ರಾಯಚೂರು:ನೀರಿನ ರಭಸದಿಂದಾಗಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಹಳ್ಳದ ಸ್ವಲ್ಪ ದೂರದಲ್ಲಿ ಇಂದು ಪತ್ತೆಯಾಗಿದೆ.
ರಾಯಚೂರು: ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಪತ್ತೆ
Published : Sep 5, 2024, 5:06 PM IST
ತಾಲೂಕಿನ ಪತ್ತೆಪೂರು ಗ್ರಾಮದ ಬಳಿಯ ಗೋಕುಲ್ಸಾಬ್ ಹಳ್ಳ ತುಂಬಿ ಹರಿಯುತ್ತಿರುವ ಸಮಯದಲ್ಲಿ ನೀರಿನ ರಭಸಕ್ಕೆ ಜಾಗೀರ ವೆಂಕಟಾಪುರ್ ಗ್ರಾಮದ ಬಸವರಾಜ್ ಎಂಬ ಯುವಕ ಕೊಚ್ಚಿ ಹೋಗಿದ್ದ. ವಿಷಯ ತಿಳಿದು ಯುವಕನ ಮೃತದೇಹಕ್ಕಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಪತ್ತೆ ಹಚ್ಚುವ ಕಾರ್ಯ ನಡೆಸಿತ್ತು. ಶೋಧ ಕಾರ್ಯ ನಡೆಸುವಾಗ ಹಳ್ಳದ 100 ಮೀಟರ್ ದೂರದಲ್ಲಿ ಯುವಕನ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಜಿಲ್ಲಾದ್ಯಂತ ಎಡೆಬಿಡದ ಮಳೆ ಸುರಿಯುತ್ತಿದ್ದ ಹಿನ್ನೆಲೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದವು. ಖಾಸಗಿ ಬ್ಯಾಂಕ್ ಕೆಲಸ ಮಾಡುತ್ತಿದ್ದ ಬಸವರಾಜ್ ಹಳ್ಳದ ಬಳಿ ಬೈಕ್ ಬಿಟ್ಟು, ಹಳ್ಳ ದಾಟುವ ವೇಳೆ ಅತಿಯಾದ ನೀರು ಹರಿಯುತ್ತಿದ್ದರಿಂದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.