ಧಾರವಾಡ:ಅವಳಿನಗರದಲ್ಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸುತ್ತಿದು, 11 ಜನ ಮಾದಕ ವಸ್ತುಗಳ ಮಾರಾಟಗಾರರನ್ನು ಖಾಕಿಪಡೆ ವಶಕ್ಕೆ ಪಡೆದುಕೊಂಡಿದೆ. ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದವರ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.
ಮಹಮ್ಮದ ಆಲಿ, ದಾದಾಪೀಠ ಹಂಚಿನಮನಿ, ಪರಮೇಶ್ವರ ರೇವಡಿಹಾಳ, ಬಾಬಾಜಾನ ಮೆಹಬೂಬಸಾಬ, ಅಬುಜರ ಬಾಗರ, ಜಾಫರ ರಾಜಾಹುಸೇನ ಇರಾನಿ, ಸಾಧಿಕ್ ಬಾಬಾಹುಸೇನ್ ರಜಾಹುಸೇನ್, ಆಫ್ರಾಬ ಜೀವನಸಾಬ್, ಸಲ್ಮಾನ್ ಕಾಕರ್, ಮಹಮ್ಮದ್ ಆಸೀಫ್, ಸಚ್ಚಾದ ಸಯ್ಯದ್ ಬಂಧಿತರು. ಬಂಧಿತರಿಂದ 1 ಕೆ.ಜಿ. 398 ಗ್ರಾಂ ಗಾಂಜಾ ಜೊತೆಗೆ ಒಂದೂವರೆ ಲಕ್ಷ ಮೌಲ್ಯದ 14 ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.