ಬಂಡೀಪುರದಲ್ಲಿ ಅಪರೂಪದ ಬೇಟೆ: ಕೆರೆಯಲ್ಲಿ ಕರಡಿ ಹಿಡಿದ ಹುಲಿರಾಯ - Bandipur Protected Area
Published : Jan 25, 2024, 7:07 PM IST
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಸಂರಕ್ಷಿತ ಪ್ರದೇಶದಲ್ಲಿ ಹುಲಿಯೊಂದು ಕರಡಿಯನ್ನು ಸೆರೆ ಹಿಡಿದಿದೆ. ಈ ಅಪರೂಪದ ಬೇಟೆಯ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಬಂಡೀಪುರ ಸಫಾರಿ ರಸ್ತೆಯಲ್ಲಿ ಘಟನೆ ನಡೆದಿದ್ದು, ಈಟಿವಿ ಭಾರತಕ್ಕೆ ಈ ವಿಡಿಯೋ ಲಭ್ಯವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಂಡೀಪುರ ಸಿಎಫ್ಒ ರಮೇಶ್ ಕುಮಾರ್, ಮೊಬೈಲ್ನಲ್ಲಿ ಸೆರೆಯಾಗಿರುವ ದೃಶ್ಯ ಬಂಡೀಪುರದ್ದು ಎಂದು ಖಚಿತಪಡಿಸಿದ್ದಾರೆ. ಕರಡಿಯೂ ಕೂಡ ಬಲಿಷ್ಠ ಪ್ರಾಣಿಯಾಗಿದ್ದು, ಹಲವು ಸಂದರ್ಭಗಳಲ್ಲಿ ಹುಲಿಯನ್ನು ಕರಡಿ ಎದುರಿಸಿ ಕಾಲ್ಕೀಳುವಂತೆ ಮಾಡಿದ ನಿದರ್ಶನಗಳಿವೆ. ಅಂತಹದರಲ್ಲಿ ಕೆರೆಯೊಂದರಲ್ಲಿ ಕರಡಿ ಕತ್ತು ಹಿಡಿದ ಹುಲಿ ಬೇಟೆಯಾಡಿದ್ದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.
ಇದನ್ನೂ ಓದಿ: ಹುಲಿ ದಾಳಿಯಿಂದ ಪಾರಾದ ಕಾಡೆಮ್ಮೆ: ಬಂಡೀಪುರ ಸಫಾರಿ ವಿಡಿಯೋ ವೈರಲ್
ಇತ್ತೀಚೆಷ್ಟೇ ಹುಲಿರಾಯನ ಬೇಟೆಯಿಂದ ಕಾಡೆಮ್ಮೆಯೊಂದು ಜಸ್ಟ್ ಮಿಸ್ ಆಗಿ ಪ್ರಾಣ ಉಳಿಸಿಕೊಂಡಿತ್ತು. ಈ ಬೇಟೆಯ ದೃಶ್ಯ ಕೂಡ ಮೊಬೈಲ್ನಲ್ಲಿ ಸೆರೆಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು. ತನ್ನ ಮೇಲೆ ಹುಲಿ ದಾಳಿ ಮಾಡಲು ಮುಂದಾಗುವುದನ್ನು ಗಮನಿಸಿದ ಕಾಡೆಮ್ಮೆ ಮಿಂಚಿನಂತೆ ಓಡಿ ಹುಲಿ ಬಾಯಿಂದ ಪಾರಾಗಿತ್ತು. ಕೆಲವೇ ಮೀಟರ್ ಅಟ್ಟಾಡಿಸಿದ್ದ ಹುಲಿ, ಬಂದ ದಾರಿಗೆ ಸುಂಕ ಇಲ್ಲದಂತೆ ವಾಪಸ್ ಆಗಿದ್ದು, ಹುಲಿಯ ಚೇಸಿಂಗ್ ದೃಶ್ಯವನ್ನು ಸಫಾರಿಗರು ಸೆರೆ ಹಿಡಿದು ಪುಳಕಿತರಾಗಿದ್ದರು.