ಕಾರವಾರ: ಗೋವಾದ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಹಳಗಾ ಮೂಲದ ಸದ್ಯ ಗೋವಾದಲ್ಲಿ ಉದ್ಯಮ ನಡೆಸುತ್ತಿದ್ದ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡವರು. ಪುಣೆ ಉದ್ಯಮಿ ವಿನಾಯಕ ನಾಯ್ಕ ಕೊಲೆಗೆ ಸೂಪಾರಿ ನೀಡಿದ ಆರೋಪ ಇವರ ಮೇಲಿತ್ತು.
Published : 6 hours ago
ಉದ್ಯಮಿ ಹತ್ಯೆ ಪ್ರಕರಣ: ಬಂಧನದ ಭೀತಿಯಿಂದ ಗೋವಾ ಉದ್ಯಮಿ ಆತ್ಮಹತ್ಯೆ!
ಹಣಕೋಣದಲ್ಲಿ ಕಳೆದ ಮೂರು ದಿನದ ಹಿಂದೆ ಪುಣೆ ಉದ್ಯಮಿ ವಿನಾಯಕ ನಾಯ್ಕ ಅವರ ಹತ್ಯೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಆರೋಪಿಗಳು ಉದ್ಯಮಿ ಗುರುಪ್ರಸಾದ್ ಸುಪಾರಿ ಕೊಟ್ಟಿರುವ ಬಗ್ಗೆ ಬಾಯ್ಬಿಟ್ಟಿದ್ದರು. ಈ ಹಿನ್ನೆಲೆ ಆತನಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ಗುರುಪ್ರಸಾದ್ ಮೃತದೇಹವು ಗೋವಾದ ಮಾಂಡವಿ ನದಿಯಲ್ಲಿ ಪತ್ತೆಯಾಗಿದೆ. ಬಂಧನದ ಭೀತಿ ಹಿನ್ನೆಲೆ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗೋವಾ ಪೊಲೀಸರು ಪ್ರಕರಣ ದಾಖಲಿಸಿದ್ದು ಚಿತ್ತಾಕುಲ ಪೋಲಿಸರು ಮಾಹಿತಿ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.