ಕರ್ನಾಟಕ

karnataka

ETV Bharat / state

'ಕುಂಭಮೇಳದ ಪ್ರಯಾಗ್​ರಾಜ್​ನಲ್ಲಿ ನಾವು ಸೇಫ್': ಶಿವಮೊಗ್ಗದ ಯಾತ್ರಿಕರಿಂದ ವಿಡಿಯೋ - KUMBH MELA 2025

ಶಿವಮೊಗ್ಗದಿಂದ ಪ್ರಯಾಗ್​ರಾಜ್​ಗೆ ಹೋಗಿದ್ದ ಏಳು ಜನರ ತಂಡ ಸೇಫ್ ಆಗಿದ್ದೇವೆ ಎಂದು ತಂಡದ ಸದಸ್ಯರು ವಿಡಿಯೋ ಮೂಲಕ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

PRAYAGRAJ  SHIVAMOGGA  KUMBH MELA 2025  STAMPEDE SHIVAMOGGA PILGRIMS ARE SAFE
'ಕುಂಭಮೇಳದ ಪ್ರಯಾಗ್​ರಾಜ್​ನಲ್ಲಿ ನಾವು ಸೇಫ್': ಶಿವಮೊಗ್ಗದ ಯಾತ್ರಿಕರಿಂದ ವಿಡಿಯೋ (ETV Bharat)

By ETV Bharat Karnataka Team

Published : Jan 30, 2025, 1:28 PM IST

ಶಿವಮೊಗ್ಗ:ಮಲೆನಾಡಿನಿಂದ ಕುಂಭಮೇಳದ ಪ್ರಯಾಗ್​ರಾಜ್​ಗೆ ಹೋಗಿದ್ದ ಶಿವಮೊಗ್ಗದ ಯಾತ್ರಿಗಳು ಸುರಕ್ಷಿತವಾಗಿದ್ದಾರೆಂಬ ಮಾಹಿತಿ ಸಿಕ್ಕಿದೆ. ಏಳು ಜನರಿದ್ದ ತಂಡದ ಸದಸ್ಯರು ವಿಡಿಯೋ ಮೂಲಕ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

'ಕುಂಭಮೇಳದ ಪ್ರಯಾಗ್​ರಾಜ್​ನಲ್ಲಿ ನಾವು ಸೇಫ್': ಶಿವಮೊಗ್ಗದ ಯಾತ್ರಿಕರಿಂದ ವಿಡಿಯೋ (ETV Bharat)

ಪ್ರಯಾಗ್​ರಾಜ್​ನಲ್ಲಿ ಎಲ್ಲಾ ವ್ಯವಸ್ಥೆ ಚೆನ್ನಾಗಿದೆ - ಶಿವಮೊಗ್ಗ ಭಕ್ತರು; "ಶಿವಮೊಗ್ಗದಿಂದ ಏಳು ಜನರ ತಂಡ ಮಹಾಕುಂಭಕ್ಕೆ ಬಂದಿದ್ದೇವೆ. ನಾವು ಮೊದಲು ಅಯೋಧ್ಯೆಗೆ ಹೋಗಿ, ಅಲ್ಲಿಂದ ವಾರಾಣಾಸಿಗೆ ಬಂದೆವು. ವಾರಾಣಾಸಿಯಿಂದ ಪ್ರಯಾಗ್​ರಾಜ್​ಗೆ ರೈಲಿನಲ್ಲಿ ಬರಲು ಬುಕಿಂಗ್​ ಮಾಡಿದಾಗ ಸೀಟು ಸಿಗದೆ ಇದ್ದುದರಿಂದ ನಾವು ಕ್ಯಾಬ್​ನಲ್ಲಿ ಬಂದೆವು. ಇಲ್ಲಿ ನಾವು ಬಂದಾಗ ಟ್ರಾಫಿಕ್ ಜಾಮ್ ಉಂಟಾಯಿತು. ಇಲ್ಲಿ ಸರ್ಕಾರಿ ಬಸ್​ನಲ್ಲಿ ಉಚಿತವಾಗಿ ಒಂದು ಪಾಯಿಂಟ್​ಗೆ ಕರೆದುಕೊಂಡು ಬಿಡುತ್ತಾರೆ. ಅಲ್ಲಿಂದ ಕುಂಭಮೇಳದ ಬಳಿಗೆ ಸ್ಥಳೀಯರು ತಮ್ಮ ತಮ್ಮ ವಾಹನದಲ್ಲಿ ಕರೆದುಕೊಂಡು ಬಿಡುತ್ತಾರೆ. ಇಲ್ಲಿ ಎಲ್ಲಾ ವ್ಯವಸ್ಥೆ ಚೆನ್ನಾಗಿದೆ. ಎಲ್ಲಾರು ಬರಬಹುದು.‌ ಕಾಲ್ತುಳಿತ ಆಯಿದೆಂದು ಮಾಹಿತಿ ಬಂತು. ಆದರೆ ಈಗ ಎಲ್ಲಾ ಚೆನ್ನಾಗಿದೆ. ಎಲ್ಲಾ ಕಡೆ ಊಟ ಕಾಫಿ, ಟೀ ಸಿಗುತ್ತಿದೆ" ಎಂದು ತಮ್ಮ ಅನುಭವವನ್ನು ನಂದ ಜಗದೀಶ್ ಹಂಚಿಕೊಂಡಿದ್ದಾರೆ.

ನಾಗ ಸಾಧುಗಳ ಪ್ರವಚನ ಚೆನ್ನಾಗಿರುತ್ತೆ; ಇನ್ನೊಬ್ಬ ಯಾತ್ರಿಯಾದ ಅಶೋಕ್ ಬೇದ್ರೆ, "ಕುಂಭ ಮೇಳದಲ್ಲಿ ಎಲ್ಲಾ ವ್ಯವಸ್ಥೆ ಚೆನ್ನಾಗಿದೆ. ಇಲ್ಲಿಗೆ ಬರುವ ತನಕ ನಾವು ವಾಹನದ ವ್ಯವಸ್ಥೆ ಚೆನ್ನಾಗಿ ಮಾಡಿಕೊಳ್ಳಬೇಕು. ಇಲ್ಲಿ ಸ್ನಾನ ಮಾಡಲು, ನೀರು, ವಸತಿ ಚೆನ್ನಾಗಿದೆ. ಇಲ್ಲಿನ ಸರ್ಕಾರ ವ್ಯವಸ್ಥೆಯನ್ನು ಉತ್ತಮವಾಗಿ ಮಾಡಿದೆ. ಇನ್ನೂ 5 ಕೋಟಿ ಜನ ಬಂದರೂ ಸಹ ಅವರಿಗೆ ಎಲ್ಲಾ ವ್ಯವಸ್ಥೆ ಇದೆ. ಇಂತಹ ಕುಂಭಮೇಳವನ್ನು ಯಾರು ಮಿಸ್​ ಮಾಡಿಕೊಳ್ಳಬೇಡಿ. ನಾಗ ಸಾಧುಗಳನ್ನು ನೋಡಿ ಆಶೀರ್ವಾದ ಪಡೆಯಬಹುದು. ಅವರ ಪ್ರವಚನ ಚೆನ್ನಾಗಿರುತ್ತದೆ. ಎಲ್ಲಾರು ಕುಂಭಮೇಳಕ್ಕೆ ಬಂದು ಕಣ್ತುಂಬಿಕೊಳ್ಳಿ" ಎಂದು ವಿನಂತಿಸಿಕೊಂಡಿದ್ದಾರೆ.

ಮಹಾಕುಂಭ ಮೇಳದಲ್ಲಿ ಭಾಗಿಯಾದ ಲತಾ ಬೇದ್ರೆ ಅವರು ಮಾತನಾಡಿ, "ಮಹಾಕುಂಭ ಮೇಳ ನೋಡಲು ಬಂದಿದ್ದೇವೆ. ಇಲ್ಲಿ ಸ್ವಲ್ಪ ಟ್ರಾಫಿಕ್​ ಜಾಮ್​ ಅನ್ನುವುದು ಬಿಟ್ಟರೆ, ಯಾವುದೇ ತೂಂದರೆ ಇಲ್ಲ. ಮೌನಿ ಅಮಾವಾಸೆಯಂದು ಜನರು ಅಧಿಕವಾಗಿ ಸೇರಿದ್ದರಿಂದ ಕಾಲ್ತುಳಿತದಂತಹ ಘಟನೆ ನಡೆದಿದೆ. ಅದು ಬಿಟ್ಟರೆ ಬೇರೆ ಯಾವುದೇ ಕಡೆ ಏನೂ ಆಗಿಲ್ಲ" ಎಂದು ತಿಳಿಸಿದ್ದಾರೆ.

ಮೌನಿ ಅಮಾವಾಸೆಯಂದು ದುರಂತ :ಮೌನಿ ಅಮಾವಾಸೆ ದಿನ ಪ್ರಯಾಗ್​ರಾಜ್​ನ​ ತ್ರಿವೇಣಿ ಸಂಗಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿ 30 ಭಕ್ತರು ಸಾವನ್ನಪ್ಪಿದ್ದರೆ, ಕೆಲವರು ಗಾಯಗೊಂಡಿದ್ದಾರೆ. ಮೃತರಲ್ಲಿ ಬೆಳಗಾವಿ ಜಿಲ್ಲೆಯ ನಾಲ್ವರು ಸೇರಿದ್ದಾರೆ.

ಇದನ್ನೂ ಓದಿ:ಮಹಾಕುಂಭ ಮೇಳ ಕಾಲ್ತುಳಿತ: ನಾಲ್ವರ ಮೃತದೇಹ, ಗಾಯಾಳುಗಳು ಇಂದು ಬೆಳಗಾವಿಗೆ 'ಏರ್ ಲಿಫ್ಟ್'

ABOUT THE AUTHOR

...view details