ ಗಂಡು ಮಗುವಿನೊಂದಿಗೆ ಈಕೆ ಕಾಣೆಯಾಗಿದ್ದರು. ಈ ನಡುವೆ ಇದೇ ಮಂಗಳವಾರ ನಿಟುಮೋನಿಯ ಮೃತ ದೇಹವು ಚರೈಡಿಯೊ ಜಿಲ್ಲೆಯ ಟೀ ಎಸ್ಟೇಟ್‌ವೊಂದರ ಚರಂಡಿಯಲ್ಲಿ ಪತ್ತೆಯಾಗಿದೆ. ಅಲ್ಲದೇ, ಆಕೆಯ ದೇಹದಲ್ಲಿ ಅನೇಕ ಗಾಯದ ಗುರುತುಗಳಾಗಿದ್ದರಿಂದ ಶಿವಸಾಗರ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದರು.

ವಿವಾಹಿತ ಮಗಳಿಗೆ ಮಕ್ಕಳಿಲ್ಲ: ಆರೋಪಿ ಗೊಗೊಯ್ ದಂಪತಿಗೆ ಹಿಮಾಚಲ ಪ್ರದೇಶದಲ್ಲಿ ವಿವಾಹಿತ ಮಗಳು ಇದ್ದು, ಆಕೆಗೆ ದೀರ್ಘ ಕಾಲದಿಂದಲೂ ಮಕ್ಕಳು ಆಗಿಲ್ಲ. ಆದ್ದರಿಂದ ಪುತ್ರಿಯ ಮಗುವಿನ ಕನಸು ಈಡೇರಿಸಲು ಈ ದಂಪತಿ ಈ ಘೋರ ಅಪರಾಧ ಎಸಗಿದ್ದಾರೆ ಎಂಬುದು ಪೊಲೀಸ್​ ತನಿಖೆಯಲ್ಲಿ ಬಯಲಾಗಿದೆ.

ಯಾವುದೋ ಕೆಲಸದ ಹೆಸರಿನಲ್ಲಿ ಮಹಿಳೆ ನಿತುಮೋನಿಯನ್ನು ಮಗುವಿನ ಸಮೇತ ಗೊಗೊಯ್ ದಂಪತಿ ಕರೆಸಿಕೊಂಡಿದ್ದರು. ಈ ವೇಳೆ ಆಕೆಯಿಂದ ಮಗುವನ್ನು ಕಸಿದುಕೊಳ್ಳಲು ದಂಪತಿ ಯತ್ನಿಸಿದ್ದಾರೆ. ಆದರೆ, ನಿತುಮೋನಿ ವಿರೋಧಿಸಿದಾಗ ಪತಿ ಮತ್ತು ಪತ್ನಿ ಸೇರಿಕೊಂಡು ಹೊಡೆದು ಕೊಲೆ ಮಾಡಿದ್ದಾರೆ ಎಂದು ಶಿವಸಾಗರ್ ಪೊಲೀಸ್ ವರಿಷ್ಠಾಧಿಕಾರಿ ಸುಭ್ರಜ್ಯೋತಿ ಬೋರಾ ಬುಧವಾರ ಬಹಿರಂಗಪಡಿಸಿದ್ದಾರೆ.

ಅಲ್ಲದೇ, ಇದೊಂದು ಪೂರ್ವ ಯೋಜಿತವಾಗಿತ್ತು. ಮಂಗಳವಾರ ಸಂಜೆ ಹಿಮಾಚಲ ಪ್ರದೇಶಕ್ಕೆ ಹೋಗಲು ಈ ದಂಪತಿ ಸಿಮಲುಗುರಿ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ದಂಪತಿಯನ್ನು ಬಂಧಿಸಲಾಗಿದೆ. ಆರೋಪಿ ದಂಪತಿಯ ಮಗ ಪ್ರಶಾಂತ್​ ಗೊಗೊಯ್ ಬಳಿಯಿದ್ದ 10 ತಿಂಗಳ ಗಂಡು ಮಗುವನ್ನು ರಕ್ಷಿಸಿ, ಆತನನ್ನೂ ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹೆಚ್ಚು ಅಂಕದ ಆಮಿಷವೊಡ್ಡಿ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಆರೋಪ: ಪ್ರಾಧ್ಯಾಪಕ, ವಿದ್ಯಾರ್ಥಿ ವಿರುದ್ಧ ಕೇಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.