ಕರ್ನಾಟಕ

karnataka

By ETV Bharat Karnataka Team

Published : 6 hours ago

ETV Bharat / snippets

ಉದ್ಯಮಿ ಹತ್ಯೆ ಪ್ರಕರಣ: ಬಂಧನದ ಭೀತಿಯಿಂದ ಗೋವಾ ಉದ್ಯಮಿ ಆತ್ಮಹತ್ಯೆ!

GOA BUSINESSMAN SUICIDE
ಸಾಂದರ್ಭಿಕ ಚಿತ್ರ (ETV Bharat)

ಕಾರವಾರ: ಗೋವಾದ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಹಳಗಾ ಮೂಲದ ಸದ್ಯ ಗೋವಾದಲ್ಲಿ ಉದ್ಯಮ‌ ನಡೆಸುತ್ತಿದ್ದ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡವರು. ಪುಣೆ ಉದ್ಯಮಿ ವಿನಾಯಕ ನಾಯ್ಕ ಕೊಲೆಗೆ ಸೂಪಾರಿ ನೀಡಿದ ಆರೋಪ ಇವರ ಮೇಲಿತ್ತು.

ಹಣಕೋಣದಲ್ಲಿ ಕಳೆದ ಮೂರು ದಿನದ ಹಿಂದೆ ಪುಣೆ ಉದ್ಯಮಿ ವಿನಾಯಕ ನಾಯ್ಕ ಅವರ ಹತ್ಯೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಆರೋಪಿಗಳು ಉದ್ಯಮಿ ಗುರುಪ್ರಸಾದ್ ಸುಪಾರಿ ಕೊಟ್ಟಿರುವ ಬಗ್ಗೆ ಬಾಯ್ಬಿಟ್ಟಿದ್ದರು. ಈ ಹಿನ್ನೆಲೆ ಆತನಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ಗುರುಪ್ರಸಾದ್ ಮೃತದೇಹವು ಗೋವಾದ ಮಾಂಡವಿ ನದಿಯಲ್ಲಿ ಪತ್ತೆಯಾಗಿದೆ. ಬಂಧನದ ಭೀತಿ ಹಿನ್ನೆಲೆ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗೋವಾ ಪೊಲೀಸರು ಪ್ರಕರಣ ದಾಖಲಿಸಿದ್ದು ಚಿತ್ತಾಕುಲ ಪೋಲಿಸರು ಮಾಹಿತಿ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details